10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್|10th Standard Shabari Lesson Notes in Kannada

shabari lesson notes in kannada ,10th kannada shabari lesson question answer pdf SSLC
ಶಬರಿ ಪಾಠದ ಪ್ರಶ್ನೋತ್ತರಗಳು ನೋಟ್ಸ್‌ 2023

ತರಗತಿ : 10ನೇ ತರಗತಿ

ಪಾಠದ ಹೆಸರು : ಶಬರಿ

ಕೃತಿಕಾರರ ಹೆಸರು : ಪು.ತಿ ನರಸಿಂಹಚಾರ್ಯ

10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್|10th Standard Shabari Lesson Notes in Kannada

ಲೇಖಕರ ಪರಿಚಯ :

ಪು.ತಿ. ನರಸಿಂಹಾಚಾರ್ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಅವರು ಶ . ೧೯೦೫ ರಲ್ಲಿ ಮಂಡ್ಯಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು . ಇವರು ಶಬರಿ , ಅಹಲ್ಯ , ಮೊದಲಾದ ಲಲಿತಪ್ರಬಂಧ ಕೃತಿಗಳನ್ನೂ ರಚಿಸಿದ್ದಾರೆ . ಶ್ರೀಯುತರ ‘ ಶ್ರೀ ಹರಿಚರಿತೆ ‘ ಕೃತಿಗೆ ಕರ್ನಾಟಕ ಸರ್ಕಾರದಿಂದ ‘ ಪಂಪ ಪ್ರಶಸ್ತಿ ‘ ನೀಡಿಗೌರವಿಸಲಾಗಿದೆ . ಶ್ರೀಯುತರಿಗೆ ‘ ಪಂಪ ಪ್ರಶಸ್ತಿ ಮತ್ತುಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ .

Shabari Lesson Notes in Kannada

ಅ ] ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

೧. ಶ್ರೀರಾಮನಿಗೆ ಸಮರ್ಪಿಸಲು ಶಬರಿಏನನ್ನು ಸಂಗ್ರಹಿಸಿದ್ದಳು ?

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು , ಮಧುಪರ್ಕ ಮತ್ತುರುಚಿಕರ ಹಣ್ಣುಹಂಪಲುಗಳನ್ನು ಸಂಗ್ರಹಿಸಿದ್ದಳು .

೨. ಶಬರಿಗೀತನಾಟಕದ ಕರ್ತೃಯಾರು ?

ಶಬರಿ ಗೀತನಾಟಕದ ಕರ್ತೃ ಪು.ತಿ.ನರಸಿಂಹಾಚಾರ್ಯ

೩ ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು ?

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ .

೪. ಶ್ರೀ ರಾಮನ ತಂದೆಯ ಹೆಸರೇನು ?

ಶ್ರೀ ರಾಮನತಂದೆಯ ಹೆಸರು ದಶರಥ ,

೫. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?

ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ . ( ದನು ಎಂಬ ಋಷಿ )

ಆ ] ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,

೧. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು ?

ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆಬಗೆಯ ಹಣ್ಣುಗಳನ್ನು , ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು , ಸುವಾಸನೆಯಿಂದ ಕೂಡಿದ ಬಾಡದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು .

೨. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ತಿಳಿಸಿ ,

ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣನಾದ ರಾಮನನ್ನು ಕುರಿತು “ ತಾಳಿಕೋ ಅಣ್ಣ ತಾಳಿಕೋ , ಸೂರ್ಯನೇ ತೇಜಗೆಡಲು ಕಾಂತಿಯನ್ನು ನೀಡುವವರು ಯಾರು ? ರಾಮನೇ ಧೈರ್ಯಗೆಡಲು ಲೋಕಕ್ಕೆ ಸೈರ್ಯ ನೀಡುವವರು ಯಾರು ? ” ಎಂದು ಹೇಳಿ ಸಂತೈಸಿದನು .

೩. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ .

ಶಬರಿಯು ರಾಮಲಕ್ಷ್ಮಣರನ್ನು ಕಂಡು ಬೆರಗಾಗಿ , ಹತ್ತಿರಕ್ಕೆ ಬಂದು , ಮೈಯನ್ನು ಮುಟ್ಟಿ , ಕಾಲಿಗೆ ಬಿದ್ದು ನಮಸ್ಕರಿಸಿ , ಕೈ ಕಣ್ಣಿಗೊತ್ತಿಕೊಂಡಳು . ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು . “ ಜಗದಲ್ಲಿ ಇದರಂತ ರುಚಿಯಾದ ಹಳೇ ಇಲ್ಲ . ನಿಮಗೆಂದೆ ತಂದೆನು ” ಎಂದು ಹೇಳುತ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು .

೪. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು ?

ರಾಮನು ಗಿರಿವನಗಳನ್ನು ಕುರಿತು “ ಗಿರಿವನಗಳೇ ನಾನು ನಿಮ್ಮನ್ನು ಬೇಡಿಕೊಳ್ಳುವನು . ಹೇಳಿಕೆ ಪ್ರೀತಿಯರಾಣಿ ಸೀತೆಯು ನನಗೆ ದೊರೆಯುವಳೇ ? ಅವಳು ಇರುವ ಸ್ಥಳವನ್ನು ನೀವು ತಿಳಿದಿರುವಿರೇ ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ ‘ ಎಂದು ಪ್ರಾರ್ಥಿಸಿದನು .

೫. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದಳು ?

ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ “ ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸಗೊಂಡೆವು . ನಿನ್ನ ಸುಖದಲ್ಲಿ ನಮ್ಮ ಸುಖ ಕಂಡೆವು . ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು . ನಾವು ನಿನಗೆ ಎಂದೆಂದಿಗೂ ಋಣಿಗಳು ” ಎಂದು ಹೇಳಿದರು .

ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

೧. ಶಬರಿಯಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ .

ರಾಮಲಕ್ಷ್ಮಣರನ್ನು ಕಂಡು ಶಬರಿ ಹಿಗ್ಗಿ , ಸಂತಸವನ್ನು ತುಂಬಿಕೊಳ್ಳುತ್ತಾಳೆ . ರಾಮಲಕ್ಷ್ಮಣರಿಗೆ ರುಚಿಕರ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ . ರಾಮನನ್ನು ಕಂಡ ತಾನು ಪರಮಸುಖಿಯೆಂದು ನರ್ತಿಸುತ್ತಾಳೆ . ರಾಮನೂ ಕೂಡ “ ನಿನ್ನ ಆದರದಿಂದ ನಾವು ಸುಖ , ನಿನಗೆ ನಾವು ಋಣಿ ” ಎನ್ನುತ್ತಾನೆ . ಶಬರಿಯು ಕಣ್ಣೀರು ತುಂಬಿಕೊಂಡು “ ನನ್ನ ಜಾಡನ್ನು ಹಿಡಿದು ಬಂದು ಸಂತಸ ನೀಡಿದಿರಿ , ಹಸಿವು ತೃಷೆ ಹಿಂಗಿತೇ ? ನಾನೊಬ್ಬಳು ಬಡವಿ , ನನ್ನ ಮೇಲೆ ಮರುಕ ತೋರಿದಿರಾ ? ” ಎನ್ನುತ್ತಾಳೆ . ಶ್ರೀರಾಮನು “ ನಿನ್ನ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆಯಿಲ್ಲ . ನಮ್ಮ ಅರಮನೆಗಿಂತ ನಿನ್ನ ಆಶ್ರಮವೇ ಚೆಂದ , ನಿನ್ನ ಮನೆಯೇ ನಮ್ಮಮನೆ , ನೀನೇ ತಾಯಿಯಂತೆ ” ಎನ್ನುತ್ತಾನೆ . ಶಬರಿಯು “ ನಿನ್ನ ರೂಪದಂತೆ ನಿನ್ನ ಮಾತು ಸುಂದರ ಹಾಗೂ ಉದಾರ , ನಾನು ಧನ್ಯಳಾದ ಸಿದ್ಧ ಮಾತಂಗರ ವರ ನನಗೆ ಫಲಿಸಿತು . ನಿಮ್ಮನ್ನು ಕಂಡು ಪುಣ್ಯವು ತುಂಬಿತು . ಗುರುಪೂಜೆಯನ್ನು ಮಾಡಿದ ಪುಣ್ಯ ನನಗೆ ಇಂದು ಸೇರಿತು . ನನ್ನ ಚಿಂತೆಯೆಲ್ಲ ಹಿಂಗಿ ಹೋಯಿತು ” ಎನ್ನುತ್ತಾಳೆ . ಶ್ರೀರಾಮನು ಗುರುಗಳ ಮಹಿಮೆಯನ್ನು ಬಲ್ಲೆನೆಂದು ಹೇಳುತ್ತ “ ದುಃಖವನ್ನು ಮರೆಸಿ , ಶಾಂತಿ ನೀಡುವ ಈ ವನದಲ್ಲಿ ನೀನು ಶುದ್ಧ ಪ್ರೇಮಮೂರ್ತಿಯಾಗಿದ್ದೀಯೆ . ಈ ದಿನ ನಮಗೆ ಸುದಿನ ” ಎಂದು ಶಬರಿಯನ್ನು ಬಾಯಿತುಂಬ ಹೊಗಳುತ್ತಾನೆ .

೨. ಶಬರಿಯ ಸಡಗರ , ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?

ತಿಳಿಸಿ ರಾಮನು ಬಂದುತನ್ನ ಆಶ್ರಮದಲ್ಲಿ ನಿಂತಿರುವುದನ್ನು ನೋಡಿ ಶಬರಿ ಆಶ್ಚರ್ಯಪಟ್ಟಳು . ರಾಮನ ಹತ್ತಿರ ಬಂದು ಅವನನ್ನು ಮುಟ್ಟಿ , ಪಾದಕ್ಕೆ ನಮಸ್ಕರಿಸಿ , ಕೈಯನ್ನು ಕಣ್ಣಿಗೆ ಒತ್ತಿಕೊಂಡು ಕಣ್ಣೀರು ಸುರಿಸಿದಳು . ಗದ್ಗದ ಸ್ವರದಿಂದ “ ಬನ್ನಿರಿ ” ಎಂದು ಆಹ್ವಾನಿಸಿದಳು . “ ಸಿದ್ಧತೆಯೇ ಇಲ್ಲವಲ್ಲ ” ಎಂದು ಹಂಬಲಿಸಿದಳು . ಮನಸ್ಸಿನ ಬಯಕೆಯಂತೆ ಬಗೆಬಗೆಯ ಕಂಪು ಇರುವ ವನಮಾಲೆಯನ್ನು ರಾಮನ ಕೊರಳಿಗೆ ಇಟ್ಟು ಹಿಗ್ಗಿದಳು . ಜಗತ್ತಿನಲ್ಲಿ ಇಂತಹ ರುಚಿಕರವಾದ ಹದ್ದೇ ಇಲ್ಲವೆಂದು ಹೇಳುತ್ತ . ನಿಮಗಾಗಿ ತಂದಿದ್ದೇನೆಂದು ತಿಳಿಸಿ ರಾಮನ ಕೈಗೆ ಇತ್ತಳು . ಶಬರಿಯ ಸೇವೆಯಿಂದ ರಾಮನು ಸುಪ್ರಸನ್ನನಾದನು . ರಾಮಲಕ್ಷ್ಮಣರು ಧನ್ಯತಾಭಾವದಿಂದ ಮಂದಹಾಸ ಬೀರಿದರು . ಹೀಗೆ ಶಬರಿಯ ಸಡಗರ , ಸಂತೋಷ ಮೇಳದವರ ಹಾಡಿನಲ್ಲಿ ವರ್ಣಿತವಾಗಿದೆ .

೩ ‘ ನಂಬಿ ಕೆಟ್ಟವರಿಲ್ಲ ‘ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?

ಶಬರಿ ಮಾತಂಗ ಋಷಿಯ ಆಶ್ರಮದಲ್ಲಿ ಇರುತ್ತಾಳೆ , ಸಿದ್ಧರಾದ ಮಾತಂಗ ಋಷಿಗಳು ಶಬರಿಯ ಮನದಾಸೆಯನ್ನು ತಿಳಿದವರಾಗಿದ್ದು , “ ರಾಮಲಕ್ಷ್ಮಣರು ಆಶ್ರಮಕ್ಕೆ ಬಂದೇ ಬರುತ್ತಾರೆ . ನಿನ್ನ ಇಷ್ಟಾರ್ಥ ನೆರವೇರುತ್ತದೆ ” ಎಂದಿದ್ದರು . ಅವರ ಮಾತಿನಂತೆ ರಾಮಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಭೇಟಿ ನೀಡುತ್ತಾರೆ . ಶಬರಿಯು ರಾಮನ ದರ್ಶನದಿಂದ ಪುಳಕಿತಳಾದಳು . ಕುಂಬ ರಾಮನ ದರ್ಶನ ಮಾಡಿ , ಮುಟ್ಟಿ ನಮಸ್ಕರಿಸಿ , ಸಂಭ್ರಮಿಸಿದಳು . ಪರಿಮಳದ ವನಮಾಲೆಯನ್ನು ರಾಮನ ಕೊರಳಿಗೆ ಹಾಕಿ , ರುಚಿಕರ ಹಣ್ಣುಗಳನ್ನು ನೀಡಿ ಉಪಚರಿಸಿದಳು . ಧನ್ಯಳಾದೆನೆಂದು ಸಂತಸ ವ್ಯಕ್ತಪಡಿಸಿದಳು . ಹಲವಾರು ವರ್ಷಗಳಿಂದ ರಾಮನದರ್ಶನಕ್ಕಾಗಿ ಕಾದು , ಮುನಿಗಳ ಮಾತನ್ನು ನಂಬಿ , ರಾಮನು ಬರುವ ಸುದಿನವನ್ನು ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು . ಶಬರಿಯ ಮನದಾಸೆ ಈಡೇರಿತು . ಹಾಗಾಗಿ “ ನಂಬಿಕೆಟ್ಟವರಿಲ್ಲ ‘ ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು .

ಈ ] ಸಂದರ್ಭ ಸಹಿತ ವಿವರಿಸಿ

೧. “ ನಾಚುತಿಹನಿ ಪೂಜೆಯೇ ನಲುಮೆಯಿಂದ . ”

ಸಂದರ್ಭ : ತನ್ನಿಂದ ಇನಿತು ಉಪಕಾರವಿಲ್ಲದಿದ್ದರು ತನ್ನನ್ನು ಪ್ರೀತಿಯಿಂದ ನೆನೆಯುತ್ತ ಹಂಬಲಿಸುತ್ತಿರುವ ವೃದ್ಧೆ ಶಬರಿಯನ್ನು ಕಂಡ ಸಂದರ್ಭದಲ್ಲಿ ರಾಮನು ಲಕ್ಷ್ಮಣನಿಗೆ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ಪೂಜೆಯಾದ ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತ , ಬರುವಿಕೆಗಾಗಿ ಭಕ್ತಿಯಿಂದ ಹಂಬಲಿಸುತ್ತ ಇರುವ ದೃಶ್ಯವನ್ನು ನೋಡಿ ರಾಮನು “ ಅವಳ ಅನುರಾಗವನ್ನು ಕಂಡು ನಾಚಿದೆನು ” ಎಂದು ಹೇಳುವುದು ಸ್ವಾರಸ್ಯಪೂರ್ಣವಾಗಿದೆ .

೨. “ ತಾಯಿ , ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ ? ”

ಸಂದರ್ಭ : -ಮಾತಂಗಾಶ್ರಮವನ್ನು ಪ್ರವೇಶಿಸಿದ ಸಂದರ್ಭದಲ್ಲಿ “ ಎಂದು ಕಾಣುವೆನು ಶ್ರೀರಾಮನನ್ನು , ಸನ್ನಂಗಳ ಮೂರುತಿಯನ್ನು ” ಎಂದು ಹಾಡುತ್ತ ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕಂಡು ರಾಮನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕುರಿತು ರಾಮನು ಏನೂ ಅರಿಯದವನಂತೆ “ ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳಾವಕಾಶ ದೊರೆಯುವುದೇ ? ” ಎಂದು ಕೇಳುವುದು ಸ್ವಾರಸ್ಯಪೂರ್ಣವಾಗಿದೆ .

೩. “ ರೂಪಿನಂತೆ ಮಾತುಕೂಡ ಎನಿತುದಾರವಾಗಿದೆ “?

” ಸಂದರ್ಭ : -ರಾಮನು ಶಬರಿಯ ಅತಿಥಿ ಸತ್ಕಾರದ ಪರಿಯನ್ನು ಕುರಿತು “ ನಿನ್ನಆತಿಥ್ಯದ ಸವಿಯು ಅಯೋಧ್ಯೆಯ ಅರಮನೆಯ ಆತಿಥ್ಯಕ್ಕಿಂತ ಮಿಗಿಲಾದುದು . ಇಷ್ಟು ಪ್ರೀತಿಯನ್ನು ತೋರುವ ನಿನ್ನನ್ನು ತಾಯಿ ಎಂದು ತಿಳಿಯುವೆವು ” ಎಂದ ಸಂದರ್ಭದಲ್ಲಿ ಶಬರಿಯು ಈ ಮಾತನ್ನು ಹೇಳುತ್ತಾಳೆ .

ಸ್ವಾರಸ್ಯ : – ರಾಮನ ಪ್ರೀತಿಯ ಮಾತುಗಳು ಅವನ ರೂಪಿನಂತೆ ಮಧುರವಾದುದು ” ಎಂದು ಹೇಳುವ ಮೂಲಕ ಶಬರಿಯು ರಾಮನ ವ್ಯಕ್ತಿತ್ವವನ್ನು ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತಾಳೆ .

೪. “ ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು . ”

ಸಂದರ್ಭ : -ರಾಮನದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮುಕ್ತಿಯನ್ನು ಪಡೆಯುವುದಕ್ಕಾಗಿ ಅಗ್ನಿ ಪ್ರವೇಶಿಸಿದ ಸಂದರ್ಭದಲ್ಲಿ ರಾಮನು ಈ ಮಾತನ್ನು ಹೇಳುತ್ತಾನೆ . ಒಲಿದವರು ಉರಿವ ಬತ್ತಿಯ ಕಪ್ಪನ್ನು ನೋಡುವುದಿಲ್ಲ ” ಎಂಬ ಮಾತು ಶಬರಿಯ ರಾಮಭಕ್ತಿಯದು

ಸ್ವಾರಸ್ಯ : – “ ಬೆಳಕಿಗೆ ಶ್ರೇಷ್ಠತೆಯನ್ನು ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ .

೫. “ ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು”

ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ರಚಿಸಿರುವ ‘ ಶಬರಿ ‘ ಗೀತನಾಟಕದಿಂದ ಆಯ್ದ ‘ ಶಬರಿ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಸಂದರ್ಭ : -ಸೀತಾಪಹರಣದ ಅನಂತರ ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ತಪಸ್ವಿ ದನುವಿನ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ವೃದ್ಧೆಯನ್ನು ( ಶಬರಿಯನ್ನು ಕಂಡು ರಾಮನು ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ .

ಸ್ವಾರಸ್ಯ : ಶ್ರೀರಾಮನ ಬರುವಿಕೆಗಾಗಿಕಾದು , ಕಾತರಿಸಿ , ಮರುಳಳಂತೆ ಆಗಿದ್ದ ವೃದ್ಧೆ ಶಬರಿಯನ್ನು ಕಂಡು ರಾಮಲಕ್ಷ್ಮಣರು ಭಯಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ .

ಅ ] ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ

೧. ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಗಳು :

ಅ ) ಐ . ಔ ಆ ) ಅ , ಆ ಇ)ಎ ಏ ಈ ) ಅಂ , ಅಃ

೨ ‘ ದನುಪೇಳ್ದ ದಾರಿಯೊಳೆ ನಾವು ಬಂದಿಹೆವೆ ‘ ಈ ವಾಕ್ಯದ ಕೊನೆಯಲ್ಲಿ ಇರಬೇಕಾದ ಲೇಖನ ಚಿಹ್ನೆ :

ಅ ) ಅರ್ಧವಿರಾಮ ಆ) ಪ್ರಶ್ನಾರ್ತಕ ಇ ) ಆವರಣ ಈ ) ಭಾವಸೂಚಕ

೩. ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ :

೨ ) ೧೩ ಆ ) ೨೫ ಇ)೯ ಈ)೩೪

೪) ಮತಂಗಾಶ್ರಮ ‘ ಇಲ್ಲಿರುವ ಸಂಧಿ:

ಅ) ಆಗಮಸಂಧಿ ಆ)ಸವರ್ಣದೀರ್ಘ ಸಂಧಿ ಇ) ಗುಣಸಂಧಿ ಈ) ಲೋಪಸಂಧಿ

೫. ‘ ಅಹುದಹುದು ‘ ಇದು ಈ ವ್ಯಾಕರಣಾಂಶವಾಗಿದೆ :

ಅ ) ಜೋಡುನುಡಿ ಆ) ದ್ವಿರುಕ್ತಿ ಇ) ಅನುಕರಣಾವ್ಯಯ ಈ) ವಿದ್ಯರ್ಥಕ

೬. ‘ ಪೆರೆ ‘ ಪದದಅರ್ಥ:

ಅ) ಚಂದ್ರ ಆ)ಸೂರ್ಯ ಇ)ನಕ್ಷತ್ರ ಈ)ಆಕಾಶ

೭. ‘ ಶೋಕದುಲ್ಕೆ ‘ ಇಲ್ಲಿರುವ ಅಲಂಕಾರ

ಅ ) ಉಪಮ ಆ ) ರೂಪಕ ಇ ) ದೃಷ್ಟಾಂತ ಈ) ಅರ್ಥಾಂತರನ್ಯಾಸ

೮. ಸ್ವಲ್ಪ ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳನ್ನು ಹೀಗೆನ್ನುವರು :

ಅ ) ಅಲ್ಪ ಪ್ರಾಣಗಳು ಆ ) ಮಹಾ ಪ್ರಾಣಗಳು ಇ ) ಅನುನಾಸಿಕಗಳು ಈ) ಸಂಧ್ಯಾಕ್ಷರಗಳು

೯ ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳು:

ಅ) ಅಂ, ಅಃ ಆ) ಐ, ಔ ಇ) ಎ,ಏ ಈ)ಉ, ಊ

೧೦. ವರ್ಗದ ಪಂಚಮಾಕ್ಷರಗಳನ್ನು ಅಕ್ಷರಗಳನ್ನು ಹೀಗೆನ್ನುವರು

ಅ) ಅಲ್ಪ ಪ್ರಾಣಗಳು ಆ) ಮಹಾ ಪ್ರಾಣಗಳು ಇ) ವ್ಯಂಜನಾಕ್ಷರ ಈ) ಅನುನಾಸಿಕಗಳು

೧೧) ʼವನಮಾಲೆʼ ಇದು ಈ ಸಮಾಸಕ್ಕೆ ಉದಾಹರಣೆ:

ಅ) ಕರ್ಮಧಾರಯ ಸಮಾಸ ಆ)ಅಂಶಿ ಸಮಾಸ ಇ) ತತ್ಪುರುಷ ಸಮಾಸ ಈ) ಕ್ರಿಯಾಸಮಾಸ

೧೨. ವರ್ಗದ ದ್ವಿತೀಯಾಕ್ಷರಗಳು ಹಾಗೂ ಚತುರ್ಥಾಕ್ಷರಗಳನ್ನು ಹೀಗೆನ್ನುತ್ತಾರೆ :

ಅ ) ಅಲ್ಪಪ್ರಾಣಗಳು ಆ ) ಮಹಾಪ್ರಾಣಗಳು ಇ ) ಅನುನಾಸಿಕಗಳು ಈ ) ಸಂಧ್ಯಾಕ್ಷರಗಳು

Leave your vote

186 Points
Upvote Downvote

One thought on “10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್|10th Standard Shabari Lesson Notes in Kannada

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.