9ನೇ ತರಗತಿ ಕನ್ನಡ ನಿಯತಿಯನಾರ್ ಮೀರಿದಪರ್ ಪದ್ಯದ ನೋಟ್ಸ್‌ | 9th standard Niyatiyanar Meeridapar Kannada Poem Notes

9ನೇ ತರಗತಿ ಕನ್ನಡ ನಿಯತಿಯನಾರ್ ಮೀರಿದಪರ್ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು, 9th standard Niyatiyanar Meeridapar Kannada Poem Notes Question Answer Pdf Download,9th ನಿಯತಿಯನಾರ್ ಮೀರಿದಪರ್ Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ನಿಯತಿಯನಾರ್ ಮೀರಿದಪರ್

ಕೃತಿಕಾರರ ಹೆಸರು : ಜನ್ನ

Table of Contents

ಕೃತಿಕಾರರ ಪರಿಚಯ :

ಜನ್ನ

* ಜನ್ನನ ಕಾಲ ಸುಮಾರು ಕ್ರಿ.ಶ. ೧೨೨೫ , ಈತನ ಸ್ಥಳ : ಹಾಸನ ಜಿಲ್ಲೆಯ ಹಳೇಬೀಡು

* ಈತನು ನರಸಿಂಹಬಲ್ಲಾಳನ ಆಸ್ಥಾನದಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದನು .

* ಹೊಯ್ಸಳರ ಬಲ್ಲಾಳನಿಂದ ಕವಿಚಕ್ರವರ್ತಿ ಅಭಿಧಾನವನ್ನು ಪಡೆದಿದ್ದನು .

* ಈತನು ಜೈನ ಧಾರ್ಮಿಕ ಕಾವ್ಯಗಳನ್ನು ರಚಿಸಿ ಆಹಿಂಸಾ ತತ್ವವನ್ನು ಕಾವ್ಯಗಳಲ್ಲಿ ಸಂದೇಶ ರೂಪದಲ್ಲಿ ನೀಡಿದನು .

* ಈತನ ಕೃತಿಗಳೆಂದರೆ : ಯಶೋಧರ ಚರಿತೆ , ಅನಂತನಾಥಪುರಾಣ ಮತ್ತು ಅನುಭವ ಮುಕುರ ,

Niyatiyanar miridapar Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಯಾವ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿತ್ತು ?

ಉತ್ತರ : ಚಂಡಮಾರಿ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿತ್ತು .

2. ಮುತ್ತುಗದ ಹೂವುಗಳು ಎಲ್ಲಿ ಉದುರಿ ಬಿದ್ದಿದ್ದವು ?

ಉತ್ತರ : ಮುತ್ತುಗದ ಹೂವುಗಳು ಮಾವಿನ ಮರದ ಕೆಳಗೆ ಮಾಂಸದ ತುಂಡುಗಳಂತೆ ಬಿದ್ದಿದವು .

3. ವನದಲ್ಲಿ ಅರಗಿಳಿಗಳು ಏನೆಂದು ಉಲಿಯುತ್ತಿದ್ದವು ?

ಉತ್ತರ : ವನದಲ್ಲಿ ಅರಗಿಳಿಗಳು “ ಎಲೈ ಮಾರಿಯೇ , ಮಲಯ ಮಾರುತನು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು , ಈ ಕಡೆ ಗಮನ ಹರಿಸು ” ಎಂದು ಉಲಿಯುತ್ತಿದ್ದವು .

4. ಚಂಡಕರ್ಮನು ಯಾರನ್ನು ಹಿಡಿದು ತಂದನು ?

ಉತ್ತರ : ಚಂಡಕರ್ಮನು ಅಭಯರುಚಿಯು ಅಭಯಮತಿಯರನ್ನು ಹಿಡಿದು ತಂದನು .

5 , ಮಾರಿದತ್ತನ ಬಳಿಯಿದ್ದ ತಳಾರನ ಹೆಸರೇನು ?

ಉತ್ತರ : ಮಾರಿದತ್ತನ ಬಳಿಯಿದ್ದ ತಳಾರನ ಹೆಸರು ಚಂಡಕರ್ಮ

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಚಂಡಕರ್ಮನು ಎಂತಹ ಬಲಿಯನ್ನು ಹುಡುಕಿ ಹೊರಟನು ?

ಉತ್ತರ : ಚಂಡಕರ್ಮನು ಎಳೆಯ ವಯಸ್ಸಿನ , ಶುಭಲಕ್ಷಣದ , ಬುದ್ಧಿವಂತರಾದ , ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಬಲಿಗಾಗಿ ಹುಡುಕಲು ಹೊರಟನು .

2. ಅಭಯರುಚಿಯು ಅಭಯಮತಿಗೆ ಏನೆಂದು ಧೈರ್ಯವನ್ನು ಹೇಳಿದನು ?

ಉತ್ತರ : ಅಭಯರುಚಿಯು ತನ್ನ ತಂಗಿಯಾದ ಆಭಯಮತಿಯನ್ನು ಕುರಿತು “ ನೀತಿವಂತಳೇ ಕೇಳು , ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ ? ನಿನಗೆ ಭಯವೇಕೆ ? ಇಂತಹ ಸಮಯದಲ್ಲಿ ಬಂದ ಕಷ್ಟವನ್ನು ಸಹಿಸಿಕೊಳ್ಳಬೇಕು . ಸಂಭವಿಸುವ ಪರಿಷಹಗಳನ್ನು ( ೨೨ ಬಗೆಯ ಕೇಶಗಳನ್ನು ಜಯಿಸುವುದೇ ನಿಜವಾದ ತಪಸ್ಸು ತಪಸ್ಸಿಗೆ ಬೇರೆ ಎರಡು ಕೋಡು / ಕೊಂಬುಗಳಿವೆಯೇ ? ” ಎಂದು ಧೈರ್ಯ ಹೇಳಿದನು .

3. ಮಾವಿನ ಮರದಡಿಯಲ್ಲಿ ಉದುರಿದ್ದ ಮುತ್ತುಗದ ಹೂವುಗಳು ಹೇಗೆ ಕಾಣುತ್ತಿದ್ದವು ?

ಉತ್ತರ : ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು , ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ ( ತುಂಡರಿಸಿದ ) ಮಾಂಸದ ತುಂಡುಗಳಂತೆ ಆ ವನದಲ್ಲಿ ಉದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಾಣುತ್ತಿದ್ದವು .

4. ಮಾರಿದತ್ತ ಹಾಗೂ ಜನರು ಏಕೆ ಒಂದೆಡೆ ಸೇರಿದ್ದರು ?

ಉತ್ತರ : ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಹರಕೆ ಒಪ್ಪಿಸಿ ಅವಳಿಗೆ ಸಂತೋಷವನ್ನು ಉಂಟುಮಾಡಲೆಂದು ಹಾಗೂ ಜಾತ್ರೆಯಲ್ಲಿ ಸೇರಿದರು .

ಇ ] ಕೊಟ್ಟಿರುವ ಪ್ರಶ್ನೆಗೆ ಸುಮಾರು ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ‘ ನಿಯತಿಯನಾರ್ ಮೀಡಿದಪರ್ ‘ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು , ಕತ್ತರಿಸಿದ ಮಾಂಸದ ತುಂಡುಗಳಂತೆ ವನದಲ್ಲಿ ಮುತ್ತುಗದ ಹೂವಿನ ಮೊಗ್ಗುಗಳು ಕಾಣುತ್ತಿದ್ದವು . ಆಗ “ ಎಲೈ ಮಾರಿಯೇ , ವಸಂತ ಬಂದನು . ಈ ಕಡೆ ಗಮನ ಹರಿಸು ” ಎನ್ನುವಂತೆ ವನದಲ್ಲಿ ಅರಗಿಳಿಗಳು ನುಡಿದವು , ಆ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಹರಕೆ ಒಪ್ಪಿಸಿ ಪೂಜಿಸಲೆಂದು ಜಾತ್ರೆಯಲ್ಲಿ ಸೇರಿದರು . ಚಂಡಮಾರಿ ದೇವಾಲಯದಲ್ಲಿ ಮಹಾರಾಜ ಮಾರಿದತ್ತನು ಚಂಡಕರ್ಮ ಎಂಬ ತಳಾರನಿಗೆ “ ಲಕ್ಷಣವಾದ ಇಬ್ಬರು ಮನುಷ್ಯರನ್ನು ಬಲಿ ಕೊಡುವುದಕ್ಕಾಗಿ ಕರೆದು ತಾ ” ಎಂದು ಹೇಳಿದನು . ಆಗ ಅವನು ಇಬ್ಬರು ಮನುಷ್ಯರನ್ನು ಹುಡುಕುತ್ತಾ ಹೊರಟನು . ಅದೇ ಸಮಯಕ್ಕೆ ಸುದತ್ತಾಚಾರ್ಯರೆಂಬ ಮುನಿಗಳು ಅಭಯರುಚಿ ಮತ್ತು ಅಭಯಮತಿ ಎಂಬ ಇಬ್ಬರು ಮಕ್ಕಳನ್ನು ಭಿಕ್ಷೆಯನ್ನು ತರಲು ಕಳುಹಿಸಿದರು . ಆ ಇಬ್ಬರೂ ಗುರುಗಳ ಪಾದಕ್ಕೆ ನಮಸ್ಕರಿಸಿ ಚರಿಗೆಗೆ ಹೋಗುತ್ತಿದ್ದಾಗ ಚಂಡಕರ್ಮನು ಅವರಿಬ್ಬರನ್ನು ‘ ಎಳೆಯ ಜಿಂಕೆಯ ಮರಿಗಳನ್ನು ಹುಲಿ ಹಿಡಿಯುವಂತೆ ‘ ಹಿಡಿದನು . ಚಂಡಕರ್ಮನು ಅವರನ್ನು ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು “ ಎಲೈ ತಾಯಿ , ಮರಣದ ಬಗ್ಗೆ ಭಯಪಡಬೇಡ . ಇಂತಹ ಸಮಯದಲ್ಲಿ ಕಷ್ಟವನ್ನು ಸಹಿಸಿಕೊಳ್ಳಬೇಕು . ಅದೇ ನಿಜವಾದ ತಪಸ್ಸು ; ತಪಸ್ಸಿಗೆ ಬೇರೆ ಎರಡು ಕೊಂಬುಗಳಿವೆಯೇ ? ” ಎಂದು ಧೈರ್ಯ ಹೇಳಿದನು .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ನಿಯತಿಯನಾರ್ ಮೀಟಿದಪರ್ ”

ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಗೆ ಧೈರ್ಯ ತುಂಬುತ್ತಾ “ ಮರಣಕ್ಕಾಗಿ ಹೆದರಬೇಡ , ವಿಧಿ ನಿಯಮವನ್ನು ಯಾರುತಾನೆ ಮೀರಲು ಸಾಧ್ಯ ? ” ಎಂದು ಬುದ್ಧಿವಾದ ಹೇಳುತ್ತಾನೆ .

ಸ್ವಾರಸ್ಯ : ಅಭಯರುಚಿಯಲ್ಲಿದ್ದ ವಯಸ್ಸಿಗೆ ಮೀರಿದ ಅನುಭವ , ಧೈರ್ಯ ಹಾಗೂ ವಿಚಾರಶಕ್ತಿ ಅವನ ಈ ಮಾತಿನಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .

2. ” ತರಕ್ಷು ಪಿಡಿವಂತೆ ಚಂಡಕರ್ಮ ೦ ಪಿಡಿದಂ ”

ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಹಾರಾಜನ ಆಜ್ಞೆಯಂತೆ ಬಲಿಕೊಡುವುದಕ್ಕಾಗಿ ಇಬ್ಬರು ಮನುಷ್ಯರನ್ನು ಚಂಡಕರ್ಮನು ಹುಡುಕುತ್ತಾ ಹೋಗುತ್ತಿರುವಾಗ ಅದೇ ಮಾರ್ಗವಾಗಿ ಭಿಕ್ಷೆಗೆ ತೆರಳುತ್ತಿದ್ದ ಅಭಯರುಚಿ ಮತ್ತು ಅಭಯಮತಿ ಎಂಬ ಮಕ್ಕಳನ್ನು ಅವನು ಹಿಡಿದುಕೊಂಡ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ‘ ಜಿಂಕೆಗಳನ್ನು ಹುಲಿ ಹಿಡಿಯುವಂತೆ ಹಿಡಿದನು ‘ ಎಂದು ಕವಿ ಈ ಹೇಳಿದ್ದಾನೆ .

ಸ್ವಾರಸ್ಯ : ಇಲ್ಲಿ ಕಾಡು ಜಿಂಕೆಗಳ ಜೋಡಿಯನ್ನು ಹುಲಿ ಹಿಡಿಯುವುದಕ್ಕೆ ಹೋಲಿಸಿರುವುದು ಈ ಸಂದರ್ಭಕ್ಕೆ ಸ್ವಾರಸ್ಯಪೂರ್ಣವಾಗಿದೆ . .

3. “ ಪೂಜೆಯೊಳೆಂದಿನ ಪರಿ ತಪ್ಪ ದೇವಿ ತಪ್ಪದೆ ಮಾಣಳ ”

ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಹಾರಾಜ ಮಾರಿದತ್ತನು ಚಂಡಕರ್ಮನಿಗೆ “ ಇಬ್ಬರು ಮನುಷ್ಯರನ್ನು ಕರೆದುಕೊಂಡು ಬಾ . ಅವರನ್ನು ಕೊಂದು ದೇವಿಗೆ ಪೂಜೆಯನ್ನು ಸಲ್ಲಿಸುವೆನು . ಎಂದಿನ ಪದ್ಧತಿಯಂತೆ ಬಲಿಯನ್ನು ಕೊಡದೆ ತಪ್ಪಿಸಿದರೆ , ಚಂಡಮಾರಿ ದೇವತೆಯು ಕೆಡಕು ಮಾಡದೆ ಬಿಡುವುದಿಲ್ಲ ” ಎಂದು ಈ ಸಂದರ್ಭದಲ್ಲಿ ಹೇಳುತ್ತಾನೆ .

ಸ್ವಾರಸ್ಯ : ಇಲ್ಲಿ ಮಾರಿದತ್ತ ಮಹಾರಾಜನಿಗೆ ಚಂಡಮಾರಿ ದೇವತೆಯ ಮೇಲಿದ್ದ ಭಯ – ಭಕ್ತಿಭಾವಗಳು ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

4.“ ಅಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್ ”

ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು “ ಎಲೈ ತಾಯಿ , ಮರಣದ ಬಗ್ಗೆ ಭಯಪಡಬೇಡ ” ಎಂದು ಹೇಳುತ್ತಾನೆ .

ಸ್ವಾರಸ್ಯ : ಚಂಡಕರ್ಮನು ಬಲಿಗಾಗಿ ಹೊತ್ತುಕೊಂಡು ಹೋಗುತ್ತಿದ್ದರೂ ಬಾಲಕನಾದ ಅಭಯರುಚಿಯು ಅಂಜದೆ ತನ್ನ ಸಹೋದರಿಗೆ ಧೈರ್ಯ ತುಂಬುವ ಸಮಯಪ್ರಜ್ಞೆ ಇಲ್ಲಿ ಸ್ವಾರಸ್ಯಕರವಾಗಿದೆ .

ಭಾಷಾ ಚಟುವಟಿಕೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ಮಾತ್ರೆಗಳಲ್ಲಿ ಎಷ್ಟು ವಿಧ ? ಅವು ಯಾವುವು ?

ಉತ್ತರ : ಮಾತ್ರೆಗಳಲ್ಲಿ ಎರಡು ವಿಧ . ಅವೇ ಲಘು ಮತ್ತು ಗುರು , ಲಘುವನ್ನು ‘ V ‘ ಎಂತಲೂ ಗುರುವನ್ನು – ಎಂತಲೂ ಗುರುತಿಸಲಾಗುವುದು ,

2 , ಲಘು ಮತ್ತು ಗುರು ಎಂದರೇನು ? ಕನ್ನಡ

ಉತ್ತರ : ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಲಘು ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಗುರು .

3 , ಕಂದ ಪದ್ಯದ ಲಕ್ಷಣವನ್ನು ಬರೆಯಿರಿ .

ಉತ್ತರ :

೧, ನಾಲ್ಕು ಪಾದಗಳಿರಬೇಕು .

೨, ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಮೂರು ಮೂರು ಗಣಗಳಿರಬೇಕು .

೩, ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಐದೈದು ಗಣಗಳಿರಬೇಕು .

೪,  ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು .

ಆ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ , ಕಂಠಪಾಠ ಮಾಡಿರಿ ,

ಮಾರಿ ಮಲಯಾಳಂ ನವ

ನೀರಜವನವೆಂಬ ಕೆಂಡದೊಳ್ ದಂಡನಮ

ಸ್ಕಾರದೆ ಬಂದಪನಿತ್ತವ

ಧಾರಿಪುದೆಂಬಂತಿರುಲಿದುವರಗಳಿ ಬನದೊಳ್

ನಿಯತಿಯನಾರ್ ಮೀಟಿದಪರ್

ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್

ನಯವಿದೆ ಪತ್ತೆ ಪರೀಷಹ

ಜಯಮ ತಪಂ ತಪಕ ಬೇಟಿ ಕೋಡೆರಡೊಳವೇ

ಇ ) ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .

ಪದ್ಯ ನಿಯತಿಯನಾರ್ ಮೀಟಿದಪರ್ ಪ್ರಶ್ನೆ ಮತ್ತು ಉತ್ತರಗಳು ನೋಟ್ಸ್, 9th Niyatiyanar Meeridapar Kannada Poem Notes padya

9th standard Niyatiyanar Meeridapar Kannada Poem Notes Question Answer Pdf

ಇತರೆ ಪದ್ಯಗಳು :

ಸಿರಿಯನಿನ್ನೇನ ಬಣ್ಣಿಪೆನು ನೋಟ್ಸ್ 

ಪಾರಿವಾಳ ಪದ್ಯದ ನೋಟ್ಸ್

Leave your vote

-4 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.