8ನೇ ತರಗತಿ ಕನ್ನಡಿಗರ ತಾಯಿ ಕನ್ನಡ ನೋಟ್ಸ್‌ | 8th Standard Kannadigara Tayi Kannada Poem Notes

8ನೇ ತರಗತಿ ಕನ್ನಡಿಗರ ತಾಯಿ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು, 8th Class Kannadigara Tayi Poem Notes Question Answer Pdf Download

ತರಗತಿ : 8ನೇ ತರಗತಿ

ಪದ್ಯದ ಹೆಸರು : ಕನ್ನಡಿಗರ ತಾಯಿ

ಕೃತಿಕಾರರ ಹೆಸರು : ಎಂ.ಗೋವಿಂದ ಪೈ

ಕೃತಿಕಾರರ ಪರಿಚಯ :

ಎಂ.ಗೋವಿಂದ ಪೈ

ಎಂ.ಗೋವಿಂದ ಪೈ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ೨೩೦೩.೧೮೮೩ ರಲ್ಲಿ ಜನಿಸಿದರು . ಇವರ ತ೦ದೆ ಸಾಹುಕಾರ ತಿಮ್ಮಪ್ಪ , ತಾಯಿ ದೇವಕಿಯಮ್ಮ ಅವರ ( ‘ ಸುವಾಸಿನಿ ‘ ) ಮೊದಲ ಕವಿತೆ ೧೯೦೦ ರಲ್ಲಿ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು . ಅವರ ಕವನ ಸಂಕಲನಗಳು : ಗಿಳಿವಿಂಡು , ನಂದಾದೀಪ ಮೊದಲಾದವು . ಅನುವಾದಿತ ಕೃತಿಗಳು ; ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ , ‘ ಸಿಂಗಾಲ ಸುತ್ತ ‘ ಬೌದ್ಧ ಸೂತ್ರಗಳ ಕನ್ನಡ ಅನುವಾದ , ರವೀಂದ್ರನಾಥ ಠಾಕೂರ್ , ಅಹಮ್ಮದ್ ಇಕ್ವಾಲ್ , ಉಮರ್ ಖಯ್ಯಾಂನ ರುಬಾಯಿಗಳನ್ನು ಭಾಷಾಂತರಿಸಿದ್ದಾರೆ . ಇವಲ್ಲದೆ ವೈಶಾಖ ಮತ್ತು ಗೊಲ್ಗೊಥಾ ಖಂಡಕಾವ್ಯ , ಚಿತ್ರಭಾನು , ಹೆಬ್ಬೆರಳು , ಪಾರ್ಶ್ವನಾಥ ತೀರ್ಥಂಕರ ಚರಿತೆ , ಬಾಹುಬಲಿ ಗೊಮ್ಮಟೇಶ್ವರ ಚರಿತೆ , ಭಗವಾನ್ ಬುದ್ಧ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ .

ಪ್ರಶಸ್ತಿ ಪುರಸ್ಕಾರಗಳು : * ೧೯೪೯ ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ . ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು .

* ೧೯೫೦ ರಲ್ಲಿ ಬೊಂಬಾಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದರು . ಪ್ರಸ್ತುತ ಪದ್ಯವನ್ನು ಶತಮಾನದ ಮಕ್ಕಳ ಸಾಹಿತ್ಯ ಸಂಕಲನದಿಂದ ಆರಿಸಿ ಸಂಪಾದಿಸಿ ನಿಗದಿಪಡಿಸಿದೆ .

Kannadigara Tayi Poem Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1 ) ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು ?

ಉತ್ತರ : ಕನ್ನಡ ತಾಯಿಯ ಬಸಿರ ಹೊನ್ನಗನಿ ವಿದ್ಯಾರಣ್ಯರು ,

2 ) ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸಬೇಕು ?

ಉತ್ತರ : ಕನ್ನಡ ತಾಯಿಯ ಹಾಡನ್ನು ಹೊಸತು ಕಿನ್ನರಿಯಿಂದ ಉಕ್ಕಿಸಬೇಕು.

3 ) ನಮ್ಮನ್ನು ಆಳುವವಳು ಯಾರು ?

ಉತ್ತರ : ನಮ್ಮನ್ನು ಆಳುವವಳು ಕನ್ನಡ ತಾಯಿ.

4 ) ಲತೆ ಯಾವುದನ್ನೆಲ್ಲಾ ನೀಡುತ್ತದೆ ?

ಉತ್ತರ : ಲತೆಯು ಪತ್ರ, ಪುಷ್ಪಗಳನ್ನು ನೀಡುತ್ತದೆ.

5) ಕನ್ನಡಿಗರ ಪಾಡು ಏನು?

ಉತ್ತರ : ಮೃಗದ ಸೇಡು ಕನ್ನಡಿಗರ ಪಾಡು.

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ

1 ) ಕನ್ನಡದ ಹೆಸರನ್ನು ಹೇಗೆ ಹಬ್ಬಿಸಬೇಕೆಂದು ಕವಿ ಆಶಿಸುತ್ತಾರೆ ?

ಉತ್ತರ : ಕನ್ನಡಿಗರು ಕನ್ನಡದಲ್ಲಿರುವ ಕಂಪನ್ನು ಅರಿಯದೆ ಬೇರೆ ಭಾಷೆಗಾಗಿ ಆಸೆಪಡುತ್ತಿದ್ದಾರೆ , ಆದ್ದರಿಂದ ಕವಿ “ ಕನ್ನಡಾಂಬೆಯೇ , ಕನ್ನಡ ಕಸ್ತೂರಿಯನ್ನು ಹೊಸ ಮಾತಿನಿಂದ ತೀಡಿ , ಅದರಲ್ಲಿ ಪರಿಮಳವನ್ನು ಹೊರತೆಗೆದು , ಕಾಮಧೇನುವಿನ ಮೈಯಲ್ಲಿ ಹೊಮ್ಮಿದ ಶಕ್ತಿಯಂತೆ ಕನ್ನಡಿಗರಲ್ಲಿ ಹೊಸ ಶಕ್ತಿಯನ್ನು ತುಂಬು , ಹೊಸ ಪರಿಮಳದ ನುಡಿಗಳಿಂದ ಇಡೀ ಜಗತ್ತಿನಲ್ಲಿ ನಿನ್ನ ಹೆಸರನ್ನು ಹಬ್ಬಿಸಬೇಕು . ” ಎಂದು ಆಶಿಸಿದ್ದಾರೆ .

2 ) ಕನ್ನಡ ನಾಡಿನ ಪ್ರಕೃತಿ ವೈಶಿಷ್ಟ್ಯವೇನು ?

ಉತ್ತರ : ಕನ್ನಡ ನಾಡಿನ ಪ್ರಕೃತಿ ಸಂಪಾಂತವಾಗಿ ಸಂಪದ್ಭರಿತವಾಗಿದ್ದು , ಹಣ್ಣು – ಕಾಯಿಗಳನ್ನು ನೀಡುವ ವಿವಿಧ ರೀತಿಯ ಮರಗಳು , ಪತ್ರ ಪುಷ್ಪಗಳನ್ನು ನೀಡುವ ಬಗೆಬಗೆಯ ಬಳ್ಳಿಗಳಿಂದ ಕೂಡಿದೆ . ಅಲ್ಲದೆ ಕೆನೆಭರಿತವಾದ ಹಾಸ್ಟೆನೆಗಳಿಂದ ಕೂಡಿದ ಬೆಳೆಗಳ ಮೇಲಿಂದ ಬೀಸಿ ಬರುವ ತಂಗಾಳಿ , ಪಾಣಿ – ಪಕ್ಷಿಗಳ ಸಮೂಹ , ನದಿಗಳು , ನಗರಗಳು , ಪರ್ವತಗಳು ಹೀಗೆ ಇಲ್ಲಿ ಇಲ್ಲದಿರುವುದೇ ಇಲ್ಲ . ಸ್ವರ್ಗವೇ ಭೂಮಿಗಿಳಿದಂತೆ ಮನೋಹರವಾಗಿದೆ . ಉತ್ತರ : ಕನ್ನಡಿಗರ ಪಾಡು ಮೃಗದ ಸೇಡಿನಂತಾಗಿದೆ .

3 ) ಕನ್ನಡದ ಕವಿಶ್ರೇಷ್ಠರ ಹಿರಿಮೆಯೇನು ?

ಉತ್ತರ : ಕನ್ನಡನಾಡು ಹಲವಾರು ಕವಿಶ್ರೇಷ್ಠರ , ಉದಯಕ್ಕೆ ಕಾರಣವಾಗಿದೆ . ಕೊಂಡಕುಂದಾಚಾರ್ಯರು , ಮಧ್ವಾಚಾರ್ಯ , ಬಸವಣ್ಣನವರಂತಹ ಆಚಾರ್ಯರು , ನೃಪತುಂಗ , ಪಂಪ , ರನ್ನ , ಲಕ್ಷ್ಮೀಶ , ಜನ್ನ , ಷಡಕ್ಷರಿ , ಮುದ್ದಣ ಮೊದಲಾದ ಶ್ರೇಷ್ಠ ಕವಿಗಳು ಇಲ್ಲಿ ಜನಿಸಿದ್ದಾರೆ . ಹಾಗೆಯೇ ಪುರಂದರದಾಸರಂತಹ ದಾಸ ಶ್ರೇಷ್ಠರು , ವಿದ್ಯಾರಣ್ಯರಂತಹ ಮಹಿಮರು ಈ ಕನ್ನಡತಾಯಿಯ ಹೊನ್ನಿನ ಗಣಿಯಂತಹ ಗರ್ಭದಲ್ಲಿ ಜನಿಸಿರುವುದು ಹಿರಿಮೆಯಾಗಿದೆ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ ,

1 ) ಕವಿ ಕನ್ನಡ ತಾಯಿಯಲ್ಲಿ ಏನೆಂದು ಕೋರುತ್ತಾರೆ ?

ಉತ್ತರ : ಕನ್ನಡ ಕಸ್ತೂರಿಯನ್ನು ಹೊಸ ನುಡಿಗಳಿಂದ ತೀಡಿ , ಪರಿಮಳವನ್ನು ಹೊರತೆಗೆದು , ಕನ್ನಡಿಗರಲ್ಲಿ ಹೊಸ ಶಕ್ತಿಯನ್ನು ತುಂಬು , ಹೊಸ ಪರಿಮಳದ ನುಡಿಗಳಿಂದ ಇಡೀ ಜಗತ್ತಿನಲ್ಲಿ ನಿನ್ನ ಹೆಸರನ್ನು ಹಬ್ಬಿಸು . ನಮ್ಮ ಎದೆಯನ್ನು ಗಟ್ಟಿಗೊಳಿಸಿ , ಎಲ್ಲರ ಬಾಯಲ್ಲಿ ನೆಲಸಿ , ನಮ್ಮೆಲ್ಲರ ಮನಸ್ಸುಗಳನ್ನು ಒಂದುಗೂಡಿಸು . ಇದನ್ನೊಂದನ್ನೆ ಕೋರುತ್ತೇನೆ , ನಿನ್ನ ಮೂರ್ತಿ ಜಗತ್ತಿನಲ್ಲೆಲ್ಲ ಕೀರ್ತಿಗಳಿಸುವಂತೆ ಎಂದು ತೋರುವೆ ” ಎಂದು ಕೋರುತ್ತಾರೆ .

2 ) ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ ಏಕೆ ?

ಉತ್ತರ : ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ , ಏಕೆಂದರೆ , ಕನ್ನಡಾಂಬೆಯು ಕನ್ನಡಿಗರೆಲ್ಲರ ಜನ್ಮದಾತೆಯಾಗಿದ್ದಾಳೆ . ಆ ತಾಯಿಯು ನಮ್ಮ ಪ್ರತಿಯೊಂದು ತಪ್ಪುಗಳನ್ನು ಸಹಿಸಿಕೊಂಡಿದ್ದಾಳೆ . ಬಹಳ ಪ್ರೀತಿಯಿಂದ ನಮ್ಮನ್ನು ಸಲಹಿದ್ದಾಳೆ . ಅವಳೇ ನಮ್ಮ ಜೀವನವಾಗಿದ್ದಾಳೆ . ನಮ್ಮ ತನು , ಮನ , ನುಡಿ ಎಲ್ಲವೂ ಕನ್ನಡವಾಗಿದೆ . ಆದ್ದರಿಂದ ಕನ್ನಡತಾಯಿಯನ್ನು ಮರೆಯಲು ಸಾಧ್ಯವಿಲ್ಲ .

ಈ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1 ) ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವೇನು ?

– ವಿವರಿಸಿ . ಉತ್ತರ : ಕನ್ನಡನಾಡು ಹಲವಾರು ಕವಿಶ್ರೇಷ್ಠರ ಉದಯಕ್ಕೆ ಕಾರಣವಾಗಿದೆ . ಕೊಂಡಕುಂದಾಚಾರ್ಯರು , ಮಧ್ವಾಚಾರ್ಯ , ಬಸವಣ್ಣನವರಂತಹ ಆಚಾರ್ಯರು , ನೃಪತುಂಗ , ಪಂಪ , ರನ್ನ , ಲಕ್ಷ್ಮೀಶ , ಜನ್ಮ , ಷಡಕ್ಷರಿ , ಮುದ್ದಣ ಮೊದಲಾದ ಶ್ರೇಷ್ಠ ಕವಿಗಳು ಇಲ್ಲಿ ಜನಿಸಿದ್ದಾರೆ . ಹಾಗೆಯೇ ಪುರಂದರದಾಸರಂತಹ ದಾಸ ಶ್ರೇಷ್ಠರು , ವಿದ್ಯಾರಣ್ಯರಂತಹ ಮಹಿಮರು ಈ ಕನ್ನಡತಾಯಿಯ ಹೊನ್ನಿನ ಗಣಿಯಂತಹ ಗರ್ಭದಲ್ಲಿ ಜನಿಸಿರುವುದು ಹಿರಿಮೆಯಾಗಿದೆ . ಕನ್ನಡ ನಾಡು ಭವ್ಯ ಶಿಲ್ಪಕಲೆಗಳ ಬೀಡಾಗಿದೆ . ಇಲ್ಲಿ ಇಲ್ಲದಿರುವ ಶಿಲ್ಪಕಲೆಯೇ ಇಲ್ಲ . ಹಳೆಬೀಡು – ಬೇಲೂರುಗಳಲ್ಲಿರುವ ದೇವಾಲಯಗಳು ಸುಂದರವಾಗಿವೆ . ಶ್ರವಣ ಬೆಳಗೊಳ , ಕಾರ್ಕಳ ಮುಂತಾದ ಸ್ಥಳಗಳಲ್ಲಿರುವ ಬಾಹುಬಲಿ ಮೂರ್ತಿಗಳು ಭವ್ಯವಾಗಿವೆ . ಇಲ್ಲಿ ಕಲ್ಲು ಕಲ್ಲುಗಳೂ ಕನ್ನಡ ನಾಡಿನ ಇತಿಹಾಸವನ್ನು ಸಾರುತ್ತವೆ .

2 ) ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಏಕೆ ಬಯಸುತ್ತಾರೆ ?

ಉತ್ತರ : ಕನ್ನಡಾಂಬೆಯು ಕನ್ನಡಿಗರೆಲ್ಲರ ಜನ್ಮದಾತೆಯಾಗಿದ್ದಾಳೆ . ಆ ತಾಯಿಯು ನಮ್ಮ ಪ್ರತಿಯೊಂದು ತಪ್ಪುಗಳನ್ನು ಸಹಿಸಿಕೊಂಡಿದ್ದಾಳೆ . ಬಹಳ ಪ್ರೀತಿಯಿಂದ ನಮ್ಮನ್ನು ಸಲಹಿದ್ದಾಳೆ . ಅವಳೇ ನಮ್ಮ ಜೀವನವಾಗಿದ್ದಾಳೆ . ನಮ್ಮ ತನು , ಮನ , ನುಡಿ ಎಲ್ಲವೂ ಕನ್ನಡವಾಗಿದೆ . ಅವಳನ್ನು ಮರೆಯಲು ಸಾಧ್ಯವಿಲ್ಲ . ಕನ್ನಡ ನಾಡಿನ ಪ್ರಕೃತಿಯಲ್ಲಿ ಹಣ್ಣು – ಕಾಯಿಗಳನ್ನು ನೀಡುವ ವಿವಿಧ ರೀತಿಯ ಮರಗಳು , ಪತ್ರ – ಪುಷ್ಪಗಳನ್ನು ನೀಡುವ ಬಗೆಬಗೆಯ ಬಳ್ಳಿಗಳಿಂದ ಕೂಡಿದೆ . ಅಲ್ಲದೆ ಬೆಳೆಗಳ ಕೆನೆಭರಿತವಾದ ಹಾನೆಯ ಮೇಲಿಂದ ಬೀಸಿ ಬರುವ ತಂಗಾಳಿ , ಪ್ರಾಣಿ – ಪಕ್ಷಿಗಳ ಸಮೂಹ , ನದಿಗಳು , ನಗರಗಳು , ಪರ್ವತಗಳು ಹೀಗೆ ಇಲ್ಲಿ ಇಲ್ಲದಿರುವುದೇ ಇಲ್ಲ . ಸ್ವರ್ಗವೇ ಭೂಮಿಗಿಳಿದಂತೆ ಮನೋಹರವಾಗಿದೆ . ಆದ್ದರಿಂದ ಕವಿ ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಹೇಳಿದ್ದಾರೆ .

ಉ ] ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,

1 ) ” ನಮ್ಮ ಮನಮನೊಂದೆ ಕಲಸು ! “

ಉತ್ತರ : – ಆಯ್ಕೆ : ಎಂ.ಗೋವಿಂದ ಪೈ ಅವರು ರಚಿಸಿರುವ ಕನ್ನಡಿಗರ ತಾಯಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಕನ್ನಡಾಂಬೆಯನ್ನು ಕುರಿತು ನಮ್ಮ ಎದೆಯನ್ನು ಗಟ್ಟಿಗೊಳಿಸಿ , ಎಲ್ಲರ ಬಾಯಲ್ಲಿ ನೆಲಸಿ , ನಮ್ಮೆಲ್ಲರ ಮನಸ್ಸುಗಳನ್ನು ಒಂದುಗೂಡಿಸು ಎಂದು ಹೇಳುವ ಸಂದರ್ಭದಲ್ಲಿ ನಿನ್ನ ಮೂರ್ತಿ ಜಗತ್ತಿನಲ್ಲೆಲ್ಲ ಕೀರ್ತಿಗಳಿಸುವಂತೆ ಎಂದು ತೋರುವೆ ಎಂದು ಕೋರುತ್ತಾರೆ . ಸ್ವಾರಸ್ಯ : ಕನ್ನಡ ಭಾಷೆ ಕೇವಲ ಕನ್ನಡ ನಾಡಿಗೆ ಸೀಮಿತವಾಗದೆ ಇಡೀ ಜಗತ್ತಿನಲ್ಲಿ ಕೀರ್ತಿಗಳಿಸಬೇಕೆಂಬ ಕವಿ ಆಶಯ ಇಲ್ಲಿ ಸ್ವಾರಸ್ಯಪೂರ್ಣವಾಗಿದೆ.

2 ) “ ಖಗ ಮೃಗೋರಗಾಳಿಯೋ “

ಉತ್ತರ : – ಆಯ್ಕೆ : ಎಂ.ಗೋವಿಂದ ಪೈ ಅವರು ರಚಿಸಿರುವ ಕನ್ನಡಿಗರ ತಾಯಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಕನ್ನಡನಾಡಿನಲ್ಲಿರುವ ಸಂಪದ್ಭರಿತ ಪ್ರಕೃತಿಯನ್ನು ವರ್ಣಿಸುವ ಸಂದರ್ಭದಲ್ಲಿ ಕನ್ನಡ ನಾಡಿನ ಪ್ರಕೃತಿಯಲ್ಲಿ ಹಣ್ಣು ಕಾಯಿಗಳನ್ನು ನೀಡುವ ವಿವಿಧ ರೀತಿಯ ಮರಗಳು , ಪತ್ರ – ಪುಷ್ಪಗಳನ್ನು ನೀಡುವ ಬಗೆಬಗೆಯ ಬಳ್ಳಿಗಳನ್ನು ಹೊಂದಿರುವುದಲ್ಲದೆ ಪ್ರಾಣಿ ಪಕ್ಷಿ – ಉರಗಗಳ ಸಮೂಹಗಳಿಂದ ಕೂಡಿದೆ ‘ ಎಂದು ಹೇಳಿದ್ದಾರೆ . ನೀಡುವ ಸ್ವಾರಸ್ಯ : ಕನ್ನಡನಾಡು ವಿಫುಲ ನೈಸರ್ಗಿಕ ಸಂಪತ್ತಿನಿಂದ ಕೂಡಿದೆ . ಇಲ್ಲಿ ಇಲ್ಲದಿರುವ ಅಂಶವೇ ಇಲ್ಲ ಎಂದು ಹೇಳಿರುವುದು ಇಲ್ಲಿನ ಸ್ವಾರಸ್ಯವಾಗಿದೆ .

3 ) “ ನಿನ್ನ ಕಲ್ಲೆ ನುಡಿವುದಲ್ಲ ! “

ಉತ್ತರ : – ಆಯ್ಕೆ : ಎಂ.ಗೋವಿಂದ ಪೈ ಅವರು ರಚಿಸಿರುವ ‘ ಕನ್ನಡಿಗರ ತಾಯಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಕನ್ನಡನಾಡಿನ ವಾಸ್ತುಶಿಲ್ಪಕಲಾ ವೈಭವವನ್ನು ವರ್ಣಿಸುವ ಸಂದರ್ಭದಲ್ಲಿ : ‘ ಕನ್ನಡ ನಾಡು ಭವ್ಯ ಶಿಲ್ಪಕಲೆಗಳ ಬೀಡಾಗಿದೆ . ಇಲ್ಲಿ ಇಲ್ಲದಿರುವ ಶಿಲ್ಪಕಲೆಯೇ ಇಲ್ಲ . ಇಲ್ಲಿ ಕಲ್ಲು ಕಲ್ಲುಗಳೂ ನುಡಿಯುತ್ತವೆ ‘ ಎಂದು ಹೇಳಿದ್ದಾರೆ . ಸ್ವಾರಸ್ಯ : ಕನ್ನಡನಾಡಿನ ವಾಸ್ತುಶಿಲ್ಪಕಲೆಯು ಭವ್ಯ ಇತಿಹಾಸವನ್ನು ಹೊಂದಿದ್ದು ಶಿಲಾಶಾಸನಗಳು ಅದರ ಇತಿಹಾಸವನ್ನು ಹೇಳುತ್ತವೆ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

ಊ. ಹೊಂದಿಸಿ ಬರೆಯಿರಿ.

ಅ                                           
1. ಬೇಲನಾಡು                       ಬಾಹುಬಲಿ

2. ಶರ್ವ                                ಖಂಡಕಾವ್ಯ

3. ಗೊಲ್ಗೊಥಾ                       ಕವನಸಂಕಲನ

4. ಗಿಳಿವಿಂಡು                        ಹಳೆಬೀಡು

                                              ಬೇಲೂರು

                                             ನೃಪತುಂಗ

ಸರಿ ಉತ್ತರಗಳು

1. ಬೇಲೂರು
2. ನೃಪತುಂಗ

3. ಖಂಡಕಾವ್ಯ
4. ಕವನ ಸಂಕಲನ

ಋ. ಬಿಟ್ಟ ಸ್ಥಳ ತುಂಬಿ

1. ಹರಸು ತಾಯೆ _____ ಕಾಯೆ
2. ಹಾಲು ಹರಿವ ______ ಭೂಮಿಗಿಳಿದುದೆ?
3. ಜೈನರಾದ ಪೂಜ್ಯಪಾದ _______
4. ________ ಸೇಡು ನಮ್ಮ ಪಾಡು.
1. ಸುತರ. 2. ದಿವಂ  3. ಕೊಂಡುಕುಂದವರ್ಯರ 4. ಮೃಗದ 

8th Class Kannadigara Tayi Poem Notes Question Answer Pdf

ಇತರೆ ಪಾಠಗಳು :

ಸಪ್ತಾಕ್ಷರಿ ಮಂತ್ರ ಕನ್ನಡ ನೋಟ್ಸ್‌

ಅಮ್ಮ ಪಾಠದ ನೋಟ್ಸ್

Leave your vote

134 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.