9ನೇ ತರಗತಿ ಊರುಭಂಗ ಕನ್ನಡ ನೋಟ್ಸ್ | 9th Standard Urubhanga Kannada Notes

9ನೇ ತರಗತಿ ಊರುಭಂಗ ಕನ್ನಡ ನೋಟ್ಸ್ , 9th Standard Urubhanga Kannada Notes Question Answer Pdf Download

ತರಗತಿ : 9ನೇ ತರಗತಿ

ಪಾಠದ ಹೆಸರು : ಊರುಭಂಗ

ಕೃತಿಕಾರರ ಹೆಸರು : ಭಾಸಕವಿ, ಡಾ ಎಲ್ . ಬಸವರಾಜು

Table of Contents

ಕೃತಿಕಾರರ ಪರಿಚಯ :

ಭಾಸ :

ಭಾಸನು ಸಂಸ್ಕೃತದ ಪ್ರಸಿದ್ಧ ನಾಟಕಕಾರ , ಈತ ಕಾಳಿದಾಸನಿಗಿಂತ ಸುಮಾರು ಐದುನೂರು ವರ್ಷಗಳಷ್ಟು ಹಿಂದಿನವನು ,

* ಈತನ ಕಾಲ ಸುಮಾರು ಕ್ರಿಸ್ತಪೂರ್ವ ೩೦೦ ,

* ಈತನು ಪೂರ್ಣರೂಪದಲ್ಲಿ ೨೫-೩೦ ನಾಟಕಗಳನ್ನು ಬರೆದಿದ್ದು ಲಭಿಸಿರುವ ನಾಟಕಗಳು ೧೪ ಮಾತ್ರ

* ಈತನ ಪ್ರಮುಖ ಕೃತಿಗಳೆಂದರೆ : ಪ್ರತಿಜ್ಞಾಯೌಗಂಧರಾಯಣ , ಸ್ವಪ್ನವಾಸವದತ್ತ , ಚಾರುದತ್ತ ಇವು ಬೃಹತ್ಕಥೆ ಆಧಾರಿತವಾದವು .

* ಪ್ರತಿಮಾ ನಾಟಕ , ಅಭಿಷೇಕ , ಯಜ್ಞಫಲ ಇವು ರಾಮಾಯಣಕ್ಕೆ ಸಂಬಂಧಿಸಿದವು ,

* ಪಂಚರಾತ್ರಾ , ಮಧ್ಯಮ ವ್ಯಾಯೋಗ , ದೂತವಾಕ್ಯ , ದೂತ ಘಟೋತ್ಕಚ , ಕರ್ಣಭಾರ , ಊರುಭಂಗ ಇವು ಮಹಾಭಾರತ ಆಧರಿಸಿ ಈತನು ಬರೆದಿರುವ ನಾಟಕಗಳು ,

* ಡಾ . ಎಲ್ . ಬಸವರಾಜು : ಇವರು ಭಾಸನ ‘ ಊರುಭಂಗ ‘ ವನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದವರು . ಇವರು ಕೋಲಾರದವರು .ಪಂಪಭಾರತದ ಸರಳ ಗದ್ಯಾನುವಾದ ಮೂಲತಃ ಬುದ್ಧಚರಿತದ ಗದ್ಯಾನುವಾದವಾಗಿದೆ . ಇವರು ನೂರಾರು ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ್ದಾರೆ .

Urubhanga Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ದುರ್ಯೋಧನನು ದುರ್ಜಯನಿಗೆ ಏನೆಂದು ಬುದ್ಧಿವಾದವನ್ನು ಹೇಳುತ್ತಾನೆ ?

ಉತ್ತರ : ನನಗೆ ಹೇಗೋ ಹಾಗೆ , ಪಾಂಡವರಿಗೂ ವಿಧೇಯನಾಗಿರು ಎಂದು ಹೇಳುತ್ತಾನೆ

2. ಅಶ್ವತ್ಥಾಮನು ದುರ್ಯೋಧನನಿಗೆ “ ತಾನು ಏನು ಮಾಡಲು ಸಿದ್ಧನಾಗಿದ್ದೇನೆ ” ಎಂದು ಹೇಳುತ್ತಾನೆ ?

ಉತ್ತರ : ಅಶ್ವತ್ಥಾಮನು ದುರ್ಯೋಧನನಿಗೆ “ ಕೃಷ್ಣನನ್ನು ಪಾಂಡುತನಯಸಹಿತವಾಗಿ ನಾಶಮಾಡಲು ಸಿದ್ಧನಾಗಿದ್ದೇನೆ ” ಎಂದು ಹೇಳುತ್ತಾನೆ .

3. ಅಶ್ವತ್ಥಾಮನು “ ನಿನ್ನ ದರ್ಪವೆಲ್ಲವೂ ಮುರಿದು ಬಿತ್ತೇ ” ಎಂದಾಗ ದುರ್ಯೋಧನನು ಏನು ಹೇಳುತ್ತಾನೆ ?

ಉತ್ತರ : ಅಶ್ವತ್ಥಾಮನು ನಿನ್ನ ದರ್ಪವೆಲ್ಲವೂ ಮುರಿದು ಬಿತ್ತೇ ಎಂದಾಗ ದುರ್ಯೋಧನನು “ ರಾಜರಿಗೆ ಅಭಿಮಾನವೇ ಶರೀರ ಆ ಅಭಿಮಾನಕ್ಕಾಗಿಯೇ ನಾನು ಯುದ್ಧವನ್ನು ಕೈಗೊಂಡಿದ್ದು ” ಎಂದು ಹೇಳುತ್ತಾನೆ .

4. ದುರ್ಯೋಧನನು ನೆಲಕ್ಕುರುಳಿದ ಭೀಮನನ್ನು ಏನೆಂದು ಮೂದಲಿಸುತ್ತಾನೆ ?

ಉತ್ತರ : ದುರ್ಯೋಧನನು ನೆಲಕ್ಕುರುಳಿದ ಭೀಮನನ್ನು ಕಂಡು “ ಹೆದರಬೇಡ ಭೀಮ , ನೆಲಕ್ಕೆ ಬಿದ್ದ ಶತ್ರುವನ್ನು ಯಾವ ವೀರನೂ ಘಾತಿಸುವುದಿಲ್ಲ ” ಎಂದು ಮೂದಲಿಸುತ್ತಾನೆ ,

5 , ತೊಡೆ ಮುರಿದು ಬಿದ್ದಿದ್ದ ದುರ್ಯೋಧನನ್ನು ನೋಡಲು ಯಾರು ಯಾರು ಬಂದರು ?

ಉತ್ತರ : ತೊಡೆ ಮುರಿದು ಬಿದ್ದಿದ್ದ ದುರ್ಯೋಧನನ್ನು ನೋಡಲು ಬಲರಾಮ , ಧೃತರಾಷ್ಟ್ರ , ಗಾಂಧಾರಿ , ದುರ್ಜಯ ಮತ್ತು ಅಶ್ವತ್ಥಾಮ ಬಂದರು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,

1. ದುರ್ಜಯನು ತನ್ನ ಬಳಿ ಬರುತ್ತಿರುವುದನ್ನು ಕಂಡ ದುರ್ಯೋಧನನು ಏನೆಂದುಕೊಳ್ಳುತ್ತಾನೆ ? ಉ

ತ್ತರ : ದುರ್ಜಯನ್ನು ತನ್ನ ಬಳಿ ಬರುತ್ತಿರುವುದನ್ನು ಕಂಡ ದುರ್ಯೋಧನನು : “ ಅಹ ಈ ಚಿಣ್ಣನೂ ಬಂದ ಹೃದಯದಲ್ಲಿ ಸದಾ ಸನ್ನಿಹಿತವಾಗಿರುವ ಪತ್ರಸ್ನೇಹವು ನನ್ನನ್ನೀಗ ದಹಿಸುತ್ತಿದೆ . ನನ್ನ ತೊಡೆಯ ಮೇಲೆ ಮಲಗಲು ಯೋಗ್ಯನಾದ ಈ ಹಸುಳೆ ದುರ್ಜಯನು ದುಃಖ ಎಂದರೇನೆಂಬುದನ್ನೇ ಅರಿಯ , ಸೋತುಬಿದ್ದು ಈ ದುರವಸ್ಥೆಯಲ್ಲಿರುವ ನನ್ನನ್ನು ಕಂಡು ಏನೆಂದಾನೋ ? ” ಎಂದುಕೊಳ್ಳುತ್ತಾನೆ .

2. ಪಾಂಡವರು ತನ್ನ ದರ್ಪವನ್ನು ಮುರಿದರೆಂಬ ಮಾತು ಅತ್ಯಲ್ಪ ಎಂಬುದನ್ನು ದುರ್ಯೋಧನನನು ಹೇಗೆ ಸಮರ್ಥಿಸಿದ್ದಾನೆ ?

ಉತ್ತರ : ಅಶ್ವತ್ಥಾಮನು ದುರ್ಯೋಧನನಲ್ಲಿ ‘ ಭೀಮನಿಂದ ನಿನ್ನ ದರ್ಪವೂ ಮುರಿದುಬಿತ್ತೆ ‘ ಎಂದು ಹೇಳಿದಾಗ ದುರ್ಯೋಧನನು “ ನೋಡು ಗುರುಪುತ್ರ , ಸಭೆಯಲ್ಲಿ ದೌಪದಿಯನ್ನು ಮುಂದಲೆ ಹಿಡಿದು ಎಳೆದಾಡಿದೆವು . ಪಗಡೆ ಆಟದ ನೆಪದಲ್ಲಿ ಸೋತ ಪಾಂಡವರನ್ನು ವನ್ಯಮೃಗಗಳೊಡಗೂಡಿಸಿ ಕಾಡಿನಲ್ಲಿ ತಿರನೆ ತಿರುಗಾಡಿಸಿದೆವು . ಇವುಗಳ ಮುಂದೆ ಪಾಂಡವರು ನನ್ನ ದರ್ಪವನ್ನು ಮುರಿದರೆಂಬ ಮಾತು ಅತ್ಯಲ್ಪವಲ್ಲವೇ ? ಆಲೋಚಿಸಿ ನೋಡು ” ಎಂದು ಅಶ್ವತ್ಥಾಮನಿಗೆ ಹೇಳಿದನು .

3. ಅಶ್ವತ್ಥಾಮನು ಕೃಷ್ಣನನ್ನು ಚಿಮ್ಮಿಬಿಡುತ್ತೇನೆ ಎಂದಾಗ ದುರ್ಯೋಧನನು ಏನು ಹೇಳಿದನು ?

ಉತ್ತರ : ಅಶ್ವತ್ಥಾಮನು ಕೃಷ್ಣನನ್ನು ಚಿಮ್ಮಿಬಿಡುತ್ತೇನೆ ಎಂದಾಗ ದುರ್ಯೋಧನನು “ ಅಯ್ಯಾ , ಬೇಡ , ಹಾಗೆನ್ನಬೇಡ , ಅಭಿಷಿಕ್ಕ ರಾಜರೆಲ್ಲರೂ ಭೂಮಿತಾಯ ಮಡಿಲಲ್ಲಿ ಮಲಗಿಬಿಟ್ಟರು . ಕರ್ಣನು ಸ್ವರ್ಗಸ್ಥನಾದನು : ಭೀಷ್ಮಾಚಾರ್ಯರ ದೇಹವಾತವಾಯಿತು . ನನ್ನ ತಮ್ಮಂದಿರೂ ಗತಿಸಿಹೋದರು . ನನ್ನ ಗತಿಯೂ ಹೀಗಾಯಿತು . ಗುರುಪುತ್ರ , ಇನ್ನು ಬಿಲ್ಲನ್ನು ಬಿಸಾಡು , ” ಎಂದು ಹೇಳಿದನು .

4 , ಅಶ್ವತ್ಥಾಮನ ಧನುಷ್ಠಾಂಕಾರ ಕೇಳಿದ ಬಲರಾಮನು ನುಡಿದ ನುಡಿಗಳೇನು ?

ಉತ್ತರ : ಅಶ್ವತ್ಥಾಮನ ಧನುಷ್ಠಾಂಕಾರ ಕೇಳಿದ ಬಲರಾಮನು ಆಕಾಶದ ಕಡೆ ನಿಟ್ಟಿಸಿ , ” ರಣದುಂದುಭಿಗಳ ಮೊಳಗು ನಿಂತು ಮೂಕವಾದ , ಬಾಳಿ ಕವಚ – ಚಾಮರ – ಛತ್ರಗಳು ಚೆಲ್ಲಿರುವ ಯೋಧರೂ ಸೂತರೂ ಸತ್ತು ಬಿದ್ದಿರುವ ಈ ರಣರಂಗದಲ್ಲಿ ತನ್ನ ಧನುಷ್ಠಂಕಾರದಿಂದ ಕಾಗೆಗಳ ಗುಂಪನ್ನು ಹೆದರಿಸಿ , ಆಕಾಶದ ತುಂಬ ಚದುರುವಂತೆ ಮಾಡಿದವನು ಯಾರು ? ” ಎಂದು ಹೇಳಿದನು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ದುರ್ಯೋಧನ ಮತ್ತು ದುರ್ಜಯರ ನಡುವೆ ನಡೆದ ಸಂಭಾಷಣೆಯನ್ನು ಸಂಗ್ರಹಿಸಿ ಬರೆಯಿರಿ .

ಉತ್ತರ : ಧೃತರಾಷ್ಟ್ರನು ಮರಿ , ದುರ್ಜಯ , ಹೋಗಪ್ಪ – ನಿಮ್ಮಪ್ಪಾಜಿ ಎಲ್ಲಿರುವನೋ ಹುಡುಕು ಹೋಗು . ಎಂದಾಗ ದುರ್ಜಯನು ಆಗಲಿ ತಾತ , ( ಮುಂದೆ ನಡೆದು ) ತಾತ , ಇದೋ ಹೊರಟೆ .

( ಎಂದು ಓಡುತ್ತ ) ಅಪ್ಪಾರ್ಜಿ ಎಲ್ಲಿದ್ದೀರಾ ? ಎಂದು ಹುಡುಕುತ್ತಾ ಬರುವುದನ್ನು ನೋಡಿದ ದುರ್ಯೋಧನನು ಸೋತುಬಿದ್ದು ಈ ದುರವಸ್ಥೆಯಲ್ಲಿರುವ ನನ್ನನ್ನು

ಕಂಡು ಏನೆಂದಾನೋ ? ಎಂದು ಯೋಚಿಸಿ ಅಪ್ಪಾ ದುರ್ಜಯ , ಇಲ್ಲಿಗೇಕೆ ಬಂದೆ ?

ಅಎಂದು ಕೇಳಿದಾಗ ನೀವು ತಡಮಾಡಿದಿರಿ . ಹೊತ್ತಾಯಿತೆಂದು ಬಂದೆ . ಎಂದು ದುರ್ಜಯನ್ನು ಹೇಳಿ , ಅಪ್ಪಾಜಿ , ನಾನು ನಿಮ್ಮ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ ! ಎಂದಾಗ ‘ ಬೇಡಪ್ಪ ಬೇರೆ ಎಲ್ಲಿಯಾದರೂ ಕುಳಿತುಕೋ ‘ ಎಂದು ಹೇಳುತ್ತಾನೆ .

ಇದುವರೆಗೂ ನೀನು ಕುಳಿತು , ಆಡಿ , ಮಲಗಿ ,ನಿನಗೆ ಚಿರಪರಿಚಿತವಾಗಿದ್ದ ಈ ತೊಡೆಯನ್ನು ನಿನ್ನ ಭಾಗಕ್ಕಿಲ್ಲವಪ್ಪ ಎಂಬ ಮಾತು . ದುರ್ಜಯನಿಗೆ ಅರ್ಥವಾಗದೇ ಯಾಕಪ್ಪಾಜಿ , ನೀವೆಲ್ಲಿಗೆ ಹೋಗುತ್ತೀರಿ ? ಎಂದು ಕೇಳುತ್ತಾನೆ .

ಇದಕ್ಕೆ ದುರ್ಯೋಧನನು ನನ್ನ ತಮ್ಮಂದಿರು ಇರುವಲ್ಲಿಗೆ ಹೋಗುತ್ತೇನೆ . ಅಪ್ಪಾಜಿ , ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ , ಎಂದು ಕೇಳುತ್ತಾನೆ . ಹೋಗು ಮಗನೇ , ಹಾಗೆಂದು ವೃಕೋದರನನ್ನು ಕೇಳು ಹೋಗು ಎಂದು ದುರ್ಯೋಧನನು ಹೇಳುತ್ತಾನೆ .

ದುರ್ಜಯ : ಬನ್ನಿರಪ್ಪಾಜಿ ಹೋಗೋಣ , ನಮ್ಮನ್ನು ಹುಡುಕುತ್ತಿದ್ದಾರೆ . ದುರ್ಯೋಧನ : ಯಾರಪ್ಪ ? ದುರ್ಜಯ : ಅಜ್ಜ , ಅಜ್ಜಿ ಎಲ್ಲರೂ . ದುರ್ಯೋಧನ : ಮಗು ಹೋಗು , ನಾನು ನಡೆಯಲಾರೆನಪ್ಪ , ದುರ್ಜಯ : ನಿಮ್ಮನ್ನೆತ್ತಿಕೊಳ್ಳುತ್ತೇನೆ ಬನ್ನಿರಪ್ಪಾಜಿ !

ದುರ್ಯೋಧನ : ಅಪ್ಪಾ ದುರ್ಜಯ , ನೀನಿನ್ನೂ ಚಿಕ್ಕವನು .ದುರ್ಜಯ : ( ಧೃತರಾಷ್ಟ್ರನ ಕಡೆ ತಿರುಗಿ , ತಾತ , ಬನ್ನಿ , ಅಪ್ಪಾಜಿಯಲ್ಲಿದ್ದಾರೆ . ಈ ರೀತಿ ದುರ್ಯೋಧನ ಮತ್ತು ದುರ್ಜಯರ ನಡುವೆ ನಡೆದ ಸಂಭಾಷಣೆ ನಡೆಯಿತು .

2. ಅಶ್ವತ್ಥಾಮನು ದುರ್ಯೋಧನನ ಬಳಿಸಾರುವ ಮೊದಲು ಆಡಿದ ನುಡಿಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ ,

ಉತ್ತರ : ಸಮರಸಂರಂಭದಲ್ಲಿ ಉಭಯಬಲಜಲಧಿಗಳೂ ಸಂಧಿಸಿದಾಗ ನೆಗೆದ ಶಸ್ತ್ರಗಳೆಂಬ ಮೊಸಳೆಗಳಿಂದ ಕಡಿವಡೆದ ದೇಹಗಳ ಮತ್ತು ಕೊನೆಯುಸಿರೆಳೆಯುತ್ತ ಕಂಠಗತವಾದ ಪಾಣಗಳ ಸಮರಶ್ರೇಷ್ಠ ರಾಜರೇ , ಕೇಳಿ , ನೀವೆಲ್ಲ ಕಿವಿಗೊಟ್ಟು ಕೇಳಿ ;ತಕ್ಕಿಗೊಳಗಾಗಿ ತೊಡೆ ಮುರಿಸಿಕೊಂಡ ಕೌರವನು ನಾನಲ್ಲ ! ಶಿಥಿಲವೂ ವಿಫಲವೂ ಆದ ಅಸ್ತ್ರಗಳನ್ನು ಹಿಡಿದ ಸೂತಪತ್ರ ನಾನಲ್ಲ ; ಆಯುಧಗಳನ್ನು ಹಿಡಿದು ರಣಾಂಗಣದಲ್ಲಿ ಏಕಾಂಗಿಯಾಗಿ ನಿಂತಿದ್ದೇನೆ :ನಾನು ದ್ರೋಣಪುತ್ತ ನಾನು ನಮ್ಮ ತಂದೆಗೆ ಉತ್ತರ ಕ್ರಿಯೆಗಳನ್ನ ಮಾಡುವ ಮೊದಲೇ ದುರ್ಯೋಧನನು ಪಾಂಡವರಿಂದ ಮೋಸಕ್ಕೆ ಒಳಗಾದನಲ್ಲಾ ! ಇದನ್ನು ಯಾರು ತಾನೇ ನಂಬಿಯಾರು ? ರಥಗಳ ಮೇಲೆ , ಆನೆಗಳ ಮೇಲೆ ಕುಳಿತು ,ಕೈಗಳಲ್ಲಿ ಬಿಲ್ಲುಗಳನ್ನು ಹಿಡಿದು , ಆಂಜಲಿಬದ್ಧರಾಗಿ ಉತ್ಕಂಠತೆಯಿಂದ ದುರ್ಯೋಧನನ ಆಜ್ಞೆಗಾಗಿ ಕಾಯುತ್ತಿದ್ದ ಹನ್ನೊಂದು ಆಶೋಹಿಣೀ ಸೇನೆಯ ರಾಜರಿದ್ದರು ; ಪರಶುರಾಮನ ಹರಿತವಾದ ಬಾಣಗಳೂ ಭೇದಿಸಲಾರದ ಕವಚವನ್ನು ತೊಟ್ಟ ಭೀಷ್ಮಾಚಾರ್ಯರು ,ದ್ರೋಣಚಾರ್ಯರಂತಹವರು ರಣದ ಮುಂಚೂಣಿಯಲ್ಲಿ ಇಂಥವರಿದ್ದೂ ಸ್ವಯಂ ಅತಿರಥನಾದ ದುರ್ಯೋಧನನಿಗೆ ಕಾಲಮಹಿಮೆಯಿಂದ ಸೋಲಾಯಿತು .ಗಾಂಧಾರೀ ಪುತ್ರನಲ್ಲಿರುವನೋ ?! ಇದೋ ರಣಾರ್ಣವ ಪಾರಂಗತನಾದ ಕುರುರಾಜನು ಇಳೆಗುರುಳಿದ ಗಜ – ತುರಗ – ನರ ರಥಗಳ ಪ್ರಾಕಾರದ ಮಧ್ಯದಲ್ಲಿದ್ದಾನೆ .ಇಟ್ಟ ಕಿರೀಟ ಕೆಳಗುರುಳಿ , ಕೆಂಗೂದಲೆಲ್ಲ ಕೆದರಿ , ಗದೆಯ ಪೆಟ್ಟಿಂದಾದ ಹುಣ್ಣುಗಳಿಂದ ರಕ್ತ ಸುರಿದು , ಮೈಯೆಲ್ಲ ಕೆಂಪಾಗಿ , ಮೃತ್ಯುಶಯ್ಕೆಯ ಮೇಲಿರುವ ದುರ್ಯೋಧನನು ಪಡುವಣ ಪರ್ವತವನ್ನೇರಿ ಅಸ್ತಂಗತನಾಗುವ ಸಂಧ್ಯಾವಗಾಢ ಸೂರ್ಯನಂತಿರುವನು . ( ಬಳಿ ಸಾರಿ ) , ಅಯ್ಯಾ . ಕುರುರಾಜ , ಏನಿದು ? ಎಂಬ ನುಡಿಗಳನ್ನಾಡುತ್ತಾನೆ .

3. ದುರ್ಯೋಧನನು ತಂದೆತಾಯಿಗಳಿಗೆ ಅಭಿವಂದಿಸುವ ಸಂದರ್ಭದಲ್ಲಿ ಧೃತರಾಷ್ಟ್ರ – ದುರ್ಯೋಧನರ ನಡುವೆ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ ,

ಉತ್ತರ : ಧೃತರಾಷ್ಟ್ರ – ದುರ್ಯೋಧನರ ನಡುವೆ ನಡೆದ ಸಂಭಾಷಣೆ : ( ಧೃತರಾಷ್ಟ್ರ ದುಃಖಿಸುತ್ತಿದ್ದಾನೆ ) ದುರ್ಯೋಧನ : ಅಪ್ಪಾಜಿ , ಈಗ ದುಃಖಿಸುವುದರಿಂದೇನು ಪ್ರಯೋಜನ ? ಧೃತರಾಷ್ಟ್ರ : ಅಪ್ಪಾ , ದುಃಖಿಸದೆ ಹೇಗೆ ಇರಲಿ ? ಯುದ್ಧದಲ್ಲಿ ನಿನ್ನ ನೂರು ಜನ ತಮ್ಮಂದಿರು ಈಗಾಗಲೇ ಹತರಾಗಿದ್ದಾರೆ ! ಇನ್ನು ಉಳಿದಿರುವ ನೀನೊಬ್ಬನೂ ಗತಿಸಿದರೆ ಸರ್ವವೂ ನಾಶವಾದಂತೆಯೇ ( ಎಂದು ಕೆಳಗೆ ಬೀಳುವನು ) . ದುರ್ಯೋಧನ : ಅಯ್ಯೋ , ಪೂಜ್ಯರಾದ ತಾವು ಬಿದ್ದಿರಾ ? ಅಪ್ಪಾಜಿ , ಅಮ್ಮನನ್ನು ಸಮಾಧಾನಪಡಿಸಿ , ಏಳಿ ಧೃತರಾಷ್ಟ್ರ : ಅಪ್ಪಾ , ನಾನೇನೆಂದು ಸಮಾಧಾನಪಡಿಸಲಿ ? ದುರ್ಯೋಧನ : ಯುದ್ಧದಲ್ಲಿ ಹಿಮ್ಮೆಟ್ಟದೆ . ಹುಮ್ಮಸ್ಸಿನಿಂದ ಹೋರಾಡಿ ಹತನಾದನೆಂದು ಸಮಾಧಾನಪಡಿಸಿರಿ . ಅಪ್ಪಾಜಿ , ಹೇಗೋ ಶೋಕವನ್ನು ನಿಗಹಿಸಿಕೊಳ್ಳುವುದರ ಮೂಲಕ ನನ್ನನ್ನು ಅನುಗ್ರಹಿಸಿ , ( ತಂದೆಯ ಕಾಲ್ಗಳಿಗೆ ತಲೆಯನ್ನು ಮುಟ್ಟಿಸಿ ) ಇದೋ , ಇಂದು ನಿಮ್ಮ ಮುಂದೆ ಮಾತ್ರ ತಗ್ಗಿರುವ ಈ ತಲೆಯಿಂದ ನಿಮಗೆ ನಮಸ್ಕರಿಸಿ , ಯಾವ ಘನತೆಯಿಂದ ನಾನು ಹುಟ್ಟಿದೆನೋ ಅದೇ ಘನತೆಯಿಂದ ಸ್ವರ್ಗಕ್ಕೆ ಹೋಗುತ್ತೇನೆ . ಧೃತರಾಷ್ಟ್ರ : ಹುಟ್ಟುಕುರುಡನೂ , ವೃದ್ಧನೂ ಆದ ನನಗೆ ಬಾಳಿನ ಆಶೆಯೆಲ್ಲ . ಇಂಗಿಹೋಗಿದೆಯಾದರೂ , ನನಗೆ ಉಂಟಾಗಿರುವ ಈ ಮತ್ತಶೋಕವು ನನ್ನ ಆತ್ಮವನ್ನು ಆಕ್ರಮಿಸಿಬಿಟ್ಟಿದೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ,

1. “ ಹೋಗು ಮಗನೇ , ಹಾಗೆಂದು ವೃಕೋದರನನ್ನು ಕೇಳು ಹೋಗು .”

ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ದುರ್ಯೋಧನನು ದುರ್ಜಯನನ್ನು ತಡೆಯುತ್ತಾ “ ನೀನು ಆಡಿ ಬೆಳೆದ ಈ ತೊಡೆ ಇನ್ನು ನಿನ್ನ ಭಾಗ್ಯಕ್ಕಿಲ್ಲ ” ಎಂದು ಹೇಳಿದಾಗ ಬಾಲಕ ದುರ್ಜಯನ್ನು “ ಏಕೆ , ನೀವೆಲ್ಲಿಗೆ ಹೋಗುವಿರಿ ? ” ಎಂದು ಕೇಳುತ್ತಾನೆ . ಆಗ ದುರ್ಯೋಧನ “ ನನ್ನ ತಮ್ಮಂದಿರು ಇರುವಲ್ಲಿಗೆ ” ಎಂದಾಗ ಅವನು “ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ” ಎಂದು ಹೇಳಿದ ಸಂದರ್ಭದಲ್ಲಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ಮೋಸದಿಂದ ತನ್ನ ತೊಡೆ ಮುರಿದವನು ಭೀಮನಾದ್ದರಿಂದ ತಮ್ಮಂದಿರು ಇರುವಲ್ಲಿಗೆ ಕಳುಹಿಸುತ್ತಿರುವವನೂ ಅವನೇ . ಆದ್ದರಿಂದ ವೃಕೋದರನ್ನು ಕೇಳು ಹೋಗು ಎಂಬ ಮಾತು ಸ್ವಾರಸ್ಯಕರವಾಗಿದೆ .

2. “ಅಂತಹವನೂ ಇಂದು ನನ್ನನ್ನು ಮೋಸದಿಂದ ಗೆದ್ದನೆಂದರೆ ನಾನು ಸೋತಂತಾಗಲಿಲ್ಲ . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಭೀಮನು ಮೋಸದಿಂದ ತೊಡೆಗೆ ಹೊಡೆದು ಉರುಳಿಸಿದ ಬಗ್ಗೆ ಬಲರಾಮನು ಕೋಪಗೊಂಡಾಗ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ . ಅರಗಿನ ಮನೆಯಲ್ಲಿ , ಕುಬೇರನ ಮನೆಯಲ್ಲಿ ಪಾರಾದ , ಹಿಡಿಂಬಾಸುರನನ್ನು ಕೊಂದ ಶಕ್ತಿಶಾಲಿ ಭೀಮನೂ ತನ್ನನ್ನು ಮೋಸದಿಂದ ಕೊಂದನು . ಇದರಿಂದ ತಾನು ಸೋತಂತಾಗಲಿಲ್ಲ . ಎಂದು ಈ ಸಂದರ್ಭದಲ್ಲಿ ದುರ್ಯೋಧನನು ಹೇಳುತ್ತಾನೆ . ಸ್ವಾರಸ್ಯ : ಭೀಮನಂತಹ ಬಲಶಾಲಿಯಿಂದಲೂ ತನ್ನನ್ನು ನೇರವಾಗಿ ಸೋಲಿಸಲಾಗಲಿಲ್ಲ ಎಂಬ ಮಾತು ಸ್ವಾರಸ್ಯಪೂರ್ಣವಾಗಿದೆ.

3. “ ನನ್ನ ಹಲಾಯುಧದಿಂದ ಭೀಮನದೆಯನ್ನು ಉತ್ತು ಬರುತ್ತೇನೆ . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ . ಬಲರಾಮನು ನೋಡನೋಡುತ್ತಿದ್ದಂತೆ ಭೀಮನು ತನ್ನ ಗದೆಯಿಂದ ದುರ್ಯೋಧನನ ತೊಡೆಗೆ ಹೊಡೆದು ಉರುಳಿಸುತ್ತಾನೆ . ಆಗ ಕೋಪಗೊಂಡ ಬಲರಾಮನು “ ಯುದ್ಧ ನಿಯಮವನ್ನೂ , ನನ್ನನ್ನೂ ಕಡೆಗಣಿಸಿ ತೊಡೆಗೆ ಹೊಡೆದುರುಳಿಸಿದ ಭೀಮನ ಎದೆಯನ್ನು ತನ್ನ ಹಲಾಯುಧದಿಂದ ಉತ್ತು ಬರುತ್ತೇನೆ ” ಎಂದು ಈ ಸಂದರ್ಭದಲ್ಲಿ ಹೇಳುತ್ತಾನೆ .

ಸ್ವಾರಸ್ಯ : ಭೀಮನ ಎದೆಯನ್ನು ತನ್ನ ಆಯುಧವಾದ ನೇಗಿಲಿನಿಂದ ಉಳುತ್ತೇನೆ ಎಂಬುದು ಇಲ್ಲಿ ಸ್ವಾರಸ್ಯಕರವಾಗಿದೆ .

3. “ ನಿನಗೆ ಚಿರಪರಿಚಿತವಾಗಿದ್ದ ಈ ತೊಡೆಯನ್ನು ನಿನ್ನ ಭಾಗಕ್ಕಿಲ್ಲವಲ್ಲ ! ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಭೀಮನಿಂದ ತೊಡೆ ಮುರಿಯಲ್ಪಟ್ಟು ಬಿದ್ದಿದ್ದ ದುರ್ಯೋಧನನನ್ನು ಹುಡುಕಿಕೊಂಡು ಆತನ ಮಗನಾದ ದುರ್ಜಯ ಹಾಗೂ ಧೃತರಾಷ್ಟ್ರ ಮತ್ತು ಗಾಂಧಾರಿ ಬರುತ್ತಾರೆ . ಆಗ ದುರ್ಜಯನು ದುರ್ಯೋಧನನ ತೊಡೆಯ ಮೇಲೆ ಕೂರಲು ಬಂದಾಗ ದುರ್ಯೋಧನನು ನೋವಿನಿಂದ ತಡೆಯುತ್ತಾ “ ನೀನು ಆಡಿ ಬೆಳೆದ ಈ ತೊಡೆ ಇನ್ನು ನಿನ್ನ ಭಾಗ್ಯಕ್ಕಿಲ್ಲ ” ಎಂದು ಈ ಸಂದರ್ಭದಲ್ಲಿ ಹೇಳುತ್ತಾನೆ .

ಸ್ವಾರಸ್ಯ : ತೊಡೆ ಮುರಿದುಹೋಗಿದ್ದು , ಇನ್ನೇನೋ ತಾನು ಅಸುನೀಗಲಿರುವ ದುರ್ಯೋಧನನು ಇನ್ನು ಮುಂದೆ ನೀನು ಕುಳಿತುಕೊಳ್ಳಲು ಈ ತೊಡೆ ಸಿಗುವುದಿಲ್ಲ ‘ ಎಂದು ಹೇಳುವ ಮಾತು ಸ್ವಾರಸ್ಯಪೂರ್ಣವಾಗಿದೆ .

ಉ ] ಬಿಟ್ಟ ಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ .

೧. ಕುರುಕುಲದ ಪಿತೃಗಳಿಗೆ ಜಲಾಂಜಲಿ ಕೊಡಲು ಪಾಂಡವ ಮೇಘಗಳು ಜೀವಿಸಿರಲಿ .

೨. ಎರಡು ತೊಡೆಗಳನ್ನಷ್ಟೇ ಅಲ್ಲ , ತಂದೆತಾಯಿಗಳಿಗೆ ಅಭಿವಂದಿಸುವ ನನ್ನ ಭಾಗ್ಯವನ್ನೂ ಅಪಹರಿಸಿಬಿಟ್ಟ .

೩. ಹೃದಯದಲ್ಲಿ ಸದಾ ಸನ್ನಿಹಿತವಾಗಿರುವ ಪುತಸ್ನೇಹವು ನನ್ನನ್ನೀಗ ದಹಿಸುತ್ತಿದೆ .

೪ , ಅಪ್ಪಾಜಿ , ನಾನು ನಿಮ್ಮ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ !

೫. ಮೃತ್ಯುಶಯ್ಕೆಯ ಮೇಲಿರುವ ದುರ್ಯೋಧನನು ಪಡುವಣ ಪರ್ವತವನ್ನೇರಿ ಸೂರ್ಯನಂತಿರುವನು .

ಭಾಷಾ ಚಟುವಟಿಕೆ :

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ಕ್ರಿಯಾಪದ ಎಂದರೇನು ?

ಉತ್ತರ : ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸುವ ಪದವೇ ಕ್ರಿಯಾಪದ

2. ಕ್ರಿಯಾಪ್ರಕೃತಿ ಎಂದರೇನು ? ಉದಾಹರಣೆ ಕೊಡಿ .

ಉತ್ತರ : ಕ್ರಿಯಾರ್ಥವನ್ನು ಕೊಡುವ ಮತ್ತು ಪ್ರತ್ಯಯವನ್ನು ಹೊಂದದಿರುವ ಶಬ್ದವು ಕ್ರಿಯಾ ಪಕೃತಿ ಅಥವಾ ಧಾತು .

ಉದಾಹರಣೆ : ಮಾಡು , ತಿನ್ನ , ಹೋಗು , ಮಲಗು , ಓದು , ಕೇಳು , ನೋಡು , ಬರು ಇತ್ಯಾದಿ .

3. ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ ,

ಉತ್ತರ : ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು , ಉದಾ :

ರಾಮನು ಗಿಡವನ್ನು ನೆಟ್ಟನು .

ಶಿಲ್ಪಿಗಳು ಗುಡಿಯನ್ನು ಕಟ್ಟಿದರು

ವಿದ್ಯಾರ್ಥಿಗಳು ಪಾಠವನ್ನು ಓದಿದರು .

ರಾಮನು ಏನನ್ನು ನೆಟ್ಟನು ಎಂಬ ಪ್ರಶ್ನೆಗೆ – ಗಿಡವನ್ನು

ಶಿಲ್ಪಗಳು ಏನು ಕಟ್ಟಿದರು ಎಂಬ ಪ್ರಶ್ನೆಗೆ – ಗುಡಿಯನ್ನು

ವಿದ್ಯಾರ್ಥಿಗಳು ಏನನ್ನು ಓದಿದರು ಎಂಬ ಪ್ರಶ್ನೆಗೆ – ಪಾಠವನ್ನು

ಎಂಬ ಉತ್ತರ ದೊರೆಯುತ್ತದೆ . ಮತ್ತು ಕರ್ಮಪದಗಳು ಇಲ್ಲಿ ಮುಖ್ಯವಾಗುತ್ತವೆ .

4. ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ .

ಉತ್ತರ : ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು , ಉವಾ :

ಕೂಸು ಮಲಗಿತು .

ಅವನು ಬದುಕಿದನು .

ಆಕಾಶ ಹೊಳೆಯುತ್ತಿದೆ .

ಗಾಳಿಯು ಬೀಸುತ್ತಿದೆ .

ಮಲಗು , ಬದುಕು , ಹೊಳೆಯು , ಬೀಸು ಎಂಬ ಧಾತುಗಳು ಕರ್ಮಪದಗಳನ್ನು ಬಯಸುವುದಿಲ್ಲ .

5. ಹಳಗನ್ನಡ ವಿಭಕ್ತಿ ಪ್ರತ್ಯಯಗಳಾವುವು ?

ಉತ್ತರ : ಮ್.ಆ ೦ , ಇಂ , ಇಂದಂ , ಇಂದೆ , ಗೆ , ಕೆ . ಕೈ , ಅತ್ತಣಿಂ , ಅತ್ತಣಿಂದಂ , ಅತ್ತಣಿಂದ , ಅ , ಒಳ್

6. ವಿಭಕ್ತಿ ಪಲ್ಲಟ ಎಂದರೇನು ?

ಉತ್ತರ : ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು .

ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ ವಿಭಕ್ತಿ ಪಲ್ಲಟ ‘ ಎಂದು ಹೇಳುತ್ತೇವೆ .

ಆ ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ

1. ವಿದ್ಯಾರ್ಥಿನಿಯರು ಆಟವನ್ನು ಆಡಿದರು .-‌ ಸಕರ್ಮಕ ಧಾತು

2. ಗಾಳಿಯು ಬೀಸುತ್ತಿದೆ .- ಸಕರ್ಮಕ ಧಾತು

3. ಹಕ್ಕಿಗಳು ಚಿಲಿಪಿಲಿಗುಟ್ಟಿದವು .- ಅಕರ್ಮಕ ಧಾತು

4. ರೈತನು ಹೊಲವನ್ನು ಉಳುತ್ತಾನೆ .- ಅಕರ್ಮಕ ಧಾತು

ಇ ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ .

ಆರೋಗ್ಯವೇ ಭಾಗ್ಯ .

ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು , ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಆರೋಗ್ಯವೇ ಭಾಗ್ಯ ಈ ಗಾದೆ ಮಾತು ಸಹ ಒಂದು .ಮನುಷ್ಯ ನೆಮ್ಮದಿಯಿಂದ ಬಾಳಬೇಕು . ಆನಂದದಿಂದ ಬದುಕಬೇಕು ಅವನಿಗೆ ಅಂತಹ ನೆಮ್ಮದಿ ಆನಂದಗಳನ್ನು ಉತ್ತಮ ಆರೋಗ್ಯ ಭಾಗ್ಯವು ಮಾತ್ರ ನೀಡುತ್ತದೆ .

ಆರೋಗ್ಯದಿಂದಲೇ ಭಾಗ್ಯವೆಂದ ಮೇಲೆ ಅವನು ಅಂತಹ ಆರೋಗ್ಯ ಭಾಗ್ಯವನ್ನು ಪಡೆದಿರಲೇಬೇಕಾಗುತ್ತದೆ .ಮನುಷ್ಯ ಬದುಕಿರುವ ತನಕವೂ ಆರೋಗ್ಯ ಭಾಗ್ಯ ಅತಿ ಮುಖ್ಯ . ಅದರ ರಕ್ಷಣೆಗಾಗಿ ಸದಾ ಕಾಲವೂ ಎಚ್ಚರದಿಂದಿರುವದೆ ಅಷ್ಟೇ ಮುಖ್ಯ . ಮನುಷ್ಯನಿಗೆ ಸಂಪತ್ತು ಎಷ್ಟೆ ಇದ್ದರೂ ಆರೋಗ್ಯ ಸರಿಯಿಲ್ಲದಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ .

ಸಂಪತ್ತಿಲ್ಲದಿದ್ದರೂ ಆರೋಗ್ಯ ಸರಿಯಾಗಿದ್ದರೆ ಯಾವ ಆರೋಗ್ಯ ಸರಿಯಾಗಿದ್ದರೆ ಯಾವ ಸಂದರ್ಭದಲ್ಲಾದರೂ ನಾವು ಹಣವನ್ನು ಸಂಪಾದಿಸಬಹುದು . ದುಡಿಯುವ ಶಕ್ತಿ ಅವಶ್ಯಕ . ಅದಕ್ಕಾಗಿ ನಮಗೆ ಆರೋಗ್ಯ ಬೇಕು .ನಾವು ಎಲ್ಲಾ ಸಂದರ್ಭದಲ್ಲೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು .

ಕೊಟ್ಟಿದ್ದು ತನಗೆ : ಬಚ್ಚಿಟ್ಟಿದ್ದು ಪರರಿಗೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು .ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು . ತಾನು ಮಾಡಿದ ದಾನ ಯಾವತ್ತಿದ್ದರೂ ತನ್ನನ್ನು ಕಾಯುತ್ತದೆ .

ತನಗೆ ಕಷ್ಟ ಬಂದಾಗ ಬೇರೆಯವರು ನನಗೂ ಸಹಾಯ ಮಾಡುತ್ತಾರೆ ಎಂಬ ನಂಬಿಕೆ ಇರಬೇಕು . ದಾನ ಮಾಡದೆ ಎಲ್ಲ ಸಂಪತ್ತನ್ನು ಬಚ್ಚಿಟ್ಟರೆ ಅದು ಬೇರೆಯವರ ಪಾಲಾಗುವುದು ಖಂಡಿತ .

ಆದ್ದರಿಂದ ತನ್ನ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನಾದರೂ ದಾನ ಮಾಡಬೇಕು ಎಂಬುದು ಈ ಗಾದೆಯ ಹೇಳಿಕೆ ಇಲ್ಲಿ ದಾನದ ಶ್ರೇಷ್ಠತೆಯನ್ನ ಹೇಳಿದೆ . ನಾವು ಮಾಡುವ ದಾನವನ್ನು ಪ್ರಚಾರ ಮಾಡಬಾರದು . ನಿಸ್ವಾರ್ಥ ಭಾವನೆಯಿಂದ ದಾನ ಮಾಡಬೇಕು

9th Standard Urubhanga Kannada Notes Question Answer Pdf

ಇತರೆ ಪಾಠಗಳು:

ಜನಪದ ಕಲೆಗಳ ವೈಭವ ಕನ್ನಡ ನೋಟ್ಸ್

ಪ್ರಜಾನಿಷ್ಠೆ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.