8ನೇ ತರಗತಿ ಕನ್ನಡ ಸಣ್ಣ ಸಂಗತಿ ಪದ್ಯದ ನೋಟ್ಸ್‌ | 8th Stanadard Kannada Sanna Sangati Poem Notes

8ನೇ ತರಗತಿ ಕನ್ನಡ ಸಣ್ಣ ಸಂಗತಿ ಪದ್ಯದ ನೋಟ್ಸ್‌ ಪ್ರಶ್ನೆ ಉತ್ತರ, 8th Class Kannada Sanna Sangati Poem Question Answer Notes Pdf Download

ತರಗತಿ : 8ನೇ ತರಗತಿ

ಪದ್ಯದ ಹೆಸರು : ಸಣ್ಣ ಸಂಗತಿ

ಕೃತಿಕಾರರ ಹೆಸರು : ಕೆ.ಎಸ್ . ನರಸಿಂಹಸ್ವಾಮಿ

ಕೃತಿಕಾರರ ಪರಿಚಯ :

ಕೆ.ಎಸ್ . ನರಸಿಂಹಸ್ವಾಮಿ

ಕೆ.ಎಸ್.ನರಸಿಂಹಸ್ವಾಮಿ ಅವರು ೨೬-೦೧-೧೯೧೫ ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು . ಇವರ ಮೊದಲ ಕವನ ಸಂಕಲನ ‘ ಮೈಸೂರು ಮಲ್ಲಿಗೆ ‘ ೧೯೪೩ ರಲ್ಲಿ ಪ್ರಕಟವಾಯಿತು . ಇವರು ಶಿಲಾಲತೆ , ಐರಾವತ , ನವಪಲ್ಲವ , ಇರುವಂತಿಗೆ , ದೀಪದ ಮಲ್ಲಿ , ಮನೆಯಿಂದ ಮನೆಗೆ , ತೆರೆದ ಬಾಗಿಲು ಮೊದಲಾದ ಕವನ ಸಂಕಲನಗಳನ್ನು ರಚಿಸಿದ್ದಾರೆ . ಇವರ ತೆರೆದ ಬಾಗಿಲು ಎಂಬ ಕವನ ಸಂಗ್ರಹಕ್ಕೆ ೧೯೭೭ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ದುಂಡು ಮಲ್ಲಿಗೆ ಕವನ ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಲಭಿಸಿದೆ . ಇವರು ೧೯೯೦ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರು ಪ್ರೇಮಕವಿ ಎಂದು ಹೆಸರಾಗಿದ್ದಾರೆ . ‘ ಸಣ್ಣ ಸಂಗತಿ ‘ ಈ ಕವನವನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ‘ ಇರುವಂತಿಗೆ ‘ ಕವನ ಸಂಗ್ರಹದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ .

8th Class Kannada Sanna Sangati Poem Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಯಾವುದನ್ನು ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆಯುತಿದೆ ?

ಉತ್ತರ : ನಿದ್ದೆ ಎಚ್ಚರಗಳಲ್ಲಿ ಪೊರೆವ ( ರಕ್ಷಿಸುವ ) ಕೈ ದುಡಿಯುವುದನ್ನು ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆಯುತಿದೆ .

2. ಮೂಲೆಯಲ್ಲಿ ಇರುವುದೇನು ?

ಉತ್ತರ : ಮೂಲೆಯಲ್ಲಿ ದೀಪವಿದೆ .

3. ಹುಣ್ಣಿಮೆಯ ಕಣ್ಣು ಎಲ್ಲಿ ತೆರೆದಿದೆ ?

ಉತ್ತರ : ಹುಣ್ಣಿಮೆಯ ಕಣ್ಣು ನೀರು ತುಂಬಿದ ಕಪ್ಪು ಮೋಡಗಳ ನಡುವೆ ತೆರೆದಿದೆ .

4. ಪುಟ್ಟ ಮಗುವು ತೊಟ್ಟಿಲಲ್ಲಿ ಹೇಗೆ ಮಲಗಿದೆ ?

ಉತ್ತರ : ಪಟ್ಟ ಮಗುವು ತೊಟ್ಟಿಲಲ್ಲಿ ಕಣ್ಣನ್ನು ಅರ್ಧ ಮುಚ್ಚಿ ಮಲಗಿದೆ .

5. ನಿದ್ದೆ ಎಚ್ಚರಗಳಲ್ಲಿ ಯಾವ ಕೈ ದುಡಿಯುತಿದೆ ?

ಉತ್ತರ : ನಿದ್ದೆ ಎಚ್ಚರಗಳಲ್ಲಿ ಪೊರೆವ ( ರಕ್ಷಿಸುವ ) ಕೈ ದುಡಿಯುತಿದೆ .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಈ ಕವನದಲ್ಲಿ ಕವಿ ನೀಡಿರುವ ಪ್ರಾಕೃತಿಕ ಘಟನೆಗಳನ್ನು ತಿಳಿಸಿ .

ಉತ್ತರ : ಮಧ್ಯರಾತ್ರಿಯ ಸಮಯದಲ್ಲಿ ಆಕಾಶದಲ್ಲಿ ನೀರು ತುಂಬಿರುವ ಕರಿಮೋಡಗಳ ಮಧ್ಯದಲ್ಲಿ ಹುಣ್ಣಿಮೆಯ ಕಣ್ಣು ತೆರೆದಿರುವಂತೆ ಚಂದ್ರ ಕಾಣುತ್ತಿದ್ದಾನೆ . ಆ ಬಾನಿನ ಬೀದಿಗೆ ನಕ್ಷತ್ರಗಳು ಬಂದಿವೆ . ಸೋನೆ ಮಳೆಯ ಶ್ರುತಿಗೆ ಗಾಳಿಯೇ ಹಾಡುತ್ತಿದೆ . ಎಂದು ಕವಿ ಪ್ರಾಕೃತಿಕ ಘಟನೆಗಳನ್ನು ತಿಳಿಸಿದ್ದಾರೆ .

2. ತಾಯಿ ತನ್ನ ಮಗುವಿನ ಆರೈಕೆಯನ್ನು ಹೇಗೆ ಮಾಡುತ್ತಾಳೆ ವಿವರಿಸಿ .

ಉತ್ತರ : ಮಧ್ಯರಾತ್ರಿಯ ವೇಳೆ ತಾಯಿಯ ಪಕ್ಕದಲ್ಲಿ ಮಲಗಿರುವ ಮಗು ನಿದ್ದೆಗಣ್ಣಿನಲ್ಲಿ ಹೊದಿಕೆಯನ್ನು ಕಿತ್ತೆಸೆಯುತ್ತದೆ ; ಕಾಲಿನಿಂದ ಒದೆದು ಬರಿ ಮೈಯಲ್ಲಿ ಮಲಗುತ್ತದೆ . ಆಗ ತಾಯಿ ತಾನು ನಿದ್ದೆ ಮಾಡುತ್ತಿದ್ದರೂ ತನ್ನ ಕೈಯಿಂದ ಹೊದಿಕೆಯನ್ನು ಮತ್ತೆ ಮತ್ತೆ ಸರಿಪಡಿಸಿ ಮಗುವಿನ ಆರೈಕೆ ಮಾಡುತ್ತಾಳೆ . ೨. ಕವಿ ಯಾವ ಸಣ್ಣ ಸಂಗತಿಯನ್ನು ಈ ಕವನದಲ್ಲಿ ವಿವರಿಸಿದ್ದಾರೆ ? ಉತ್ತರ : ತಾಯಿಯ ಪಕ್ಕದಲ್ಲಿ ಮಲಗಿರುವ ಮಗು ಮಧ್ಯರಾತ್ರಿ ತನ್ನ ಹೊದಿಕೆಯನ್ನು ಕಿತ್ತೆಸೆದಾಗ , ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ ಸಂಗತಿಯೊಂದನ್ನು ಕವಿ ಸಣ್ಣ ಸಂಗತಿ ಕವನದಲ್ಲಿ ವಿವರಿಸಿದ್ದಾರೆ .

ಇ ] ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ನಿದ್ದೆ ಎಚ್ಚರಗಳಲ್ಲಿ ಮೊರೆವ ಕೈ ದುಡಿಯುತಿದೆ . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ಇರುವಂತಿಗೆ ‘ ಕವನಸಂಗ್ರಹದಿಂದ ಆಯ್ಕೆಮಾಡಲಾದ ‘ ಸಣ್ಣ ಸಂಗತಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ತಾಯಿಯು ಹಗಲು – ಇರುಳು ಎನ್ನದೆ ತನ್ನ ಮಗುವನ್ನು ರಕ್ಷಿಸುವ ಮತ್ತು ಮಗುವಿಗಾಗಿ ಸದಾ ದುಡಿಯುವ ಬಗೆಯನ್ನು ತಿಳಿಸುವ ಸಂದರ್ಭದಲ್ಲಿ ಕವಿ ವರ್ಣಿಸಿದ್ದಾರೆ . ಸ್ವಾರಸ್ಯ : ತಾಯಿಯ ಮಾತೃ ವಾತ್ಸಲ್ಯ ಮತ್ತು ಅವಳು ಮಗುವಿಗಾಗಿ ಪಡುವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2. “ ತಾರೆ ಬಂದಿವೆ ಬಾನ ಬೀದಿಗೆ . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ಇರುವಂತಿಗೆ ‘ ಕವನಸಂಗ್ರಹದಿಂದ ಆಯ್ಕೆಮಾಡಲಾದ ‘ ಸಣ್ಣ ಸಂಗತಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಮಧ್ಯರಾತ್ರಿಯ ಪ್ರಾಕೃತಿಕ ಘಟನೆಗಳನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಆ ಸಮಯದಲ್ಲಿ ಆಕಾಶದಲ್ಲಿ ನೀರು ತುಂಬಿರುವ ಕರಿಮೋಡಗಳ ಮಧ್ಯದಲ್ಲಿ ಹುಣ್ಣಿಮೆಯ ಕಣ್ಣು ತೆರೆದಿರುವಂತೆ ಚಂದ್ರ ಕಾಣುತ್ತಿದ್ದಾನೆ . ಆ ಬಾನಿನ ಬೀದಿಗೆ ನಕ್ಷತ್ರಗಳು ಬಂದಿವೆ ‘ ಎಂದು ಕವಿ ವರ್ಣಿಸಿದ್ದಾರೆ . ಸ್ವಾರಸ್ಯ : ಇಲ್ಲಿ ಬಾನನ್ನು ಬೀದಿಗೆ ಹೋಲಿಸಿ : ಆ ಬೀದಿಯಲ್ಲಿ ತಾರೆಗಳು ನಡೆದಾಡುತ್ತಿವೆ ಎಂದು ಕವಿ ಕಲ್ಪನೆ ಮಾಡಿ ವರ್ಣಿಸಿರುವುದು ಸ್ವಾರಸ್ಯವಾಗಿದೆ .

3. “ ತಾಯಿ ಕೈನೀಡಿ ಮತ್ತೆ ಹೊದಿಕೆಯನ್ನು ಸರಿಪಡಿಸುವಳು . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ‘ ಇರುವಂತಿಗೆ ‘ ಕವನಸಂಗ್ರಹದಿಂದ ಆಯ್ಕೆಮಾಡಲಾದ ‘ ಸಣ್ಣ ಸಂಗತಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ತಾಯಿಯ ಪಕ್ಕದಲ್ಲಿ ಮಲಗಿರುವ ಮಗು ಮಧ್ಯರಾತ್ರಿ ತನ್ನ ಹೊದಿಕೆಯನ್ನು ಕಿತ್ತೆಸೆದಾಗ , ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಬಗೆಯನ್ನು ಈ ಸಂದರ್ಭದಲ್ಲಿ ಕವಿ ವರ್ಣಿಸಿದ್ದಾರೆ . ಸ್ವಾರಸ್ಯ : ನಿದ್ರೆಯಲ್ಲೂ ತನ್ನ ಮಗುವನ್ನು ಕಾಪಾಡುವ ತಾಯಿಯ ವಾತ್ಸಲ್ಯ ಮತ್ತು ಮಾತೃ ಹೃದಯದ ತುಡಿತ ಮಿಡಿತಗಳು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

ಈ ] ಕೊಟ್ಟಿರುವ ಪ್ರಶ್ನೆಗೆ ಏಳೆಂಟು ವಾಕ್ಯಗಳಲ್ಲಿ ಉತ್ತರಿಸಿ .

1. ಕವಿ ಯಾವ ಸಣ್ಣ ಸಂಗತಿಯೊಂದನ್ನು ಪ್ರಕೃತಿಯ ಘಟನೆಗಳೊಂದಿಗೆ ಹೋಲಿಕೆ ಮಾಡಿದ್ದಾರೆಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಸಣ್ಣ ಸಂಗತಿ ಕವನದಲ್ಲಿ ‘ ತಾಯ ಪಕ್ಕದಲ್ಲಿ ಮಲಗಿರುವ ಮಗು ಮಧ್ಯರಾತ್ರಿಯ ವೇಳೆ ತನ್ನ ಹೊದಿಕೆಯನ್ನು ಕಿತ್ತೆಸೆದಾಗ , ತಾಯಿಯ ಕೈ ಮತ್ತೆ ಮತ್ತೆ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ ಸಂಗತಿಯೊಂದನ್ನು ಪ್ರಕೃತಿಯ ನೀರು ತುಂಬಿರುವ ಕರಿಮುಗಿಲ ನಡುವೆ ಹುಣ್ಣಿಮೆಯ ಕಣ್ಣುತೆರೆದಂತೆ ಚಂದ್ರನಿದ್ದಾನೆ . ಬಾನಿನ ಬೀದಿಗೆ ತಾರೆ ಬಂದಿವೆ . ಸೋನೆಯ ಶ್ರುತಿಗೆ ಗಾಳಿಯೇ ಹಾಡುತ್ತಿದೆ ‘ ಎಂದು ಮೊದಲಾದ ಪ್ರಾಕೃತಿಕ ದೊಡ್ಡ ಘಟನೆಗಳೊಂದಿಗೆ ಹೋಲಿಸಿ ಕವಿ ವರ್ಣಿಸಿದ್ದಾರೆ . ಹಗಲಿರುಳೆನ್ನದೆ ಸದಾ ತನ್ನ ವಿನ ಆರೈಕೆಗಾಗಿ ದುಡಿಯುವ ತಾಯಿ ಹೃದಯದ ತುಡಿತ – ಮಿಡಿತಗಳು ಸಣ್ಣ ಸಂಗತಿ ಕವನದಲ್ಲಿ ಮೂಡಿಬಂದಿವೆ . ತಾಯಿಯು ತನ್ನ ಮಗುವಿನ ಆರೈಕೆ , ಲಾಲನೆ – ಪಾಲನೆಗಳಲ್ಲಿಯೇ ತನ್ನೆಲ್ಲ ಸುಖ ಸಂತೋಷಗಳನ್ನು ಕಾಣುತ್ತಾಳೆ . ಹಾಗೂ ತನ್ನ ನೋವು , ಸಂಕಟಗಳನ್ನು ಮರೆಯುತ್ತಾಳೆ , ಎನ್ನುವುದು ಈ ಕವಿತೆಯ ಆಶಯವಾಗಿದೆ .

8th Class Kannada Sanna Sangati Poem Question Answer Notes Pdf

ಇತರೆ ಪಾಠಗಳು :

ಯಶೋಧರೆ ಕನ್ನಡ ನೋಟ್ಸ್‌

ಪ್ರಜಾನಿಷ್ಠೆ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.