9ನೇ ತರಗತಿ ಕನ್ನಡ ಹರಲೀಲೆ ಪಾಠದ ನೋಟ್ಸ್ | 9th Standard Haralile Kannada Notes

9ನೇ ತರಗತಿ ಕನ್ನಡ ಹರಲೀಲೆ ಪಾಠದ ಪ್ರಶ್ನೋತ್ತರಗಳು ನೋಟ್ಸ್, 9th Standard Haralile Kannada Notes Question Answer Pdf Download

ತರಗತಿ : 9ನೇ ತರಗತಿ

ಪಾಠದ ಹೆಸರು : ಹರಲೀಲೆ

ಕೃತಿಕಾರರ ಹೆಸರು : ಹರಿಹರ

Table of Contents

ಕೃತಿಕಾರರ ಪರಿಚಯ :

ಹರಿಹರ

* ಹರಿಹರನ ಕಾಲ ಸುಮಾರು ಕ್ರಿಸ್ತ ಶಕ ೧೨೦೦ , ಈತನ ಸ್ಥಳ ಹಂಪೆ .

* ಹಂಪೆಯ ವಿರೂಪಾಕ್ಷ ಈತನ ಆರಾಧ್ಯದೈವ

* ಈತ ಕನ್ನಡ ಸಾಹಿತ್ಯದಲ್ಲಿ ರಗಳ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ .

* ಹರಿಹರನು ‘ ಪಂಪಾಶತಕ ‘ , ‘ ರಕ್ಷಾಶತಕ ‘ ಮತ್ತು ‘ ಮುಡಿಗೆಯ ಅಷ್ಟಕ’ಗಳನ್ನು ವೃತ್ತ ಛಂದಸ್ಸಿನಲ್ಲಿ ರಚಿಸಿದ್ದಾನೆ .

* ಗಿರಿಜಾಕಲ್ಯಾಣ ಪ್ರೌಢಚಂಪೂ ಪರಂಪರೆಯಲ್ಲಿ ರಚಿತವಾಗಿರುವ ಕಾವ್ಯ

* ರಗಳ ಪ್ರಕಾರದಲ್ಲಿ ಹಲವಾರು ಕೃತಿಗಳನ್ನು ಬರೆದಿರುವ ಈತನು ‘ ರಗಳೆ ಕವಿ’ಯೆಂದೇ ಪ್ರಸಿದ್ಧನಾಗಿದ್ದಾನೆ .

Haralile Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಹರಲೀಲೆ ಪಾಠದ ಕವಿಯ ಹೆಸರೇನು ?

ಉತ್ತರ : ಹರಲೀಲೆ ಪಾಠದ ಕವಿಯ ಹೆಸರು ಹರಿಹರ .

2. ಗಿರಿಜೆ ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು ?

ಉತ್ತರ : ಗಿರಿಜೆ ದೇವಾಲಯದಲ್ಲಿ ಇರಬೇಕೆಂದು ಶಿವನು ತಿಳಿಸಿದನು .

3. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ ,

ಉತ್ತರ : ಹರಿಹರ ಬರೆದಿರುವ ಪ್ರಮುಖ ಕೃತಿಗಳು : ಪಂಪಾಶತಕ ‘ , ‘ ರಕ್ಷಾಶತಕ ‘ ಮತ್ತು ‘ ಮುಡಿಗೆಯ ಅಷ್ಟಕ , ಹಲವಾರು ರಗಳೆಗಳು ಹಾಗೂ ಗಿರಿಜಾಕಲ್ಯಾಣ ‘ ಎಂಬ ಚಂಪೂಕೃತಿ ,

4. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು ?

ಉತ್ತರ : ನಂಬಿಯಣ್ಣನ ಪೂರ್ವಜನ್ಮದ ಹೆಸರು ಪುಷ್ಪದತ್ತ .

5. ಹರಲೀಲೆ ಪಾಠದ ಮೂಲ ಕೃತಿ ಯಾವುದು ?

ಉತ್ತರ : ಹರಲೀಲೆ ಪಾಠದ ಮೂಲ ಕೃತಿ ‘ ನಂಬಿಯಣ್ಣನ ರಗಳೆ ”

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ .

ಉತ್ತರ : ಚೋಳದೇಶದಲ್ಲಿದ್ದ ಮೂರು ಗ್ರಾಮಗಳೆಂದರೆ : ಮಣಮಂದ ಪುತ್ತೂರು ತಿರುವಾರೂರು ಮತ್ತು ತಿರುವತ್ತಿಯೂರು ,

2. ವಿರೂಪಾಕ್ಷನು ಗಿರಿಜೆಗೆ ಏನೆಂದು ಹೇಳಿದನು ?

ಉತ್ತರ : ಶಿವನು ಗಿರಿಜೆಯನ್ನು ಕುರಿತು ” ದೇವಿ , ಕೇಳು , ನಮ್ಮ ಪುತ್ರನಾದ ಪುಷ್ಪದತ್ತನು ನರಲೋಕದಲ್ಲಿ ( ಬೂಲೋಕದಲ್ಲಿ ) ಹುಟ್ಟಿ , ನಂಬಿ ಎಂಬ ಹೆಸರನ್ನು ಪಡೆದು ಸಂಸಾರದಿಂದ ಕೆಟ್ಟು ಹೋಗುವುದಕ್ಕೆ ಸಿದ್ಧವಾಗಿದ್ದಾನೆ . ಆತನಿಗೆ ಮುಂಚೆ ನೀಡಿದ ನಂಬಿಕೆಯ ಮಾತನ್ನು ಅನುಸರಿಸಿಕೊಂಡು ನಾವು ಕಳುಹಿಸಿದ ರುದ್ರಕನ್ನಿಕೆಯರಿಬ್ಬರೂ ಚೋಳದೇಶದ ತಿರುವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರಣೆ ಮತ್ತು ಸಂಕಿಲೆ ಎಂಬ ಹೆಸರಿನಿಂದ ಹುಟ್ಟಿದ್ದಾರೆ . ಅವರನ್ನು ಆತನೊಡನೆ ಸೇರಿಸಿ , ಸಕಲಸುಖವನ್ನು ಪೂಜೆಯಾಗಿ ಸ್ವೀಕರಿಸಿ ಬರುವೆನು ” ಎಂದು ಹೇಳಿದನು .

3. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು ?

ಉತ್ತರ : ಕೆಳಗೆ ಬಿದ್ದ ವೃದ್ಧನನ್ನು ನೋಡಿ ಅಲ್ಲಿ ಸೇರಿದ್ದ ಜನರೆಲ್ಲಾ “ ಈ ವೃದ್ಧ ಬ್ರಾಹ್ಮಣನನ್ನು , ಮುಪ್ಪಿನ ಮೂರ್ಖನನ್ನು , ಗೌತಮನ ಗೋವನ್ನು ( ಬಡಕಲಾದ ಗೋವು ) , ಬ್ರಾಹ್ಮಣನನ್ನು ಕೊಂದ ಬ್ರಹ್ಮಹತ್ಯಾದೋಷಿಯನ್ನು ಒಳಗೆ ಬಿಟ್ಟವರಾರು ? ಕರೆದು ತಂದವರು ಯಾರು ? ಇದು ಅಪಶಕುನ , ಇನ್ನೇನು ಈ ಮದುವೆ ಸರಿಯಾಗುವುದಿಲ್ಲ ” ಎಂದು ಮಾತನಾಡಿಕೊಂಡರು .

4. ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ ,

ಉತ್ತರ : ವೃದ್ಧಮಾಹೇಶ್ವರನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ , ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದಮಾಡುತ್ತಾ , ತೊದಲುವ ಮಾತುಗಳಿಂದ ನಮಃಶಿವಾಯ , ನಮಃಶಿವಾಯ ಎನ್ನುತ್ತಿದ್ದನು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .

1. ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ ?

ಉತ್ತರ : ಶಿವನು , ಪಾದದಿಂದ ತಲೆಯವರೆಗೂ ಲೇಪಿಸಿಕೊಂಡ ವಿಭೂತಿ , ನರೆತ ತಲೆ , ಸುಕ್ಕುಗಟ್ಟಿದ ದೇಹಹೊಂದಿದನು . ಆತನ ಜಟೆಯಲ್ಲಿದ್ದ ಚಂದ್ರಕಳೆಯೇ ಕೊಡೆಯಾಯಿತು . ಹಿಡಿದಿದ್ದ ತಿಶೂಲ ಕೊಡೆಯ ದಂಡ ( ಖಟ್ವಾಂಗ ) ಊರುಗೋಲಾಯಿತು ( ಯಷ್ಟಿ ) , ಸರ್ಪವು ಪ್ರಮಾಣಪತ್ರವಾಯಿತು . ಬ್ರಹ್ಮನ ಶಿರವೇ ಕಮಂಡಲವಾಯಿತು , ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು . ಶಿವನು ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರ ಎಂಬ ರಾಕ್ಷಸನೆ ಪಾದರಕ್ಷೆಗಳಾಗಿ , ಕೊರಳಿನಲ್ಲಿ ಕಟ್ಟಿಕೊಂಡಿರುವ ತಲೆಬುರುಡೆಗಳ ಹಾರವ ಜಪಮಾಲೆಯಾಯಿತು . ಕೈಯಲ್ಲಿರುವ ಕೊಡೆ , ಮೈಯ ಸುಕ್ಕು , ಜೋತಾಡುವ ಹುಬ್ಬು , ನೇತಾಡುವ ತೋಳಿನ ಚರ್ಮ , ಇಟ್ಟಿರುವ ವಿಭೂತಿ , ನೆಲಕ್ಕೆ ಊರಿದ ಊರುಗೋಲು , ಹಿಡಿದ ಕಮಂಡಲ , ಇಳಿಬಿಟ್ಟ ಬಿಳಿಯಗಡ್ಡ , ನಡುಗುವ ನರೆತ ತಲೆ , ನರೆತು ಹೋಗಿ ಸಡಿಲವಾಗಿರುವ ಸರ್ವಾಂಗದಿಂದ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ , ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದ ಮಾಡುತ್ತಾ , ತೊದಲುವ ಮಾತುಗಳಿಂದ ನಮಃಶಿವಾಯ ? ನಮಃಶಿವಾಯ ಎನ್ನುತ್ತಾ , ಎನ್ನಲಾರದಂತೆ ನಡುಗುತ್ತಾ ಮದುವೆ ಚಪ್ಪರದ ಬಳಿಬಂದನು ” ಎಂದು ಕವಿ ವೃದ್ಧಮಾಹೇಶ್ವರನನ್ನು ವರ್ಣಿಸಿದ್ದಾನೆ .

2. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು ?

ಉತ್ತರ : ವಿವಾಹ ಮಂಟಪದೊಳಗೆ ಶಿವನು ಮೆಲ್ಲಮೆಲ್ಲನೆ ನೋಡುತ್ತಾ , ಮನದೊಳಗೆ ನಗುತ್ತಾ , ಕೋಲನೂರಿಕೊಂಡು ತಿನ್ನುತ್ತಾ ವಿವಾಹ ಮಂಟಪದ ಬಳಿ ಸಾಲಾಗಿ ಜೋಡಿಸಲಾಗಿದ್ದ ತುಪ್ಪದ ಕೊಡಗಳ ಮೇಲೆ ನಾಲ್ಕೆರಡನ್ನು ಎಡವಿ ‘ ನಮಃಶಿವಾಯ ‘ ಎಂಬ ವೃದ್ಧಧ್ವನಿ ಅವನ ಬಾಯಿಂದ ಬರುತ್ತಿದ್ದಂತೆ ಕೊಡಗಳ ಮೇಲೆ ಬಿದ್ದು ಅಲ್ಲಿ ಕುಳಿತಿದ್ದವರ ಮುಖಕ್ಕೆ , ಕಣ್ಣುಗಳಿಗೆ , ಮೈಯ ಮೇಲೆ ತುಪ್ಪ ಚೆಲ್ಲಿತು . ಅಲ್ಲಿ ನೆರೆದಿದ್ದವರೆಲ್ಲಾ ಹಾಗೆ ಬಿದ್ದ ವೃದ್ಧಮಾಹೇಶ್ವರನನ್ನು ಎತ್ತಿ ನಿಲ್ಲಿಸಿದರು . ಆದರೆ ಅವನು ಅವನು ಒಂದು ಹೆಜ್ಜೆ ಇಟ್ಟು ಮತ್ತೆ ತಡವರಿಸಿ ನಿಲ್ಲಲಾರದೆ ತಟ್ಟನೆ ಘಳಿಗೆಬಟ್ಟಲಿನ ಮೇಲೆ ಬಿದ್ದನು . ಆಗ ಅಲ್ಲಿದ್ದ ಕಳಶ ಒಡೆದು , ಘಳಿಗೆಬಟ್ಟಲು ಮುರಿದು ಹೋಗಿ , ಅಕ್ಕಿಯೆಲ್ಲಾ ಚೆಲ್ಲಿಹೋಯಿತು . ಅಲ್ಲಿದ್ದ ಜೋಯಿಸರು ಚದುರಿ ಅತ್ತಿತ್ತ ಓಡಿಹೋದರು . ನಂತರ ಮೂರ್ಚೆಹೋದಂತೆ ಬಿದ್ದಿದ್ದ ಅವನನ್ನು ಎಲ್ಲರೂ ಸುತ್ತುವರಿದು ನೀರುಹಾಕಿ ಎಚ್ಚರಿಸಿ ನಿಲ್ಲಿಸಿದ ಕೂಡಲೆ ಅವನು ತುಪ್ಪದ ಕೊಡದ ಮೇಲಲ್ಲದೆ ಬೇರೆಲ್ಲಿಗೂ ಬೀಳುತ್ತಿರಲಿಲ್ಲ . ಎಲ್ಲರೂ ಮೆಲ್ಲಗೆ ಅವನ ಕೈಯನ್ನು ಕಾಲನ್ನು ಹಿಡಿದು ಎತ್ತಿಕೊಂಡು ಹೋಗಿ ಚಪ್ಪರದ ಹೊರಗೆ ಮೆಲ್ಲಗೆ ಇಳಿಸಿದರು . ಅವರು ‘ ಇವನನ್ನು ಒಳಗೆ ಬಿಡಬೇಡವೆಮದು ‘ ದ್ವಾರಪಾಲಕನಿಗೆ ಹೇಳಿ ವಿವಾಹಮಂಟಪದ ಬಾಗಿಲನ್ನು ಹಾಕಿಕೊಂಡು ಒಳಗೆ ಹೋಗುವಷ್ಟರಲ್ಲಿ ವೃದ್ಧಮಾಹೇಶ್ವರನು ಅವರಿಗಿಂತ ಮುನ್ನವೇ ಒಳಗೆ ಬಂದು ಅಲ್ಲಿದ್ದ ತೋರಣದ ತಳಿರನ್ನು ಕಿತ್ತು ಬೀಸಾಡುತ್ತಾ ” ಶಿವಾ ಶಿವಾ … ” ಎಂದು ಕೂಗುತ್ತ ಆವಾಂತರ ಮಾಡಿದನು .

3. ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು ?

ಉತ್ತರ : ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು . ಇದನ್ನು ರುದ್ರಗಣದ ಸದಸ್ಯರಲ್ಲೊಬ್ಬನಾದ ಪುಷ್ಪದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು . ಪುಷ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ . ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ . ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು . ಇದರಿಂದ ನೊಂದ ಪುಷ್ಪದತ್ತ “ ನಿಮ್ಮನ್ನಗಲಿ ನಾನಿರಲಾರೆ ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿ ” ಎಂದು ಪ್ರಾರ್ಥಿಸಲು , ನೀನು ಈಗ ಭೂಲೋಕದಲ್ಲಿ ಮಾನವನಾಗಿ ಹುಟ್ಟು , ಆದಷ್ಟು ಬೇಗನೆ ನಿನ್ನನ್ನು ಕೈಲಾಸಕ್ಕೆ ಕರೆಸಿಕೊಳ್ಳುವನೆಂದು ಆಶ್ವಾಸನೆ ನೀಡಿದ . ಹೀಗಾಗಿ ಚೋಳದೇಶದ ರಾಜಮನೆತನದಲ್ಲಿ ನಂಬಿಯಣ್ಣನಾಗಿ ಪಷದತ್ತನೂ ಪರವೆ – ಸಂಕಿಲಿಯರಾಗಿ ರುದ್ರಕನ್ನಿಕೆಯರೂ ಹುಟ್ಟಿದರು . ಆ ಕಾರಣಕ್ಕಾಗಿ ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಿದನು .

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. ” ನೀನತ್ಯಂತ ಕರುಣಿ ”

ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ನಂಬಿಯಣ್ಣ ಮತ್ತು ಪರವೆ ಸಂಕಿಲಿಯರನ್ನು ಮದುವೆಯ ಮಂಟಪದಿಂದ ಕರೆತರಲು ಭೂಲೋಕಕ್ಕೆ ಹೋಗುವುದಾಗಿ ಶಿವನು ಹೇಳಿದಾಗ ಗಿರಿಜೆ ತಾನೂ ಬರುತ್ತೇನೆಂದು ಕೇಳಿಕೊಳ್ಳುತ್ತಾಳೆ . ಆ ಸಂದರ್ಭದಲ್ಲಿ ಶಿವನು ಹೀಗೆ ಹೇಳುತ್ತಾನೆ . ನೀನು ಕರುಣಾಮಯಿ ಆದರೆ ನಾನು ಮಾಡುವುದು ನಿಷ್ಟುರದ ಕೆಲಸ ಆದ್ದರಿಂದ ನೀನು ಬರುವುದು ಬೇಡವೆನ್ನುತ್ತಾನೆ .

ಸ್ವಾರಸ್ಯ : – ಶಿವನು ನಂಬಿಯಣ್ಣನ ಮದುವೆಯಲ್ಲಿ ಅವಾಂತರ ಮಾಡಲು ಹೋಗುವ ಉದ್ದೇಶ ಹೊಂದಿದ್ದು ಕರುಣಾಮಯಿಯಾದ ಗಿರಿಜೆ ಬಂದರೆ ತನ್ನ ಕಾರ್ಯಕ್ಕೆ ಅಡ್ಡಿಯುಂಟು ಮಾಡಬಹುದೆಂದು ಹೇಳಿರುವುದು ಸ್ವಾರಸ್ಯಕರವಾಗಿದೆ .

2. “ ಸಕಲಸುಖಮಂ ಪೂಜೆಯಾಗಿ ಕೈಕೊಂಡುಬರ್ಪೆನ್ ”

ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಈ ಮಾತನ್ನು ಶಿವನು ಗಿರಿಜೆಗೆ ಹೇಳುತ್ತಾನೆ . ಶಿವನ ಶಾಪದಿಂದ ಚೋಳದೇಶದಲ್ಲಿ ‘ ನಂಬಿ ‘ ಎಂಬ ಹೆಸರಿನಿಂದ ಜನಿಸಿದ್ದ ಪುಷ್ಪದತ್ತ ಹಾಗೂ ಪರವೆ – ಸಂಕಿಲಿ ಎಂಬ ಹೆಸರಿನಿಂದ ಜನಿಸಿದ್ದ ರುದ್ರಕನ್ನಿಕೆಯರನ್ನು ಅವರಿಗೆ ಮಾತುಕೊಟ್ಟಿದ್ದಂತೆ ಕೈಲಾಸಕ್ಕೆ ಕರೆತರುವುದಕ್ಕಾಗಿ ಹೇಳುತ್ತಾ ಭೂಲೋಕದಲ್ಲಿ ನಂಬಿಯಣ್ಣನ ಮದುವೆಯಲ್ಲಿ ಸಕಲ ಸುಖವನ್ನು ಅವನಿಂದ ಸೇವೆಯಾಗಿ ಪಡೆದು ಬರುತ್ತೇನೆಂದು ಈ ಸಂದರ್ಭದಲ್ಲಿ ಹೇಳುತ್ತಾನೆ .

ಸ್ವಾರಸ್ಯ : – ಭಕ್ತರಕ್ಷಕನಾದ ಶಿವನು ಭುಲೋಕಕ್ಕೆ ಹೋಗಿ ಅಲ್ಲಿ ನಂಬಿಯಣ್ಣನಿಂದ ಸಕಲ ಸುಖವನ್ನು ಪಡೆದು ಬರುವುದಾಗಿ ಹೇಳಿರುವುದು ಸ್ವಾರಸ್ಯಕರವಾಗಿದೆ .

3. “ ಪುಣ್ಯಂ ಪಣ್ಣಾದಂತೆ “

ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಭೂಲೋಕಕ್ಕೆ ಹೋಗುವಾಗ ಶಿವನು ಧರಿಸಿದ ವೃದ್ಧಮಾಹೇಶ್ವರ ವೇಷವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಸುಕ್ಕುಗಟ್ಟಿ ನೇತಾಡುವ ಚರ್ಮ , ನೆಲಕ್ಕೆ ಊರಿದ ಊರುಗೋಲು , ಇಳಿಬಿಟ್ಟ ಬಿಳಿಯಗಡ್ಡ , ನಡುಗುವ ನರೆತ ತಲೆ , ಹೀಗೆ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಇದ್ದನು ಎಂದು ಕವಿ ವರ್ಣಿಸಿದ್ದಾನೆ

ಸ್ವಾರಸ್ಯ : – ಪುಣ್ಯವಿಶೇಷನಾದ ವೃದ್ಧಮಾಹೇಶ್ವರನ ಆ ವೇಷವನ್ನು ಪುಣ್ಯ ಹಣ್ಣಾದಂತೆ ಎಂದು ವರ್ಣಿಸಿರುವುದು ಸ್ವಾರಸ್ಯಕರವಾಗಿದೆ .

4. “ ಈ ವೃದ್ಧಂ ಕಿರುಕುಳನಲ್ಲ ”

ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ವೃದ್ಧಮಾಹೇಶ್ವರನ ಕಾಟತಾಳಲಾರದೆ ಜನರೆಲ್ಲಾ ಸೇರಿ ಅವನನ್ನು ಮದುವೆ ಚಪ್ಪರದ ಹೊರಗೆ ತಂದು ಇಳಿಸಿ ಒಳಗೆ ಹೋಗುವಷ್ಟರಲ್ಲಿ ಅವನು ಅವರಿಗಿಂತ ಮುಂದೆ ಒಳಗೆ ಇದ್ದನು . ಅಲ್ಲದೆ ಅಲ್ಲಿದ್ದ ತೋರಣವನ್ನು ಕಿತ್ತುಹಾಕುತ್ತಾ “ ಶಿವಶಿವಾ … ” ಎನ್ನುತ್ತಿರುವುದನ್ನು ನೋಡಿ ಆ ಜನರೆಲ್ಲಾ ಆಶ್ಚರ್ಯಗೊಂಡು ‘ ಈ ವೃದ್ಧ ನಮಗೆ ಕಿರುಕುಳ ಕೊಡುವವನಲ್ಲ , ಈತನಾರೋ ಪವಾಡ ಪುರುಷನಿರಬೇಕು ‘ ಎಂದು ಮಾತನಾಡಿಕೊಳ್ಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : – ಆತನ ನಡೆವಳಿಕೆಯನ್ನು ನೋಡಿ ಜನರು ಈತ ಕಿರುಕುಳ ಕೊಡಲು ಬಂದವನಲ್ಲ ಎಂದು ಯೋಚಿಸಿದ್ದು ಸ್ವಾರಸ್ಯಪೂರ್ಣವಾಗಿದೆ .

ಉ ] ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ ,

1. ಹರಿಹರನ ಕಾಲ ೧೨೦೦

2. ವೃದ್ಧಮಾಹೇಶ್ವರ ತುಪ್ಪದ ಕೊಡದ ಮೇಲೆ ಬಿದ್ದನು

3. ಹರಲೀಲೆ ಪಾಠವನ್ನು ನಂಬಿಯಣ್ಣನ ರಗಳೆ ರಗಳೆಯಿಂದ ಆಯ್ದುಕೊಳ್ಳಲಾಗಿದೆ .

4. ವೃದ್ಧಮಾಹೇಶ್ವರನು ಕೈಲಾಸದಿಂದ ಮಣಮುಂದಪುತ್ತೂರಿಗೆ ಬಂದನು .

ಹೊಂದಿಸಿ ಬರೆಯಿರಿ

“ಅ” ಪಟ್ಟಿ                                                ‘ ಆ ‘ ಪಟ್ಟಿ

1. ಪುಷ್ಪದತ್ತ                                            ಹಂಪಿ

2 , ರುದ್ರಕನ್ನಿಕೆಯರು                                ಬಾಗಿಲು

3. ಚೋಳದೇಶ                                           ನಂಬಿಯಣ್ಣ

4. ಕದ                                                       ಪರವೆ-ಸಂಕಿಲೆ

5 , ಗಿರಿಜೆ                                                    ಮಣಮಂದಪುತ್ತೂರು

ಶಿವ

ಪಾರ್ವತಿ

ಸರಿ ಉತ್ತರಗಳು.

1. ನಂಬಿಯಣ್ಣ

2. ಪರವೆ – ಸಂಕಿಲೆ

3. ಮಣಮಂದಪುತ್ತೂರು

4. ಬಾಗಿಲು

5  ಪಾರ್ವತಿ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

1. ಕರ್ತರಿ ಪ್ರಯೋಗ ವಾಕ್ಯದ ವಿಶೇಷತೆಯನ್ನು ತಿಳಿಸಿ ,

ಉತ್ತರ : ಕರ್ತರಿ ಪ್ರಯೋಗದ ವಾಕ್ಯದ ಕ್ರಿಯಾಪದಕ್ಕೆ ಕರ್ತೃವಿನ ಲಿಂಗ , ವಚನ ಬಂದರೆ ಅದು ಕರ್ತರಿ ಪ್ರಯೋಗ , ಉದಾ : ಅಣ್ಣ ಅನ್ನವನ್ನು ಉಂಡನು . ಇದು ಕರ್ತರಿ ಪ್ರಯೋಗದ ವಾಕ್ಯ ಇಲ್ಲಿ ಕರ್ತೃ ಪದ ಮಲ್ಲಿಂಗ ಇದೆ ಕ್ರಿಯಾಪದ ಉಂಡನು ಪುಲ್ಲಿಂಗ ಇದೆ . ಅಣ್

2. ವಿಧ್ಯರ್ಥಕ ಕ್ರಿಯಾಪದ ಎಂದರೇನು ? ಎರಡು ಉದಾಹರಣೆ ಕೊಡಿ ,

ಉತ್ತರ : ಆಶೀರ್ವಾದ , ಅಪ್ಪಣೆ , ಆಜ್ಞೆ , ಹಾರೈಕೆ ಸಮ್ಮತಿ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳ ವಿಧ್ಯರ್ಥಕ ಕ್ರಿಯಾಪದಗಳು . ಉದಾ : ಓದಲಿ , ಆಗಲಿ , ಬರೆಯಲಿ ಇತ್ಯಾದಿ ,

3. ಸಂಭಾವನಾರ್ಥಕ ಕ್ರಿಯಾಪದವನ್ನು ಸೂತ್ರ ಸಹಿತ ವಿವರಿಸಿ ,

ಉತ್ತರ : ಕ್ರಿಯೆ ನಡೆಯುವ ಬಗ್ಗೆ ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವಂತಹ ಪದಗಳೇ ಸಂಭಾವನಾರ್ಥಕ ಕ್ರಿಯಾಪದಗಳು , ಉದಾ : ಅವರು ನಾಳೆ ಬಂದಾರು , – ಚೆಂಡು ಮೇಲಕ್ಕೆ ಹೋದೀತು .

ಈ ವಾಕ್ಯಗಳಲ್ಲಿರುವ ಬಂದಾರು . ಹೋದೀತು ಎಂಬ ಕ್ರಿಯಾಪದಗಳು ಸಂಶಯ ಅಥವಾ ಊಹೆಯನ್ನು ಸೂಚಿಸುತ್ತವೆ .

ಆ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

1. ‘ ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ – ಈ ವಾಕ್ಯದಲ್ಲಿರುವ ಕ್ರಿಯಾಪದ

ಆ ) ದೇವರು ಆ ) ಎಲ್ಲರಿಗೂ ಇ ) ಒಳ್ಳೆಯದನ್ನೆ ಈ ) ಉಂಟುಮಾಡಲಿ

ಉತ್ತರ  ಈ) ಉಂಟುಮಾಡಲಿ

2. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ,,,,,,,,,,

ಆ ) ತಿನ್ನನು ಆ ) ತಿನ್ನಲಿ 3 .ತಂದಾನು, 4, ತಿನ್ನುತಾನೆ

ಉತ್ತರ : ಅ ) ತಿನ್ನನು

3. ಇದು ಈ ಗುಂಪಿಗೆ ಸೇರದ ಪದವಾಗಿದೆ,,,,,,,,,,,,,,

ಅ ) ಉತ್ಸಾಹ  ಆ) ಉಪಮಾ  ಇ ) ಮಂದಾನಿಲ ಈ ) ಲಲಿತ

ಉತ್ತರ :ಆ ) ಉಪಮಾ

4. ‘ ಎಳಸಿರ್ಪ ‘ ಈ ಪದದ ಅರ್ಥ,,,,,,,,,,,

ಅ) ಎಳೆಯದಾಗಿರುವ ಆ ) ಮಿತಿಯಿಲ್ಲದ ಇ ) ರುಚಿಯಾದ ಈ ) ಸುತ್ತುವರಿದಿರುವ

9th Standard Haralile Kannada Notes Question Answer Pdf

ಇತರೆ ಪಾಠಗಳು:

ಊರುಭಂಗ ಕನ್ನಡ ನೋಟ್ಸ್

ಜನಪದ ಕಲೆಗಳ ವೈಭವ ಕನ್ನಡ ನೋಟ್ಸ್

Leave your vote

10 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.