10ನೇ ತರಗತಿ ವೀರಲವ ಕನ್ನಡ ನೋಟ್ಸ್ | 10th Standard Kannada Veeralava Poem Notes

10ನೇ ತರಗತಿ ವೀರಲವ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 10th Class Veeralava Kannada Poem Notes Question Answer Pdf Download ವೀರಲವ ಪದ್ಯದ Notes

ತರಗತಿ : 10ನೇ ತರಗತಿ

ಪದ್ಯದ ಹೆಸರು : ವೀರಲವ

ಕೃತಿಕಾರರ ಹೆಸರು : ಲಕ್ಷ್ಮೀಶ

Table of Contents

ಕವಿ ಪರಿಚಯ:

ಲಕ್ಷ್ಮೀಶ

ಕವಿ ಲಕ್ಷ್ಮೀಶನು ಕ್ರಿ . ಶ . ಸುಮಾರು ೧೫೦ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು . ಇವನಿಗೆ ಲಕ್ಷ್ಮೀರಮಣ , ಲಕ್ಷ್ಮೀಪತಿ ಎಂಬ ಹೆಸರುಗಳೂ ಇದ್ದವು . ಇವರು ‘ ಜೈಮಿನಿ ಭಾರತ ‘ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ . ಈತನಿಗೆ ಉಪಮಾಲೋಲ , ಕರ್ಣಾಟ ಕವಿಚೂತವನಚೈತ್ರ ಎಂಬ ಬಿರುದುಗಳನ್ನು ನೀಡಿಗೌರವಿಸಲಾಗಿದೆ ,

Veeralava Kannada Poem Notes Question Answer

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ

1. ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು ?

ಕುದುರೆಯನ್ನು ಅವನು ತನ್ನ ಉತ್ತರೀಯದಿಂದ ಕಟ್ಟಿದನು .

2. ಮುನಿಸುತರು ಹೆದರಲು ಕಾರಣವೇನು ?

ಅವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು .

3. ‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ?

ಜೈಮಿನಿ ಭಾರತಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ

4. ಯಜ್ಞಾಶ್ವವನ್ನು ಕಟ್ಟಿದವರು ಯಾರು ?

ಯಜಾಶ್ವವನ್ನು ಕಟ್ಟಿದವರು ಲವ

ಆ ] ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?

ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ ಭೂಮಂಡಲದಲ್ಲಿ ಕೌಸಲೈಯು ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದ ಬರೆಯಲಾಗಿತ್ತು . , ಕುದುರೆಯನ್ನುಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ . ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು ” ಬೇಡಬೇಡ ಅರಸುಗಳ ಕುದುರೆಯನ್ನು ಬಿಡು , ನಮ್ಮನ್ನು ಹೊಡೆಯವರು ” ಎಂದು ಹೇಳಿದರು . ಆಗ ಲವನು ನಗುತ “ ಬ್ರಾಹ್ಮಣರ ಮಕ್ಕಳು ಹೆದರಿದರೆ , ಜಾನಕಿಯ ಮಗನು ಇದಕ್ಕೆ ಹೆದರುವನೇ , ನೀವು ಹೋಗಿ ” ಎಂದು ಶೌರ್ಯದಿಂದ ಹೇಳಿದನು .

2. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ .

ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು .

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ಲವನ ನಡೆವಳಿಕೆ ಮೆಚ್ಚುಗೆಯಾಯಿತೇ ? ಏಕೆ ?

ಲವನು ಬಾಲಕನಾಗಿದ್ದರು ಸ್ವಾಭಿಮಾನಿ , ಅವನ ಮಾತುಗಳು ವೀರೋಚಿತ , ಆತನ ಮಾತೃಪ್ರೇಮ ಅನನ್ಯ , ವಾಲ್ಮೀಕಿ ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಅವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ . ಇಂತಹ ಸಮಯದಲ್ಲಿ ರಾಮನ ಯಜ್ಞಾಶ್ವವ ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ . ಇದನ್ನುಕಂಡು ಅವನು ಕುದುರೆಯ ಬಳಿಬಂದು , ಕುದುರೆಯ ನೆತ್ತಿಯ ಮೇಲೆ ಮೆರೆಯುತ್ತಿದ್ದ ಪಟ್ಟದ ಲಿಖಿತವನ್ನು ಓದಿ , ರಾಮನೊಬ್ಬನೇ ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ , ಇವನ ಗರ್ವವನ್ನು ಬಿಡಿಸುತ್ತೇನೆ , ಇಲ್ಲದಿದ್ದಲ್ಲಿ ನನ್ನತಾಯಿಯನ್ನು ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿ , ತನ್ನ ತೋಳಲವನ್ನು ತೋರಿಸಿಬಿಡುತ್ತೇನೆ ಎಂದು ಕುದುರೆಯನ್ನು ಕಟ್ಟಿಹಾಕುತ್ತಾನೆ . ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ , “ ಬ್ರಾಹ್ಮಣರ ಮಕ್ಕಳು ಯುದ್ಧಕ್ಕೆ ಹೆದರಿದರೆ : ಜಾನಕಿಯ ಸುತನು ಹೆದರುವನೇ ? ” ಎಂದು ವೀರನಂತೆ ಬಿಲ್ಲಿನ ಹೆದೆಯೇರಿಸಿ ಠೇಂಕಾರವನ್ನು ಮಾಡಿ ನಿಂತನು . ಇಂತಹ ವೀರ ಬಾಲಕನ ಶೌರ್ಯ , ತಾಯಿಯ ಮೇಲಿನ ಮಮತೆ , ದುರಹಂಕಾರವನ್ನು ಮೆಟ್ಟುವ ಸಾಹಸ . ಎಂತಹವರಿಗೂ ಮೆಚ್ಚುಗೆಯಾಗುತ್ತದೆ .

2. ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು ?

” ಅಂದು ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜಾರವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು . ಆಗ ಇದನ್ನು ಕಂಡ ಅವನು ಯಾವ ಕಡೆಯ ಕುದುರೆಯು , ಹೊಕ್ಕು , ಹೂತೋಟವನ್ನು ನುಗ್ಗುನುರಿಯಾಗುವಂತೆ ತುಳಿದುದು . ” ಎಂದು ಕುದುರೆ ಯಕಡೆಗೆ ನಡೆದು ಬಂದು ನೋಡಿದನು . ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ ಭೂಮಂಡಲದಲ್ಲಿ ಕೌಸಲ್ಯಯ ಮಗನಾದ ಉಮನು ಒಬ್ಬನೇ ವೀರನು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದು ಬರೆಯಲಾಗಿತ್ತು . ಇದನ್ನು ಓದಿದ ಅವನು ಕೋಪಗೊಂಡು ಆಹಂಕಾರವನ್ನು ಬಿಡಿಸದಿದ್ದರೆ ತನ್ನ ತಾಯಿಯನ್ನು ಎಲ್ಲ ಜನರೂ ಬಂಜೆ ಎನ್ನದಿರುವರೇ , ತನಗೆ ರುವ ತೋಳುಗಳು ಇವು ಏತಕೆ ? ” ಎಂದು ಪ್ರತಿಜ್ಞೆಯನ್ನು ಕೈಗೊಂಡು , ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು .

ಈ ] ಸಂದರ್ಭ ಸಹಿತ ಸ್ವಾರಸ್ಯ ತಿಳಿಸಿ .

1. “ ಅರಸುಗಳ ವಾಜಿಯಂ ಬಿಡು ”

‘ ವೀರಲವ ‘ ಎಂಬ ಸಂದರ್ಭ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ ಜೈಮಿನಿ ಭಾರತ ‘ ಮಹಾಕಾವ್ಯದಿಂದ ಆಯ್ದ ‘ ವೀರಲವ ‘ ಎಂಬ ಸಂದರ್ಭ : – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ ಸಂದರ್ಭದಲ್ಲಿ ಮುನಿಪುತ್ರರು ಈ ಮಾತನ್ನು ಹೇಳುತ್ತಾರೆ . ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ ಅದರಿಂದ ಮುಂದೆ ತೊಂದರೆ ಉಂಟಾಗುತ್ತದೆ ಎಂದು ಮುನಿಪುತ್ತರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ .

2. “ ಜಾನಕಿಯ ಮಗನಿದಕೆ ಬೆದರುವನೆ ”

ಸಂದರ್ಭ : ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಅವನು ಹೇಳುತ್ತಾನೆ .

ಸ್ವಾರಸ್ಯ : : – ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

3. ” ರಧ್ವಹನ ಸೊಲ್ಗಳಿ ನಮಿಸಲ್ “

ಆಯ್ಕೆ : ಈ ಪದ್ಯಭಾಗದಿಂದ ಆರಿಸಲಾಗಿದೆ . ಸಂದರ್ಭ : – ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ . ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ .

4. “ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ “

ಸಂದರ್ಭ : – ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯ ಬರಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ , ತನ್ನ ವೀರತ್ವವನ್ನು ಪ್ರದರ್ಶಿಸುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ .

ಭಾಷಾ ಚಟುವಟಿಕೆ 

೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ , 

೧. ಸೊಲ್ಗಳಿ      -ಸೊಲ್ಲನ್ನು + ಕೇಳಿ=ಕಿಯಾಸಮಾಸ

 ೨. ನಲ್ಲುದುರೆ  -ನಲ್ಲಿತು + ಕುದುರೆ=ಕರ್ಮಧಾರಯ ಸಮಾಸ

೩. ಬಿಲ್ಗೊಂಡು  -ಬಿಲ್ಲನ್ನು + ಕೊಂಡು=ಕ್ರಿಯಾಸಮಾಸ

೪. ಬಿಲ್ಲಿರುವನೇರಿಸಿ -ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ

 ೫. ಪೂದೋಟ -ಪೂವಿನ + ತೋಟ= ತತ್ಪುರುಷಸಮಾಸ 

 ೬. ಲಿಖಿತವನೋದಿ – ಲಿಖಿತವನ್ನು + ಓದ=ಕ್ರಿಯಾಸಮಾಸ

೭. ಯಜತುರುಗ  -ಯಜ್ಞದ + ತುರುಗ=ತತ್ಪುರುಷಸಮಾಸ 

 ೮. ಕದಳೆದುಮ  – ಕದಳಿಯ + ದುಮ = ತತ್ಪುರುಷಸಮಾಸ 

೯. ಅಭಿಪ     -ಅಬ್ಬಿಗೆ ( ಸಮುದ್ರಕ್ಕೆ ) ಪತಿ ( ಒಡೆಯ ) ಯಾರೋ ಆತ ( ವರುಣ ) = ಬಹುವೀಹಿಸಮಾಸ 

 ೨. ತತ್ಸಮ – ತದ್ಭವ ಬರೆಯಿರಿ.

 ೧. ವೀರ – ಬೀರ  ೨ , ಯಜ್ಞ – ಜನ್ನ  ,  ೩,ಬಂಜೆ – ವಂದ್ಯಾ ೪ , ಕುವರ – ಕುಮಾರ ೫. ಲೋಕ – ಲೋಗ

ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ. 

೧. ಚರಿಸುತಧ್ವರದ   -ಚರಿಸುತ   + ಅಡ್ವರದ  = ಲೋಪಸಂಧಿ

೨. ನಿಜಾಶ್ರಮ    – ನಿಜ    + ಆಶ್ರಮ   = ಸವರ್ಣದೀರ್ಘಸಂಧಿ

 ೩. ಲೇಖನವನೋದಿ  – ಲೇಖನವನು + ಓದಿ    = ಲೋಪಸಂಧಿ

೪. ತೆಗೆದುತ್ತರೀಯಮಂ    -ತೆಗೆದು  + ಉತ್ತರೀಯಮಂ  = ಲೋಪಸಂಧಿ

 ೫. ಬೇಡಬೇಡರಸುಗಳ    – ಬೇಡಬೇಡ + ಅರಸುಗಳ   = ಲೋಪಸಂಧಿ

 ೬ ನಿಂತಿರ್ದನ್   – ನಿಂತು + ಇರ್ದನ್  = ಲೋಪಸಂಧಿ 

೭ ಪೂದೋಟ     -ಪೂ – ತೋಟ  = ಆದೇಶಸಂಧಿ

೮. ಸೊಳ್ಳೇಳಿ     – ಸೊಲ್ಲು + ಕೇಳಿ   =ಆದೇಶಸಂಧಿ .

ವರ್ಧಕ ಷಟ್ಪದಿ ಲಕ್ಷಣಗಳು :

* ಆರು ಸಾಲುಗಳಿರುತ್ತವೆ

*೧ ,೩ ೪ ಮತ್ತು ೫ ನೇ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ

* ೩ ಮತ್ತು ೪ನೇ ಸಾಲುಗಳು ತಲಾ ೩೨ ಮಾತೃಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ .

* ಮೊದಲನೇ ಸಾಲಿನನ ಗಣವಿನ್ಯಾಸ

ಬಹು ಆಯ್ಕೆ ಪ್ರಶ್ನೆಗಳು 

 ೧. ‘ ರಗಳೆ ‘ ಪದದ ತದ್ಭವ ರೂಪವಿದೆ . 

ಎ ) ರಘಟಾ  ಬಿ )ರಗಳಾ  ಸಿ)ರಾಗಟ  ಸಿ)ರಂಗಗೀತೆ  

೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :

ಎ ) ಕಂದ  ಬಿ ) ಷಟ್ಟದಿ  ಸಿ ) ವೃತ್ತ ಡಿ ) ರಗಳೆ

೩. ವಾರ್ಧಕ ಷಟ್ನದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :

ಎ ) ೧೦೨   ಬಿ ) ೧೪೦ ಸಿ ) ೧೪೪ ಡಿ ) ೬೪ 

೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :

ಎ ) ಉತ್ಸಾಹ  ಬಿ ) ಲಲಿತ  ಸಿ ) ಸರಸಿ   ಡಿ ) ಮಂದಾನಿಲ

೫ . ವಾರ್ಧಕ ಷಟ್ನದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ ?

ಎ) ೩  ಬಿ) ೬ ಸಿ)೪  ಡಿ ) ೫

೬. * ನೆತ್ತಿಯೊಳ್ ” ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ .

ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೭.’ ಲಿಖಿತಮಂ ‘ ಇಲ್ಲಿರುವ ವಿಭಕ್ತಿ :

ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೮. ‘ ಕುವರಂ ‘ ಇಲ್ಲಿರುವ ಅಕ್ಷರಗಣ :

ಎ ) ಭ – ಗಣ ಬಿ ) ಸ-ಗಣ ಸಿ ) ಮ – ಗಣ ಡಿ)ತ -ಗಣ 

೯). ಉರ್ವಿಯೊಳ್ ? ಈ ಪದದಲ್ಲಿರುವ ಕಾರಕಾರ್ಥ .

ಎ)ಕರ್ಮಾರ್ಥ ಬಿ)ಸಂಪ್ರದಾನ ಸಿ) ಅಪಾದಾನ ಸಿ) ಅಧಿಕರಣ

೧೦. ‘ ಅಗಡು ‘ ಪದದ ಹೊಸಗನ್ನಡ ರೂಪವಾಗಿದೆ .

ಎ )ಅಡಗಿಕೋ ಬಿ)ಶೌರ್ಯ ಸಿ)ಕುದುರೆ ಡಿ)ಹಡಗು 

ಉತ್ತರ : ಎ ) ರಘಟಾ ಬಿ ) ರಗಳೆ  ಸಿ ) ೧೪೪  ಸಿ ) ಸರಸಿ   ಸಿ ) ೫  ಡಿ ) ಸಪ್ತಮಿ  ಬಿ ) ದ್ವಿತೀಯ   ಬಿ ) ಸ – ಗಣ   ಡಿ ) ಅಧಿಕರಣ   ಬಿ) . ಶೌರ್ಯ

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದಂತೆ ಪದ ಬರೆಯಿರಿ  

೧. ಭಾಮಿನಿ: ೦೦೨ : :ವರ್ಧಕ:____

೨. ವೃತ್ತಗಳು : ಅಕ್ಷರಗಣ   :ರಗಳೆ :_____

 ೩. ಸೊಲ್ಲೇಳಿ :ಕ್ರಿಯಾಸಮಾಸ :ಪೂದೋಟ____

೪. ಬಿಲ್ಲಿರುವನೇರಿಸಿ:ಕ್ರಿಯಾಸಮಾಸ : ನಲ್ಲುದುರೆ______

 ೫. ನೃಪ:ರಾಜ :ಅಭಿಪ  :_______

 ೬. ಸೊಳ್ಳೇಳಿ :ಸೊಲ್ಲನ್ನು + ಕೇಳಿ :_______

೭. ವೀರ ; ಬೀರ :: ಬಂಜೆ :_________

೮. ಗಳ :ಕೊರಳು:: ವಾಜಿ :______

ಉತ್ತರಗಳು :  ೧ . ೧೪೪ ೨ .ಮಾತ್ರಾಗಣ  ೩.ತತ್ಪುರುಷಸಮಾಸ  ೪.ಕರ್ಮಧಾರಯ 

 ೫. ವರುಣ  ೬.ನಲ್ಲಿ ತ್ತು +ಕುದುರೆ  ೭.ವಂದ್ಯಾ  ೮.ಕುದುರೆ 

10th Class Veeralava Kannada Poem Notes Question Answer Pdf Download

ಇತರೆ ವಿಷಯಗಳು:

ಛಲಮನೆ ಮೆರೆವೆಂ ಕನ್ನಡ ನೋಟ್ಸ್

ಹಸುರು ಕನ್ನಡ ನೋಟ್ಸ್

Leave your vote

-7 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.