10ನೇ ತರಗತಿ ಕನ್ನಡ ಎದೆಗೆ ಬಿದ್ದಅಕ್ಷರ ನೋಟ್ಸ್‌ | 10th Standard Kannada Edege Bidda Akshara Notes

10ನೇ ತರಗತಿ ಎದೆಗೆ ಬಿದ್ದ ಅಕ್ಷರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, Edege Bidda Akshara Kannada Lesson Notes Question Answer Pdf Download 2023

ತರಗತಿ : 10ನೇ ತರಗತಿ

ಪಾಠದ ಹೆಸರು : ಎದೆಗೆ ಬಿದ್ದ ಅಕ್ಷರ

ಕೃತಿಕಾರರ ಹೆಸರು : ದೇವನೂರು ಮಹಾದೇವ

Edege Bidda Akshara Kannada Notes |ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು

ಲೇಖಕರ ಪರಿಚಯ :

ದೇವನೂರ ಮಹಾದೇವ ( ಕ್ರಿ.ಶ .೧೯೪೮ ) ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ದೇವನೂರಿನವರು. ಆಡುಮಾತಿನ ಇವರು . ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಂಡಾಯ ಮತ್ತು ದಲಿತ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು, ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದಶಿಲ್ಪಿ ಇವರು.

ದ್ಯಾವನೂರು , ಒಡಲಾಳ, ಗಾಂಧಿ ಮತ್ತು ಮಾವೊ , ನಂಬಿಕೆಯನೆಂಟ , ನೋಡು ಮತ್ತು ಕೂಡು , ಎದೆಗೆ ಬಿದ್ದ ಅಕ್ಷರ ಶ್ರೀಯುತರ ಪ್ರಮುಖ ಕೃತಿಗಳು . ಇವರ ಕುಸುಮಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ .

Edege Bidda Akshara Kannada Notes Question Answer

ಆ ] ಒಂದು ವಾಕ್ಯದಲ್ಲಿ ಉತ್ತರಿಸಿ .

1. ಮನೆಮಂಚಮ್ಮನ ಕತೆ ಹೇಳಿದ ಕವಿ ಯಾರು ?

ಮನೆಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ

2. ‘ ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಯಾರು ?

‘ ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಹಳಕಟ್ಟಿಯವರು ,

3. ಇಂದಲ್ಲ – ನಾಳೆ ಫಲ ಕೊಡುವ ಅಂಶಗಳು ಯಾವುವು ?

‘ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ‘ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ .

4. ಮನೆ ಮಂಚಮ್ಮ ಯಾರು ?

ಕವಿ ಸಿದ್ಧಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕತೆಯಲ್ಲಿನ ಗ್ರಾಮದೇವತೆ ಮನೆ ಮಂಚಮ್ಮ .

5. ವಚನಕಾರರಿಗೆ ಯಾವುದು ದೇವರಾಗಿತ್ತು ?

ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .

6. ಅಶೋಕ ಪೈ ಅವರ ವೃತ್ತಿಯಾವುದು ?

ಅಶೋಕ ಪೈ ಅವರು ಮನೋವೈದ್ಯರು .

7. ದೇವನೂರರ ‘ ನನ್ನ ದೇವರು ‘ ಯಾರೆಂಬುದನ್ನು ಸ್ಪಷ್ಟಿಕರಿಸಿ ,

ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದು ದೇವನೂರು ಮಹಾದೇವ ಅವರ ದೇವರಾಗುತ್ತದೆ .

ಆ ] ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1 , ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವೇನು ?

ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವಾಗ , ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆ ಆಡುತ್ತ ತಮ್ಮಷ್ಟಕ್ಕೆ ತಾವು ಇರುವಾಗ , ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ . ಅದೇ ಟೆಲಿವಿಷನ್‌ನಲ್ಲಿ ಯಾವುದಾರೊಂದು ನೃತ್ಯದೃಶ್ಯ ಬಂದಾಗ ಅದನ್ನು ನೋಡುತ್ತಿರುವವರ ಮಿಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದೆ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುತ್ತದೆ . ಇದು ಆಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯ .

2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ? ವಿವರಿಸಿ ,

ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ , ಜ್ಞಾನ ಮಾತ್ರ ಅಲ್ಲ ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು , ಅದು ಕೇಳಿ ತಿಳಿದಿದ್ದಲ್ಲ . ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ , ಅದು ತರ್ಕವಲ್ಲ . ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು , ‘ ಅಂದರೆ ಜ್ಞಾನ – ನಡೆ – ನುಡಿ – ಕ್ರಿಯೆಯಿಂದ ಏಕರೂಪವಾಗಿ ಒಡಮೂಡಿದ ತಿಳಿವಳಿಕೆಯೇ ಅರಿವು ‘ ಎಂಬುದು ಅವರ ಅಭಿಮತ .

ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯನ್ನು ಬರೆಯಿರಿ ,

ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯೆಂದರೆ- ಭೂಮಿಗೆ ಬಿದ್ದ ಬೀಜ , ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು ಎಂಬ ನೀತಿಯನ್ನು ಹೇಳುವ ಕಾರುಣ್ಯ ಸಮತೆಯ ಕತೆಯನ್ನು ಹೇಳಿದ್ದಾರೆ . ಅದೆಂದರೆ ಒಮ್ಮೆ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ . ಗುಡಿಯ ಕಟ್ಟಡ ಚಾವಣಿಯವರೆಗೂ ಮೇಲೇಳುತ್ತದೆ . ಆಗ ಇದ್ದಕ್ಕಿದ್ದಂತೆಯೇ ಮಂಚಮ್ಮದೇವಿ ಭಕ್ತನೊಬ್ಬನ ಮೇಲೆ ಆವಾಹನೆಯಾಗಿ “ ಏನ್ ಮಾಡ್ತಾ ಇದ್ದೀರಿ ? ” ಎಂದು ಕೇಳುತ್ತಾಳೆ . “ ನಿನಗೊಂದು ಗುಡಿಕಡ್ತಾ ಇದ್ದೀವಿ , ತಾಯಿ ” ಎಂದು ಹೇಳಿದಾಗ ‘ ನಿಮಗೆಲ್ಲಾ ಮನೆ ಉಂಟಾ ? ‘ ಎಂದು ಕೇಳುತ್ತಾಳೆ . ಅದಕ್ಕೆ ಉತ್ತರವಾಗಿ ಅಲ್ಲೊಬ್ಬ “ ನನಗಿಲ್ಲತಾಯಿ ‘ ಎಂದು ಹೇಳುತ್ತಾನೆ . ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದು ಮಂಚಮೃತಾಯಿ ಹೇಳುತ್ತಾಳೆ . ಅಂದಿನಿಂದ ಮಂಚಮ್ಮ ‘ ಮನೆ ಮಂಚಮ್ಮ ‘ ಎಂದೇ ಪ್ರಸಿದ್ಧಳಾದ ತಾಯಿ ಚಾವಣಿ ಇಲ್ಲದ ಗುಡಿಯಲ್ಲಿ ಪೂಜಿತಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾಳೆ .

ಈ ] ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ ,

1. “ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ . ”

ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಜನ ಪ್ರಾರಂಭಿಸಿದಾಗ , ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರೊಡನೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಗ್ರಾಮದೇವತೆ ಮಂಚಮ್ಮ ಜನರಿಗೆ ಹೇಳುತ್ತಾಳೆ .

ಸ್ವಾರಸ್ಯ : – ತನ್ನ ಭಕ್ತರಿಗೆ ಮನೆ ಇಲ್ಲದ ಮೇಲೆ ನನಗೂ ಮನೆ ಬೇಡ ಎಂಬ ಮಂಚಮೃದೇವತೆಯ ಮಾತು , ಕಾರುಣ್ಯ ಮತ್ತು ಸಮಾನತೆಯ ದ್ಯೋತಕವಾಗಿರುವುದು ಈ ಮಾತಿನ ಸ್ವಾರಸ್ಯವಾಗಿದೆ .

2. “ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ . ”

ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ಲೇಖಕರಾದ ದೇವನೂರು ಮಹಾದೇವ ಅವರು ಡಾ . ಆಶೋಕ ಪೈ ಅವರ ಒಂದು ಸಂಶೋಧನಾ ಸತ್ಯಕತೆಯನ್ನು ಉದಾಹರಣೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – “ ಯಾವುದೇ ಒಂದು ಜೀವಿಗೆ ಆಗುವ ದುಃಖ – ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ , ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೆ ” ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .

3. “ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ”

ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : ಲೇಖಕರು ವಚನಕಾರರ ಪ್ರಕಾರ ದೇವರೆಂದರೆ ಏನು ಎಂದು ಹೇಳುವ ಸಂದರ್ಭದಲ್ಲಿ , ‘ ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ . ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟದೈವ . ಅಂದರೆ ಅವರಿಗೆ ಅವರವರ ಪ್ರಶ್ನೆಯೇ ದೇವರಾಗಿತ್ತು . ‘ ಎಂದು ಹೇಳಿದ್ದಾರೆ

ಸ್ವಾರಸ್ಯ : ಪ್ರಜ್ಞೆಯ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ . ಆದ್ದರಿಂದ ವಚನಕಾರರು ಬೆಂಕಿಯಂತಹ ಪ್ರಜ್ಞೆಯನ್ನೇ ಪ್ರಮಾಣವಾಗಿಸಿಕೊಂಡು ಸತ್ಯಕ್ಕೆ ಆದ್ಯತೆ ನೀಡಿದರು ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

4. “ ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ”

ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ಲೇಖಕರಾದ ದೇವನೂರು ಮಹಾದೇವ ಅವರು “ ಕೊಲೆ , ಸುಲಿಗೆ , ದ್ವೇಷ , ಅಸೂಯೆಗಳಿಂದ ಶೋಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುವುದರಿಂದ ಕಾರುಣ್ಯ ಹಾಗೂ ಸರ್ವಸಮಾನತೆ ಮನೋಭಾವ ಮೂಡಿಸಿಕೊಂಡು ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ವಪೂರ್ಣವಾಗಿ ಅಭಿವ್ಯಕ್ತಗೊಂಡಿದೆ .

ಈ ] ಭಾಷಾಚಟುವಟಿಕೆ :

ಜಾಣತನ ‘ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :

ಎ) ತದ್ದಿತಾಂತ ನಾಮ ಬಿ) ತದ್ದಿತಾಂತ ಅವ್ಯಯ ಸಿ) ಕೃದಾಂತಭಾವನಾಮ ಡಿ) ತದ್ದಿತಾಂತಭಾವನಾಮ

ವಿರುದ್ಧಾರ್ಥಕ ಪದಗಳು :

೧. ಒಳಿತು X ಕೆಡುಕು , ೨. ಸಮಷ್ಟಿ X ವೃಷ್ಟಿ ೩ , ಪುಣ್ಯ X ಪಾಪ ೪ , ಬೆಳಕು X ಕತ್ತಲು . ೫. ಧರ್ಮ X ಆಧರ್ಮ

೨. ‘ ಸಮಷ್ಟಿ ‘ ಪದದ ವಿರುದ್ಧಾರ್ಥಕ ರೂಪ :

ಎ ) ಸಮಾನದೃಷ್ಟಿ ಬಿ ) ವ್ಯಷ್ಟಿ ಸಿ ) ಸಮದೃಷ್ಟಿ ಡಿ) ಸಮಪುಷ್ಟಿ

೩. ಅವನು ಭೀಮನಿಗಿಂತ ಬಲಶಾಲಿಯಾದ ಹುಡುಗ ಈ ವಾಕ್ಯದಲ್ಲಿ ತದ್ಧಿತಾಂತಾವ್ಯಯ ಪದವಿದು :

ಎ ) ಭೀಮನಿಗಿಂತ ಬಿ ) ಅವನು ಸಿ ) ಹುಡುಗ ಡಿ ) ಬಲಶಾಲಿ

೪. ‘ ವಿಜ್ಞಾನ ‘ ಪದದ ತದ್ಭವ ರೂಪ :

ಎ) ವಿನಂತಿ ಏ) ಜ್ಞಾನ ಇ) ಬಿನ್ನಾಣ ಈ) ವೈಜ್ಞಾನಿಕ

೫. ‘ ಸಚ್ಚಿಂತನೆ ‘ ಪದವು ಈ ಸಂದಿಯ ಪದವಾಗಿದೆ :

ಎ ) ಆಗಮಸಂಧಿ ಬಿ ) ಶ್ಚುತ್ವಸಂಧಿ ಸಿ) ಅನುನಾಸಿಕ ಸಂಧಿ ಡಿ) ಜಶ್ತ್ವ ಸಂಧಿ

* ಬಳೆಗಾರ ‘ ಪದದ ಸ್ತ್ರೀಲಿಂಗ ತದ್ದಿತಾಂತ ಪದ :

ಎ ) ಬಳೆವಂತೆ ಬಿ ) ಬಳೆಗಾರುತಿ ಸಿ) ಬಳೆಗಾರ್ತಿ ಡಿ ) ಬಳೆ ಮಾರುವವಳು

೧೦. ” ಗುಡಿಕಟ್ಟು ‘ ಪದವು ಈ ಸಮಾಸ ಪದವಾಗಿದೆ :

ಎ ) ತತ್ಪುರುಸಮಾಸ ಬಿ ) ಕ್ರಿಯಾಸಮಾಸ ಸಿ ) ಅಂಶಿಸಮಾಸ ಡಿ) ದ್ವಂದ್ವಸಮಾಸ

೧೧. * ಗಳಿಗೆಗಳಿಗೆಗೆ * ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :

ಎ ) ಅನುಕರಣಾವ್ಯಯ ಬಿ ) ದ್ವಿರುಕ್ತಿ ಸಿ ) ಜೋಡಿಪದ ಡಿ) ನಾಮಪದ

೧೨. * ಮಹೋನ್ನತ ‘ ಪದವು ಈ ಸಂಧಿಗೆ ಉದಾಹರಣೆಯಾಗಿದೆ :

ಎ ) ಆಗಮಸಂಧಿ ಸಿ ) ಅನುನಾಸಿಕಸಂಧಿ ಸಿ ) ಬಳೆಗಾರಿ ಡಿ) ಗುಣಸಂಧಿ

೭. ‘ ಅವಳಿಗೋಸ್ಕರ ನನ್ನ ಬದುಕನ್ನೇ ತ್ಯಾಗಮಾಡಿದೆ ‘ ಈ ವಾಕ್ಯದಲ್ಲಿರುವ ತದ್ಧಿತಾಂತಾವ್ಯಯ ಪದ :

ಎ) ನನ್ನ ಬಿ) ತ್ಯಾಗಮಾಡು ಸಿ) ಬದುಕನ್ನೇ ಡಿ) ಅವಳಿಗೋಸ್ಕರ

೮. ‘ ಬಿಳಿಕೂದಲು ‘ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ :

ಎ ) ತತ್ಪುರುಸಮಾಸ ಬಿ ) ಕರ್ಮಧಾರೆಯ ಸಮಾಸ ಸಿ ) ಅಂಶಿಸಮಾಸ ಡಿ) ದ್ವಂದ್ವಸಮಾಸ

೯. * ಮನೆ ‘ ಪದವು ಈ ವ್ಯಾಕರಣಾಂಶವಾಗಿದೆ :

ಎ) ಅಂಕಿತನಾಮ ಬಿ) ಅನ್ವರ್ಥನಾಮ ಸಿ) ಕೃದಾಂತನಾಮ ಡಿ) ರೂಢನಾಮ

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮಾರನೆ ಪದಕ್ಕೆ ಸಂಬಂಧ ಪದ ಬರೆಯಿರಿ :

೧. ಬಿಡುಬಿಡು : ದ್ವಿರುಕ್ತಿ : : ಕೊಲೆಸುಲಿಗೆ : ಜೋಡಿನುಡಿ

೨. ನಾಟಕಕಾರ: ತದ್ಧಿತಾಂತನಾಮ : : ಚೆಲುವಿಕೆ : ತದ್ಧಿತಾಂತನಾಮ

೩. ಗುಡಿ : : ರೂಢನಾಮ : : ಮೈಸೂರು :ಅಂಕಿತನಾಮ

೪. ಹಣ : ಹಣವಂತ :: ಬಳೆ:ಬಳೆಗಾರ

೫. ಧರ್ಮ: ಅಧರ್ಮ :: ಪುಣ್ಯ : ಪಾಪ

೬. ಅದಕ್ಕಿಂತ : ತದ್ಧಿತಾಂತಾವ್ಯಯ ::ಕಪ್ಪು: ತದ್ದಿತಾಂತ ಭಾವನಾಮ

೭. ಜೀವಸಂಕುಲ : ತತ್ಪುರುಷಸಮಾಸ :: ಆ ದೇವತೆ: ಗಮಕಸಮಾಸ

೮. ಕವಿ : ಕಬ್ಬಿಗ :: ಶಿಲ್ಪಿ: ಚಿಪ್ಪಿಗ

೯. ಸಿರಿವಂತ : ಸಿರಿವಂತೆ ::ಕನ್ನಡಿಗ : ಕನ್ನಡತಿ

೧೦. ಅಲ್ಲೊಬ್ಬ : ಲೋಪಸಂಧಿ :: ಗುಡಿಯನ್ನು: ಆಗಮಸಂಧಿ

10ನೇ ತರಗತಿ ಎದೆಗೆ ಬಿದ್ದ ಅಕ್ಷರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, Edege Bidda Akshara Kannada Lesson Notes Question Answer Pdf Download 2023

ಇತರೆ ವಿಷಯಗಳು:

ಭಾಗ್ಯಶಿಲ್ಪಿಗಳು ನೋಟ್ಸ್‌

ಲಂಡನ್‌ ನಗರ ನೋಟ್ಸ್‌

Leave your vote

31 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.