9ನೇ ತರಗತಿ ಕನ್ನಡ ಮರಳಿ ಮನೆಗೆ ಪದ್ಯದ ನೋಟ್ಸ್ | 9th Standard Kannada Marali Manege Poem Notes

9ನೇ ತರಗತಿ ಕನ್ನಡ ಮರಳಿ ಮನೆಗೆ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Marali Manege Kannada Notes Question Answer Pdf Download

ತರಗತಿ : 9ನೇ ತರಗತಿ

ಪದ್ಯದ ಹೆಸರು : ಮರಳಿ ಮನೆಗೆ

ಕೃತಿಕಾರರ ಹೆಸರು : ಅರವಿಂದ ಮಾಲಗತ್ತಿ

ಕವಿ ಪರಿಚಯ :

ಅರವಿಂದ ಮಾಲಗತ್ತಿ

* ಅರವಿಂದ ಮಾಲಗತ್ತಿ ಅವರು ಕ್ರಿ . ಶ . ೧೯೫೬ ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು .

* ಇವರು ಪ್ರಸ್ತುತ ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಇವರು ಸಂಶೋಧನೆ ಮತ್ತು ವೈಚಾರಿಕ ಲೇಖನಗಳಿಂದ ಪ್ರಸಿದ್ಧರಾಗಿದ್ದಾರೆ . ವಿಶ್ವವಿದ್ಯಾನಿಲಯದ

* ಇವರ ಪ್ರಮುಖ ಕೃತಿಗಳೆಂದರೆ : ‘ ವಿಶ್ವತೋಮುಖ -ಹೂ ಬಲುಭಾರ ‘ , ‘ ಮೂಕನಿಗೆ ಬಾಯಿ ಬಂದಾಗ ‘ , ‘ ಕಪ್ಪುಕಾವ್ಯ ‘ ‘ ಮೂರನೆಯ ಕಣ್ಣು ‘ ‘ ನಾದ – ನಿನಾದ ‘ , ‘ ಸಿಲಿಕಾನ್ ಸಿಟಿ ಮತ್ತು ಕೋಗಿಲೆ ‘ , ‘ ಚಂಡಾಲ ಸ್ವರ್ಗಾರೋಹಣಂ ‘ ಕವನ ಸಂಕಲನಗಳನ್ನು ರಚಿಸಿದ್ದಾರೆ . ‘ ಕಾರ್ಯ ‘ ಎಂಬ ಕಾದಂಬರಿಯನ್ನೂ ಮುಗಿಯದ ಕತೆಗಳು ‘ ಎಂಬ ಕಥಾ ಸಂಕಲನವನ್ನೂ ` ಗೌರ್ಮೆಂಟ್ ಬ್ರಾಹ್ಮಣ ‘ ಎಂಬ ಆತ್ಮಕಥನವನ್ನೂ ಬರೆದಿದ್ದಾರೆ .

* ಇವರಿಗೆ ದೊರೆತಿರುವ ಪ್ರಶಸ್ತಿಗಳೆಂದರೆ : ‘ ಮೂಕನಿಗೆ ಬಾಯಿ ಬಂದಾಗ ‘ ಕವನ ಸಂಕಲನಕ್ಕೆ ‘ ದೇವರಾಜ ಬಹದ್ದೂರ್ ಪ್ರಶಸ್ತಿ ‘ , ‘ ಕಪ್ಪು ಕಾವ್ಯ ‘ ಕೃತಿಗೆ ‘ ನರಸಿಂಹಯ್ಯ ಪುರಸ್ಕಾರ ‘ ಮತ್ತು ‘ ಗೌರ್ಮೆಂಟ್ ಬ್ರಾಹ್ಮಣ ‘ ಕೃತಿಗೆ ‘ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ .

9th Standard Marali Manege Kannada Notes Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ನಮ್ಮ ನಡೆ ಯಾರ ನಡೆಯಂತೆ ಇರಬೇಕು ?

ಉತ್ತರ : ನಮ್ಮ ನಡೆ ಬುದ್ಧನ ನಡೆಯಂತೆ ಇರಬೇಕು .

2. ಬುದ್ಧನು ಲುಂಬಿನಿಯ ವನಕ್ಕೆ ಯಾವ ರೀತಿ ಬರಬೇಕು ?

ಉತ್ತರ : ಬುದ್ಧನು ಲುಂಬಿನಿಯ ವನಕ್ಕೆ ವೈಶಾಖ ಬಂದಂತೆ ಬರಬೇಕು .

3. ಮಹಾಮನೆಯಲ್ಲಿ ಯಾವ ಮಂತ್ರವನ್ನು ಸಾರಬೇಕು ?

ಉತ್ತರ : ಮಹಾಮನೆಯಲ್ಲಿ ‘ ಬಹುಜನತೆಯ ಹಿತವೇ ಬಹುಜನತೆಯ ಸುಖವು ‘ ಮಂತ್ರವನ್ನು ಸಾರಬೇಕು .

4. ಮನೆಯ ಬಾಗಿಲು ಯಾರಿಗಾಗಿ ತೆರೆದಿಹುದು ?

ಉತ್ತರ : ಮನೆಯ ಬಾಗಿಲು ಬುದ್ಧನಿಗಾಗಿ ತೆರೆದಿಹುದು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಬುದ್ಧನು ಬೋಧಿಸಿದ ಪಂಚಶೀಲತತ್ತ್ವಗಳು ಯಾವುವು ?

ಉತ್ತರ : ೧ ) ಯಾವುದೇ ಜೀವಿಗಳನ್ನು ಕೊಲ್ಲದಿರುವುದು ಅಥವಾ ಹಿಂಸೆ ಮಾಡದಿರುವುದು .

೨ ) ನಮ್ಮದಲ್ಲದ ವಸ್ತುವನ್ನು ಕದಿಯದಿರುವುದು ಅಥವಾ ತೆಗೆದುಕೊಳ್ಳದಿರುವುದು .

೩ ) ಶೀಲಹರಣ ಮಾಡದಿರುವುದು ಅಥವಾ ಅತ್ಯಾಚಾರ ಮಾಡದಿರುವುದು ,

೪ ) ಸುಳ್ಳನ್ನು ಹೇಳದಿರುವುದು ಅಥವಾ ಅಸತ್ಯವನ್ನು ನುಡಿಯದಿರುವುದು .

೫ ) ಮಾದಕ ಪಾನೀಯ ಅಥವಾ ಮಾದಕ ವಸ್ತುಗಳನ್ನು ಸೇವಿಸದಿರುವುದು , ಇವು ಬುದ್ಧನ ಪಂಚಶೀಲ ತತ್ವಗಳಾಗಿವೆ .

2. ಬುದ್ಧನ ನಡೆ ಏನು ? ವಿವರಿಸಿ .

ಉತ್ತರ : ಬುದ್ಧನ ನಡೆಯು ಜಾತಿ – ಧರ್ಮ , ಲಿಂಗಭೇದ , ಮೇಲು – ಕೀಳುಗಳ ಗಡಿಯನ್ನು ಮೀರಿ ನಿಂತಿದೆ . ಬುದ್ಧನ ತತ್ವಗಳೇ ನಮ್ಮ ನುಡಿಯಾಗಿ ಬುದ್ಧ ಮಾರ್ಗವೆ ನಮ್ಮ ಮಾರ್ಗವಾಗುವ ಮೂಲಕ ಸಮಾನತೆಯ ಸಮಾಜ ಸ್ಥಾಪಿತವಾಗಬೇಕು . ಎಂಬುದು ಕವಿಯ ಆಶಯವಾಗಿದೆ .

3. ಬುದ್ಧನೆಂದರೆ ಏನೇನು ಎಂದು ಕವಿಗಳು ಹೇಳುತ್ತಾರೆ ?

ಉತ್ತರ : ‘ ಬುದ್ಧನೆಂದರೆ ನಿತ್ಯ , ಬುದ್ಧನೆಂದರೆ ಸತ್ಯ , ಬುದ್ಧನೆಂದರೆ ಶಾಂತಿ , ಬುದ್ಧನೆಂದರೆ ಕ್ರಾಂತಿ , ಬುದ್ಧನೆಂದರೆ ಕರುಣೆ , ಬುದ್ಧನೆಂದರೆ ಬೆಳಕು ‘ ಎಂದು ಕವಿ ಹೇಳಿದ್ದಾರೆ .

4. ಭವ್ಯ ಮನುಜರಾಗಿ ಬಾಳಲು ನಮ್ಮಲ್ಲಿ ಇರಬೇಕಾದ ಗುಣಗಳಾವುವು ?

ಉತ್ತರ : ಸ್ವಾರ್ಥವನ್ನು ತೊರೆದು ; ಬಹುಜನತೆಯ ಹಿತವೇ ಬಹುಜನತೆಯ ಸುಖ ಎಂಬ ಭಾವನೆ ಇರಬೇಕು . ನಮ್ಮ ಉಸಿರಿನ ನೀತಿ ಹಾಗೂ ನಮ್ಮ ಮನೆಯ ರೀತಿಗಳು ಮಹಾಮನೆಯ ಮಹಾಮಂತ್ರ ಎಂಬ ಗುಣ ನಮ್ಮಲ್ಲಿದ್ದಾಗ ನಾವು ಭವ್ಯ ಮನುಜರಾಗಿ ಬಾಳಬಹುದು .

ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ‘ ಮರಳಿ ಮನೆಗೆ ‘ ಕವನದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ‘ ಮರಳಿ ಮನೆಗೆ ‘ ಕವನವು ಇಂದಿನ ಸ್ಥಿತಿಗೆ ಬುದ್ಧನ ಆಗಮನದ ಪ್ರಸ್ತುತತೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ . “ ಇಂದಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಬುದ್ಧನ ಬೆಳಕು ನಮಗೆ ಅವಶ್ಯಕ . ಬುದ್ಧನು ಸತ್ಯ , ಶಾಂತಿ , ಕರುಣೆಯ ಬೆಳಕು . ನಾವು ದಿವ್ಯವಾದ ಜಗತ್ತಿನ ಭವ್ಯವಾದ ಮನುಜರಾಗಿ ಬದುಕ ಬೇಕಾದರೆ ಬುದ್ಧನ ಉಪದೇಶ ಅನುಸರಿಸುವುದು ಬಹುಮುಖ್ಯವಾಗಿದೆ . ನಾವೆಲ್ಲರೂ ಜಾತಿಯ ಸೀಮೆಯಾಚೆಗೆ ಬಂದು , ಧರ್ಮದ ಗಡಿಯಾಚೆಗೆ ನಿಂದು , ಲಿಂಗಭೇದ ಮಾಡದೆ , ಮೇಲುಕೀಳು ಮನೋಭಾವನೆಯನ್ನು ತೊರೆದು ಬಾಳಿ ಬದುಕಲು ನಮ್ಮ ನಡೆ ಬುದ್ಧನ ಕಡೆಗೆ ಇರಬೇಕು , ನಮ್ಮ ನುಡಿಯು ಬುದ್ಧನ ನುಡಿಯಾಗಬೇಕು , ಅದಕ್ಕೆ ಬುದ್ಧನು ನಮ್ಮ ಮನೆಗೆ , ಮನಕ್ಕೆ ಮರಳಿ ಬರಬೇಕು ” ಎಂಬುದು ಈ ಕವನದ ಆಶಯವಾಗಿದೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ

1. “ ಬಯಲಿನಲಿ ಬಂಧನ ಮೆಚ್ಚಳಾ ತಾಯಿ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬುದ್ಧ ನಮಗೆ ತಂದೆ , ತಾಯಿ , ಬಂಧು – ಬಳಗವಾಗಿ ನಮ್ಮ ಯಾವ ಯಾವ ನಡೆಯನ್ನು ಮೆಚ್ಚುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಕವಿ ನಾವು ಬುದ್ಧಮಾರ್ಗವನ್ನು ಮೀರಿದಾಗ ತಂದೆಯಂತಹ ಬುದ್ಧ ಮೆಚ್ಚುವುದಿಲ್ಲ . ಹಾಗೆಯೇ ಮುಕ್ತಿಯ ಬಯಲನ್ನು ಬಯಸುವವರು ಸಂಸಾರ ಬಂಧನಕ್ಕೆ ಸಿಲುಕಿದರೆ ತಾಯಿ ಸ್ವರೂಪದ ಬುದ್ಧ ನಮ್ಮನ್ನು ಮೆಚ್ಚುವುದಿಲ್ಲ ಎಂದು ಕವಿ ಹೇಳಿದ್ದಾರೆ .

ಸ್ವಾರಸ್ಯ : ವಿಶಾಲ ಹೃದಯಿಯಾದ ಬುದ್ಧನನ್ನು ನಮ್ಮ ಹಲವಾರು ಸಂಬಂಧಗಳೊಂದಿಗೆ ಪರಿಭಾವಿಸಿರುವುದು ಸ್ವಾರಸ್ಯಪೂರ್ಣವಾಗಿದೆ .

2 , “ ದಿವ್ಯ ಜಗದ ಭವ್ಯ ಮನುಜರಾಗಿ ನೀವು ಬಾಳಿರೊ “

ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ” ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸ್ವಾರ್ಥವನ್ನು ತೊರೆದು : ಬಹುಜನತೆಯ ಹಿತವೇ ಬಹುಜನತೆಯ ಸುಖ ಎಂಬ ಭಾವನೆ ಇರಬೇಕು . ಹಾಗೂ ನಮ್ಮ ಉಸಿರಿನ ನೀತಿ ಹಾಗೂ ನಮ್ಮ ಮನೆಯ ರೀತಿಗಳು ಮಹಾಮನೆಯ ಮಹಾಮಂತ್ರ ಎಂಬ ಭಾವನೆ ನಮ್ಮಲ್ಲಿದ್ದಾಗ ನಾವು ಭವ್ಯ ಮನುಜರಾಗಿ ಬಾಳಬಹುದು ಎಂದು ಕವಿ ಈ ಸಂದರ್ಭದಲ್ಲಿ ಹೇಳಿದ್ದಾರೆ . ಸ್ವಾರಸ್ಯ : “ ಸರ್ವೇಜನಾಃ ಸುಖಿನೋಭವಂತು ” ಎಂಬಂತೆ ಬಹುಜನತೆಯ ಸುಖವನ್ನು ಬಯಸುವ ಮೂಲಕ ಮಾನವೀಯತೆಯಿಂದ ಬಾಳಬೇಕು ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ .

3 , “ ಬಾರಯ್ಯ ಬಾರೊ ಬೆಳಕಿನ ಆದಿಗೆ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಇಂದು ಸಮಾಜದಲ್ಲಿ ಜಾತಿ – ಧರ್ಮ , ಲಿಂಗಭೇದ , ಮೇಲು – ಕೀಳುಗಳು ಹೆಚ್ಚಾಗಿದ್ದು ಅಶಾಂತಿ ತಲೆದೋರಿದೆ . ಅಜ್ಞಾನದ ಕತ್ತಲೆಯನ್ನು ನೀಗಿಸಲು ಮರಳಿ ಭೂಮಿಗೆ ( ಮನೆಗೆ ಬಾ ಎಂದು ಬುದ್ಧನಲ್ಲಿ ಕವಿ ಮೊರೆಯಿಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಇಂದಿನ ದಿನಗಳಲ್ಲಿ ಬುದ್ಧನ ಸಂದೇಶಗಳು ಹೆಚ್ಚು ಪ್ರಸ್ತುತವಾಗಿವೆ . ಬುದ್ಧನ ತತ್ವಗಳು ಮತ್ತೆ ಬೆಳಕಿಗೆ ಬರಬೇಕು . ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

4 , ” ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬುದ್ಧನಲ್ಲಿದ್ದ ಗುಣ ಹಾಗೂ ಸಾಮರ್ಥ್ಯಗಳನ್ನು ವರ್ಣಿಸುವ ಸಂದರ್ಭದಲ್ಲಿ ಬುದ್ಧನೆಂದರೆ ಏನೇನು ಎಂದು ತಿಳಿಸುತ್ತಾ ಬುದ್ಧನೆಂದರೆ ಸತ್ಯ , ಶಾಂತಿ , ಕ್ರಾಂತಿ , ಕರುಣೆ ಮತ್ತು ಬೆಳಕುಗಳ ಪ್ರತೀಕ ಎಂದು ಹೇಳಿದ್ದಾರೆ .

ಸ್ವಾರಸ್ಯ : ಇಂದಿನ ದಿನಗಳಲ್ಲಿ ಬುದ್ಧನ ಈ ಗುಣಗಳು ಅತ್ಯವಶ್ಯಕವಾಗಿರುವುದನ್ನು ಕವಿ ತಿಳಿಸಿರುವ ರೀತಿ ಸ್ವಾರಸ್ಯಪೂರ್ಣವಾಗಿದೆ .

5. “ ಬುದ್ಧ ನಡೆಯಮ್ಮನಡೆ ಬುದ್ಧ ನುಡಿಯೆಮ್ಮನುಡಿ “

ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಜಾತಿ – ಮತ – ಧರ್ಮಗಳನ್ನು ಮೀರಿ , ಲಿಂಗಭೇದ , ಮೇಲು – ಕೀಳುಗಳನ್ನು ತೊರೆದು ಬುದ್ಧನ ನಡೆ – ನುಡಿಗಳನ್ನು ಅನುಸರಿಸಬೇಕೆಂದು ಆಶಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಸರ್ವಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣವಾಗಬೇಕಾದಲ್ಲಿ ನಾವು ಬುದ್ಧನ ನಡೆ – ನುಡಿಗಳನ್ನು ಪಾಲಿಸಬೇಕೆಂದಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .

ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .

1. ನಿತ್ಯ : ಅನಿತ್ಯ : : ಸತ್ಯ ;……….

2. ನಮ್ಮುಸಿರು : ಲೋಪ ಸಂಧಿ : ಸೀಮೆಯಾಚೆ :……………

3. ರಥ : ತೇರು : : ಪಥ :…………

4. ಸುಖವು : ಪ್ರಥಮ ವಿಭಕ್ತಿ : : ಮನೆಗೆ :…………..

5. ನಿತ್ಯ : ನಿಚ್ಚ : : ವೈಶಾಖ :…………

ಸರಿ ಉತ್ತರಗಳು .

1. ಅಸತ್ಯ , ಮಿಥ್ಯ

2 , ಆಗಮಸಂಧಿ ( ಯಕಾರಾಗಮಸಂಧಿ )

3. ದಾರಿ

4. ಚತುರ್ಥಿ ವಿಭಕ್ತಿ

5. ಬೇಸಿಗೆ

9th Standard Marali Manege Kannada Notes Question Answer Pdf

ಇತರೆ ಪದ್ಯಗಳು :

ನಿಯತಿಯನಾರ್ ಮೀರಿದಪರ್

ಪಾರಿವಾಳ ಪದ್ಯದ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.