8ನೇ ತರಗತಿ ಆಟೋರಿಕ್ಷಾದ ರಸಪ್ರಸಂಗಗಳು ಕನ್ನಡ ನೋಟ್ಸ್ | 8th Standard Kannada Auto Rikshada Rasaprasangagalu Notes

8ನೇ ತರಗತಿ ಆಟೋರಿಕ್ಷಾದ ರಸಪ್ರಸಂಗಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard Auto Rikshada Rasaprasangagalu Kannada Notes Question Answer Pdf Download

ತರಗತಿ : 8ನೇ ತರಗತಿ

ಪಾಠದ ಹೆಸರು : ಆಟೋರಿಕ್ಷಾದ ರಸಪ್ರಸಂಗಗಳು 

ಕೃತಿಕಾರರ ಹೆಸರು : ಎಚ್. ನರಸಿಂಹಯ್ಯ

Auto Rikshada Rasaprasangagalu Notes Question Answer

ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

೧. ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ ಏನೆಂದು ಹೇಳಿದ ?

ಸಿಡುಕಿನಿಂದ ಆಟೋ ಸ್ಪಾರ್ಟ್ ಮಾಡಿದ ಆಟೋ ಚಾಲಕ “ ರೀ ಸ್ವಾಮಿ , ಸುಮ್ಮನೆ ಕುಳಿತುಕೊಳ್ಳಿ . ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು . ಹತ್ತುವುದಕ್ಕಿಂತ ಮುಂಚೇನೆ ಅಪಶಕುನ ” ಎಂದು ಹೇಳಿದನು .

೨. ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲವೇಕೆ ?

ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲ . ಏಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ , ಹಸು , ಜನ ಅಡ್ಡ ಬರಲಿಲ್ಲ . ಜೊತೆಗೆ ವಿಮಾನವನ್ನು ಓವರ್‌ಟೇಕ್ ಮಾಡಿದ ಪ್ರಸಂಗವೂ ಇಲ್ಲ “

೩. ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯವೇನು ?

‘ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವುದೇ ಒಂದು ಪ್ರಯಾಸದ ಕೆಲಸ , ಬಸ್‌ಗಳ ಟೈಮ್ ಅನಿಶ್ಚಿತ ಹಾಗೂ ತುಂಬಾ ಕಾಯಬೇಕಾಗಿದ್ದು ಆ ನೂಕುನುಗ್ಗಲಲ್ಲಿ ಬಸ್ ಸಂಚಾರ ಬಹಳ ದುಸ್ತರ . ‘ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .

೪. ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಯಾವುದು ಲೇಸು ?

ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಭಗವಂತನ ಪಾದಾರವಿಂದವನ್ನು ಸೇರುವುದೇ ಲೇಸು .

೫. ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನಾರು ?

ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನು ಬಾಲಯೋಗಿ ,

೬. ಆಟೋ ಚಾಲಕರಲ್ಲಿಯೂ ಮಾನವೀಯತೆಯನ್ನರಿತ ಪ್ರಸಂಗದ ಬಗ್ಗೆ ತಿಳಿಸಿ ,

ಒಂದು ಸಂಜೆ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ಹೋಗುವುದು ರಾತ್ರಿ ೧೦ ಘಂಟೆಯಾಯಿತು . ಕೆಲವು ಉಪಾಧ್ಯಾಯರು “ ಇಷ್ಟು ಹೊತ್ತಿನಲ್ಲಿ ಹಾಸ್ಟೆಲ್‌ನಲ್ಲಿ ಊಟ ಇರುವುದಿಲ್ಲ ; ಆದುದರಿಂದ ನಮ್ಮ ಮನೆಗೆ ಬಂದು ಊಟಮಾಡಿಕೊಂಡು ಹೋಗಿ ” ಎಂದು ಅವರನ್ನು ಒತ್ತಾಯಪಡಿಸುತ್ತಿದ್ದರು . “ ಪರವಾಗಿಲ್ಲ . ಒಂದು ಹೊತ್ತು ಊಟ ಇಲ್ಲದೇ ಇದ್ದರೆ ಚಿಂತೆ ಇಲ್ಲ . ತುಂಬಾ ಹೊತ್ತಾಗಿದೆ ” ಎಂದು ಲೇಖಕರು ಹೇಳಿದರು . ಇದನ್ನೆಲ್ಲಾ ಕೇಳುತ್ತಿದ್ದ ಆಟೋ ಚಾಲಕರು ‘ ಯಾಕೆ ಸಾರ್ , ನಿಮಗೆ ಮನೆ ಇಲ್ಲವೇ ? ‘ ಎಂದು ಕೇಳಿದರು . “ ಇಲ್ಲಪ್ಪ , ಹಾಸ್ಟೆಲಿನಲ್ಲಿದ್ದೇನೆ ” ಅಂದರು . ಆಗ ಅವನು “ ಇಷ್ಟು ಹೊತ್ತಿನಲ್ಲಿ ಉಪವಾಸ ಮಲಗಿಕೊಳ್ಳಬಾರದು ಸಾರ್ , ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಸರ್ಕಲ್‌ಗೆ ಹೋಗೋಣ ಬನ್ನಿ . ಅಲ್ಲಿ ಇಡ್ಲಿ ಮಾರುತ್ತಾರೆ . ನೀವು ಇಡ್ಲಿ ತಿನ್ನುವ ತನಕ ಕಾಯುತ್ತೇನೆ ” ಎಂದು ತುಂಬಾ ಆತ್ಮೀಯವಾಗಿ ವಿನಂತಿಸಿಕೊಂಡನು . ಲೇಖಕರು ಅವನಿಗೆ ವಂದಿಸಿದರು .

8th Standard Auto Rikshada Rasaprasangagalu Kannada Notes Question Answer Pdf

ಇತರೆ ಪಾಠಗಳು :

ಕಟ್ಟುವೆವು ನಾವು ಕನ್ನಡ ನೋಟ್ಸ್

ಆಹುತಿ ಕನ್ನಡ ನೋಟ್ಸ್

Leave your vote

13 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.