9ನೇ ತರಗತಿ ಕನ್ನಡ ಸಿರಿಯನಿನ್ನೇನ ಬಣ್ಣಿಪೆನು ನೋಟ್ಸ್ | 9th Standard Siriyaninnena Bannipenu Kannada Poem Notes 

9ನೇ ತರಗತಿ ಕನ್ನಡ ಸಿರಿಯನಿನ್ನೇನ ಬಣ್ಣಿಪೆನು ನೋಟ್ಸ್, 9th Standard Siriyaninnena Bannipenu Kannada Notes Question Answer, Siriyaninnena Bannipenu Kannada Notes Pdf Download

ತರಗತಿ : 9ನೇ ತರಗತಿ

ಪದ್ಯದ ಹೆಸರು : ಸಿರಿಯನಿನ್ನೇನ ಬಣ್ಣಿಪೆನು

ಕೃತಿಕಾರರ ಹೆಸರು : ರತ್ನಾಕರವರ್ಣಿ

ಕೃತಿಕಾರರ ಪರಿಚಯ :

ರತ್ನಾಕರವರ್ಣಿ

* ರತ್ನಾಕರವರ್ಣಿಯ ಕಾಲ ಸುಮಾರು ಕ್ರಿಸ್ತ ಶಕ ೧೫೬೦. ಈತನ ಸ್ಥಳ ದಕ್ಷಿಣಕನ್ನಡ ಜಿಲ್ಲೆ ಮೂಡುಬಿದರೆ , ಕನ್ನಡ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ಇವನು ಸಾಂಗತ್ಯದಲ್ಲಿ ‘ ಭರತೇಶ ವೈಭವ ‘ ಎಂಬ ಬೃಹತ್ ಕಾವ್ಯವನ್ನು ರಚಿಸಿದ್ದಾನೆ . ಇವನು ತಾಳಪ್ರದೇಶದ ಭೈರರಸ ಒಡೆಯರ ಆಸ್ಥಾನದಲ್ಲಿ ‘ ಶೃಂಗಾರಕವಿ ‘ ಎಂದು ಹೆಸರಾಗಿದ್ದನು .

* ಈತನ ಪ್ರಮುಖ ಕೃತಿಗಳೆಂದರೆ : ಭರತೇಶವೈಭವ , ಅಪರಾಜಿತೇಶ್ವರ ಶತಕ , ತ್ರಿಲೋಕಶತಕ , ರತ್ನಾಕರಾಧೀಶ್ವರಶತಕ

* ಇವಲ್ಲದೆ ಸುಮಾರು ಎರಡುಸಾವಿರ ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದು , ಅವು ಅಧ್ಯಾತ್ಮ ಗೀತಗಳೆಂದು ಪ್ರಸಿದ್ಧವಾಗಿವೆ .

Siriyaninnena Bannipenu Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?

ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವರ ಪೂಜೆಮಾಡಿ ಓಲಗಕ್ಕೆ ಬರುತ್ತಾನೆ .

2. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು ?

ಉತ್ತರ : ದೇವೇಂದ್ರನು ರತ್ನಪುಷ್ಪಕದಲ್ಲಿ ಶೋಭಿಸುವಂತೆ ಭರತ ಚಕ್ರವರ್ತಿಯು ಆಸ್ಥಾನದಲ್ಲಿ ಕಾಂತಿಯಿಂದ ಶೋಭಿಸಿದನು .

3. ಭರತೇಶವೈಭವ ಕಾವ್ಯದ ಕರ್ತೃ ಯಾರು ?

ಉತ್ತರ : ಭರತೇಶವೈಭವ ಕಾವ್ಯದ ಕರ್ತೃ ರತ್ನಾಕರವರ್ಣಿ

4. ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು ?

ಉತ್ತರ : ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು : ಸ್ವರ್ಗ , ಮರ್ತ್ಯ ಮತ್ತು ಪಾತಾಳ

5. ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು ?

ಉತ್ತರ : ತುಂಬಿದ ಸಭೆಯು ಭರತ ಚಕ್ರವರ್ತಿಯನ್ನು ನೋಡುವುದಕ್ಕಾಗಿ ಮೈಮರೆತು ಕಾತುರರಾಗಿದ್ದರು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ .

ಉತ್ತರ : ಭರತಚಕ್ರವರ್ತಿಯು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿದ್ದ ಆಸ್ಥಾನ ಭವನದಲ್ಲಿ , ಸ್ವರ್ಗ ಲೋಕದಲ್ಲಿ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಭರತ ಚಕ್ರವರ್ತಿಯು ಕಾಂತಿಯಿಂದ ಶೋಭಿಸಿದನು . ಅಲ್ಲದೆ ಚಾಮರಗಳ ಸಾಲಿನಲ್ಲಿ ಭರತ ಚಕ್ರವರ್ತಿಯು ‘ ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ ‘ ಎಂಬಂತೆ ಕಂಗೊಳಿಸಿದನು .

2. ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?

ಉತ್ತರ : ಭರತ ಚಕ್ರವರ್ತಿಯು “ ಗುರುವೇ , ಧ್ಯಾನಮಾಡುವುದಕ್ಕೆ ನನಗೆ ಬೇಸರವಾದಾಗ ನಾನು ನಿನ್ನನ್ನು ಮೊದಲು ಮಾಡಿಕೊಂಡು ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ . ನನ್ನೊಡೆಯನೇ ಅದು ನಿನ್ನಾಜ್ಞೆ ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ .

3. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು ?

ಉತ್ತರ : ಕವಿ ರತ್ನಾಕರವರ್ಣಿಯು ತಾನು ಬರೆಯುವ ಕಥೆಯನ್ನು ಆಹಾ ಬಹಳ ಚೆನ್ನಾಗಿದೆ ‘ ಎಂದು ಕನ್ನಡಿಗರು , ‘ ರಯ್ಯಾ ಮಂಚದಿ ‘ ( ಬಹಳ ಒಳ್ಳೆಯದು ) ಎಂದು ತೆಲುಗರು , ‘ ಎಂಚ ಪೊರ್ಲಾಂಡ್ ‘ ( ಬಹಳ ಚಂದವಾಯಿತು ) ಎಂದು ತುಳುವರು ಅತ್ಯಾಸಕ್ತಿಯಿಂದ ಕೇಳಿ ಹೊಗಳಬೇಕು ಎಂದು ಬಯಸಿದ್ದಾನೆ .

ಇ ] ಕೊಟ್ಟಿರುವ ಪ್ರಶ್ನೆಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .

1. ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ .

ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯದ ಸಮಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ , ಆಸ್ಥಾನಕ್ಕೆ ಬಂದು ನಡೆಸಿದ ಒಡೋಲಗ ಬಹಳ ವೈಭವಯುತವಾಗಿತ್ತು . ಭರತಚಕ್ರವರ್ತಿಯ ಆಸ್ಥಾನ ಭವನವು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿತ್ತು . ಸ್ವರ್ಗ ಲೋಕದಲ್ಲಿ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಕಾಂತಿಯಿಂದ ಶೋಭಿಸಿದನು . ‘ ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸುರ್ಯನೋ ಎಂಬಂತೆ ‘ ವಿಧವಿಧವಾಗಿ ಪ್ರಕಾಶಿಸುತ್ತಿರುವ ಉದ್ದವಾದ ಚಾಮರಗಳ ಸಾಲಿನ ಹಿಂದೆ ಅವನು ಸಭಿಕರಿಗೆ ಕಾಣುತ್ತಿದ್ದನು . ಆಸ್ಥಾನದಲ್ಲಿ ನೆರೆದಿದ್ದ ಸಭಿಕರೆಲ್ಲ ‘ ತಾವರೆಯು ಸೂರ್ಯನನ್ನು ನೋಡುವಂತೆ , ನೀಲಿ ತಾವರೆ ( ನೈದಿಲೆ ) ಯು ಚಂದ್ರನನ್ನು ನೋಡುವಂತೆ ಅವನನ್ನು ನೋಡಲು ಕಾತುರದಿಂದ ಮೈಮರೆತು ಕಾಯುತ್ತಿದ್ದರು .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಚಂದಿರನೋ ಭಾಸ್ಕರನೋಯೆಂಬಂತೆ ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ರತ್ನಾಕರವರ್ಣಿಯ ‘ ಭರತೇಶ ವೈಭವ ‘ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಸಿರಿಯನಿನ್ನೇನ ಬಣ್ಣಿಪೆನು ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಭರತ ಚಕ್ರವರ್ತಿಯು ಆಸ್ಥಾನದಲ್ಲಿ ಕಾಂತಿಯಿಂದ ಕಂಗೊಳಿಸುತ್ತಿದ್ದ ದೃಶ್ಯವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಮಾತನ್ನು ಹೇಳಿದ್ದಾನೆ . ಚಾಮರಗಳ ಸಾಲಿನ ಹಿಂದೆ ಸಿಂಹಾಸನದಲ್ಲಿ ಕುಳಿತಿದ್ದ ಭರತ ಚಕ್ರವರ್ತಿಯು ‘ ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ ‘ ಎಂಬಂತೆ ಕಂಗೊಳಿಸಿದನು . ಸ್ವಾರಸ್ಯ : ಬಿಳಿ ಬಣ್ಣದ ಚಾಮರಗಳನ್ನು ಮೋಡವಾಗಿಯೂ ಭರತೇಶನನ್ನು ಸೂರ್ಯ – ಚಂದ್ರರಾಗಿಯೂ ಕಲ್ಪಿಸಿರುವುದು ಸ್ವಾರಸ್ಯಪೂರ್ಣವಾಗಿದೆ .

2. “ ಕನ್ನಡದೊಳಗೊಂದು ಕಥೆಯ ಪೇಳುವೆನು ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ರತ್ನಾಕರವರ್ಣಿಯ ‘ ಭರತೇಶ ವೈಭವ ‘ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಸಿರಿಯನಿನ್ನೇನ ಬಣ್ಣಿಪೆನು ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ರತ್ನಾಕರವರ್ಣಿಯು ತಾನು ಕಾವ್ಯ ಬರೆಯಲು ಕಾರಣ ಮತ್ತು ಪ್ರೇರಕವಾದ ಅಂಶಗಳನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ತನಗೆ ಧ್ಯಾನ ಮಾಡುವುದು ಬೇಸರವಾದಾಗ ತನ್ನ ಧರ್ಮ ದೇವತೆಯನ್ನು ಮೊದಲಾಗಿಟ್ಟುಕೊಂಡು ಕನ್ನಡದಲ್ಲಿ ಕಥೆ ಬರೆಯುವುದಾಗಿ ಹೇಳಿದ್ದಾನೆ .

ಸ್ವಾರಸ್ಯ : ಇಲ್ಲಿ ಕವಿಯು ತನಗೆ ಧ್ಯಾನಮಾಡಲು ಬೇಸರವಾದರೂ ಆ ಧ್ಯಾನವನ್ನು ಕಾವ್ಯರಚನೆಯ ರೂಪದಲ್ಲಿ ಮಾಡುವ ಅಭಿಪ್ರಾಯವನ್ನು ಸ್ವಾರಸ್ಯಪೂರ್ಣವಾಗಿ ವ್ಯಕ್ತಪಡಿಸಿದ್ದಾನೆ .

3. “ ಶ್ರೀ ವಿಲಾಸವನೇನನೆಂಬೆ ? ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ರತ್ನಾಕರವರ್ಣಿಯ ‘ ಭರತೇಶ ವೈಭವ ‘ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಸಿರಿಯನಿನ್ನೇನ ಬಣ್ಣಿಪೆನು ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ರತ್ನಾಕರವರ್ಣಿಯು ಭರತ ಚಕ್ರವರ್ತಿಯು ಆಸ್ಥಾನಕ್ಕೆ ಆಗಮಿಸುತ್ತಿದ್ದ ವೈಭವದ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಭರತ ಚಕ್ರವರ್ತಿಯು ಒಂದು ದಿನ ಸೂರ್ಯೋದಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ , ಆಸ್ಥಾನಕ್ಕೆ ಬಂದು ಒಡೋಲಗ ನಡೆಸಿದ ಆ ಒಂದು ವೈಭವವನ್ನು ಏನೆಂದು ವರ್ಣಿಸಲಿ ಎಂದು ಕವಿ ಹೇಳುತ್ತಾನೆ .

ಸ್ವಾರಸ್ಯ : ಭರತ ಚಕ್ರವರ್ತಿಯ ರಾಜ ವೈಭವ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

ಈ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ .

1. ಬಿನ್ನಹ : ಅರಿಕೆ :: ವಿಭು :………..

2 . ಹೊಗಳು : ತೆಗಳು :: ಕಾರ್ಮುಗಿಲ್ :……………….

3. ಭರತ : ಅಯೋಧ್ಯೆ :: ಬಾಹುಬಲಿ :…………..

4. ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ :……………….

ಸರಿ ಉತ್ತರಗಳು

1. ರಾಜ

2. ಬೆಳ್ಳಗಿಲ್

3. ಪೌದನಪುರ

4. ಚಕ್ರ + ಈಶ್ವರ

Siriyaninnena Bannipenu Kannada Notes Pdf

ಇತರೆ ಪದ್ಯಗಳು :

ಹೊಸಹಾಡು ಪದ್ಯದ ನೋಟ್ಸ್

ಪಾರಿವಾಳ ಪದ್ಯದ ನೋಟ್ಸ್

Leave your vote

40 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.