10ನೇ ತರಗತಿ ಕನ್ನಡ ಯುದ್ಧ ಪಾಠದ ನೋಟ್ಸ್|‌ 10th Standard Kannada Yudda Lesson Notes

10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು, ಬಹು ಆಯ್ಕೆ ಪ್ರಶ್ನೆಗಳು, ಯುದ್ಧ ಪಾಠದ ನೋಟ್ಸ್,10th kannada yuddha lesson question answer notes

ತರಗತಿ : 10ನೇ ತರಗತಿ

ಪಾಠದ ಹೆಸರು : ಯುದ್ಧ

ಕೃತಿಕಾರರ ಹೆಸರು : ಸಾರಾ ಅಬೂಬಕ್ಕರ್

ಲೇಖಕರ ಪರಿಚಯ :

ಸಾರಾ ಅಬೂಬಕ್ಕರ್

ಅವರು ೩೦ ಜೂನ್ ೧೯೩೬ ರಂದು ಕಾಸರಗೋಡಿನಲ್ಲಿ ಜನಿಸಿದರು . ಚಂದ್ರಗಿರಿಯ ತೀರದಲ್ಲಿ , ಸಹನಾ , ಕದನ ವಿರಾಮ , ವಜ್ರಗಳು , ಸುಳಿಯಲ್ಲಿ ಸಿಕ್ಕವರು , ತಳ ಒಡೆದ ದೋಣಿಯಲ್ಲಿ ಮೊದಲಾದುವು ಇವರ ಪ್ರಮುಖ ಕಾದಂಬರಿಗಳು , ಚಪ್ಪಲಿಗಳು , ಟೆಡ್ಡಾ , ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು , ಪಯಣ ಇವು ಕಥಾ ಸಂಕಲನಗಳು , ಇವರ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ಲಭಿಸಿವೆ .

10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು ನೋಟ್ಸ್

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು ?

ಉ : “ ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ” ಎಂಬುದು ಯುದ್ಧದ ಬಗೆಗೆ ಮುದುಕಿಯ ಅಭಿಪಾಯವಾಗಿದೆ .

2. ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?

ಉ : ರಾಹಿಲನು ತುರ್ತು ಪರಿಸ್ಥಿತಿಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದುಕೊಂಡನು .

3. ರಾಹಿಲನು ಯಾರು ?

ಉ : ರಾಹಿಲ ಸೈನ್ಯದಲ್ಲಿದ್ದ ಒಬ್ಬ ಡಾಕ್ಟರ್

4. ಗಡಿ ಪ್ರದೇಶಗಳಲ್ಲಿ ಬ್ಲಾಕ್ ಔಟ್ ‘ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?

ಉ : ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ ಬ್ಲಾಕ್ ಔಟ್ ‘ ನಿಯಮ ಪಾಲಿಸಲಾಗುತ್ತಿದೆ .

5 , ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?

ಉ : ರಾಹಿಲನು . “ ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ . ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು ” ಎಂದು ಗಂಭೀರವಾಗಿ ನುಡಿದನು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂ -ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು ?

ಉ : ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿಯು “ ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ ? ಈ ಮನುಷ್ಯರಿಗೆ ಎಂತಹ ಬುದ್ದಿ ಕೊಡುತ್ತೀಯಾ ? ” ಎಂದು ನಿರಾಶೆಯಿಂದ ಹೇಳಿದಳು .

2. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು ?

ಉ : ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ ?ಆ ಮನೆಯೊಳಗೆ ಏನು ಸಂಭವಿಸುತ್ತಿದೆ ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗ ಬಹುದು ? ಆ ಮನೆಯಿಂದ ಒಂದೇ ಒಂದು ಬೆಳಕಿನ ಕಿರಣವೂ ಹೊರಗಡೆಗೆ ಹಾಯುತ್ತಿರಲಿಲ್ಲ . ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ ಬ್ಲಾಕ್ ಔಟ್ ‘ ನಿಯಮ ಪಾಲಿಸಲಾಗುತ್ತಿದೆ . ಇಂತಹ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ? ಎಂಬ ಪ್ರಶ್ನೆಗಳು ಮೂಡಿದವು .

3. ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು ?

ಉ : “ ನೋಡಪ್ಪಾ , ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು . ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ . ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು , ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು . ಈಗಲೂ ಇದೆಯೆನ್ನು ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ ? ಯುದ್ಧವಂತೆ , ಯುದ್ಧ ! ” ತಿರಸ್ಕಾರದಿಂದ ನುಡಿದಳು ಮುದುಕಿ .

4. ಡಾಕ್ಟರ್‌ಗೆ ವಿಮಾನದ ಪೈಲಟ್ ಏನು ಹೇಳಿದನು ?

ಉ : “ ಡಾಕ್ಟರ್ ! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ . ಗೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ . ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ ? ” ಎಮದು ವಿಮಾನದ ಪೈಲಟ್ ನುಡಿದನು .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ರಾಹಿಲನು ಮುದುಕಿಯ ಕುಟುಂಬಕ್ಕೂ , ಮುದುಕಿಯು ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ

ಉ : ಸೈನ್ಯದಲ್ಲಿ ವೈದ್ಯನಾಗಿದ್ದ ರಾಹಿಲನು ಯುದ್ಧದಲ್ಲಿ ಗಾಯಗೊಂಡು ಶತ್ರು ಸೈನಿಕರಿಂದ ತಪ್ಪಿಸಿಕೊಂಡು ಮುದುಕಿ ಮನೆಗೆ ಬಂದಾಗ ಅವಳ ಸೊಸೆ ಹೆರಿಗೆ ನೋವಿನಿಂದ ನರಳುತ್ತಿದ್ದಳು . ಆ ಸಮಯದಲ್ಲಿ ಮುದುಕಿಯ ಮಗ ಯುದ್ಧಕ್ಕೆ ಹೋಗಿದ್ದನು . ಯುದ್ಧದ ವಾತಾವರಣ ಇದ್ದುದರಿಂದ ಡಾಕ್ಟರ್ ಅಥವಾ ಸೂಲಗಿತ್ತಿಯನ್ನು ಕರೆಯಲು ಸಾಧ್ಯವಾಗದೆ ಮುದುಕಿ ಸಂಕಟಪಡುತ್ತಿದ್ದಳು . ಈ ವಿಷಯವನ್ನು ಮುದುಕಿಯಿಂದ ತಿಳಿದ ರಾಹಿಲನು “ ತಾನು ಒಬ್ಬ ವೈದ್ಯನಾಗಿದ್ದು ಆಕೆಯನ್ನು ಪರೀಕ್ಷಿಸುವುದಾಗಿ ತಿಳಿಸಿದನು . ತನ್ನ ಕಾಲಿಗೆ ಪೆಟ್ಟಾಗಿದ್ದರೂ ನೋವನ್ನು ಸಹಿಸಿಕೊಂಡು ಬಹಳ ಹೊತ್ತು ಪ್ರಯತ್ನಿಸಿ ಮಗುವನ್ನು ಹೊರ ತೆಗೆದನು , ಆದರೆ ಅದು ನಿರ್ಜೀವವಾಗಿತ್ತು . ಅವರ ತಾಯಿ ಬದುಕಿದಳು . ರಾಹಿಲನನ್ನು ನೋಡಿದ ಮುದುಕಿಗೆ ಅವನು ‘ ತಮ್ಮವನೇ ? ಅಥವಾ ಶತ್ರುಗಳ ಕಡೆಯವನೇ ? ಎಂದು ಸಂದೇಹ ಉಂಟಾಯಿತು . ಅದೇ ಸಮಯಕ್ಕೆ ಅವನನ್ನು ಹುಡುಕಿಕೊಂಡು ಶತ್ರು ಸೈನಿಕರು ಮುದುಕಿ ಮನೆಯ ಬಾಗಿಲು ಬಡಿದರು . ಅವರು ತಮ್ಮ ವಿರೋಧಿ ಸೈನಿಕನೆಂಬ ಅವಳ ಅನುಮಾನ ನಿಜವಾಗಿತ್ತು . ಅವಳು ಅವನ ಕಡೆ ಕೋಪದಿಂದ ನೋಡಿದಳು . ಆದರೆ ರಾಹಿಲ ದಯನೀಯ ನೋಟದಿಂದ “ ಬಾಗಿಲು ತೆರೆಯಬೇಡಿ ” ಎಂದು ಕೈ ಸನ್ನೆ ಮಾಡಿದನು . ಅವನು ಸಂಕಷ್ಟದಲ್ಲಿ ತನ್ನ ಸೊಸೆಯ ಪ್ರಾಣ ಉಳಿಸಿದ್ದರಿಂದ ಮುದುಕಿಯು ಅವನನ್ನು ಸೊಸೆ ಮಲಗಿದ್ದ ಕೋಣೆಯಲ್ಲಿ ಮಂಚದಡಿಯಲ್ಲಿ ಬಚ್ಚಿಟ್ಟು ಅಲ್ಲಿಗೆ ಬಂದಿದ್ದ ಸೈನಿಕರಿಗೆ “ ಈ ಕಡೆ ಯಾರೂ ಬಂದಿಲ್ಲ ” ಎಂದು ಸುಳ್ಳು ಹೇಳಿ ರಾಹಿಲನನ್ನು ರಕ್ಷಿಸಿದಳು .

2. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು ?

ಉ : “ ಯುದ್ಧಕ್ಕೆ ಹೋಗಿದ್ದಾನೆ ! ನನ್ನ ಮಗನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ . ಎದೆ ತುಂಬ ಬೂದಿ ಮುಚ್ಚಿದ ಕೆಂಡ . ಎದೆಯ ಗಾಯ ಇಂದಿಗೂ ಇದೆ , ನೋಡು . ಎಲ್ಲ ದುಃಖ ನುಂಗಿಕೊಂಡು ಮಗನನ್ನು ಸಾಕಿ ಸಲಹಿದೆ . ಮದುವೆಯನ್ನೂ ಮಾಡಿದೆ . ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು . ಮನೆಯಲ್ಲೊಂದು ಪಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು . ಅಷ್ಟರಲ್ಲಿ ಬಂತು ಯುದ್ಧ ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು . ಈ ವಿಷಯ ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ … ” ಎಂದು ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ವಿವರಿಸಿದಳು .

3. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ .

ಉ : ಯುದ್ಧದ ಭೀಕರತೆಯು ಮೊದಲನೆಯದಾಗಿ ಧರ್ಮ , ದೇಶಗಳ ಭೇದವಿಲ್ಲದೆ ಭಾಗಿಯಾದ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ . ಯುದ್ಧದಿಂದಾಗಿ ಸಾವಿರಾರು ಜನ ಸೈನಿಕರು ಬಲಿಯಾಗುತ್ತಾರೆ . ಅದರಿಂದ ಅವರ ಕುಟುಂಬ ವರ್ಗ ಬೀದಿಪಾಲಾಗುತ್ತದೆ . ಆಸ್ತಿ – ಪಾಸ್ತಿ , ಮನೆ – ಮಠಗಳು ಹಾಳಾಗುತ್ತವೆ . ಯುದ್ಧದ ಸಂದರ್ಭದಲ್ಲಿ ಹಾಕಲಾಗುವ ಬಾಂಬ್ ಗಳಿಂದ ಆ ಪ್ರದೇಶವೇ ಸುಟ್ಟು ಹೋಗುವುದಲ್ಲದೆ ಹಲವಾರು ವರ್ಷಗಳವರೆಗೆ ಆ ಪ್ರದೇಶದ ಸುತ್ತಲೂ ವಾಸಿಸುವ ಜನ – ಜಾನುವಾರು – ಸಸ್ಯವರ್ಗ – ಜೀವ ಸಂಕುಲದ ವಂಶವಾಹಿಯ ಮೇಲೆ ಪರಿಣಾಮ ಬೀರುವುದಲ್ಲದೆ ಅಲ್ಲಿ ಜನಿಸುವ ಮಕ್ಕಳು ಅಂಗಹೀನರಾಗಿ ಹುಟ್ಟುತ್ತಾರೆ . ಇದಕ್ಕೆ ಹಿರೋಶಿಮಾ ಮತ್ತು ನಾಗಸಾಕಿಗಳೇ ಸಾಕ್ಷಿ . ಯುದ್ಧದಲ್ಲಿ ಭಾಗವಹಿಸುವ ಎರಡೂ ದೇಶಗಳು ನಷ್ಟಕ್ಕೀಡಾಗುತ್ತವೆ . ಆ ಮೂಲಕ ಆರ್ಥಿಕ ಸಂಕಷ್ಟ ತಲೆದೋರುತ್ತದೆ . ಯುದ್ಧದಿಂದ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು . ಅದನ್ನರಿತು ಎಲ್ಲಾ ರಾಷ್ಟ್ರಗಳು ಶಾಂತಿಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ .

ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ

1. “ ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ? ”

ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : “ ಬಂದಿದ್ದಾತ ತಮ್ಮವನಲ್ಲ ” ಎಂಬ ಮುದುಕಿಯ ಸಂದೇಹ ನಿಜವಾಗಿತ್ತು . ತಮಗೆ , ತಮ್ಮ ದೇಶಕ್ಕೆ ದ್ರೋಹ ಬಗೆಯುವವನು . ಎಂದು ಕ್ಷಣಕಾಲ ಆಕೆಯ ಕಣ್ಣುಗಳು ರೋಷದಿಂದ ಕೆರಳಿ ಬಾಗಿಲ ಬಳಿ ಸಮೀಪಿಸುತ್ತಾ ಆತನ ಮುಖ ನೋಡಿದ ಸಂದರ್ಭದಲ್ಲಿ ” ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ? ” ಎಂದು ಕೊಳ್ಳುತ್ತಾಳೆ . ಸ್ವಾರಸ್ಯ : ಕಷ್ಟದಲ್ಲಿದ್ದರೂ ತನ್ನ ಸೊಸೆಯ ಪ್ರಾಣ ಉಳಿಸಿದ ರಾಹಿಲನಲ್ಲಿ ತನ್ನ ಮಗನನ್ನು ಕಾಣುವ ಮುದುಕಿಯ ಪುತವಾತ್ಸಲ್ಯ ಇಲ್ಲಿಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2. “ ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ ”

ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : ಡಾಕ್ಟರ್ ರಾಹಿಲನು ಶತ್ರು ಸೈನಿಕರ ಧಾಳಿಯಿಂದ ಗಾಯಗೊಂಡು ತಪ್ಪಿಸಿಕೊಂಡು ಬರುವಾಗ ಧಾರಾಕಾರವಾದ ಮಳೆ ಸುರಿಯುತ್ತಿತ್ತು , ರಕ್ಷಣೆ ಪಡೆಯಲೆಂದು ಹುಡುಕುತ್ತಿದ್ದಾಗ ಒಂಟಿ ಮನೆಯೊಂದು ಕಾಣಿಸಿತು . ಹೇಗೋ ಹೋಗಿ ಬಾಗಿಲು ತಟ್ಟುವ ಸಂದರ್ಭದಲ್ಲಿ ” ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ ” ಎಂದು ಹೇಳುತ್ತಾನೆ . ತೆವಳಿಕೊಂಡು ಆ ಮನೆಯ ಬಳಿ ಸ್ವಾರಸ್ಯ : ರಾಹಿಲನು ಶತ್ರುಗಳಿಂದ ತಪ್ಪಿಸಿಕೊಂಡು ಶತ್ರುದೇಶದ ಮನೆಗೆ ಬಂದು ರಕ್ಷಣೆಗಾಗಿ ಬೇಡುವುದು ಕಥೆಯಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ .

3. “ ನಾನಾಕೆಯನ್ನು ಪರೀಕ್ಷಿಸುವ , ನೀವು ಬಿಸಿ ನೀರು ಸಿದ್ಧಪಡಿಸಿ ”

ಎಂಬ ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ‘ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : ಮುದುಕಿಯು ” ನನ್ನ ಸೊಸೆ ಹೆರಿಗೆಯ ಬೇನೆ ತಿನ್ನುತ್ತಿದ್ದಾಳೆ . ಸಂಜೆಯಿಂದಲೇ ನೋವು ಪ್ರಾರಂಭವಾಗಿದೆ . ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆಂದರೆ ಈ ಬಾಂಬುಗಳು , ಬ್ಲಾಕ್ ಔಟ್ ” ಎಂದು ಹೇಳಿದ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿದ್ದ ಡಾಕ್ಟರ್ ರಾಹಿಲನು “ ನಾನಾಕೆಯನ್ನು ಪರೀಕ್ಷಿಸುವೆ , ನೀವು ಬಿಸಿ ನೀರು ಸಿದ್ಧಪಡಿಸಿ ” ಎಂದು ಹೇಳುತ್ತಾನೆ . ಸ್ವಾರಸ್ಯ ತನ್ನ ಕಾಲಿಗೆ ಪೆಟ್ಟಾಗಿದ್ದರೂ ಅದನ್ನು ಲೆಕ್ಕಿಸದೆ ಮುದುಕಿಯ ಸೊಸೆಗೆ ಹೆರಿಗೆ ಮಾಡಿಸಲು ಮುಂದಾಗುವ ರಾಹಿಲನ ವೃತ್ತಿ ಧರ್ಮ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

4. “ ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ , ಅದನ್ನೂ ನೋಡಿ ! ”

ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ‘ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಸೈನಿಕರ ಉಡುಪಿನಲ್ಲಿದ್ದ ನಾಲ್ಕೆದು ಜನರು , “ ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ ? ” ಎಂದು ಕೇಳುತ್ತಾ ಮುದುಕಿಯ ಮನೆಗೆ ನುಗ್ಗಿದಾಗ ಮುದುಕಿಯು “ ಇಲ್ಲವಲ್ಲಾ ” ಎನ್ನುತ್ತಾಳೆ . ಆಗ ಅಧಿಕಾರಿ “ ಆದರೂ ಈ ಮನೆಯಲ್ಲೊಮ್ಮೆ ನೋಡಿ ಬಿಡಿ ” ಎಂದು ಸೈನಿಕರಿಗೆ ಅಪ್ಪಣೆ ಮಾಡಿದ ಸಂದರ್ಭದಲ್ಲಿ ರಾಹಿಲನನ್ನು ರಕ್ಷಿಸುವ ಸಲುವಾಗಿ ಮುದುಕಿ , “ ಹೂಂ … ನೋಡಿ ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ ಅದನ್ನೂ ನೋಡಿ ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ ? ಯಾರಿಗಾಗಿ , ಯಾತಕ್ಕಾಗಿ ಈ ಯುದ್ಧ ? .. ” ಎಂದು ನಿರ್ಜೀವ ಮಗುವಿನ ಬಳಿ ಕುಳಿತು ಎದೆ ಬಡಿದುಕೊಂಡು ಅಳುತ್ತಾಳೆ , ಆಗ ಅವರೆಲ್ಲಾ ಹೊರಟು ಹೋಗುತ್ತಾರೆ . ಸ್ವಾರಸ್ಯ : ಶತ್ರು ದೇಶದವನಾದರೂ ತನ್ನ ಗಾಯವನ್ನು ಸಹಿಸಿಕೊಂಡು ಸೊಸೆಯ ಪ್ರಾಣ ಉಳಿಸಿದ ರಾಹಿಲನನ್ನು ರಕ್ಷಿಸಲು ಮುದುಕಿಯ ಉಪಾಯ ಮತ್ತು ಮಾನವೀಯತಾ ಗುಣ ಇಲ್ಲಿ ವ್ಯಕ್ತವಾಗಿದೆ .

ಉ ) ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

೧. ರಾಹಿಲನ ದೇಹದಲ್ಲಿ ಹೊಸರಕ್ತ ಸಂಚಾರವಾದಂತಾಯಿತು .

೨. ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ಸಾಂತ್ವನ ಕೇಳಿ ಬಂತು .

೩. ಮುದುಕಿ ಮತ್ತು ಸೊಸೆಯ ರೋದನ ಮನೆಯ ಮೂಲೆ ಮೂಲೆಗಳಲ್ಲೂ ಪ್ರತಿಧ್ವನಿಸಿತು .

೪. ಯಾರಾದರೂ ಗಾಯಗೊಂಡ ಸೈನಿಕರು . ಈ ಕಡೆ ಬಂದಿದ್ದಾರೆಯೇ ?

೫. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು .

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ .

ಉತ್ತರ : ವಿಜಾತೀಯ ಸಂಯುಕ್ತಾಕ್ಷರಗಳು : ಕಾರ್ಯ , ಶಸ್ತ್ರ ಸ್ಫೋಟಿಸು , ಅದ್ಭುತ , ಡಾಕ್ಟರ್ ( ರ್ಯ ಸ್ತ್ರ , ಸ್ಟೋ , ಮೈು , ಕ )

೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ .

ಉತ್ತರ : ಅವರ್ಗೀಯ ವ್ಯಂಜನಾಕ್ಷರಗಳು : ಸ . ಶ . ಯ , ರೂ , ೪ , ಲ , ವೆ . ಈ ಹೊ , ಳ

೩. ಈ ಪಾಠದಲ್ಲಿ ಬರುವ ಇಂಗ್ಲಿಷ್ ಪದಗಳನ್ನು ಪಟ್ಟಿ ಮಾಡಿ .

ಇಂಗ್ಲಿಷ್ ಪದಗಳು : ಡಾಕ್ಟರ್ , ರೇಡಿಯೋ , ಗೌಂಡಿ , ಪೈಲಟ್ , ಬ್ಲಾಕ್ ಔಟ್ , ಫೀಸ್

೪. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ .

ಅ ) ಕ್ . ಗ : ಅಲ್ಪಪಾಣಾಕ್ಷರಗಳು : : ಛೇ , ಝ್ : ಮಹಾಪ್ರಾಣಾಕ್ಷರಗಳು

ಆ ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ೩೪

ಇ ) ಆ , ಈ , ಊ : ದೀರ್ಘಸ್ವರಗಳು :: ಆ , ಇ , ಉ , ಋ : ಪ್ರಸ್ವಸ್ವರ

ಈ ) ಸ್ವರಗಳು : ೧೩ : : ಯೋಗವಾಹಗಳು : ೨

10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು, ಬಹು ಆಯ್ಕೆ ಪ್ರಶ್ನೆಗಳು, ಯುದ್ಧ ಪಾಠದ ನೋಟ್ಸ್,

ಇತರೆ ಪಾಠದ ನೋಟ್ಸ್:

Download Pdf

Leave your vote

30 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.