8ನೇ ತರಗತಿ ರಾಮಧಾನ್ಯ ಚರಿತೆ ಕನ್ನಡ ನೋಟ್ಸ್ | 8th Standard Ramadhanya Charite Kannada Notes

8ನೇ ತರಗತಿ ರಾಮಧಾನ್ಯ ಚರಿತೆ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ, 8th Standard Ramadhanya Charite Kannada Notes Question Answer Pdf Download

ತರಗತಿ : 8ನೇ ತರಗತಿ

ಪದ್ಯದ ಹೆಸರು : ರಾಮಧಾನ್ಯ ಚರಿತೆ

ಕೃತಿಕಾರರ ಹೆಸರು : ರಾಮಧಾನ್ಯ ಚರಿತೆ

Table of Contents

ಕೃತಿಕಾರರ ಪರಿಚಯ :

ಕನಕದಾಸ :

ಇವರ ಮೊದಲ ಹೆಸರು ತಿಮ್ಮಪ್ಪನಾಯಕ ಇವರು ಕ್ರಿ.ಶ. ೧೫೦೮ ರಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು . ಇವರ ತಂದೆ ಬೀರಪ್ಪ ಹಾಗೂ ತಾಯಿ ಬಚ್ಚಮ್ಮ ಇವರ ಆರಾಧ್ಯ ದೈವ ಹಾಗೂ ಅಂಕಿತನಾಮ ಕಾಗಿನೆಲೆ ಆದಿಕೇಶವ ಇವರು ರಚಿಸಿರುವ ಕೃತಿಗಳು : ಹರಿಭಕ್ತಿಸಾರ , ರಾಮಧಾನ್ಯ ಚರಿತೆ , ಮೋಹನ ತರಂಗಿಣಿ , ನಳಚರಿತ್ರೆ , ಇವಲ್ಲದೆ ನೂರಾರು ಕೀರ್ತನೆಗಳು , ಉಗಾಭೋಗ , ಸುಳಾದಿಗಳು ಮತ್ತು ಮಂಡಿಗೆಗಳನ್ನು ರಚಿಸಿದ್ದಾರೆ . [ ಡಾ . ಸಾ.ಶಿ.ಮರುಳಯ್ಯ ಅವರು ಸಂಪಾದಿಸಿರುವ ಕನಕದಾಸರ ಕಾವ್ಯಭಾಗ -೧ ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ . ]

Ramadhanya Charite Kannada Notes Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ನರೆದಲೆಗ ಯಾರನ್ನು ಆದರಿಸಿ ಸಲಹುತ್ತದೆ ?

ಉತ್ತರ : ನರೆದಲೆಗ ಬರಗಾಲದಲ್ಲಿ ಆಹಾರವಿಲ್ಲದೆ ಸಾಯುವ ಪ್ರಾಣಿಗಳನ್ನು ಆದರಿಸಿ ಸಲಹುತ್ತದೆ .

2. ಹರಿಹರ ವಿರಂಚಿಗಳನ್ನು ಏತಕ್ಕಾಗಿ ಅಯೋಧ್ಯೆಗೆ ಕರೆಸಲಾಗುತ್ತದೆ ?

ಉತ್ತರ : ನರೆದಲೆಗ ( ರಾಗಿ ) ಮತ್ತು ಸ್ನೇಹಿ ( ಭತ್ತ ) ಇವುಗಳಲ್ಲಿ ಯಾರು ಶ್ರೇಷ್ಠ ಎಂಬ ವಿವಾದವನ್ನು ಬಗೆಹರಿಸಲು ಪರಿಪರ ವಿರಂಚಿಗಳನ್ನು ಅಯೋಧ್ಯೆಗೆ ಕರೆಸಲಾಗುತ್ತದೆ .

3. ದೇಶಕ್ಕೆ ಅತಿಶಯವಾದ ಧಾನ್ಯ ಯಾವುದು ?

ಉತ್ತರ : ದೇಶಕ್ಕೆ ಅತಿಶಯವಾದ ಧಾನ್ಯ ‘ ರಾಗಿ ‘

4. ವ್ರಿಹಿ ಯಾರ ಬಾಯಿಗೆ ತುತ್ತು ಎಂದು ಹೇಳಿದೆ ?

ಉತ್ತರ : ವ್ರಿಹಿ ಹಣದ ಬಾಯಿಗೆ ತುತ್ತು ಎಂದು ಹೇಳಿದೆ .

5 , ದಾಶರಥಿ ಎಂದರೆ ಯಾರು ?

ಉತ್ತರ : ದಾಶರಥಿ ಎಂದರೆ ಶ್ರೀರಾಮ .

6. ಸೆರೆಗೆ ಯಾರು ಯಾರನ್ನು ಹಾಕಲಾಗುತ್ತದೆ ?

ಉತ್ತರ : ಸೆರೆಗೆ ರಾಗಿ ಮತ್ತು ಭತ್ತಗಳನ್ನು ಹಾಕಲಾಗುತ್ತದೆ

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1 , ವ್ರಿಹಿಯನ್ನು ಯಾವಯಾವ ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ ?

ಉತ್ತರ : ವ್ರಿಹಿಯನ್ನು ಬ್ರಾಹ್ಮಣರ ಉಪನಯನದಲ್ಲಿ , ವ್ರತಾಚರಣೆಯಲ್ಲಿ , ಒಳ್ಳೆಯ ಭೋಜನದಲ್ಲಿ , ಶ್ರೇಷ್ಠವಾದ ಮಂತಾಕ್ಷತೆಯಲ್ಲಿ , ಶುಭ ಸಮಾರಂಭಗಳಲ್ಲಿ , ಆರತಿಗೆ ಹಿರಿಯರಲ್ಲಿ , ಯಜ್ಞಯಾಗಾದಿಗಳಲ್ಲಿ ( ಕ್ರತು ) , ಅರಮನೆಯಲ್ಲಿ ಹಾಗೂ ದೇವರಿಗೆ ಅತಿಶಯವಾದ ನೈವೇದ್ಯದಲ್ಲಿ ಬಳಸಲಾಗುತ್ತದೆ .

2. ನರೆದಲೆಗನು ವಿಹಿಯನ್ನು ಏನೆಂದು ಹೀಯಾಳಿಸಿತು ?

ಉತ್ತರ : ನರೆದಲೆಗನ್ನು ವಿಹಿಗನನ್ನು “ ನೀನು ಸತ್ಯಹೀನನಾಗಿರುವೆ , ಬಡವರನ್ನು ಕಣ್ಣೆತ್ತಿ ನೋಡುವುದಿಲ್ಲ . ಶ್ರೀಮಂತರನ್ನು ಮಾತ್ರ ಹಿಂಬಾಲಿಸಿ ಹೋಗುವ ಅಪೇಕ್ಷೆ ನಿನ್ನದು . ಹೆತ್ತ ಬಾನಂತಿಯರು ಹಾಗೂ ರೋಗಿಗಳಿಗೆ ನೀನು ಪತ್ಯವಾಗಿರುವೆ ಅಲ್ಲದೆ ಹೆಣದ ಬಾಯಿಗೆ ತುತ್ತಾಗುವೆ , ನಿನ್ನ ಜನ್ಮ ವ್ಯರ್ಥವಾದುದು . ” ಎಂದು ರಾಗಿ ಭತ್ತವನ್ನು ಹೀಯಾಳಿಸಿತು .

3. ಶ್ರೇಷ್ಠವೆಂದು ಹೇಳಲಾಗಿರುವ ಧಾನ್ಯಗಳಾವುವು ?

ಉತ್ತರ : ಕೆಲವರು ಗೋಧಿಯನ್ನು , ಸಾಮೆಯನ್ನು , ನವಣೆಯನ್ನು , ಕಂಬನ್ನು ಜೋಳವನ್ನು ಶ್ರೇಷ್ಠವೆಂದು ಹೇಳಿದರೆ , ಮತ್ತೆ ಕೆಲವರು ಭತ್ತವನ್ನೂ ಮತ್ತು ಹಲವರು ರಾಗಿಯನ್ನು ಶ್ರೇಷ್ಠವೆಂದು ಹೇಳಿದರು .

4. ಗೌತಮರು ನರೆದಲೆಗನೆ ಶ್ರೇಷ್ಠವೆನ್ನಲು ವಿಹಿಯು ಹೇಳಿದ್ದೇನು ?

ಉತ್ತರ : ಗೌತಮರು ನರೆದಲೆಗನೆ ಶ್ರೇಷ್ಠವೆನ್ನಲು ಹಿಯು ಗೌತಮ ಮುನಿಗೆ ಹೀಗೆ ಹೇಳುತ್ತದೆ : “ ಎಲ್ಲಾ ಧರ್ಮಗಳ ಸಾರ ನಿಮಗೆ ತಿಳಿದಿದೆ . ನಿಮಗೆ ಎಲ್ಲರ ಬಗ್ಗೆ ತಿಳಿದಿಲ್ಲವೇ ? ಹೀಗಿದ್ದೂ ಇಲ್ಲಿ ಈ ರೀತಿ ಕಡೆಗಣಿಸಿ ಮಾತನಾಡುವುದು ಸರಿಯೇ ? ಸಾಕು . ಅದು ಹಾಗಿರಲಿ , ಭತ್ತ ನಾನಿರುವಾಗ : ಗೋದಿ ಮೊದಲಾದ ಧಾನ್ಯಗಳೆಲ್ಲಾ ಇಲ್ಲಿರುವಾಗ ಇವರಲ್ಲಿ ರಾಗಿಯೇ ಶ್ರೀಮಂತ ( ಶ್ರೇಷ್ಟಬಲ್ಲಿದ ) ಎಂದು ಹೇಳುವುದು ಇದು ಯಾವ ನ್ಯಾಯ ? ” ಎಂದಿತು .

5. ಶ್ರೀರಾಮನು ಧಾನ್ಯಗಳ ವಿಚಾರದಲ್ಲಿ ಕೈಗೊಂಡ ತೀರ್ಮಾನವೇನು ?

ಉತ್ತರ : ಶ್ರೀರಾಮನು ಅಲ್ಲಿ ನೆರೆದಿದ್ದ ಧಾನ್ಯಗಳ ವಾದವಿವಾದಗಳನ್ನು ಗಮನಿಸಿದ ಮೇಲೆ ಹೀಗೆ ತೀರ್ಪು ನೀಡಿದನು , ‘ ಶ್ರೇಷ್ಟವಾದ ಧಾನ್ಯಗಳಲ್ಲಿ ವ್ರಿಹಿ ಮತ್ತು ನರೆದಲೆಗನೇ ಇರಲಿ , ಆರು ತಿಂಗಳು ಸೆರೆಯಲ್ಲಿ ಹಾಕಿದರೆ ; ಹಿರಿದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು . ಇನ್ನು ನಾವು ಆಯೋಧ್ಯಾ ಪಟ್ಟಣಕ್ಕೆ ಹೋಗುತ್ತೇವೆ . ಆ ನಂತರ ನಿಮ್ಮ ಸ್ಥಿತಿಯನ್ನು ಗಮನಿಸಿ ಕರೆಸಿಕೊಳ್ಳುತ್ತೇವೆ . ” ಎಂದು ಹೇಳಿ ಆಯೋಧ್ಯಾ ಪಟ್ಟಣಕ್ಕೆ ಹೋದನು .

ಇ ] ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .

1. ಶ್ರೀರಾಮನು ನರೆದಲೆಗ ಹಾಗೂ ವ್ರಿಹಿಯನ್ನು ಸೆರಮನೆಗೆ ಹಾಕಲು ಕಾರಣವೇನು ?

ಉತ್ತರ : ಶ್ರೀರಾಮನು ವನವಾಸದಿಂದ ಹಿಂದಿರುಗಿ ಬರುವಾಗ ಗೌತಮ ಮುನಿಗಳ ಆಶ್ರಮದಲ್ಲಿ ಭೋಜನದ ನಂತರ ವಿವಿಧ ಭಕ್ಷ್ಯಗಳ ರುಚಿಯ ಬಗ್ಗೆ ಚರ್ಚೆ ನಡೆಯುತ್ತದೆ . ಆಗ ಹನುಮಂತನು ಧಾನ್ಯದ ಸತ್ವವನ್ನು ನೋಡಿ ಶ್ರೇಷ್ಠತೆಯನ್ನು ನಿರ್ಧರಿಸಬೇಕೆನ್ನುತ್ತಾನೆ . ಆಗ ಗೌತಮ ಮುನಿಗಳು ಹಲವು ಧಾನ್ಯಗಳನ್ನು ತರಿಸುತ್ತಾರೆ .ಆಗ ಚರ್ಚೆ ಆರಂಭವಾಗುತ್ತದೆ . ಕೆಲವರು ಗೋಧಿಯನ್ನು ಕೆಲವರು ಸಾಮೆಯನ್ನು , ಕೆಲವರು ನವಣೆಯನ್ನು ಕೆಲವರು ಕಂಬನ್ನು , ಕೆಲವರು ಜೋಳವನ್ನು ಶ್ರೇಷ್ಠವೆಂದು ಹೇಳಿದರೆ , ಮತ್ತೆ ಕೆಲವರು ಭತ್ತವನ್ನೂ ಮತ್ತು ಕೆಲವರು ರಾಗಿಯನ್ನು ಶ್ರೇಷ್ಠವೆಂದು ಹೇಳುತ್ತಾರೆ . ಆಗ ಗೌತಮರು ನರೆದಲೆಗನೇ ಶ್ರೇಷ್ಠ ಎನ್ನುತ್ತಾರೆ . ಆದರೆ ವ್ರಿಹಿಗನು ( ಭತ್ತ ) ಆ ಮಾತನ್ನು ಒಪ್ಪದೆ ತಾನೇ ಶ್ರೇಷ್ಠವೆಂದೂ ಬ್ರಾಹ್ಮಣರ ಉಪನಯನದಲ್ಲಿ , ವ್ರತಾಚರಣೆಯಲ್ಲಿ , ಭೋಜನದಲ್ಲಿ , ಮಂತಾಕ್ಷತೆಯಲ್ಲಿ , ಶುಭ ಸಮಾರಂಭಗಳಲ್ಲಿ ಮುಂತಾದ ಕಾರ್ಯಗಳಲ್ಲಿ ತನ್ನನ್ನು ಬಳಸಲಾಗುತ್ತದೆ . ಆದ್ದರಿಂದ ತಾನೇ ಶ್ರೇಷ್ಠ ಎಂದು ಹೇಳುತ್ತದೆ . ಆಗ ನರೆದಲೆಗೆ ” ಈ ಜಗತ್ತಿಗೆಲ್ಲ ತಿಳಿದಿರುವಂತೆ ; ಮಳೆ ಹೋಗಿ , ಬೆಳೆ ಇಲ್ಲದಂತಾಗಿ , ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ , ಕಾಪಾಡುತ್ತೇನೆ , ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗ ಎಲ್ಲಿರುವುದೋ ” ಎಂದು ಹೇಳುತ್ತದೆ . ಹೀಗೆ ಅವರಿಬ್ಬರ ನಡುವೆ ತೀವ್ರ ವಾದ – ವಿವಾದ ನಡೆಯುತ್ತದೆ . ಅವರ ವಾದವನ್ನು ನಿಲ್ಲಿಸಲು ಸಾಧ್ಯವಾಗದಿದ್ದಾಗ ಶ್ರೀರಾಮನು “ ಆರು ತಿಂಗಳು ಇವರಿಬ್ಬರನ್ನು ಸೆರೆಯಲ್ಲಿ ಹಾಕಿದರೆ , ಒಂದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು . ” ಎಂದು ಹೇಳಿ ಅವರನ್ನು ಸೆರೆಗೆ ಹಾರುತ್ತಾನೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ವಿಲಯಕಾಲದೊಳನ್ನವಿಲ್ಲದೆ ಆಳಿದ ಪ್ರಾಣಿಗಳಾಧರಿಸಿ ಸಲಯುವೆ ”

ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ವಿಹಿಗನು ನರೆದಲೆಗಳನ್ನು ಹೀಯಾಳಿಸಿದಾಗ ನರೆದಲೆಗಳು ವಿಹಿಯನ್ನು ಕುರಿತು ಈ ಮಾತನ್ನು ಹೇಳುತ್ತದೆ . ಈ ಜಗತ್ತಿಗೆಲ್ಲ ತಿಳಿದಿರುವಂತೆ : ಮಳೆ ಹೋಗಿ , ಬೆಳೆ ಇಲ್ಲದಂತಾಗಿ , ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ ಕಾಪಾಡುತ್ತೇನೆ . ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗೆ ಎಲ್ಲಿರುವುದೋ ” ಎಂದು ಈ ಸಂದರ್ಭದಲ್ಲಿ ಹೇಳುತ್ತದೆ .

ಸ್ವಾರಸ್ಯ : ಬರಗಾಲದಲ್ಲಿ ಎಲ್ಲರನ್ನು ಸಂರಕ್ಷಿಸುವ ರಾಗಿಯ ಮಹತ್ವ ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .

2. “ ಇವರಿರಲಿ ಸೆರೆಯೊಳಗಾರು ತಿಂಗಳು ”

ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ಶ್ರೀರಾಮನು ವಿಹಿಗೆ ಮತ್ತು ನರೆದಲೆಗನ ವಿವಾದವನ್ನು ಬಗೆಹರಿಸುವ ಬಗ್ಗೆ ಸಭೆಯನ್ನು ಕುರಿತು ಈ ಮಾತನ್ನು ಹೇಳುತ್ತಾನೆ . ರಾಗಿ ಮತ್ತು ಭತ್ತ ಇವೆರಡರ ವಾದವಿವಾದಗಳನ್ನು ಆಲಿಸಿದ ರಾಮನು ಅವರಿಬ್ಬರ ಸತ್ಯ ತಿಳಿಯಬೇಕಾದರೆ ಆರು ತಿಂಗಳು ಸೆಲೆಗೆ ಹಾಕಬೇಕೆಂದು ಈ ಸಂದರ್ಭದಲ್ಲಿ ತೀರ್ಮಾನಿಸುತ್ತಾನೆ .

ಸ್ವಾರಸ್ಯ : ರಾಗಿ ಮತ್ತು ಭತ್ತ ಇವೆರಡರಲ್ಲಿ ರಾಗಿಯೇ ಶ್ರೇಷ್ಠವೆಂದು ತಿಳಿದಿದ್ದರೂ ಅದನ್ನು ನಿರೂಪಿಸಲು ರಾಮನು ನಸುನಗುತ್ತಾ ಅವುಗಳ ಸತ್ವ ಪರೀಕ್ಷೆಗೆ ಸರೆವಾಸ ವಿಧಿಸಿದ್ದು ಸ್ವಾರಸ್ಯಕರವಾಗಿದೆ .

3. ” ನಮ್ಮಯ ದೇಶಕತಿಶಯ ನರೆದಲೆಗ

ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ಗೌತಮ ಮುನಿಗಳು ಶ್ರೀರಾಮನಿಗೆ ಹೇಳುತ್ತಾರೆ . “ ನಮ್ಮ ದೇಶದಲ್ಲಿ ಶ್ರೇಷ್ಠವೆಂದರೆ ರಾಗಿಯೇ ಸರಿ . ಇವನು ಶಕ್ತಿ ( ಸತ್ವ ) ಹೊಂದಿರುವವನು . ಉಳಿದ ಧಾನ್ಯಗಳೇಕೆ ? ” ಎಂದು ಈ ಸಂದರ್ಭದಲ್ಲಿ ಹೇಳುತ್ತಾರೆ .

ಸ್ವಾರಸ್ಯ : ಸತ್ವಯುತವಾದದ್ದು ರಾಗಿ ಹಾಗೂ ರಾಗಿಯನ್ನೇ ಪ್ರಧಾನ ಆಹಾರವಾಗಿ ಬಳಸುವ ಶ್ರಮಿಕವರ್ಗ ಎಂಬುದನ್ನು ಇಲ್ಲಿ ಕನಕದಾಸರು ಸ್ವಾರಸ್ಯಪೂರ್ಣವಾಗಿ ಪ್ರತಿಪಾದಿಸಿದ್ದಾರೆ .

4. “ ಕುಲಹೀನ ನೀನು ಪ್ರತಿಷ್ಟ ಸುಡು ಮತಿಹೀನ ನೀನು “

ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ವಿಹಿಗನು ನರೆದಲೆಗನಿಗೆ ಹೇಳುತ್ತಾನೆ . ಗೌತಮರು ರಾಗಿ ( ನರೆದಲೆಗ ) ಶ್ರೇಷ್ಠ ಎಂಬ ಮಾತನ್ನು ಕೇಳಿ ಕೋಪಗೊಂಡ ಹಿಗ ನರೆದಲೆಗನಿಗೆ “ ಭಗವಂತನೇ ನಮ್ಮಿಬ್ಬರಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂಬುದನ್ನು ಬಲ್ಲನು , ಜಾನಕಿಯ ಪತಿಯಾದ ಶ್ರೀ ರಾಮನ ಸನಿಹದಲ್ಲಿ ನೀನು ಕುಲಹೀನ , ಅಹಂಕಾರಿ , ಬುದ್ಧಿಗೇಡಿ ” ಎಂದು ಈ ಸಂದರ್ಭದಲ್ಲಿ ಹೀಯಾಳಿಸುತ್ತದೆ .

ಸ್ವಾರಸ್ಯ : ಕೆಳವರ್ಗದ ಮೇಲೆ ಮೇಲ್ವರ್ಗದ ಶೋಷಣೆ ಈ ಮಾತಿನಲ್ಲಿ ವ್ಯಕ್ತವಾಗಿರುವುದು ಸ್ವಾರಸ್ಯವಾಗಿದೆ .

ಉ. ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಧಿಸಿದ ಪದ ಬರೆಯಿರಿ.

. ಪುರಂದರದಾಸರು : ಪುರಂದರವಿಠಲ : : ಕನಕದಾಸರು : ___________

. ವ್ರಿಹಿ : ಭತ್ತ : : ನರೆದಲಗ : : ___________

. ಬಾಣಂತಿಯರಿಗೆ : ಪಥ್ಯ : : ಹೆಣದ ಬಾಯಿಗೆ : __________

. ಕ್ಷಿತಿ : ಭೂಮಿ : : ವಿರಂಚಿ : ____________

. ಸೆರೆಯೊಳಗೆ : ಆಗಮಸಂಧಿ : : ತಾನೆಲ್ಲಿ : __________

ಸರಿ ಉತ್ತರಗಳು.

೧. ಕಾಗಿನೆಲೆ ಆದಿಕೇಶವ

೨. ರಾಗಿ

೩. ತುತ್ತು 

೪. ಬ್ರಹ್ಮ

೫. ಲೋಪ ಸಂಧಿ

Ramadhanya Charite Kannada Notes Question Answer Pdf

ಇತರೆ ಪದ್ಯಗಳು :

ಜೀವನ ದರ್ಶನ ಕನ್ನಡ ನೋಟ್ಸ್

ಗೆಳೆತನ ಪದ್ಯ ಕನ್ನಡ ನೋಟ್ಸ್

Leave your vote

29 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.