9ನೇ ತರಗತಿ ಕನ್ನಡ ಮೌಲ್ವಿ ಪಾಠದ ನೋಟ್ಸ್ | 9th Standard Kannada Moulvi Lesson Notes

9ನೇ ತರಗತಿ ಕನ್ನಡ ಮೌಲ್ವಿ ಪಾಠದ ನೋಟ್ಸ್, 9th Standard Kannada Moulvi Lesson Questions and Answers Notes Pdf Download 2022

ತರಗತಿ : 9ನೇ ತರಗತಿ

ಪಾಠದ ಹೆಸರು : ಕನ್ನಡ ಮೌಲ್ವಿ

ಕೃತಿಕಾರರ ಹೆಸರು : ಗೊರೂರು ರಾಮಸ್ವಾಮಿ ಅಯ್ಯಂಗಾರ್‌

ಕೃತಿಕಾರರ ಪರಿಚಯ :

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕ್ರಿ.ಶ. ೧೯೦೪ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು . ಇವರು ಗರುಡಗಂಬದ ದಾಸಯ್ಯ , ಮೆರವಣಿಗೆ , ಹೇಮಾವತಿ ತೀರದಲ್ಲಿ , ಪುನರ್ಜನ್ಯ , ನಮ್ಮ ಊರಿನ ರಸಿಕರು ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ . ಅಮೆರಿಕದಲ್ಲಿ ಗೊರೂರು ಕೃತಿ ಪ್ರವಾಸಕಥನವಾಗಿದ್ದು , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ . ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ , ೧೯೬೭ ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ೧೯೮೨ ರಲ್ಲಿ ಶಿರಸಿಯಲ್ಲಿ ಸಮಾವೇಶಗೊಂಡಿದ್ದ ೫೫ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುರಸ್ಕೃತರಾಗಿದ್ದಾರೆ.

Kannada Moulvi Lesson Questions and Answers

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,

1 , ಕನ್ನಡ ಮೌಲ್ವಿಯ ವೃತ್ತಿ ಯಾವುದು ?

ಉತ್ತರ : ಕನ್ನಡ ಮೌಲ್ವಿಯವರದು ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿ

2. ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು ?

ಉತ್ತರ : ಡಿ.ವಿ.ಜಿ.ಯವರ ‘ ಉಮರನ ಒಸಗೆ ‘ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು ,

3. ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು ?

ಉತ್ತರ : ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ‘ ಕುಮಾರವ್ಯಾಸ ಭಾರತ ‘

4. ಕನ್ನಡದ ಮೌಲ್ವಿ ಎಂದು ಹೆಸರಾಗಿದ್ದವರು ಯಾರು ?

ಉತ್ತರ : ಕನ್ನಡದ ಮೌಲ್ವಿ ಎಂದು ಹೆಸರಾಗಿದ್ದವರು ಒಬ್ಬ ಮುಸ್ಲಿಮ್ ಗುರು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ

1. ಮೌಲ್ವಿಯ ವಿದ್ಯಾಭ್ಯಾಸ ಹೇಗಾಯಿತು ?

ಉತ್ತರ : ಮೌಲ್ವಿಯ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ಅವರ ತಂದೆಯವರಿಗೂ ಉರ್ದು ಓದಲೂ ಬರೆಯಲೂ ಬಾರದು . ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆ ಇತ್ತು . ಅಲ್ಲಿಯ ಉಪಾಧ್ಯಾಯರು ವಾರದಲ್ಲಿ ಎರಡು ದಿನ ( ಶನಿವಾರ , ಭಾನುವಾರ ) ಮನೆಗೆ ಬಂದು ತಮ್ಮ ಮಗನಿಗೆ ಉರ್ದು ಪಾಠವನ್ನು ಹೇಳುವಂತೆ ಅವರ ತಂದೆ ಗೊತ್ತು ಮಾಡಿದ್ದರು . ಆ ಉಪಾಧ್ಯಾಯರು ಬುದ್ಧಿವಂತರು . ಆದ್ದರಿಂದ ಮೌಲ್ವಿ ಉರ್ದುವನ್ನು ಬೇಗ ಬೇಗ ಕಲಿತರು .

2. ಮಸೇನ್ ಕೃಷ್ಣನ ಅಭಿನಯದ ಬಗ್ಗೆ ತಿಳಿಸಿ ,

ಮೌಲ್ವಿಯವರ ಬಾಲ್ಯದಲ್ಲಿ ಅವರ ಹಳ್ಳಿಯಲ್ಲಿ ಒಬ್ಬ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಅತ್ಯುತ್ಕೃಷ್ಟವಾಗಿ ಅಭಿನಯಿಸುತ್ತಿದ್ದನು . ರಂಗಸ್ಥಳದಲ್ಲಿ ಬಂದು ನಿಂತರೆ ಅವನ ವೇಷವನ್ನು , ವಾಕ್ ಶುದ್ಧಿಯನ್ನು ನೋಡಿ ವೈದಿಕ ಮನೆತನದ ವೃದ್ಧ ಸ್ತ್ರೀಯರೂ ಸಹ ಮೈ ಮರೆತು “ ಕೃಷ್ಣ ಪರಮಾತ್ಮ ಕಾಪಾಡಪ್ಪ ” ಎಂದು ಕೈ ಮುಗಿದು ಬಿಡುತ್ತಿದ್ದರು . ಆನಂತರ ಮೌಲ್ವಿಯವರು “ ಕೃಷ್ಣ ಪರಮಾತ್ಮನಲ್ಲಿ ಬಂದ ಇವ ಹೊಸಕೇರಿಯ ಹುಸೇನ್ ಸಾಬಿ ” ಎಂದರೂ ಸಹ ಆ ವೃದ್ಧೆಯರು “ ಹುಸೇನ್ ಸಾಬಿಯಂತ ಹುಸೇನ್ ಸಾಬಿ , ನಾವು ಕೈ ಮುಗಿದಿರುವುದು ತಲುಪುವುದು ಶ್ರೀ ಕೃಷ್ಣನಿಗೆ ಇವನು ಯಾರಾದರೇನು ? ” ಎನ್ನುತ್ತಿದ್ದರು . ಕೊನೆಗೆ ಆ ಸಾಹೇಬನಿಗೆ “ ಹುಸೇನ್ ಕೃಷ್ಣ ” ಎಂದೇ ಹೆಸರಾಯಿತು ,

3. ಕನ್ನಡ ಮೌಲ್ವಿಯ ವೇಷಭೂಷಣ ಹೇಗಿತ್ತು ?

ಉತ್ತರ ಕನ್ನಡ ಮೌಲ್ವಿಯು , ಆಜಾನುಬಾಹುವಾಗಿ ಪುಷ್ಟವಾಗಿ ಬೆಳೆದಿದ್ದ ಎತ್ತರದ ಕೆಂಪನೆಯ ಆಳು . ಮುಖದಲ್ಲಿ ಸಹ ಒಳ್ಳೆಯ ಕಳೆ ಇತ್ತು , ಕಣ್ಣಿನ ದೃಷ್ಟಿ ತೀಕ್ಷ್ಯವಾಗಿತ್ತು . ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿ ಮಾಡಿದ್ದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು , ವಿಶಾಲವಾದ ಹಣೆ , ಗಂಭೀರವಾದ ಮುಖ , ಮಡಿ – ಮಡಿ ಇಸ್ತೀ ಮಾಡಿದ್ದ ಬೆಳೆಯ ಶರಾಯಿ ( ಕೋಟು ) ಇವುಗಳಿಂದ ಆತನನ್ನು ನೋಡುವವರಿಗೆ ಇವನೊಬ್ಬ ಮರ್ಯಾದಸ್ತ ಸದೃಹಸ್ಥ ಎಂಬ ಭಾವನೆ ಉಂಟಾಗುತ್ತಿತ್ತು .

ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ಗೊರೂರು ಹಾಗೂ ಮೌಲ್ವಿಯ ನಡುವೆ ನಡೆದ ಸಂಭಾಷಣೆಯನ್ನು ಸಂಕ್ಷೇಪಿಸಿ ಬರೆಯಿರಿ .

ಗೊರೂರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದ , ಅವರನ್ನು ಅವನ ಕಡೆಗೆ ಆಕರ್ಷಿಸಿದ್ದು ಆ ಗೃಹಸ್ಥನ ಕೈಲಿದ್ದ ‘ ಕುಮಾರವ್ಯಾಸ ಭಾರತ ‘ ಕೃತಿ , ಹೇಗಾದರೂ ಮಾಡಿ ಆತನನ್ನು ಮಾತನಾಡಿಸಬೇಕು ಎಂದು ಬಳಿಗೆ ಹೋಗಿ ಮಾತನ್ನಾರಂಭಿಸಿದರು .

ಗೊರೂರು : ನಿಮಗೆ ಕನ್ನಡ ಬರುತ್ತದೆಯೇ ?

ಮೌಲ್ವಿ : ಹೌದು , ನಾನು ಕನ್ನಡ ಕಲಿತದ್ದು ಮೂರನೇ ತರಗತಿವರೆಗೆ , ಆದರೆ ಅದರಿಂದಲೇ ಮೂವತ್ತು ವರ್ಷ ನಿಭಾಯಿಸಿಬಿಟ್ಟೆ . ನನಗೆ ನಿವೃತ್ತಿ ಆಯಿತು .

ಗೊರೂರು : ಯಾವ ಕೆಲಸದಿಂದ ನಿವೃತ್ತರಾದಿರಿ ?

ಮೌಲ್ವಿ : ಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿಯಿಂದ ,

ಗೊರೂರು : ಕನ್ನಡ ಉಪಾಧ್ಯಾಯರಾಗಿಯೋ ಉರ್ದು ಉಪಾಧ್ಯಾಯರಾಗಿಯೋ ?

ಮೌಲ್ವಿ : ಕನ್ನಡ ಉಪಾಧ್ಯಾಯರಾಗಿ ,

ಗೊರೂರು : ಹಾಗಾದರೆ ನಿಮಗೆ ಉರ್ದು ಬರುವುದಿಲ್ಲವೇ ?

ಮೌಲ್ವಿ : ನಾನು ಕಲಿತಿದ್ದು , ಉರ್ದು , ಕಲಿಸಿದ್ದು ಕನ್ನಡ , ಆಗ ನಮ್ಮ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ನಮ್ಮ ತಂದೆಯವರಿಗೂ ಉರ್ದು ಓದಲೂ ಬರೆಯಲೂ ಬಾರದು . ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆಯ ಉಪಾಧ್ಯಾಯರು ವಾರದಲ್ಲಿ ಎರಡು ದಿನ ನಮ್ಮ ಮನೆಗೆ ಬಂದು ನನಗೆ ಉರ್ದು ಪಾಠವನ್ನು ಹೇಳುವಂತೆ ನಮ್ಮ ತಂದೆ ಗೊತ್ತು ಮಾಡಿದ್ದರು . ಆ ಉಪಾಧ್ಯಾಯರು ಬುದ್ಧಿವಂತರು , ನಾನು ಉರ್ದುವನ್ನು ಬೇಗ ಬೇಗ ಕಲಿಕೆ ,

ಗೊರೂರು : ಭಾರತದ ಕಥೆಯಲ್ಲಿ ನಿಮ್ಮ ಧರ್ಮ ನಂಬಿಕೆಗೆ ವಿರೋಧವಾದುದು ಏನೂ ಇಲ್ಲವೇ ?

ಮೌಲ್ವಿ : ಇದು ಧರ್ಮದ ಕಥೆ . ಎಲ್ಲ ಮತಗಳೂ ಹೇಳುವುದು ಒಂದೇ ‘ ಮನುಷ್ಯ ಒಳ್ಳೆಯವನಾಗಿರಬೇಕು ‘ ಎಂದು

ಗೊರೂರು : ಕನ್ನಡದಲ್ಲಿ ಹೆಚ್ಚು ಪುಸ್ತಕ ಓದುತ್ತೀರಾ ?

ಮೌಲ್ವಿ : ಹೌದು ಓದುತ್ತೇನೆ , ನಿತ್ಯ ಮಲಗುವುದಕ್ಕೆ ಮುಂಚೆ ಎರಡು ಗಂಟೆಯಾದರೂ ನಾನು ಓದಲೇ ಬೇಕು , ಓದದೇ ಮಲಗಿದರೆ ನಿದ್ರೆ ಬರುವುದಿಲ್ಲ . ಶ್ರೀ ಡಿ.ವಿ.ಗುಂಡಪ್ಪನವರ ‘ ಉಮರನ ಒಸಗೆ ‘ ನನಗೆ ಪೂರ್ತಿ ಬಾಯಿಗೆ ಬರುತ್ತದೆ . ನಿಮ್ಮ ಊರು ಯಾವುದು ?

ಗೊರೂರು : ಹಾಸನದ ಹತ್ತಿರದ ಒಂದು ಹಳ್ಳಿ ಗೊರೂರು ,

ಮೌಲ್ವಿ : ನಾನೂ ಗೊರೂರಿಗೆ ಹೋಗಿದ್ದೇನೆ . ಗೊರೂರು ರಾಮಸ್ವಾಮಿ ಅಯ್ಯಂಗಾರು ಇದಾರಲ್ಲ , ಬಹಳ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ .

ಗೊರೂರು : ಗೊರೂರಿಗೆ ಹೋಗಿದ್ದಾಗ ಅವರನ್ನು ಸಂಧಿಸಿದ್ದೀರಾ ?

ಮೌಲ್ವಿ : ಇಲ್ಲ . ಆ ವೇಳೆಗೆ ನಾನು ಅವರ ಪುಸ್ತಕಗಳನ್ನು ನೋಡಿರಲಿಲ್ಲ . ಈಚೆಗೆ ಓದಿದೆ . ನೋಡಬೇಕಾದ ಮನುಷ್ಯರು .

ಗೊರೂರು : ಅವರು ನಿಮ್ಮೆದುರಿನಲ್ಲಿ ಈಗ ಬಂದರೆ ಏನು ಮಾಡುತ್ತೀರಿ ?

ಮೌಲ್ವಿ : ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ .

ಗೊರೂರು : ನಾನೇ ಆ ಪಾಣಿ ,

ಮೌಲ್ವಿ : ಇವತ್ತೇ ಸುದಿನ , ದೇವರ ದಯೆ ನಾವಿಬ್ಬರೂ ಸೇರಿದೆವು . ( ಎಂದು ಆಲಂಗಿಸಿದರು )

ಈ ] ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ ? ”

ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಗೊರೂರು ಅವರು ಮೌಲ್ವಿಗೆ ತಮ್ಮದು ‘ ಹಾಸನ ಜಿಲ್ಲೆಯ ಗೊರೂರು ‘ ಎಂದು ಪರಿಚಯ ಮಾಡಿಕೊಂಡಾಗ ಆ ಮೌಲ್ವಿಯ “ ನಾನೂ ಗೊರೂರಿಗೂ ಹೋಗಿದ್ದೇನೆ . ಆ ಗೊರೂರು ರಾಮಸ್ವಾಮಿ ಅಯ್ಯಂಗಾರು ಇದಾರಲ್ಲ , ಬಹಳ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ ” ಎಂದು ಹೇಳಿದಾಗ ಗೊರೂರರು “ ನೀವು ಅವರನ್ನು ಭೇಟಿಮಾಡಿದ್ದೀರಾ ? ” ಎಂದಾಗ ಅವರು ಇಲ್ಲವೆನ್ನುತ್ತಾರೆ . ಆ ಸಂದರ್ಭದಲ್ಲಿ ಗೊರೂರರು “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ ? ” ಎನ್ನುತ್ತಾರೆ .

ಸ್ವಾರಸ್ಯ : ತಮ್ಮ ಎದುರಿಗಿರುವವರು ಗೊರೂರರೆಂದು ತಿಳಿಯದೆ ಗೊರೂರರ ಸಾಹಿತ್ಯ ಮತ್ತು ಅವರನ್ನು ನೋಡುವ ಬಯಕೆಯನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರಿಗೆ ಹೇಳುವುದು ಇಲ್ಲಿನ ಸ್ವಾರಸ್ಯವಾಗಿದೆ .

2. “ ನಾನೇ ಆ ಪ್ರಾಣಿ ”

ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ , ಸಂದರ್ಭ : ಮೌಲ್ವಿಯವರು ತಮ್ಮ ಎದುರಿಗಿರುವವರು ಗೊರೂರು ಅವರೆಂದು ತಿಳಿಯದೆ “ ಗೊರೂರರು ನೋಡಬೇಕಾದ ಮನುಷ್ಯರು ” ಎಂದು ಹೇಳಿದಾಗ ಗೊರೂರರು “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ ? ” ಎಂದಾಗ ಮೌಲ್ವಿಯವರು ಎನ್ನುತ್ತಾರೆ , ಆಗ ಸಾಹೇಬರು “ ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ ” ಎಂದರು . ಆ ಸಂದರ್ಭದಲ್ಲಿ ಗೊರೂರರು “ ನಾನೇ ಆ ಪ್ರಾಣಿ ” ಎಂದು ಹಾಸ್ಯವಾಗಿ ಹೇಳುತ್ತಾರೆ .

ಸ್ವಾರಸ್ಯ : ತಮ್ಮ ಎದುರಿಗಿರುವವರು ಗೊರೂರರೆಂದು ತಿಳಿಯದ ಮೌಲ್ವಿ ಮತ್ತು ಆ ಸನ್ನಿವೇಶದಲ್ಲಿ ಗೊರೂರರ ಹಾಸ್ಯ ಪ್ರಜ್ಞೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

3. “ ನಾನು ಕಲಿತಿದ್ದು ಉರ್ದು , ಕಲಿಸಿದ್ದು ಕನ್ನಡ “

ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಮೌಲ್ವಿಯವರನ್ನು ಕುರಿತು ಸಂದರ್ಭ : ಗೊರೂರರು “ ನೀವು ನಿವೃತ್ತರಾದ್ದು ಕನ್ನಡ ಉಪಾಧ್ಯಾಯರಾಗಿಯೋ ಉರ್ದು ಉಪಾಧ್ಯಾಯರಾಗಿಯೋ ? ” ಎಂದಾಗ ಅವರು “ ಕನ್ನಡ ಉಪಾಧ್ಯಾಯರಾ ” ಎಂದರು ಆಗ ಗೊರೂರರು ಕುತೂಹಲದಿಂದ ” ಹಾಗಾದರೆ ನಿಮಗೆ ಉರ್ದು ಬರುವುದಿಲ್ಲವೇ ? ” ಎಂದು ಕೇಳಿದ ಸಂದರ್ಭದಲ್ಲಿ ಮೌಲ್ವಿಯವರು “ ನಾನು ಕಲಿತಿದ್ದು ಉರ್ದು , ಕಲಿಸಿದ್ದು , ಕನ್ನಡ ” ಎಂದು ಕೇಳಿದರು .

ಸ್ವಾರಸ್ಯ : ಮೌಲ್ವಿಯು ಕಲಿತದ್ದು ಉರ್ದು ಭಾಷೆಯಾದರು ಅವರಿಗೆ ಕನ್ನಡ ಭಾಷೆಯ ಬಗ್ಗೆ ಇದ್ದ ಅಭಿಮಾನ ಇಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

5. “ ನಿಮಗೆ ಕನ್ನಡ ಬರುತ್ತದೆಯೇ ?

” ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಗೊರೂರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದ , ಆಕರ್ಷಕವಾಗಿದ್ದ ಆತನನ್ನು ನೋಡುತ್ತಿದ್ದಂತೆ ಅವರನ್ನು ಆಕರ್ಷಿಸಿದ್ದು ಆ ಗೃಹಸ್ಥನ ಕೈಲಿದ್ದ ‘ ಕುಮಾರವ್ಯಾಸ ಭಾರತ ಕೃತಿ , ಇದ್ದಕ್ಕಿದ್ದಂತೆ ಗೊರೂರರಿಗೆ ಆ ಸಾಹೇಬರ ಬಗ್ಗೆ ಏನೋ ಒಂದು ಅನಿರ್ವಚನೀಯವಾದ ಬಾಂಧವ್ಯ ಉಂಟಾಯಿತು . ಆಗ ಅವರು ಹೇಗಾದರೂ ಮಾಡಿ ಆತನನ್ನು ಮಾತನಾಡಿಸಬೇಕು ಎಂದು ಬಳಿಗೆ ಹೋಗಿ “ ನಿಮಗೆ ಕನ್ನಡ ಬರುತ್ತದೆಯೇ ” ಎಂದು ಆ ಸಂದರ್ಭದಲ್ಲಿ ಕೇಳಿದರು .

ಸ್ವಾರಸ್ಯ : ಜಾತಿ , ಭಾಷೆ , ಪ್ರಾಂತ್ಯಗಳ ಗೊಂದಲದ ಅಂಧಕಾರ ನಮಗೆ ಮುಸುಕಿರುವ ಸಂದರ್ಭದಲ್ಲಿ ಒಬ್ಬ ಮುಸಲ್ಮಾನನ ಕೈಯಲ್ಲಿ ಕುಮಾರವ್ಯಾಸ ಭಾರತ ಇದ್ದದ್ದು ಇಲ್ಲಿನ ಸ್ವಾರಸ್ಯವಾಗಿದೆ .

6. “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲ ”

ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಗೊರೂರರು ಮೌಲ್ವಿಯವರನ್ನು ಕುರಿತು “ ನೀವು , ಕನ್ನಡ ಪಾಠ ಚೆನ್ನಾಗಿ ಮಾಡುತ್ತೀರಾ ? ” ಎಂದು ಕೇಳಿದ ಸಂದರ್ಭದಲ್ಲಿ ಅವರು ತೃಪ್ತಿಯಿಂದ “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲವೆಂದು ಪ್ರಶಸ್ತಿಯನ್ನು ಎಲ್ಲರಿಂದಲೂ ಪಡೆದಿದ್ದೇನೆ . ಪ್ರೈಮರಿ ಶಿಕ್ಷಕರ ಸಮ್ಮೇಳನದಲ್ಲಿ ಒಂದು ಮಾದರಿ ಪಾಠ ಮಾಡಲು ಕೊಟ್ಟರು . ಹುಡುಗರು ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದರೋ , ಉಪಾಧ್ಯಾಯರು ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದರು ” ಎಂದು ಹೇಳಿದರು .

ಸ್ವಾರಸ್ಯ : ಒಬ್ಬ ಮೌಲ್ವಿಯಾಗಿ ಮಾದರಿ ಪಾಠ ನೀಡುವಷ್ಟು ಕನ್ನಡ ಭಾಷೆಯಲ್ಲಿ ಪಾಂಡಿತ್ಯ , ಅಭಿಮಾನ ಹೊಂದಿದ್ದುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

ಭಾಷಾ ಚಟುವಟಿಕೆ

1. ಆಗಮಸಂಧಿ ಎಂದರೇನು ? ಉದಾಹರಣೆ ಕೊಡಿ .

ಉತ್ತರ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ ಯ್ ‘ ಕಾರವನ್ನು ಅಥವಾ ‘ ವ ‘ ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಅಗಮಸಂಧಿ ,

ಉದಾ : ಹಳ್ಳಿ ಅಲ್ಲಿ = ಹಳ್ಳಿಯಲ್ಲಿ

ಭಾವನೆ + ಉಂಟಾಯಿತು = ಭಾವನೆಯುಂಟಾಯಿತು

ಗುರು+  ಅನ್ನು = ಗುರುವನ್ನು

ಸ್ವಾರಸ್ಯ +  ಇಲ್ಲ = ಸ್ವಾರಸ್ಯವಿಲ್ಲ .

2. ಆದೇಶಸಂಧಿ ಎಂದರೇನು ? ಉದಾಹರಣೆ ಕೊಡಿ .

ಉತ್ತರ : ಉತ್ತರ ಪದದ ಆದಿಯಲ್ಲಿರುವ ಕತಪ ವ್ಯಂಜನಗಳಿಗೆ ಕ್ರಮವಾಗಿ ಗ , ದ , ಬ ವ್ಯಂಜನಗಳು ಆದೇಶವಾಗುವುವು . ಇದನ್ನು ಆದೇಶಸಂಧಿ ಎನ್ನುವರು .

ಕೆಲವೊಮ್ಮೆ ಉತ್ತರ ಪದದ ಆದಿಯ ಪ್ , ಬ್ , ಮ್ ವ್ಯಂಜನಗಳಿಗೆ ‘ ವ ‘ ಕಾರವು ಆದೇಶವಾಗುವುದು .

ತುದಿ + ಕಾಲಲ್ಲಿ ( ಕ್ > ಗ್ ) = ತುದಿಗಾಲಲ್ಲಿ .

ಹುಲಿ + ತೊಗಲು ( ತ್ > ದ್ ) = ಹುಲಿದೊಗಲು

‌ಕಣ್ + ಪನಿ        ( ಪ್ > ಬ್ ) = ಕಂಬನಿ

ನೀರ್ + ಪನಿ        ( ಪ್ > ವ್ ) = ನೀರ್ವನಿ

ಕಡು+ ಬೆಳ್ಪು‌      (ಬ್ > ವ್ ) = ಕಡುವೆಳ್ಪು‌

ಮೇಲ್ + ಮಾತು    ( ಮ್ > ವ್ ) = ಮೆಲ್ವಾತು

3. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ .

1 , ಅಂಧಕಾರ     =  ಜ್ಞಾನದ ಬಲದಿಂದ ಆಂಧಕಾರವು ದೂರಾಗುತ್ತದೆ

2 , ಹದಿನಾರಾಣೆ  =  ಹಿಂದಿನ ಕಾಲದಲ್ಲಿ ಹದಿನಾರಾಣೆಯು ಚಲಾವಣೆಯಲ್ಲಿತ್ತು ,

3 , ನಿಭಾಯಿಸು   =   ಜೀವನದಲ್ಲಿ ಏನೇ ಬಂದರೂ ಧೈರ್ಯದಿಂದ ನಿಭಾಯಿಸಬೇಕು .

4 , ಮುಸುಕಿರುವ =   ಮಳೆಗಾಲದಲ್ಲಿ ಹೆಚ್ಚು ಮುಸುಕಿರುವ ವಾತಾವರಣವನ್ನು ಕಾಣುತ್ತೇವೆ

4. ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ ,

ಪಾತ್ರವನ್ನು, ಶುದ್ಧಿಯನ್ನು , ಚಳಿಗಾಲ , ಪಡೆದಿದ್ದೇನೆ , ಬೆಮರ್ವನಿ

ಪಾತ್ರ                  +        ಅನ್ನು    =ಪಾತ್ರವನ್ನುವಕಾರಾಗಮಸಂಧಿ
ಶುದ್ಧಿ                  +        ಅನ್ನು    =ಶುದ್ಧಿಯನ್ನುಯಕಾರಾಗಮಸಂಧಿ
ಚಳಿ                    +        ಕಾಲ      =ಚಳಿಗಾಲಆದೇಶಸಂಧಿ
ಪಡೆದು               +        ಇದ್ದೇನೆ  =ಪಡೆದಿದ್ದೇನೆಲೋಪಸಂಧಿ
ಬೆಮರ್               +         ಪನಿ      =ಬೆಮರ್ವನಿಆದೇಶಸಂಧಿ

9th Standard Kannada Moulvi Lesson Questions and Answers Notes Pdf

ಇತರೆ ಪಾಠಗಳು :

Leave your vote

14 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.