9ನೇ ತರಗತಿ ಜನಪದ ಕಲೆಗಳ ವೈಭವ ಕನ್ನಡ ನೋಟ್ಸ್ | 9th Standard Janapada Kalegala Vaibhava Kannada Notes

9ನೇ ತರಗತಿ ಜನಪದ ಕಲೆಗಳ ವೈಭವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Janapada Kalegala Vaibhava Kannada Notes Question Answer Pdf Download

ತರಗತಿ : 9ನೇ ತರಗತಿ

ಪಾಠದ ಹೆಸರು : ಜನಪದ ಕಲೆಗಳ ವೈಭವ

Table of Contents

ಕೃತಿಕಾರರ ಪರಿಚಯ :

ಪ್ರಕೃತ ಜನಪದ ಕಲೆಗಳ ವೈಭವ – ಜಾನಪದ ಗದ್ಯ ಭಾಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ [ ಕರ್ನಾಟಕ ] ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷ ” ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಈ ಗದ್ಯ ಭಾಗವನ್ನು ನಿಗದಿಪಡಿಸಿದೆ

Janapada Kalegala Vaibhava Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ ?

ಉತ್ತರ : ಡೊಳ್ಳು ಕುಣಿತ ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ .

2. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ ?

ಉತ್ತರ : ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮವು ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ನಡೆಯುತ್ತದೆ .

3. ವೀರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು ?

ಉತ್ತರ : ವೀರಗಾಸೆಯಲ್ಲಿ ಬಳಸುವ ವಾದ್ಯಗಳು : ಪಂಚವಾದ್ಯಗಳಾದ ತಾಳ , ಶ್ರುತಿ , ಚಮಾಳ , ಓಲಗ ಮತ್ತು ಕರಡೆ ,

4. ‘ ಕಂಸಾಳೆ ‘ ಎಂಬ ಹೆಸರು ಹೇಗೆ ಬಂದಿತು ?

ಉತ್ತರ : ಸಂಸ್ಕೃತದ ‘ ಕಾಂಸತಾಲ್ಯ ‘ ಪದದ ತದ್ಭವ ರೂಪವೇ ‘ ಕಂಸಾಳೆ ‘ ಎಂದಾಗಿದೆ .

5. ಯಕ್ಷಗಾನದ ಮೂರು ಶೈಲಿಗಳು ಯಾವುವು ?

ಉತ್ತರ : ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು ,

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳ ವೈಶಿಷ್ಟ್ಯವೇನು ? ವಿವರಿಸಿ ,

ಉತ್ತರ : ಯಕ್ಷಗಾನದಲ್ಲಿ ತೆಂಕುತಿಟ್ಟಿನ ಚಂಡೆ ವಾದಕನಿಗೆ ಆಸನ ವ್ಯವಸ್ಥೆಯಿರುವುದಿಲ್ಲ . ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ . ಬಡಗುತಿಟ್ಟಿನಲ್ಲಿ ಇದರ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಾರೆ .

2. ಚೌಕಿಯಲ್ಲಿ ನಡೆಯುವ ವಿಶೇಷಗಳೇನು ? ವಿವರಿಸಿ ,

ಉತ್ತರ : ರಂಗಸ್ಥಳ ಸಮೀಪವಿರುವ ನೇಪಥ್ಯ ( ತೆರೆಯ ಹಿಂಭಾಗ ) ವೇ ಚೌಕಿ ಅಥವಾ ಬಣ್ಣದ ಮನೆ , ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ . ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ತಾವೇ ಹಚ್ಚಿಕೊಳ್ಳುತ್ತಾರೆ . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ .

2. ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ ?

ವಿವರಿಸಿ . ಉತ್ತರ : ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಕೈಗೆತ್ತಿಕೊಳ್ಳುವ ಮೊದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಅನಂತರ ಬಾರಿಸಲು ಪ್ರಾರಂಭಿಸುವರು .

3. ವೀರಗಾಸೆ ಕುಣಿತದ ವೇಷಭೂಷಣಗಳು ಹೇಗಿರುತ್ತವೆ ? ವಿವರಿಸಿ .

ಉತ್ತರ : ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಬಿಳಿಯ ಪಂಚೆಯ ವೀರಗಚ್ಚೆ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ ಹಾಗೂ ಕಾಲೆಜ್ಜೆ ಧರಿಸುತ್ತಾರೆ .

4. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ ?

ಉತ್ತರ : ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ . ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ . ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ . “ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಗುರುವೇ ನಮ್ಮಯ ದೇವರು ಬಂದಾನ ಬನ್ನಿರೇ ” ಎಂದು ಡೊಳ್ಳಿನ ಹಾಡು ಆರಂಭವಾಗುತ್ತದೆ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ವಿವರಿಸಿ ,

ಉತ್ತರ : ಬೀಸುಕಂಸಾಳೆ , ದೇವರಗುಡ್ಡರ ವಿಶಿಷ್ಟ ನೃತ್ಯ , ಕರ್ನಾಟಕದ ಜನಪದ ನೃತ್ಯಗಳಲ್ಲಿ ಪೂರ್ವವಾದುದು . ಇದರಲ್ಲಿ ಕಾರ್‌ಬಟ್ಟು , ತಟ್‌ಬಟ್ಟು ಮುಂತಾದ ಬಗೆಗಳಿವೆ . ನಾಲ್ಕು ಮಂದಿ ಗುಡ್ಡರು ಒಂದುಕಡೆ ನಿಂತು ಲಿಂಗ ಬಾ , ಮುದ್ದುಲಿಂಗ ಬಾ , ನಮ್ಮ ಮುದ್ದು ಮಾದಯ್ಯನ ಲಿಂಗ ಬಾ ಎಂದು ಹಾಡುತ್ತಾರೆ . ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತ ಕುಣಿಯುತ್ತಾನೆ . ತಲೆಯ ಮೇಲೆ , ಬೆನ್ನ ಹಿಂದೆ , ಕಾಲ ಕೆಳಗೆ ಕುಳಿತು , ನಿಂತು , ಬಾಗಿ , ಬಳುಕಿ ತೀವ್ರಗತಿಯಲ್ಲಿ ನರ್ತಿಸುವ ಭಂಗಿ ಆಶ್ಚರ್ಯಕರ ಹಾಗೂ ಅದ್ಭುತ . ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುವುದುಂಟು . ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ .

2. ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ ?

ಉತ್ತರ : ‘ ಡೊಳ್ಳು ‘ . ಚರ್ಮವಾದ್ಯ ಪೊಳ್ಳು ಪಡಗದ ಎರಡೂ ಬಾಯಿಗಳಿಗೆ ತೊಗಲು ಹೊದಿಸಿದ ಎರಡು ಪರಡೆಗಳನ್ನಿಟ್ಟು ಹಗ್ಗದಿಂದಬಿಗಿದಿರುತ್ತಾರೆ . ಬಲಗೈಯಲ್ಲಿ ಬಾರಿಸುವ ‘ ಗುಣಿ ‘ ಇರುತ್ತದೆ . ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲುಭಾಗಕ್ಕೆ ಕರಿಯ ಕಂಬಳಿಯನ್ನೂ ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತೆ ಕಚ್ಚೆಪಂಚೆಯನ್ನೂ ಉಡುತ್ತಾರೆ . ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನೂ ಧರಿಸುತ್ತಾರೆ . ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ , ಅಂಗಿ ಟೊಪ್ಪಿಗೆ ತೊಡುವರು . ಎರಡೂ ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ . ಕುಣಿತಕ್ಕೆ ಹಿನ್ನೆಲೆಯಾಗಿ ಡೊಳ್ಳು , ತಾಳ ಮತ್ತು ಕೊಳಲು ಇರುತ್ತವೆ .

3. ವೀರಗಾಸೆ ನರ್ತಕನ ಒಡಪಿನೊಂದಿಗಿನ ಕುಣಿತ ಹೇಗಿರುತ್ತದೆ ?

ಉತ್ತರ : “ ಆಹಹಾ ರುದ್ರಾ ಅಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣನೆ ಮಾಡಲಾಗುತ್ತದೆ . ಈ ರೀತಿಯಲ್ಲಿ ಒಡವನ್ನು ಹೇಳಲಾಗುತ್ತದೆ : “ ವೀರಭದ್ರದೇವರು ಹುಟ್ಟಿದ ರೂಪ ಎಂತು ಎಂದೊಡೆ ಹುಟ್ಟಿದಾಗಲೆ ಹೂವಿನಗಾಸೆ , ಮಂಜುಳಗಾಸೆ , ಬ್ರಹ್ಮಗಾಸೆ , ವಿಷ್ಣುಗಾಸೆ , ರುದ್ರಗಾಸೆ , ಮೆಟ್ಟಿದ ಹೊನ್ನಾವಿಗೆ , ಸಾವಿರ , ಶಿರ , ಮೂರುಸಾವಿರ ನಯನ , ಎರಡುಸಾವಿರ ಭುಜ , ಕೆಕ್ಕರಿಸಿದ ಕಣ್ಣು , ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರದೇವರು ಹೋಮದ ಕುಂಡದ ಒಳಗೆ ಹೇಗೆ ಬರುತ್ತಾರೆಂದರೆ …… ವೀರಗಾಸೆಯ ನರ್ತಕನು ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ . ಇದಕ್ಕೆ ‘ ಖಡ್ಗ ‘ ಎಂದು ಕರೆಯುತ್ತಾರೆ . ಉತ್ತರಕರ್ನಾಟಕದಲ್ಲಿ ಒಡಪು ‘ ಎನ್ನುವರು . ಮತ್ತೊಬ್ಬ ವ್ಯಕ್ತಿ “ ಭಲರೇ ವೀರ , ಅಹಹಾ ವೀರ ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ .

4. ಯಕ್ಷಗಾನದ ವೈಶಿಷ್ಟ್ಯ ಹಾಗೂ ಪೂರ್ವರಂಗದ ಉದ್ದೇಶವೇನು ?

ಉತ್ತರ : ಯಕ್ಷಗಾನದ ಪೂರ್ವರಂಗ ವಿಶಿಷ್ಟವಾದುದು . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ . ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು , ಗಣಪತಿ ಸ್ತುತಿಯ ಬಳಿಕ ವಿಷ್ಣು , ಪರಮೇಶ್ವರ , ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ . ಹಾಡಿನ ಆನಂತರ ಭಾಗವತರಿಂದ ಸಭಾವಂದನೆ ಅನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ . ಅನಂತರ ಬಾಲಗೋಪಾಲರ ಆಗಮನ ಹಾಗೂ ಸ್ತ್ರೀ ವೇಷಗಳ ಕುಣಿತ , ಪುರುಷರೇ ಸ್ತ್ರೀ ವೇಷ ಹಾಕುವುದು ಯಕ್ಷಗಾನದ ವೈಶಿಷ್ಟ್ಯ . ಯಕ್ಷಗಾನದ ಪೂರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ . ಮುನಾ ದೇವತಾ ಸ್ತುತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಒಡೋಲಗ ಪಾರಂಭವಾಗುತ್ತದೆ . ಪಾತ್ರಧಾರಿಗಳು ಭಾಗವತರಿಗೆ ಅನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ .

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಭಲರೇ ವೀರ, ಅಹಹಾ ವೀರ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ವೀರಗಾಸೆಯ ಕುಣಿತದ ಸಂದರ್ಭದಲ್ಲಿ ನೃತ್ಯಗಾರ ಖಡ್ಗ ಅಥವಾ ಒಡಪಿನೊಂದಿಗೆ ಕುಣಿತ ಪ್ರಾರಂಭಿಸುತ್ತಾನೆ . ಅದಕ್ಕೆ ಉತ್ತೇಜನ ನೀಡುವಂತೆ ಮತ್ತೊಬ್ಬ “ ಭಲರೇ ವೀರ , ಅಹಹಾ ವೀರ ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ ಎಂದು ಈ ಸಂದರ್ಭದಲ್ಲಿ ಹೇಳಲಾಗಿದೆ .

ಸ್ವಾರಸ್ಯ : ವೀರಗಾಸೆ : ಸಂಪ್ರದಾಯದಲ್ಲಿ ಒಡಪಿಗೆ ತಕ್ಕಂತೆ ಕಾಕು ಹಾಕುತ್ತಾ ಕುಣಿಯುವವನಿಗೆ ಪ್ರೇರಣೆ ನೀಡುವುದು ಸ್ವಾರಸ್ಯಕರವಾಗಿದೆ .

2. “ ಮಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ “

ಉತ್ತರ : ಆಯ್ಕೆ : ಈ ವಾಕ್ಯವನ್ನು ‘ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕಂಸಾಳೆಯ ಗುಡ್ಡರು ತಮ್ಮ ಪವಿತ್ರ ಸಾಧನವಾದ ಕಂಸಾಳೆಯನ್ನು ಭಕ್ತಿ ಹಾಗೂ ಗೌರವ ಭಾವನೆಯಿಂದ ಕಾಣುವ ಬಗೆಯನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಉದಾಹರಿಸಲಾಗಿದೆ . ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಕೈಗೆತ್ತಿಕೊಳ್ಳುವ ಮೊದಲು “ ಮಳ್ಳಲೆ ಹತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಅನಂತರ ಬಾರಿಸಲು ಪ್ರಾರಂಭಿಸುವರು .

ಸ್ವಾರಸ್ಯ : ಕಂಸಾಳೆ ಗುಡ್ಡರಿಗೆ ಕಂಸಾಳೆ ಹಾಗೂ ಮಹದೇಶ್ವರನ ಬಗ್ಗೆ ಹೊಂದಿರುವ ಭಕ್ತಿ – ಗೌರವಗಳು ಈ ಮಾತುಗಳಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ ,

3. “ ಅಹಹಾ ರುದ್ರಾ ಅಹಹಾ ದೇವಾ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ವೀರಗಾಸೆಯ ಕುಣಿತ ಒಡಪಿನೊಂದಿಗೆ ಹೇಗೆ ಆರಂಭವಾಗುತ್ತದೆ ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . “ ಆಹಹಾ ರುದ್ರಾ ಅಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣನೆ ಮಾಡಲಾಗುತ್ತದೆ . ಸ್ವಾರಸ್ಯ : ವೀರಗಾಸೆಯ ಹೆಸರಿಗೆ ತಕ್ಕಂತೆ ಉತ್ಸಾಹ ತುಂಬಿದ ವೀರತನದ ಮಾತುಗಳಿಂದ ಕುಣಿತ ಆರಂಭವಾಗುವುದು ಸ್ವಾರಸ್ಯವಾಗಿದೆ .

4. ” ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ‘ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಡೊಳ್ಳುಕುಣಿತದ ಸಂದರ್ಭದಲ್ಲಿ ಹಾಡಲಾಗುವ ಹಾಡಿನ ವೈಶಿಷ್ಟ್ಯದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಅವರು ಹಾಡುವ ಹಾಡನ್ನು ಉದಾಹರಿಸಲಾಗಿದೆ . ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ . ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ .

ಸ್ವಾರಸ್ಯ : ಡೊಳ್ಳುಕುಣಿತದಲ್ಲಿ ಹೇಳುವ ಕಥನ ಕವನಗಳಿಗೆ ರಗಳೆ ಬಳಸಿರುವುದು ಹಾಗೂ ತಾಳ – ಮೇಳದಿಂದ ಕೂಡಿದ ಹಾಡನ್ನು ಜತನವಾಗಿ ಕಾಯ್ದುಕೊಂಡು ಬಂದಿರುವುದು ಸ್ವಾರಸ್ಯಕರವಾಗಿದೆ .

5. “ ದುಷ್ಟ ನಿಗ್ರಹ , ಶಿಷ್ಟ ಪರಿಪಾಲನೆ . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಯಕ್ಷಗಾನದ ಪ್ರಸಂಗಗಳನ್ನು ರಚಿಸುವಾಗ ಪ್ರಮುಖವಾಗಿ ಪಾಲಿಸಲಾಗುವ ತತ್ವವನ್ನು ಕುರಿತು ಈ ಸಂದರ್ಭದಲ್ಲಿ ಹೇಳಲಾಗಿದೆ . ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಶ್ನೆಗಳನ್ನು ಬೆಳೆಸಲು ಸಹಕಾರಿಯಾಗಿದೆ . ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ .

ಸ್ವಾರಸ್ಯ : ಯಕ್ಷಗಾನ ” ಕೇವಲ ಮನರಂಜನೆ ಮಾತ್ರವಾಗಿರದೆ ಜನರಲ್ಲಿ ಮೌಲ್ಯಗಳನ್ನು ಬೆಳೆಸುವ ಮಾಧ್ಯಮವಾಗಿರುವುದು ಸ್ವಾರಸ್ಯಕರವಾಗಿದೆ .

ಉ ] ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಸಂಭಾವ್ಯ ಉತ್ತರಗಳನ್ನು ನೀಡಿದೆ , ಅವುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ .

1. ವೀರಗಾಸೆ ವೀರಶೈವ ಸಂಪ್ರದಾಯಕ್ಕೆ ಸೇರಿದ ನೃತ್ಯ .

2. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು ಮಹದೇಶ್ವರ ದೇವರನ್ನು ಸ್ಮರಿಸುತ್ತಾರೆ .

3. ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು ಕಾವ್ಯಗೀತೆಗೆ ಉದಾಹರಣೆ .

4. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು ಚೌಕಿ ಎಂದು ಕರೆಯುತ್ತಾರೆ .

ಊ) ಹೊಂದಿಸಿ ಬರೆಯಿರಿ

ಅ ಪಟ್ಟಿ                                     ಆ ಪಟ್ಟಿ ಸರಿ ಉತ್ತರಗಳು

1. ವೀರಭದ್ರ                            ಕಾಲಿಸತಾಲ್ಯ 1, ಒಡಪು

2. ಕಂಸಾಳ                              ಚರ್ಮವಾದ್ಯ 2. ಕಾಲಸಪಾಳ್ಯ

3 , ಡೊಳ್ಳು                              ಮಹಾಕಾವ್ಯ 3. ಧರ್ಮವಾದ್ಯ

4. ಯಕ್ಷಗಾನ                            ವೇಷಭೂಷಣ 4 ಭಾಗವತ

5. ಮಹದೇಶ್ವರ                        ಭಾಗವತ 5 ,ಒಳ್ಳಲೆ ಹೆತ್ತಯ್ಯ

ಏಳ್ಳಲೆ ಹೆತ್ತಯ್ಯ

ದೀವಟಿ

ಸರಿ ಉತ್ತರಗಳು .

1, ಒಡಪು

2. ಕಾಲಸಪಾಳ್ಯ

3. ಧರ್ಮವಾದ್ಯ

4 ಭಾಗವತ

5 ,ಒಳ್ಳಲೆ ಹೆತ್ತಯ್ಯ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1 ಕ್ರಿಯಾಪದ ಎಂದರೇನು ?

ಉತ್ತರ : ಕ್ರಿಯೆಯನ್ನು ಸೂಚಿಸುವ ಪದಗಳೇ ಕ್ರಿಯಾಪದಗಳು ,

2. ಕ್ರಿಯಾಪ್ರಕೃತಿ ಎಂದರೇನು ? ಉದಾಹರಣೆ ಕೊಡಿ ,

ಉತ್ತರ : ಕ್ರಿಯಾರ್ಥವನ್ನು ಸೂಚಿಸುವ ಪ್ರತ್ಯಯವನ್ನು ಹೊಂದದಿರುವ ಪದವೇ ಕ್ರಿಯಾಪ್ರಕೃತಿ ಅಥವಾ ಧಾತು , ಕ್ರಿಯಾಪದದ ಮೂಲರೂಪವೇ ಧಾತು .

ಉದಾ : ನೋಡು , ಹಾಡು , ಜೋಗ , ಕೇಳು , ಮಾಡು .

1 ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ ,

ಉತ್ತರ : ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು ,

ಉದಾ : ರಾಮನು ಗಿಡವನ್ನು ನೆಟ್ಟನು . ಶಿಲ್ಪಿಗಳು ಗುಡಿಯನ್ನು ಕಟ್ಟಿದರು . ವಿದ್ಯಾರ್ಥಿಗಳು ಪಾಠವನ್ನು ಓದಿದರು .

2 , ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ .

ಉತ್ತರ : ಅಕರ್ಮಕ ಧಾತುಗಳು : -ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು .

ಉದಾ : ಕೂಸು ಮಲಗಿತು . ಅವನು ಬದುಕಿದನು . ಆಕಾಶ ಹೊಳೆಯುತ್ತಿದೆ ; ಗಾಳಿಯು ಬೀಸುತ್ತಿದೆ . ಮಲಗು , ಬದುಕು , ಹೋಳಿ , ಬೀಸು ಎಂಬ ಧಾತುಗಳು ಕರ್ಮಪದಗಳನ್ನು ಬಯಸುವುದಿಲ್ಲ ,

ಆ ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ

1. ರೈತನು ಹೊಲವನ್ನು ಉಳುತ್ತಾನೆ .

ಉತ್ತರ : ಉಳುತ್ತಾನೆ = ಸಕರ್ಮಠ ಧಾತು – ಉಳು

2. ಗಾಳಿಯು ಬೀಸುತ್ತಿದೆ .

ಉತ್ತರ : ಬೀಸುತ್ತಿದೆ . ಅಕರ್ಮಕ ಧಾತು ~ ಬೀಸು .

3 , ಹಕ್ಕಿಗಳು ಚಿಲಿಪಿಲಿಗುಟ್ಟಿದವು ,

ಉತ್ತರ : ಗುಟ್ಟಿದವು = ಅಕರ್ಮಕಧಾತು = ಗುಟ್ಟು

4 ವಿದ್ಯಾರ್ಥಿನಿಯರು ಆಟವನ್ನು ಆಡಿದರು ,

ಉತ್ತರ : ಆಡಿದರು = ಸಕರ್ಮಕ ಧಾತು – ಆಡು

9th Standard Janapada Kalegala Vaibhava Kannada Notes Question Answer Pdf

ಇತರೆ ಪಾಠಗಳು:

ಪ್ರಜಾನಿಷ್ಠೆ ಕನ್ನಡ ನೋಟ್ಸ್

ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಕನ್ನಡ ನೋಟ್ಸ್

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.