9ನೇ ತರಗತಿ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್ | 9th Standard Ninna Muttina Sattigeyanittu Salahu Kannada Notes

9ನೇ ತರಗತಿ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್, 9th Standard Ninna Muttina Sattigeyanittu Salahu Kannada Notes Question Answer Pdf Download, ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು Question and Answer

ತರಗತಿ : 9ನೇ ತರಗತಿ

ಪದ್ಯದ ಹೆಸರು : ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು

ಕೃತಿಕಾರರ ಹೆಸರು : ರಾಘವಾಂಕ

Table of Contents

ಕವಿ ಪರಿಚಯ :

ರಾಘವಾಂಕ

* ರಾಘವಾಂಕನು ಕ್ರಿ . ಶ . ಸುಮಾರು ೧೨೨೫ ರಲ್ಲಿ ಹಂಪಿಯಲ್ಲಿ ಜೀವಿಸಿದ್ದನು .

* ಇವರು ‘ ರಗಳೆಯ ಕವಿ ‘ ಎಂದು ಪ್ರಸಿದ್ಧನಾದ ಹರಿಹರನ ಸೋದರಳಿಯ ಮತ್ತು ಶಿಷ್ಯನಾಗಿದ್ದನು .

* ವಿರೂಪಾಕ್ಷನ ಪರಮಭಕ್ತನಾದ ಇವನು ರಚಿಸಿರುವ ಕೃತಿಗಳೆಂದರೆ : ಹರಿಶ್ಚಂದ್ರ ಕಾವ್ಯ , ಸಿದ್ಧರಾಮ ಚಾರಿತ್ರ್ಯ , ವೀರೇಶ್ವರ ಚರಿತೆ , ಸೋಮನಾಥ ಚರಿತೆ , ಶರಭ ಚಾರಿತ್ರ್ಯ , ಹರಿಹರ ಮಹತ್ವ ಎಂಬ ಕಾವ್ಯಗಳನ್ನು ಷಟ್ಟದಿ ಛಂದಸ್ಸಿನಲ್ಲಿ ರಚಿಸಿದ್ದಾನೆ .

* ಈತನಿಗೆ ಉಭಯ ಕವಿ ಕಮಲ ರವಿ , ಕವಿ ಶರಭ ಭೇರುಂಡ , ಪಟ್ಟದಿಯ ಬ್ರಹ್ಮ ಎಂಬ ಬಿರುದುಗಳಿದ್ದವು .

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು question and answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?

ಉತ್ತರ : ಗಾನರಾಣಿಯರು ಹರಿಶ್ಚಂದ್ರನನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಕೇಳಿದರು .

2. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?

ಉತ್ತರ : ಸತ್ತಿಗೆಯು ರಾಜಪಟ್ಟ ಕಟ್ಟುವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ .

3. ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ ?

ಉತ್ತರ : ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದಂತೆ ಎಂದು ಹೋಲಿಸಿದ್ದಾನೆ .

4. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು ?

ಉತ್ತರ : ಗಾನರಾಣಿಯರಿಗೆ ಹರಿಶ್ಚಂದ್ರನು ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು ?

ಉತ್ತರ : ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ . ಈ ಭೂಮಿಯ ಮೇಲೆ , ಯುದ್ಧರಂಗದಲ್ಲಿ ಸತ್ತಿಗೆಯನ್ನು ನೋಡಿದ ಶತ್ರುಗಳು ನಿಲ್ಲುವುದಿಲ್ಲ . ಈ ಸತ್ತಿಗೆಯ ನೆರಳಿನಲ್ಲಿ ಯಾವನು ಇರುವನೋ ಆತನಿಗೆ ವಿಪತ್ತು , ಅಡಚಣೆಗಳು , ಬಡತನ , ರೋಗ , ಅಪಕೀರ್ತಿ , ಸೋಲು , ಭಯ ಕಳೆದುಹೋಗುವುದು , ಆದ್ದರಿಂದ ಇದನ್ನು ಕೊಡುವುದಿಲ್ಲ ” ಎಂದನು .

2. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ ?

ಉತ್ತರ : ಹರಿಶ್ಚಂದ್ರನು ಗಾನರಾಣಿಯರಿಗೆ : “ ಈ ಸತ್ತಿಗೆಯು ಜನರಿಗೆ ಕೊಡಬಾರದು . ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ ಇದು ದೇವರು , ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ ಇದು ಪೋಷಿಸುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಇದು ಚತುರಂಗ ಬಲ ಎನಿಸಿಕೊಂಡಿದೆ . ” ಎಂದು ಸತ್ತಿಗೆಯ ವಿಶೇಷತೆಯನ್ನು ತಿಳಿಸಿದನು .

3. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನೈಯರ ರೂಪಲಾವಣ್ಯ ಹೇಗಿತ್ತು ? ವಿವರಿಸಿ .

ಉತ್ತರ : ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದರೋ ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಹೊಮ್ಮಿದ ಹೊಸ ವಿಷದ ಹೊಗೆ ಸುರಿದು , ಕಪ್ಪಾಗಿ ಗಟ್ಟಿಯಾದಂತೆಮನುಷ್ಯರಾದರೋ ! ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ ! ಎನ್ನುವಂತೆ ಇದ್ದರು .

4. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು ? ವಿವರಿಸಿ ,

ಉತ್ತರ : ಗಾನರಾಣಿಯರು . ಮಹಾರಾಜ ಹರಿಶ್ಚಂದ್ರನನ್ನು ಕುರಿತು : ” ಮಝ , ಭಾಮಿ , ಆದಟರಾಯ , ಮಝರೇ ರಾಯ , ರಾಯದಳವುಳಕಾರ , ರಾಯಕಂಟಕ , ರಾಯಜಗಜೆಟ್ಟಿ , ರಾಯದಲ್ಲ , ರಾಯಶೋಳಾದಳ , ರಾಯಭುಜಬಲಭೀಮ , ರಾಯಮರ್ದನ ” ಎಂದು ಗುಣಗಾನ ಮಾಡುತ್ತಾ “ ಒಡೆಯನೇ ಚಿರಂಜೀವಿಯಾಗು ” ಎಂದು ಕೀರ್ತಿಸಿ ಹಾಡಿದರು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ .

ಉತ್ತರ : ( ಹರಿಶ್ಚಂದ್ರನು ಗಾನರಾಣಿಯರ ನೃತ್ಯವನ್ನು ಮೆಚ್ಚಿ ಆಭರಣಗಳನ್ನು ಬಹುಮಾನವಾಗಿ ನೀಡುತ್ತಾನೆ . ಆಗ ಅವರು ) ಗಾನರಾಣಿಯರು : ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ನಮಗೆ ನೀನು ಆಭರಣಗಳನ್ನು ಕೊಟ್ಟರೆ ಪ್ರಯೋಜನವೇನು ? ಅದಕ್ಕೆ ಬದಲಾಗಿ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ನಮ್ಮನ್ನು ಕಾಪಾಡು . ಹರಿಶ್ಚಂದ್ರ ಸೂರ್ಯವಂಶದ ಪರಂಪರೆಯ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ . ಆದ್ದರಿಂದ ಇದನ್ನು ಕೊಡಲು ಸಾಧ್ಯವಿಲ್ಲ . ಪ್ರೀತಿಯಿಂದ ಎಲ್ಲವನ್ನು ಕೊಡಬಹುದು . ಹಾಗೆಂದು ತಾಯಿ , ತಂದೆ , ಹೆಂಡತಿ , ದೇವರು ಮತ್ತು ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಶೂರು ಜಗತ್ತಿನಲ್ಲಿ ಇಲ್ಲ . ಗಾ.ರಾ : ಮಹಾರಾಜ ನೀನು ಈಗ ಹೇಳಿದ ಇವರಲ್ಲಿ ಯಾರನ್ನಾದರು ಬೇಡಿದರೆ ಕೊಡಬೇಡ , ಆದರೆ ನಿನ್ನ ಬಳಿ ಇರುವ ಮುತ್ತಿನ ಸತ್ತಿಗೆಯನ್ನು ಕೊಡು ಎಂದರೆ ಲೋಭವೇಕೆ ? ಹರಿಶ್ಚಂದ್ರ ಏಕೆಂದರೆ , ನನಗೆ ಇದಲ್ಲದೆ ಬೇರೆ ತಾಯಿತಂದೆಯರು ಇಲ್ಲ . ವಂಶಪರಂಪರೆಯಿಂದ ಬಂದಿದ್ದರಿಂದ ಇದು ತಂದೆ , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ ಇದು ದೇವರು , ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ ಇದು ನನ್ನನ್ನು ಪೋಷಿಸುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಇದೇ ಚತುರಂಗ ಬಲ ಎನಿಸಿಕೊಂಡಿದೆ .

2. ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ ,

ಉತ್ತರ : ಹರಿಶ್ಚಂದ್ರನು ನೀಡಿದ . ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೀಗೆ ಹೇಳುತ್ತಾರೆ : “ ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು ? ಬಾಯಾರಿಕೆಯ ಸಮಯದಲ್ಲಿ ತುಪ್ಪವು ದೊರಕಿ ಫಲವೇನು ? ರೋಗಬಂದು ಬಿದ್ದಿರುವಾಗ ರಂಭೆಯು ದೊರಕಿ ಫಲವೇನು ? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು ? ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ಸಮಯದಲ್ಲಿ ನಮಗೆ ನೀನು ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫಲವೇನು ? ಅದರ ಬದಲು ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು ಬಡವನಿಗೆ ಚಿನ್ನವನ್ನು ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು , ಅವರನ್ನು ಹೋಲುವ ನಮಗೆ ಸುಡುಸುಡನೆ ಸುಡುವ ಈ ಬಿರುಬಿಸಿಲ ಸೆಕೆಯಲ್ಲಿ ಉಸಿರಿನ ಬಿಸಿ ಹೆಚ್ಚಾಗಿ ಉರಿಯಹತ್ತಿದೆ . ನಮ್ಮ ಬಾಯಿ ಬತ್ತಿಹೋಗಿದೆ . ಬಿಸಿಲ ಝಳದಿಂದ ಸಾವು ಆವರಿಸುತ್ತಿದೆ . ಆದ್ದರಿಂದ ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ನಮ್ಮನ್ನು ಕಾಪಾಡು ಎಂದರು .

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು “

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ಬಹುಮಾನವಾಗಿ ನೀಡಿದ ಆಭರಣಗಳಿಗೆ ಬದಲಾಗಿ ಗಾನರಾಣಿಯರು ನಿನ್ನ ಮುತ್ತಿನ ಸತ್ತಿಗೆಯನ್ನು ನೀಡು ಎಂದು ಕೇಳಿದಾಗ ಹರಿಶ್ಚಂದ್ರನು ಈ ಮಾತನ್ನು ಹೇಳುತ್ತಾನೆ . ಪ್ರೀತಿಯಿಂದ ಎಲ್ಲವನ್ನೂ ಕೊಡಬಹುದು ಬಿಡಬಹುದು . ಹಾಗೆಂದು ತಾಯಿ – ತಂದೆ , ಹೆಂಡತಿ – ಮಕ್ಕಳು . ಬಂಧು – ಬಾಂಧವರು , ದೇವರು , ವಿಶ್ವಾಸವಿಟ್ಟುಕೊಂಡಿರುವ ಪರಿವಾರವನ್ನು ನೀಡಲು ಸಾಧ್ಯವೇ ಎಂದು ಹರಿಶ್ಚಂದ್ರ ಅವರಿಗೆ ಮನವರಿಕೆ ಮಾಡುತ್ತಾನೆ .

ಸ್ವಾರಸ್ಯ : ಕುಟುಂಬ , ಬಂಧು – ಬಾಂಧವರು , ದೇವರು ಮುಂತಾದವರನ್ನು ಯಾರಿಗೂ ಬಿಟ್ಟುಕೊಡದೆ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2. ” ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು “

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ ಗಾನರಾಣಿಯರಿಗೆ ಆಭರಣಗಳನ್ನು ಬಹುಮಾನವಾಗಿ ನೀಡಿದಾಗ ಅವರು ಅದನ್ನು ತಿರಸ್ಕರಿಸಿ ಹರಿಶ್ಚಂದ್ರನಿಗೆ ಈ ಮಾತನ್ನು ಹೇಳುತ್ತಾರೆ . ತಮಗೆ ಈ ಬಹುಮಾನ ನೀಡಿದ್ದು ಸೂಕ್ತವಲ್ಲ ಅದಕ್ಕೆ ಬದಲಾಗಿ ಸತ್ತಿಗೆಯನ್ನು ನೀಡು ಎಂದು ಕೇಳುತ್ತಾರೆ .

ಸ್ವಾರಸ್ಯ : ವಂಶಪಾರ್ಯವಾಗಿ ಬಂದಿರುವ ಪವಿತ್ರವಾದ ರಾಜಲಾಂಛನಗಳಲ್ಲಿ ಒಂದಾದ ಸತ್ತಿಗೆಯನ್ನು ( ಬೆಳ್ಕೊಡೆಯನ್ನು ) ತಮ್ಮ ಬಿಸಿಲಬೇಗೆ ಪರಿಹರಿಸಿಕೊಳ್ಳಲು ಕೇಳುವುದು ಸ್ವಾರಸ್ಯಕರವಾಗಿದೆ .

3. “ ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೊ ”

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನ ಬಳಿಗೆ ಬಂದ ಗಾನರಾಣಿಯರ ರೂಪವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಕಾರಿರುಳಂತಿರುವ ಕನೈಯರು ಹಗಲಿನಂತೆ ಕಾಂತಿಯುತನಾಗಿದ್ದ ಮಹಾರಾಜನನ್ನು ನೋಡಲೆಂದು ಬಂದರೋ ಎಂದು ವರ್ಣಿಸಲಾಗಿದೆ .

ಸ್ವಾರಸ್ಯ : ಗಾನರಾಣಿಯರನ್ನು ಕಾರಿರುಳಿಗೂ ಹರಿಶ್ಚಂದ್ರನನ್ನು ಹಗಲಿಗೂ ಸಮೀಕರಿಸಿರುವುದು ಸ್ವಾರಸ್ಯಕರವಾಗಿದೆ .

4. “ ಬಡತನದ ಹೊತ್ತಾನೆ ದೊರಕಿ ಫಲವೇನು

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ ಗಾನರಾಣಿಯರಿಗೆ ಆಭರಣಗಳನ್ನು ಬಹುಮಾನವಾಗಿ ನೀಡಿದಾಗ ಅವರು ಅದನ್ನು ತಿರಸ್ಕರಿಸಿ ಹರಿಶ್ಚಂದ್ರನಿಗೆ ಈ ಮಾತನ್ನು ಹೇಳುತ್ತಾರೆ . ತಮಗೆ ಈ ಬಹುಮಾನ ನೀಡಿದ್ದು ಸೂಕ್ತವಲ್ಲ ಎಂದು ಅವರು ಹೇಳುತ್ತಾರೆ .

ಸ್ವಾರಸ್ಯ : ಬಡತನದಿಂದ ಕೂಡಿರುವವನಿಗೆ ಆನೆ ಕೊಡುವುದರಿಂದ ಅವನಿಗೆ ಪ್ರಯೋಜನವಾಗುತ್ತದೆಯೇ ? ಎಂದು ಹೇಳಿರುವುದು ಸ್ವಾರಸ್ಯಕರವಾಗಿದೆ .

ಭಾಷಾ ಚಟುವಟಿಕೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ಷಟ್ಟದಿ ಎಂದರೇನು ? ವಿಧಗಳಾವುವು ?

ಉತ್ತರ : ಷಟ್ಟದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ , ಷಟ್ಟದಿಯಲ್ಲಿ ಶರ , ಕುಸುಮ , ಭೋಗ , ಭಾಮಿನಿ , ಪರಿವರ್ಧಿನಿ , ವಾರ್ಧಕ ಎಂಬ ಆರು ವಿಧಗಳಿವೆ.ಷಟ್ – ಆರು , ಪದಿ – ಸಾಲು , ಆರುಸಾಲುಗಳ ಪದ್ಯ – ಷಟ್ಟದಿ .

2. ಭಾಮಿನಿ ಷಟ್ನದಿಯ ಲಕ್ಷಣವೇನು ?

ಉತ್ತರ : 1 , 2 , 4 ಮತ್ತು 5 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ . 3 ಮತ್ತು 6 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು , ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ .

3. ವಾರ್ಧಕ ಷಟ್ನದಿಯ ಲಕ್ಷಣವನ್ನು ವಿವರಿಸಿ .

ಉತ್ತರ : 1. 2. 4 ಮತ್ತು 5 ನೆಯ ಸಾಲುಗಳಲ್ಲಿ 5 ಮಾತ್ರೆಗಳ 4 ಗಣಗಳಿರುತ್ತವೆ . 3. ಮತ್ತು 6 ನೆಯ ಸಾಲುಗಳಲ್ಲಿ 5 ಮಾತ್ರೆಗಳ 6 ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ .

9th Standard Ninna Muttina Sattigeyanittu Salahu Kannada Notes Question Answer Pdf

ಇತರೆ ಪದ್ಯಗಳು :

ತತ್ವಪದಗಳು ಪದ್ಯದ ನೋಟ್ಸ್

ಮರಳಿ ಮನೆಗೆ ಪದ್ಯದ ನೋಟ್ಸ್ 

Leave your vote

20 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.