9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್ | 9th Standard Hosa Haadu Kannada Poem Notes 

9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್, 9th Class Hosa Haadu Kannada Notes Pdf Question Answer Pdf Download, 9th ಹೊಸಹಾಡು Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ಹೊಸಹಾಡು

ಕೃತಿಕಾರರ ಹೆಸರು : ಕಯ್ಯಾರ ಕಿಞ್ಞಣ್ಣ ರೈ

Table of Contents

ಕೃತಿಕಾರರ ಪರಿಚಯ :

ಕಯ್ಯಾರ ಕಿಞ್ಞಣ್ಣ ರೈ

ಕಯ್ಯಾರ ಕಿಞ್ಞಣ್ಣ ರೈ ಅವರು ( ಕ್ರಿಸ್ತ ಶಕ ೧೯೧೫ ) ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದವರು . ಇವರ ಪ್ರಮುಖ ಕೃತಿಗಳೆಂದರೆ ; ಶ್ರೀಮುಖ , ಐಕ್ಯಗಾನ , ಪುನರ್ನವ ಚೇತನ ಮತ್ತು ಕೊರಗ , ಗಂಧವತಿ ಮುಂತಾದ ಕವನ ಸಂಕಲನಗಳು : ವಿರಾಗಿಣಿ ಎಂಬ ನಾಟಕ , ಅನ್ನದೇವರು ಮತ್ತು ಇತರ ಕತೆಗಳು ಎಂಬ ಸಣ್ಣಕಥಾ ಸಂಕಲನ : ರತ್ನಾಕರ , ಪರಶುರಾಮ , ಎ . ಬಿ . ಶೆಟ್ಟಿ ಎಂಬ ಜೀವನ ಚರಿತ್ರೆಗಳು , ದುಡಿತವೇ ನನ್ನ ದೇವರು ಎಂಬ ಆತ್ಮಕಥೆ , ಗೋವಿಂದ ಪೈ – ಸ್ಮೃತಿ ಕೃತಿ , ಸಾಹಿತ್ಯ ದೃಷ್ಟಿ – ವಿಮರ್ಶಾ ಕೃತಿ , ಪಂಚಮಿ – ಅನುವಾದ ಕೃತಿ ಮುಂತಾದವು .

ಇವರಿಗೆ ೧೯೬೯ ರಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ , ೨೦೦೫ ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ , ೨೦೦೬ ರಲ್ಲಿ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಲಭಿಸಿವೆ . ಇವರು ಮಂಗಳೂರಿನಲ್ಲಿ ನಡೆದ ಆರವತ್ತಾರನೆಯ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಪ್ರಸ್ತುತ ಪದ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆರಿಸಿಕೊಳ್ಳಲಾಗಿದೆ .

9th Hosa Haadu Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,

1 ) ಕಡಿದೊಗೆಯಬೇಕಾದ ಪಾಠಗಳು ಯಾವುವು ?

ಉತ್ತರ : ಜಾತಿ – ಕುಲ – ಮತ – ಧರ್ಮ ಎಂಬ ಪಾಶಗಳನ್ನು ಕಡಿದೊಗೆಯಬೇಕು .

2 ) ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು ?

ಉತ್ತರ : ಕವಿ ನವಭಾವ – ನವಜೀವ – ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದಿದ್ದಾರೆ .

3 ) ಬಾನು ಬುವಿ ಯಾವುದರಿಂದ ಬೆಳಗಬೇಕು ?

ಉತ್ತರ : ಜಡನಿದ್ರೆಯಿಂದ ಎಚ್ಚರಗೊಂಡು ವೀರ ಅಟ್ಟಹಾಸದಲ್ಲಿ ಬಾನು – ಬುವಿ ಬೆಳಗಬೇಕು .

4 ) ವೀರಧ್ವನಿ ಹೇಗೆ ಏರಬೇಕು ?

ಉತ್ತರ : ಬಹಳ ಗಂಭೀರವಾದ ಭಾವನೆಯ ಅಲೆಗಳನ್ನು ಹರಡಿ ವೀರಧ್ವನಿ ಏರಬೇಕು .

5 ) ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?

ಉತ್ತರ : ಹಾಡು ನುಡಿಗುಂಡುಗಳು ಭಯದ ಬೆನ್ನಟ್ಟಬೇಕು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,

1 ) ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು ?

ಉತ್ತರ : ಈ ಹೊಸ ಹಾಡು ಇದೇ ಮೊದಲ ಹಾಡಾಗಿದ್ದು ಇದಕ್ಕೂ ಮೊದಲು ಇಂತಹ ಹಾಡು ಇರಲಿಲ್ಲ . ಅಂದಿನ ಕಷ್ಟಗಳು ಅಂದಂದೇ ಮುಗಿದಿವೆ . ಇಂದು ಅವುಗಳ ಗೊಡವೆ ಇಲ್ಲ . ಆದ್ದರಿಂದ ಈ ಹಾಡು ಹೊಸತು ಹಾಡು ಎಂದು ಕವಿ ಹೇಳಿದ್ದಾರೆ .

2 ) ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ ?

ಉತ್ತರ : ಹೊಸ ಭಾವನೆಯನ್ನು ಮೂಡಿಸುವ , ಹೊಸ ಚೈತನ್ಯ , ಹೊಸ ಶಕ್ತಿಯನ್ನು ತುಂಬಿಸುವ ಹಾಡನ್ನು ಹಾಡಬೇಕು . ಅಂತಹ ಹಾಡನ್ನು ಹಾಡಿದಾಗ ಬಹಳ ಗಂಭೀರವಾದ ಭಾವನೆಯ ತರಂಗಗಳು ಹರಡಿ ವೀರಧ್ವನಿಯೇರಬೇಕು ಎಂದು ಕವಿ ಬಯಸುತ್ತಾರೆ .

3 ) ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ ?

ಉತ್ತರ : ಜಾತಿ – ಕುಲ – ಮತ – ಧರ್ಮ ಎಂಬ ಪಾಠಗಳನ್ನು ಕಡಿದೊಗೆದು ಉತ್ಸಾಹದಿಂದ ಎದೆಹಿಗ್ಗಿ ಹಾಡಬೇಕು . ಆ ಹಾಡು ಯುಗಯುಗಗಳಾಚೆಗೂ ಜಗತ್ತಿನ ಮೂಲೆ ಮೂಲೆಗೂ ತಲುಪುವಂತ ಹಾಡು ಗುಡುಗಬೇಕು ಎಂದು ಕವಿ ಆಶಿಸುತ್ತಾರೆ .

ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1 ) ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ ,

ಬದುಕಿಗೆ ಹೊಸ ತಿರುವನ್ನು ನೀಡಬಲ್ಲ , ಹೊಸ ಆಶಯವನ್ನು ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ . ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು . ನಮ್ಮನ್ನು ಬಿಗಿದಿರುವ ಜಾತಿ – ಕುಲ – ಮತ – ಧರ್ಮ ಎಂಬ ಪಾಠಗಳನ್ನು ಕತ್ತರಿಸಿ ಉತ್ಸಾಹದಿಂದ ಹಾಡಬೇಕು . ಆ ಸಮಾನತಾ ಭಾವವು ಯುಗಯುಗಗಳಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪಬೇಕು . ಆ ಹೊಸ ಹಾಡನ್ನು ಉನ್ನತ ಶಿಖರದ ತುದಿಯಲ್ಲಿ ನಿಂತು ಹಾಡಿದಾಗ ಅದರ ನುಡಿಗುಂಡುಗಳು ದಶದಿಕ್ಕಿಗೂ ಸಿಡಿದು ಜನರಲ್ಲಿ ತುಂಬಿರುವ ಭಯವನ್ನು ಓಡಿಸಬೇಕು . ಗಂಡೆದೆಯ ಗರ್ಜನೆಗೆ ನಮ್ಮ ದೇಶದ ಕೋಟ್ಯಂತರ ಜನರು ದನಿಗೂಡಿಸಬೇಕು . ಆ ಒಕ್ಕೊರಲಿನ ಏಕತಾಭಾವದ ಪ್ರತಿಧ್ವನಿಯು ಭೂಮಿ – ಆಕಾಶವನ್ನು ಆವರಿಸಬೇಕು . ಜಡತ್ವದಿಂದ ಕೂಡಿರುವ ಜನರು ಎಚ್ಚೆತ್ತು ಅಂಧಕಾರದ ಕತ್ತಲೆಯಿಂದ ಆವರಿಸಲ್ಪಟ್ಟಿರುವ ಬಾನು ಭೂಮಿಯನ್ನು ಬೆಳಗಬೇಕು . ಪ್ರತಿಯೊಬ್ಬರ ನಡೆ – ನುಡಿಯಲ್ಲಿ ಕ್ರಾಂತಿಯ ಕಿಡಿ ಕೆರಳಬೇಕು , ಜಯವನ್ನು ಹೊಂದಿದ ಮಾತೆಯೇ ನೀನು ಹೆದರದೆ ಧೈರ್ಯದಿಂದ ತಲೆ ಎತ್ತಿ ನೋಡು , ಹಿಂದಿನ ಪಾಡು ಹಿಂದೆಯೇ ಮುಗಿಯಿತು . ಇದೇ ಮೊದಲು , ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ . ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳುತ್ತಾ ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ . ಇಂತಹ ಸ್ಫೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು , ಅದು ನಿತ್ಯ ನೂತನವಾಗಿರಬೇಕೆಂಬುದು ಪದ್ಯದ ಆಶಯವಾಗಿದೆ .

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1 ) “ ಯುಗಯುಗಗಳಾಚೆಯಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಳಾಗಿದೆ . ಸಂದರ್ಭ : ನಮ್ಮನ್ನು ಬಿಗಿದಿರುವ ಜಾತಿ – ಕುಲ – ಮತ – ಧರ್ಮ ಎಂಬ ಪಾಠಗಳನ್ನು ಕತ್ತರಿಸಿ ಉತ್ಸಾಹದಿಂದ ಹಾಡಬೇಕು . ಎಂದು ಹೇಳುವ ಸಂದರ್ಭದಲ್ಲಿ ಕವಿ ಆ ಸಮಾನತಾ ಭಾವವು ‘ ಯುಗಯುಗಗಳಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪಬೇಕು ‘ ಎಂದು ಹೇಳಿದ್ದಾರೆ .

ಸ್ವಾರಸ್ಯ : ಜಾತಿ – ಕುಲ – ಮತ – ಧರ್ಮ ಎಂಬ ಕಟ್ಟಳೆಗಳನ್ನು ಮೀರಿ ನಮ್ಮಲ್ಲಿ ಮನುಜ ಮತದ ಭಾವನೆ ಮೂಡಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

2 ) “ ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿಯೇರಬೇಕು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಳಾಗಿದೆ . ಸಂದರ್ಭ : ಬದುಕಿಗೆ ಹೊಸ ತಿರುವನ್ನು ನೀಡಬಲ್ಲ . ಹೊಸ ಆಶಯವನ್ನು ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹಾಡನ್ನು ಹಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ . ಹೊಸಹಾಡು ಹಾಡಿದಾಗ ಬಹಳ ಗಂಭೀರವಾದ ಭಾವನೆಯು ಎಲ್ಲೆಡೆ ಹರಡಿ ವೀರಧ್ವನಿ ಏರಬೇಕು ಎಂದು ಕವಿ ಹೇಳಿದ್ದಾರೆ .

ಸ್ವಾರಸ್ಯ : ಹೊಸ ಹಾಡನ್ನು ಕೇಳಿದವರಲ್ಲಿ ವೀರತ್ವ ಮೂಡಬೇಕು ಎಂಬುದನ್ನು ವೀರಧ್ವನಿ ಏರಬೇಕು ಎಂದು ಕವಿ ಹೇಳಿರುವುದು ಸ್ವಾರಸ್ಯವಾಗಿದೆ .

3 ) “ ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲ್ಲಿ ಬಾನು ಬುವಿ ಬೆಳಗಬೇಕು ”

“ ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು “

ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಳಾಗಿದೆ . ತಮಾನದ ಶಾಸ ಸಂದರ್ಭ : ನಮ್ಮ ನಡೆ – ನುಡಿಗಳಲ್ಲಿ ಕ್ರಾಂತಿ ( ಬದಲಾವಣೆಯನ್ನು ಉಂಟುಮಾಡಬೇಕಾಗಿರುವುದರ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ . ನಾವು ಜಡನಿದೆಯಿಂದ ಎಚ್ಚೆತ್ತುಕೊಂಡು ವೀರ ಅಟ್ಟಹಾಸದಿಂದ ಬಾನು ಮತ್ತು ಭೂಮಿಯನ್ನು ಬೆಳಗಬೇಕು ಹಾಗೂ ನಮ್ಮ ಪ್ರತಿ ಹೆಜ್ಜೆಯಲ್ಲೂ ಕ್ರಾಂತಿಯನ್ನುಂಟುಮಾಡಬೇಕು ಎಂದು ಕವಿ ಹೇಳಿದ್ದಾರೆ .

ಸ್ವಾರಸ್ಯ : ಒಳ್ಳೆಯ ಬದಲಾವಣೆಯನ್ನು ಉಂಟುಮಾಡಬೇಕಾದತ ಮೊದಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

4 ) ” ಇದೋ ಮೊದಲು ಮುನ್ನಿಲ್ಲ ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಕವಿಯು ಹೊಸಹಾಡಿನ ಬಗ್ಗೆ ಹೇಳುತ್ತಾ ಜಯಜನನಿಯಾದ ಭಾರತಾಂಬೆಯನ್ನು ಕುರಿತು “ ಶಿರವೆತ್ತಿ ವೀರಭರವಸೆಯಿಂ ಹೊಸಹಾಡನ್ನು ಕೇಳು ” ಎಂದು ಹೇಳುವ ಸಂದರ್ಭದಲ್ಲಿ ಹಿಂದಿನ ಪಾಡು ಹಿಂದೆಯೇ ಮುಗಿಯಿತು . ಇದೇ ಮೊದಲು . ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ . ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳಿದ್ದಾರೆ .

ಸ್ವಾರಸ್ಯ : ಹಿಂದೆ ಆಗಿರುವ ಹಳೆಯದನ್ನು ನೆನೆಯುತ್ತಾ ಇಂದಿನ ಅವಕಾಶದಿಂದ ವಂಚಿತರಾಗಬಾರದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .

1. ದ್ವನಿ : ದನಿ::ಯುಗ:……………………..

2. ಲೋಕಾಂತರ : ಸವರ್ಣದೀರ್ಘ ಸಂಧಿ :: ಉನ್ನತೋನ್ನತ :……….

3. ಬಾನು:ಆಕಾಶ ::ಭಾನು:……….

1. ಜುಗ, 2.ಗುಣಸಂಧಿ 3. ಸೂರ್ಯ

ಊ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

ಹೊಸಹಾಡು ‘ ಪದ್ಯದ ಆಕರ ಗ್ರಂಥ……………

( ಪುನರ್ನವ . ಚೇತನ , ಕೊರಗ. ಶತಮಾನದಗಾನ )

2. ‘ ಹೊಸಹಾಡು ‘ ಪದ್ಯದ ಕವಿ,,,,,,,,,

( ಗೋಪಾಲಕೃಷ್ಣ ಅಡಿಗ , ಕಯ್ಯಾರ ಕಿಞ್ಞಣ್ಣ ರೈ , ದ.ರಾ. ಬೇಂದ್ರೆ , ಜಿ . ಎಸ್ . ಶಿವರುದ್ರಪ್ಪ )

3 ಉನ್ನತೋನ್ನತ…………ಶಿಖರವನೇರಿ ಹಾಡಲ್ಲಿ ಹಾಡಬೇಕು)

( ಹಿಮಾಲಯ ,ಘನಹಿವಾದಿ, ಸಹ್ಯಾದ್ರಿ , ವಿಂಧ್ಯಾ )

4 …………….ಧರ್ಮಪಾಠಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು ( ಜಾತಿ – ಕುಲ – ಮತ ,ಮೇಲು – ಕೀಳು,ಬಡವ – ಬಲ್ಲಿದ , ಹಳ್ಳಿ – ಪಟ್ಟಣ )

ಸರಿ ಉತ್ತರಗಳು

1. ಶತಮಾನದ ಗಾನ

2. ಕಯ್ಯಾರ ಕಿಞಣ್ಣ ರೈ ,

3. ,ಘನಹಿಮಾದಿ

4. ಜಾತಿ – ಕುಲ ಮತ

ಭಾಷಾ ಚಟುವಟಿಕೆ

1 ಅಲಂಕಾರದ ಎರಡು ವಿಧಗಳನ್ನು ಹೆಸರಿಸಿ ,

ಉತ್ತರ : ಅಲಂಕಾರದಲ್ಲಿ ಎರಡು ವಿಧ ಅದು ಅರ್ಥಾಲಂಕಾರ ಮತ್ತು ತಬ್ದಾಲಂಕಾರ ,

2. “ ಬಾನಿನಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು – ಇಲ್ಲಿರುವ ಅಲಂಕಾರವನ್ನು ಗುರುತಿಸಿ , ಲಕ್ಷಣದೊಂದಿಗೆ ಸಮನ್ವಯಗೊಳಿಸಿ

ಅಲಂಕಾರ :ಉಪಮಾಲಂಕಾರ

ಉಪಮೇಯ:ಬಾನಿನಲ್ಲಿ ಗಾಳಿಪಟಗಳು

ಉಪಮಾನ:ಹಕ್ಕಿಗಳು

ಉಪಮಾವಾಚಕ :ಅಂತೆ

ಸಮಾನಧರ್ಮ:ಹಾರಾಡುವುದು

ಸಮನ್ವಯ: ಉಪಮೇಯವಾದ ಬಾನಿನಲ್ಲಿ ಗಾಳಿಪಟಗಳನ್ನು ಉಪಮಾನವಾದ ಹಕ್ಕಿಗಳಿಗೆ ಹೋಲಿಸಿ ವರ್ಣಿಸಲಾಗಿದೆ . ಎಂಬ ಉಪಮಾವಾಚಕ ಪದವಿದ್ದು , ಹಾರಾಡುತ್ತಿದ್ದವು ಎಂಬ ಇರುವದರಿಂದ ಇದು ಉಪಮಾಲಂಕಾರ

3. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ

ನವಭಾವ – ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ;

ತೀವ್ರತರ ಗಂಭೀರ ಭಾವನೆಯ ತಲೆ ಮಸಗಿ ವೀರಧ್ವನಿಯೇರಬೇಕು ;

ಜಾತಿ – ಕುಲ – ಮತ – ಧರ್ಮ ಪಾಶಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು;

ಯುಗಯುಗಗಳಾಚೆಯಲಿ ಲೋಕಲೋಕಾಂತದಲಿ ಆ ಹಾಡು ಗುಡುಗಬೇಕು.

ಉನ್ನತೋನ್ನತ ಘನ ಹಿಮಾದ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ;

ಹಾಡು ನುಡಿಗುಂಡುಗಳು ಹಾರಿ ದಶದಿಕ್ಕಿನಲ್ಲಿ ಭಯದ ಬೆನ್ನಟ್ಟಬೇಕು ;

9th Class Hosa Haadu Kannada Notes Pdf Question Answer Pdf Download, 9th ಹೊಸಹಾಡು Notes

ಇತರೆ ಪಾಠಗಳು :

ಹರಲೀಲೆ ಪಾಠದ ನೋಟ್ಸ್

ಊರುಭಂಗ ಕನ್ನಡ ನೋಟ್ಸ್

Leave your vote

60 Points
Upvote Downvote

7 thoughts on “9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್ | 9th Standard Hosa Haadu Kannada Poem Notes 

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.