9ನೇ ತರಗತಿ ಕನ್ನಡ ತತ್ವಪದಗಳು ಪದ್ಯದ ನೋಟ್ಸ್ | 9th Standard Kannada Tatva Padagalu Poem Notes

9ನೇ ತರಗತಿ ಕನ್ನಡ ತತ್ವಪದಗಳು ಪದ್ಯದ ಪ್ರಶ್ನೆ ಉತ್ತರಗಳು ನೋಟ್ಸ್, 9th Standard Tatva Padagalu Poem Notes Question Answer,9th Tatva Padagalu Kannada Notes Pdf Download

ತರಗತಿ : 9ನೇ ತರಗತಿ

ಪದ್ಯದ ಹೆಸರು : ತತ್ವಪದಗಳು

ಕೃತಿಕಾರರ ಹೆಸರು : ಕಡಕೋಳ ಮಡಿವಾಳಪ್ಪ

ಕವಿ ಪರಿಚಯ :

ಕಡಕೋಳ ಮಡಿವಾಳಪ್ಪ

* ಕಡಕೋಳ ಮಡಿವಾಳಪ್ಪ ಅವರು ಕ್ರಿ.ಶ. ೧೭೬೫ ರಲ್ಲಿ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಜನಿಸಿದರು .

* ಇವರ ತಾಯಿ ಗಂಗಮ್ಮ , ತಂದೆ ವಿರೂಪಾಕ್ಷಯ್ಯ , ಇವರು ಕಲಕೇರಿ ಮರುಳಾರಾಧ್ಯರಿಂದ ಲಿಂಗದೀಕ್ಷೆಯನ್ನು ಪಡೆದರು . ಇವರ ಅಂಕಿತನಾಮ : ‘ ಮಹಾಂತೇಶ ‘ ಕವಿ ಪರಿಚಯ : ಶಿಶುನಾಳ ಷರೀಫ

* ಸಂತ ಶಿಶುನಾಳ ಶರೀಫ ಅವರು ಕ್ರಿಸ್ತ ಶಕ ೧೮೧೯ ರಲ್ಲಿ ಧಾರವಾಡ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ , ಶಿಶುನಾಳದಲ್ಲಿ ಜನಿಸಿದರು .

* ಬಾಲ್ಯದ ಹೆಸರು ಮಹಮ್ಮದ್ ಶರೀಫ , ಗುರು ಕಳಸದ ಗೋವಿಂದ ಭಟ್ಟರು .

* ಇವರತು ಕರ್ನಾಟಕದ ಕಬೀರರೆಂದೇ ಶರೀಫರು ಪ್ರಸಿದ್ಧರಾಗಿದ್ದಾರೆ .

* ಇವರ ಅಂಕಿತ : ಶಿಶುನಾಳಾಧೀಶ , ಶಿಶುನಾಳೇಶ , ಇವರು ನೂರಾರು ತತ್ವಪದಗಳನ್ನು ರಚಿಸಿದ್ದಾರೆ .

9th Standard Tatva Padagalu Poem Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ತತ್ತ್ವಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ ?

ಉತ್ತರ : ತತ್ವಪದಕಾರರು ಸಾಧು – ಸತ್ಪುರುಷರ ಸೇವೆ ಮಾಡಬೇಕು ಎಂದಿದ್ದಾರೆ

2 , ಬಿದಿರು ಹೇಗೆ ಬೆಳೆಯಿತು ?

ಉತ್ತರ : ಹುಟ್ಟುತ್ತಾ ಹುಲ್ಲಾಗಿ ಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ .

3. ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ ?

ಉತ್ತರ : ಗುರುಕರುಣವಿಲ್ಲದವನ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ .

4. ಯಾರ ಸ್ನೇಹವನ್ನು ಮಾಡಿ ಕೆಡಬಾರದು ?

ಉತ್ತರ : ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದು .

5. ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ ?

ಬಿದಿರಿನ ಚಪ್ಪರವು ನೆರಳನ್ನು ಕೊಡುತ್ತದೆ

6. ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ ?

ಉತ್ತರ : ಬಿದಿರು ಶಿಶುನಾಳಾಧೀಶನಿಗೆ ಓಲಗವನ್ನು ಕೊಡುತ್ತದೆ .

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

1. ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ ?

ಉತ್ತರ : ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ‘ ಗುರುಕರುಣವಿಲ್ಲದವನ ಸ್ನೇಹವನ್ನು ಸಾಯುವವರೆಗೂ ಮಾಡಬಾರದು . ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು ಎಂದು ತಿಳಿಸಿದ್ದಾರೆ .

2. ‘ ಗುರುಕರುಣೆ ‘ ಪದ್ಯದ ಮೂರು ಮತ್ತು ನಾಲ್ಕನೆಯ ಚರಣದಲ್ಲಿ ಏನನ್ನು ಮಾಡಬಾರದೆಂದು ತತ್ತ್ವ ಸಾರಿದ್ದಾರೆ?

ಉತ್ತರ : ಅಕ್ಕ – ತಂಗಿಯರೆಂದು ಬಾಯಲ್ಲಿ ಕರೆದು ಅವರ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು . ಸುಮ್ಮನೆ ಊಟಮಾಡಿಕೊಂಡು ಕುಳಿತು ಕಾಲಕಳೆಯಬಾರದು . ಹಳೆಯದೆಲ್ಲವು ಶ್ರೇಷ್ಠವಲ್ಲವೆಮದು ಕಡೆಗಣಿಸಿ , ಇಂದಿನದೇ ಶ್ರೇಷ್ಠವೆಂದು ಸರಿಮಾಡಬಾರದು ಎಂದು ಗುರುಕರುಣೆ ಪದ್ಧಯದಲ್ಲಿ ಹೇಳಲಾಗಿದೆ .

3. ಬಿದಿರು ಮಕ್ಕಳಿಗೆ , ರೈತರಿಗೆ , ಮಹಾತ್ಮರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ?

ಉತ್ತರ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿ , ರೈತರಿಗೆ ಬಿತ್ತುವ ಕೂರಿಗೆಯಾಗಿ , ಮಹಾತ್ಮರ ಕೈಗೆ ಬೆತ್ತವಾಗಿ ಉಪಯೋಗವಾಗುತ್ತದೆ .

4. ಧಾನ್ಯಗಳನ್ನು ಕುಟ್ಟಲು , ಬೀಸಲು , ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ ?

ಉತ್ತರ : ಧಾನ್ಯಗಳನ್ನು ಕುಟ್ಟಲು ಒನಕೆಯಾಗಿ ಬೀಸುವ ಕಲ್ಲಿಗೆ ಗೂಟವಾಗಿ , ಕೇರಲು ಮರವಾಗಿ ಬಿದಿರು ಸಹಾಯಕವಾಗಿರುತ್ತದೆ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

1. ‘ ಬಿದಿರು ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಪ್ರಕೃತಿಯಲ್ಲಿರುವ ಬಹೂಪಯೋಗಿ ಪರಿಕರಗಳಲ್ಲಿ ಬಿದಿರು ಸಹ ಒಂದಾಗಿದೆ . ಬಿದಿರು ಮಾನವನ ಜೀವನದಲ್ಲಿ ಹಲವಾರು ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ . ಅದನ್ನು ಮಾನವನ ಹುಟ್ಟಿನಿಂದ ಸಾಯುವ ಕಾಲದವರೆಗೂ ಬಳಸಲಾಗುತ್ತದೆ . ಶಿಶುನಾಳ ಶರೀಫರು ಬಿದಿರಿನ ಬಗ್ಗೆ ಈ ತತ್ವಪದದಲ್ಲಿ ತಿಳಿಸಿದ್ದಾರೆ . ಹುಟ್ಟುತ್ತ ಹುಲ್ಲಾಗಿ ಬೆಳೆಯುತ್ತಾ ಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ . ಮಕ್ಕಳನ್ನು ತೂಗುವ ತೊಟ್ಟಿಲಾಗಿ , ಪಲ್ಲಕ್ಕಿಯಾಗಿ , ಹೂ – ಪತ್ರೆಗಳಿಗೆ ಬುಟ್ಟಿಯಾಗಿ , ಮಹಾತ್ಮರ ಕೈಗೆ ಬೆತ್ತವಾಗಿ ಬಳಕೆಯಾಗುತ್ತದೆ . ಕುಟ್ಟುವ ಒನಕೆಯಾಗಿ , ಅಂಬಿಗನಿಗೆ ದೋಣಿ ನಡೆಸಲು ಕೋಲಾಗಿ , ರೈತನಿಗೆ ಹೊಲದಲ್ಲಿ ಬಿತ್ತನೆ ಮಾಡಲು ಉಪಯುಕ್ತವಾದ ಕೂರಿಗೆಯಾಗಿ ಬಳಕೆಯಾಗುತ್ತದೆ . ಬೀಸುವ ಕಲ್ಲಿನ ಗೂಟವಾಗಿ , ಧಾನ್ಯ ಕೇರುವ ಮರವಾಗಿ , ಮುದುಕರಿಗೆ ಊರುಗೋಲಾಗಿ , ಕೋಲಾಟ ಆಡಲು ಬಳಸುವ ಕೋಲಾಗಿ , ಎತ್ತಿನ ಬಂಡಿಯಾಗಿ , ಜಾತ್ರೆಗಳಲ್ಲಿ ಬಳಸುವ ನಂದಿಕೋಲಾಗಿ ನೆರಳಿಗೆ ಚಪ್ಪರವಾಗಿ , ಏಕದಂಡಿ ಎಂಬ ವಾದ್ಯವಾಗಿ , ಓಲಗ ( ಶಹನಾಯಿ ) ಆಗಿ ಬಿದಿರು ಬಹು ರೂಪದಲ್ಲಿ ಮಾನವನಿಗೆ ಉಪಕಾರಿಯಾಗಿದೆ .

2. ‘ ಗುರುಕರುಣೆ ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಕಡಕೋಳ ಮಡಿವಾಳಪ್ಪನವರು ‘ ಗುರುಕರುಣೆ ‘ ಎಂಬ ತತ್ವಪದದಲ್ಲಿ ಸ್ನೇಹ , ಸಂಬಂಧ , ಸೇವೆ ಮುಂತಾದ ವಿಷಯಗಳನ್ನು ಕುರಿತು ಹೇಳಿದ್ದಾರೆ . ಯಾವ ವ್ಯಕ್ತಿಯು ಗುರುಗಳ ಬಗ್ಗೆ ಗೌರವವನ್ನು ಹೊಂದಿಲ್ಲವೋ , ಅವರ ಕೃಪೆಯನ್ನು ಗಳಿಸಿಲ್ಲವೋ ಅಂತಹವನ ಸ್ನೇಹವನ್ನು ಸಾಯುವವರೆಗೂ ಮಾಡಬಾರದು . ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ ಮಾಡಬಾರದು . ಕೆಟ್ಟ ಮನುಷ್ಯನ ಸ್ನೇಹ ಮಾಡಿ ಕೆಡಬಾರದು . ಸಾಧು – ಸತ್ಪುರುಷರ ಸೇವೆ ಮಾಡುವುದರ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕು . ಅಕ್ಕ – ತಂಗಿಯರೆಂದು ಬಾಯಲ್ಲಿ ಕರೆದು ಅವರ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು . ಸುಮ್ಮನೆ ಊಟಮಾಡಿಕೊಂಡು ಕುಳಿತು ಸೋಮಾರಿಯಾಗಿ ಕಾಲ ಕಳೆಯಬಾರದು . ಹಳೆಯದೆಲ್ಲವು ಶ್ರೇಷ್ಟವಲ್ಲವೆಮದು ಕಡೆಗಣಿಸಿ , ಇಂದಿನದೇ ಶ್ರೇಷ್ಠವೆಂದು ಸರಿಮಾಡಬಾರದು .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಮಹಾತ್ಮರ ಕೈಗೆ ಬೆತ್ತ ನಾನಾದೆ ”

ಆಯ್ಕೆ : ಈ ವಾಕ್ಯವನ್ನು ಶಿಶುನಾಳ ಶರೀಫರು ಬರೆದಿರುವ ‘ ಬಿದಿರು ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬಿದಿರಿನ ಉಪಯೋಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಶಿಶುನಾಳ ಶರೀಫರು ಈ ಮಾತನ್ನು ಹೇಳಿದ್ದಾರೆ . ಸ್ವಾರಸ್ಯ : ಬಹೂಪಯೋಗಿಯಾದ ಬಿದಿರು ಅನೇಕ ರೀತಿಯಲ್ಲಿ ಮಾನವನ ಜೀವನದಲ್ಲಿ ಬಳಸಲ್ಪಡುತ್ತದೆ . ಹಾಗೆಯೇ ಅದು ಮಹಾತ್ಮರು ಬಳಸುವ ಬೆತ್ತವಾಗಿಯೂ ಬಳಕೆಯಾಗುವ ಶ್ರೇಷ್ಠತೆಯನ್ನು ಹೊಂದಿದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .

2. “ ಬೆಳೆ ಬೆಳೆಯುತ್ತ ದಿವಿನಾದೆ ”

ಆಯ್ಕೆ : ಈ ವಾಕ್ಯವನ್ನು ಶಿಶುನಾಳ ಶರೀಫರು ಬರೆದಿರುವ ‘ ಬಿದಿರು ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬಿದಿರು ಬೆಳೆಯುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಶಿಶುನಾಳ ಶರೀಫರು ಈ ಮಾತನ್ನು ಹೇಳಿದ್ದಾರೆ . ಸ್ವಾರಸ್ಯ : ಬೃಹದಾಕಾರವಾಗಿ ಬೆಳೆಯುವ ಬಿದಿರು ಹುಟ್ಟುವಾಗ ಹುಲ್ಲಾಗಿ ಹುಟ್ಟುತ್ತದೆ . ( ಇದು ಹುಲ್ಲಿನ ವರ್ಗಕ್ಕೆ ಸೇರಿದ ದೊಡ್ಡ ಸಸ್ಯ ) ಆದರೆ ಬೆಳೆಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ . ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .

3. “ ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಿಬೇಡ “

ಆಯ್ಕೆ : ಈ ವಾಕ್ಯವನ್ನು ಕಡಕೋಳ ಮಡಿವಾಳಪ್ಪನವರು ಬರೆದಿರುವ ‘ ಗುರುಕರುಣ ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಎಂತಹ ಜನರ ಸ್ನೇಹ ಮಾಡಬಾರದು ಎಂದು ತಿಳಿಸುವ ಸಂದರ್ಭದಲ್ಲಿ ಮಡಿವಾಳಪ್ಪನವರು ಈ ಮಾತನ್ನು ಹೇಳಿದ್ದಾರೆ . ಸ್ವಾರಸ್ಯ : ತತ್ವಪದಕಾರರು ಸ್ನೇಹ ಮಾಡುವ ಬಗೆಗೆ ‘ ಗುರುಕರುಣವಿಲ್ಲದವನ ಸ್ನೇಹವನ್ನು ಸಾಯುವವರೆಗೂ ಮಾಡಬಾರದು . ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು ಎಂದು ತಿಳಿಸಿದ್ದಾರೆ . ೨. “ ನಿತ್ಯಕಾಲದಲ್ಲಿ ಅಶನವ ಉಂಡು ಹೊತ್ತು ಗಳಿಯಲಿಬೇಡ ” ಆಯ್ಕೆ : ಈ ವಾಕ್ಯವನ್ನು ಕಡಕೋಳ ಮಡಿವಾಳಪ್ಪನವರು ಬರೆದಿರುವ ‘ ಗುರುಕರುಣ ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸುಮ್ಮನೆ ವ್ಯರ್ಥವಾಗಿ ಕಾಲಕಳೆಯಬಾರದೆಂಬುದನ್ನು ತಿಳಿಸುವ ಸಂದರ್ಭದಲ್ಲಿ ಮಡಿವಾಳಪ್ಪನವರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಯಾವುದೇ ವ್ಯಕ್ತಿಯಾದರೂ ಸರಿ ಸುಮ್ಮನೆ ಊಟಮಾಡಿಕೊಂಡು ಕುಳಿತು ಸೋಮಾರಿಯಾಗಿ ಕಳೆಯಬಾರದು . ಅಂದರೆ ಏನಾದರು ಉಪಯುಕ್ತವಾದ ಕೆಲಸ ಮಾಡಬೇಕು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .

ಈ ] ಕೊಟ್ಟಿರುವ ಪದಗಳಲ್ಲಿ ಸೂಕ್ತಪದವನ್ನು ಆರಿಸಿ ಬರೆಯಿರಿ .

1. ‘ ಆಶನ ‘ ಪದದ ಅರ್ಥ ಬಟ್ಟೆ

2. ‘ ಬೆತ್ತ ‘ ಪದದ ತತ್ಸಮ ರೂಪ ವೇತ್ರ

3. ‘ ಕರುಣೆ ‘ ಪದದ ವಿರುದ್ಧಾರ್ಥಕ ಪದ ನಿಷ್ಕರುಣೆ

4. ‘ ಅಂಬಿಗ ‘ ಎಂದರೆ ದೋಣಿ ನಡೆಸುವವ

9th Tatva Padagalu Kannada Notes Pdf

ಇತರೆ ವಿಷಯಗಳು:

ಮರಳಿ ಮನೆಗೆ ಪದ್ಯದ ನೋಟ್ಸ್

ನಿಯತಿಯನಾರ್ ಮೀರಿದಪರ್ ಪದ್ಯದ ನೋಟ್ಸ್‌

Leave your vote

32 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.