ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ ಸಹಾಯಧನ ಪ್ರತಿಯೊಬ್ಬರು ಅರ್ಜಿ ಸಲ್ಲಿಸಿ

ನಮಸ್ಕಾರ ಸೇಹಿತರೇ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojane) ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗೆ ವಾಹನ ಖರೀದಿಗೆ 75% ಸಹಾಯಧನ, ಅಂದರೆ 4 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯ ಉದ್ದೇಶ ಯುವಕರಿಗೆ ಸ್ವಾವಲಂಬಿ ಜೀವನವನ್ನು ಬೆಂಬಲಿಸುವುದು ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದು.ಈ ಲೇಖನವನ್ನು ಕೊನೆವರೆಗೂ ಓದಿ .

Self-reliant Sarathi scheme
Self-reliant Sarathi scheme

ಯೋಜನೆಯ ಮುಖ್ಯಾಂಶಗಳು

  • ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
  • ಸಹಾಯಧನದ ಪ್ರಮಾಣ: ವಾಹನದ ಒಟ್ಟು ವೆಚ್ಚದ 75%, ಗರಿಷ್ಠ 4 ಲಕ್ಷ ರೂ.
  • ಅರ್ಹತೆ:
    • 21 ವರ್ಷ ಮೇಲ್ಪಟ್ಟು 45 ವರ್ಷ ವಯಸ್ಸು.
    • ಗ್ರಾಮೀಣ ಪ್ರದೇಶದ ಕುಟುಂಬಗಳ ವಾರ್ಷಿಕ ಆದಾಯ 90,000 ರೂ. ಮಿತಿಯಲ್ಲಿರಬೇಕು.
    • ನಗರ ಪ್ರದೇಶದ ಆದಾಯ ಮಿತಿ 1.20 ಲಕ್ಷ ರೂ.
    • ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
    • ಪೂರಕ ಯೋಜನೆಗಳಿಂದ ಸಬ್ಸಿಡಿ ಪಡೆದಿಲ್ಲದಿರಬೇಕು.
    • ಒಂದು ಕುಟುಂಬದಿಂದ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶ.

ಅರ್ಜಿಗೆ ಬೇಕಾದ ದಾಖಲೆಗಳು

  1. ಆಧಾರ್ ಕಾರ್ಡ್:
  2. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  3. ರೇಷನ್ ಕಾರ್ಡ್
  4. ಆದಾಯ ಪ್ರಮಾಣ ಪತ್ರ
  5. ಬ್ಯಾಂಕ್ ಪಾಸ್ ಬುಕ್
  6. ಜಾತಿ ಪ್ರಮಾಣ ಪತ್ರ
  7. ಡ್ರೈವಿಂಗ್ ಲೈಸೆನ್ಸ್

ಅರ್ಜಿ ಸಲ್ಲಿಸುವ ವಿಧಾನ

  1. ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ:
    ಹತ್ತಿರದ ಆನ್ಲೈನ್ ಸೆಂಟರ್ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ .
  2. ಅರ್ಜಿಯ ಪೂರ್ಣವಿವರ:
    ಮೇಲ್ಕಂಡ ದಾಖಲೆಗಳನ್ನು ಒದಗಿಸಿ ಮತ್ತು ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.
  3. ಅಂತಿಮ ದಿನಾಂಕ:
    ಕೊನೆಯ ದಿನಾಂಕ 23.12.2024.

ಯೋಜನೆಯ ಲಾಭಗಳು

  • ನಿರುದ್ಯೋಗಿ ಯುವಕರಿಗೆ ಉದ್ಯೋಗದ ಅವಕಾಶ.
  • ಸ್ವಂತ ವಾಹನ ಹೊಂದಲು ಸಹಾಯಧನ.
  • ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಅನುಕೂಲ.

ಹೆಚ್ಚಿನ ಮಾಹಿತಿ:
ನಿಮ್ಮ ಹತ್ತಿರದ ಆನ್ಲೈನ್ ಸೇವಾ ಕೇಂದ್ರ ಅಥವಾ ಕಚೇರಿಗೆ ಭೇಟಿ ನೀಡಿ, ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಪರಿಶೀಲಿಸಿ. ತಪ್ಪದೆ ಈ ಮಾಹಿತಿಯನ್ನು ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

Leave a Reply

Your email address will not be published. Required fields are marked *

rtgh