10ನೇ ತರಗತಿ ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್ | 10th Sukumara Swamiya Kathe Kannada Lesson Notes

10ನೇ ತರಗತಿ ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು,Sukumara Swamy Kathe Notes in Kannada Question Answer Pdf Download 2022 kseeb solutions for class 10 kannada chapter 8

ತರಗತಿ : 10ನೇ ತರಗತಿ

ಪಾಠದ ಹೆಸರು : ಸುಕುಮಾರಸ್ವಾಮಿಯ ಕಥೆ

ಕೃತಿಕಾರರ ಹೆಸರು : ಶಿವಕೋಟ್ಯಾಚಾರ್ಯ

kseeb solutions for class 10 kannada chapter 8 Sukumara Swamiya Kathe

Table of Contents

ಲೇಖಕರ ಪರಿಚಯ :

ಶಿವಕೋಟ್ಯಾಚಾರ್ಯ

ಶಿವಕೋಟ್ಯಾಚಾರ್ಯ ಕನ್ನಡದ ಪ್ರಥಮ ಗದ್ಯಕೃತಿ ‘ ವಡ್ಡಾರಾಧನೆ’ಯ ಕರ್ತೃ , ಇವನ ಕಾಲ ಕ್ರಿ . ಶ . ಸುಮಾರು ೧೦ ನೆಯ ಶತಮಾನ . ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಕೋಗಳಿ ನಾಡಿನವನು . ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ . ಈ ಕಥೆಗಳ ನಾಯಕರೆಲ್ಲ ಧರ್ಮವೀರರು . ಕೆಲವರು ಮೋಕ್ಷವನ್ನು ಸಂಪಾದಿಸಿಕೊಳ್ಳುತ್ತಾರೆ . ಕೆಲವರು ಸರ್ವಾರ್ಥಸಿದ್ಧಿಯೆಂಬ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಈ ಕಥೆಗಳು ಸಾರುತ್ತವೆ

Sukumara Swamy Kathe Notes Question Answer

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

1. ಯಶೋಭದ್ರೆಯು ರತ್ನ ಕಂಬಳಿಗಳನ್ನು ಯಾರಿಗೆ ಕೊಟ್ಟಳು ?

ಉ : ಯಶೋಭದ್ರೆಯು ರತ್ನ ಕಂಬಳಿಗಳನ್ನು ತನ್ನ ಮೂವತ್ತೆರಡು ಸೊಸೆಯರಿಗೆ ಕೊಟ್ಟಳು .

2. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು ?

ಉ : ಅರಸ ವೃಷಭಾಂಕನ ಉಂಗುರವು ಮಜ್ಜನ ( ಸ್ನಾನ ) ಮಾಡುವ ಸಮಯದಲ್ಲಿ ಕೆಳಕ್ಕೆ ಬಿದ್ದಿತು .

3. ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು ?

ಉ : ಸುಕುಮಾರಸ್ವಾಮಿಯ ತಂದೆ ಸೂರದತ್ತ , ತಾಯಿ ಯಶೋಭದ್ರೆ ,

4. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು ?

ಉ : ಸುಕುಮಾರಸ್ವಾಮಿಗೆ ಸೆಟ್ಟಿಯ ಪಟ್ಟವನ್ನು ಕಟ್ಟಲಾಯಿತು .

5. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು ?

ಉ : ನೈಮಿತ್ತಿಕನು “ ಎಂದು ಈತನು ಋಷಿಗಳನ್ನು ನೋಡುವನೋ ಅಂದು ತಪಸ್ಸಿಗೆ ಹೋಗುತ್ತಾನೆ ” ಎಂದು ಹೇಳಿದನು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಅರಸ ವೃಷಭಾಂಕನು ಆಶ್ಚರ್ಯಗೊಳ್ಳಲು ಕಾರಣವೇನು ?

ಉ : ಒಮ್ಮೆ ಒಬ್ಬ ವರ್ತಕನು ಲಕ್ಷದೀನಾರ ( ಚಿನ್ನದ ನಾಣ್ಯಗಳ ಬೆಲೆಬಾಳುವ ರತ್ನಗಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದಿದ್ದಾಗ ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜ ಮತ್ತು ಮಹಾರಾಣಿ ಅವುಗಳ ಬೆಲೆ ಹೆಚ್ಚಾಯಿತೆಂದು ಕ್ರಯಕ್ಕೆ ಕೊಳ್ಳಲಿಲ್ಲ . ಆದರೆ ಸುಕುಮಾರ ಸ್ವಾಮಿಯ ತಾಯಿ ಅಷ್ಟೂ ಬೆಲೆಕೊಟ್ಟು ಖರೀದಿಸಿ ಅವುಗಳನ್ನು ಮೂವತ್ತೆರಡು ತುಂಡುಗಳನ್ನಾಗಿ ಮಾಡಿ ಸೊಸೆಯಂದಿರಿಗೆ ಪಾದುಕೆಗಳಿಗೆ ಸಿಕ್ಕಿಸಿಕೊಳ್ಳಲು ಕೊಟ್ಟಳು . ಈ ಸಂಗತಿಯನ್ನು ತಿಳಿದು ರಾಜನು ಆಶ್ಚರ್ಯಪಟ್ಟನು .

2. ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದುಕೊಳ್ಳಲು ಕಾರಣವೇನು ?

ಉ : ವೃಷಭಾಂಕನು ಸುಕುಮಾರ ಸ್ವಾಮಿಯ ಮನೆಗೆ ಆಗಮಿಸಿದಾಗ , ಸ್ವಜನರೂ ಸೇವಕರೂ ಬಿಳಿ ಸಾಸುವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು . ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತುತ್ತಿದುದರಿಂದ ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನೂ ದೀಪ ನೋಡಿದಾಗ ಅವನಗೆ ಕಣ್ಣೀರು ಸುರಿಯುತ್ತಿತ್ತು . ಅಲ್ಲದೆ ಊಟಮಾಡುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಾ ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಅದನ್ನು ಅರಸನು ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು .

3. ಸುಕುಮಾರಸ್ವಾಮಿಯು ಹೇಗೆ ಸುಖಭೋಗಗಳನ್ನು ಅನುಭವಿಸುತ್ತಿದ್ದನು ?

ಉ : ಸುಕುಮಾರಸ್ವಾಮಿಯು ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು . ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ , ಲಾವಣ್ಯ , ಸೌಭಾಗ್ಯ , ಕಾಂತಿ , ಹಾವ , ಭಾವ , ವಿಲಾಸ , ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರೀಯರೂ ಇದ್ದರು , ಮೂವತ್ತೆರಡು ಬಗೆಯ ನಾಟ್ಯಗಳು , ಮೂವತ್ತೆರಡು ಕೋಟಿ ಹೊನ್ನು , ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು .

4 , ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ತಾಯಿ ಯಶೋಭದ್ರೆಯು ಏನೆಂದು ಹೇಳಿದಳು ?

ಉ : ಅರಸ ವೃಷಭಾಂಕನು ಯಶೋಭದ್ರೆಯನ್ನು ಕುರಿತು “ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ?’ ಎಂದು ಕೇಳಿದಾಗ ಅವಳು “ ಒಡೆಯರೇ , ಇವು ರೋಗಗಳಲ್ಲ , ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು . ಅವನು ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು , ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು , ಉಳಿದ ಅನ್ನವನ್ನು ಉಗುಳುತ್ತಿದ್ದನು . ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ ” ಎಂದು ಹೇಳಿದಳು . ಅದನ್ನು ಕೇಳಿ ಅರಸನು ಆಶ್ಚರ್ಯಪಟ್ಟನು .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಸುಕುಮಾರಸ್ವಾಮಿಯ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉಜ್ಜಯಿನಿಯೆಂಬ ಪಟ್ಟಣದಲ್ಲಿ ಯಶೋಭದ್ರೆ ಮತ್ತು ಸೂರದತ್ತ ಎಂಬ ದಂಪತಿಗೆ ಸುಕುಮಾರಸ್ವಾಮಿಯೆಂಬ ಮಗ ಜನಿಸಿದನು . ಆ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದನು . ಸುಕುಮಾರಸ್ವಾಮಿಯು ಬೆಳೆದು ದೊಡ್ಡವನಾಗಿ ಅತ್ಯಂತ ಸುಂದರನಾಗಿದ್ದನಲ್ಲದೆ ಬಹಳ ವೈಭವ – ಸುಖ – ಸಂತೋಷಗಳಿಂದ ಕೂಡಿದ್ದನು . ಒಂದು ದಿನ ಅರಮನೆಗೆ ಬಂದ ಒಬ್ಬ ಜೋಯಿಸನು ” ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು ” ಎಂದು ಭವಿಷ್ಯನುಡಿದುದನ್ನು ಕೇಳಿದ ಯಶೋಭದ್ರೆ ತನ್ನ ಮನೆಗೆ ಋಷಿಗಳು ಪ್ರವೇಶಿಸದಂತೆ ಕಾವಲಿಟ್ಟಳು .ಮನೆಗೆ ಬಂದ ರಾಜನೇ ಕೊಂಡುಕೊಳ್ಳಾಗದ ರತ್ನಗಂಬಳಿಗಳನ್ನು ಸುಕುಮಾರ ಸ್ವಾಮಿಯ ತಾಯಿ ಲಕ್ಷದಿನಾರ ಕೊಟ್ಟು ಖರೀದಿಸಿ ಅವುಗಳನ್ನು ಮೂವತ್ತೆರಡು ತುಂಡುಗಳನ್ನಾಗಿ ಮಾಡಿ ಸೊಸೆಯಂದಿರಿಗೆ ಪಾದುಕೆಗಳಿಗೆ ಸಿಕ್ಕಿಸಿಕೊಳ್ಳಲು ಕೊಟ್ಟಳು . ಈ ಸಂಗತಿಯನ್ನು ರಾಜ ವೃಷಭಾಂಕನು ತಿಳಿದು ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡಲು ಸುಕುಮಾರಸ್ವಾಮಿಯ ಮನೆಗೆ ಬಂದಾಗ ರತ್ನಾದಿಗಳಿಂದ ಸ್ವಾಗತಿಸಿದರು . ರಾಜನ ಅಪೇಕ್ಷೆಯಂತೆ ಯಶೋಭದ್ರೆ ಮಾಳಿಗೆಗೆ ಹೋಗಿ ಸುಕುಮಾರಸ್ವಾಮಿಯನ್ನು ಕರೆತಂದಳು . ಅವನನ್ನು ನೋಡಿದ ರಾಜನು ‘ ನಾನು ಕಣ್ಣನ್ನು ಪಡೆದದ್ದು ಇಂದು ಸಾರ್ಥಕವಾಯಿತು ‘ ಎಂದು ಅಪ್ಪಿಕೊಂಡು ಶ್ರೇಷ್ಟವಾದ ಆಸನದ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿಕೊಂಡನು . ಆಗ ಮಂಗಳಕರವೆಂದು ಸೇವಕರು , ಬಿಳಿ ಸಾಸುವೆಗಳನ್ನು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು .

ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತುತ್ತಿದ್ದುದರಿಂದ ಅವನು ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನೂ ದೀಪ ನೋಡಿದಾಗ ಕಣ್ಣೀರು ಸುರಿವುದನ್ನೂ ಕಂಡು ಈತನಿಗೆ ಏನೋ ರೋಗವಿದೆ ಎಂದು ಭಾವಿಸಿಕೊಂಡಿದ್ದನು . ನಂತರ ರಾಜನು ಸುಕುಮಾರಸ್ವಾಮಿಯ ಮನೆಯಲ್ಲಿದ್ದ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಯಿತು . ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು . ಅಲ್ಲಿ ರಾಶಿರಾಶಿಯಾಗಿದ್ದ ರತ್ನಗಳ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟನು . ಆನಂತರ ಊಟಮಾಡುತ್ತಿರುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು . ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಊಟದ ಬಳಿಕ ಅರಸನು ಯಶೋಭದ್ರೆಯನ್ನು ಕುರಿತು “ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? ‘ ಎಂದು ಕೇಳಿದಾಗ ಆಕೆ “ ಒಡೆಯರೆ , ಅವನಿಗೆ ಇವು ರೋಗಗಳಲ್ಲ . ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು . ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಇರುತ್ತಿದ್ದ ಅವನು ಇಂದು ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು . ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು . ಉಳಿದ ಅನ್ನವನ್ನು ಉಗುಳುತ್ತಿದ್ದನು . ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ ” ಎಂದು ಹೇಳಿದಳು . ಅದನ್ನೆಲ್ಲ ಕೇಳಿ ಅರಸನು ಆಶ್ಚರ್ಯಪಟ್ಟನು , “ ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ 2 ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ “ ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ ” ಎಂದು ಸಂತಸಗೊಂಡು ಅರಸನು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು .

2. ‘ ಸುಕುಮಾರ ‘ – ಎಂಬ ಹೆಸರು ಸುಕುಮಾರ ಸ್ವಾಮಿಗೆ ಹೇಗೆ ಅನ್ವರ್ಥವಾಗುತ್ತದೆ ? ವಿವರಿಸಿ ,

ಸುಕುಮಾರಸ್ವಾಮಿಯು ಶ್ರೀಮಂತಿಕೆ – ಗುಣ – ಸೌಂದರ್ಯದಲ್ಲಿ ವೈಭವದಿಂದ ಕೂಡಿದ್ದು ಅವನಿಗೆ ‘ ಸುಕುಮಾರ ‘ ಎಂಬ ಹೆಸರು ಅನ್ವರ್ಥವಾಗಿ ಒಪ್ಪುತ್ತದೆ ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನೀಡಬಹುದು . ಅವನು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು , ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ , ಲಾವಣ್ಯ , ಸೌಭಾಗ್ಯ , ಕಾಂತಿ , ಹಾವ , ಭಾವ , ವಿಲಾಸ , ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರೀಯರೂ ಇದ್ದರು , ಮೂವತ್ತೆರಡು ಬಗೆಯ ನಾಟ್ಯಗಳು , ಮೂವತ್ತೆರಡು ಕೋಟಿ ಹೊನ್ನು , ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು . ಅರಸನಾದ ವೃಷಭಾಂಕನು ಮನೆಗೆ ಬಂದಾಗ ಸುಕುಮಾರಸ್ವಾಮಿಯ ಮನೆಯ ಸೇವಕರು ಬಿಳಿ ಸಾಸುವೆಗಳನ್ನು ಮಂಗಳಕರವೆಂದು ಹಾಕಿದರು . ಆಗ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತುತ್ತಿದುದರಿಂದ ಅವನು ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದನು .

ದೀಪ ನೋಡಿದಾಗ ಅವನಿಗೆ ಕಣ್ಣೀರು ಸುರಿಯುತ್ತಿತ್ತು . ಅಲ್ಲದೆ ಊಟಮಾಡುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಾ ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಅದನ್ನು ಅರಸನು ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು . ಅದನ್ನೆಲ್ಲ ನೋಡಿ ರಾಜನು ಯಶೋಭದ್ರೆಯನ್ನು ಈ ಬಗ್ಗೆ ವಿಚಾರಿಸಿದಾಗ ಅವಳು “ ಒಡೆಯರೆ , ಅವನಿಗೆ ಇವು ರೋಗಗಳಲ್ಲ , ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು . ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಇರುತ್ತಿದ್ದ ಅವನು ಇಂದು ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು . ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು . ಉಳಿದ ಅನ್ನವನ್ನು ಉಗುಳುತ್ತಿದ್ದನು . ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ ‘ ಎಂದು ಹೇಳಿದಳು . ಅದನ್ನು ಕೇಳಿದ ಕೂಡಲೇ ಸ್ವತಃ ರಾಜನೇ “ ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ “ ಲೋಕದಲ್ಲಿ ನಿಜವಾಗಿಯೂ ಈತನೇ ಸುಖ ” ಎಂದು ಸಂತಸಗೊಂಡು ಅರಸನು ಅವನಿಗೆ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು . ಈ ಎಲ್ಲಾ ಕಾರಣಗಳಿಂದ ಸುಕುಮಾರಸ್ವಾಮಿಗೆ ‘ ಸುಕುಮಾರ ‘ ಎಂಬ ಹೆಸರು ಅನ್ವರ್ಥವಾಗಿ ಒಪ್ಪುತ್ತದೆಂದು ಹೇಳಬಹುದು .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1 , ” ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ”

ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಜ ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಬಂದು ” ಸುಕುಮಾರನು ಎಲ್ಲಿದ್ದಾನೆ ? ” ಎಂದು ಕೇಳಿದಾಗ ಅದಕ್ಕೆ ಉತ್ತರವಾಗಿ “ ಸ್ವಾಮಿ , ಅವನು ಬಹಳ ಸಾಧು , ನೀವು ಬಂದುದನ್ನು ಅವನು ತಿಳಿದಿಲ್ಲ . ಉಪ್ಪರಿಗೆಯ ಮೇಲೆ ಇದ್ದಾನೆ ‘ ಎಂದು ಯಶೋಭದ್ರೆ ಸುಕುಮಾರನಲ್ಲಿಗೆ ಹೋಗಿ ” ಮಗನೇ , ರಾಜರು ಬಂದಿದ್ದಾರೆ ಬಾ ಹೋಗೋಣ ” ಎಂದಳು . ಆಗ ಸುಕುಮಾರನು ” ರಾಜರೆಂದರೆ ಯಾರು ? ” ಎಂದು ಕೇಳಲು , ತಾಯಿಯು ” ನಮ್ಮನ್ನು ಆಳುವವರು ” ಎಂದು ಹೇಳಿದ ಸಂದರ್ಭದಲ್ಲಿ ಸುಕುಮಾರನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ಹೊರಗಿನ ಪ್ರಪಂಚದ ಅರಿವೇ ಇಲ್ಲದ ಸುಕುಮಾರನು ತನ್ನ ಮನೆಯೇ ಅರಮನೆ , ನಾವೇ ಆಳುವವರೆಂದು ಭಾವಿಸಿದ್ದ ಸುಕುಮಾರಸ್ವಾಮಿಯು ನಮ್ಮನ್ನು ಆಳುವವರೂ ಇದ್ದಾರೆಯೇ ಎಂದು ವಿಸ್ಮಯಪಡುವುದು ಇಲ್ಲಿ ಸ್ವಾರಸ್ಯಕರವಾಗಿದೆ .

2. “ ಆವಂತಿ ಸುಕುಮಾರನೆಂದು ಹೆಸರನಿಟ್ಟಂ ”

ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸುಕುಮಾರನ ತಾಯಿಯ ಮೂಲಕ ಆತನ ವೈಭವ – ಗುಣ – ನಡತೆಗಳನ್ನೂ ಆತನು ಅನುಭವಿಸುತ್ತಿದ್ದ ಸುಖ ಭೋಗಗಳನ್ನೂ ಕೇಳಿದ ಕೂಡಲೇ ಸ್ವತಃ ರಾಜನೇ ” ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ ? ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ ” ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ ” ಎಂದು ಸಂತಸಗೊಂಡ ಸಂದರ್ಭದಲ್ಲಿ ಅರಸನು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು , ಎಂಬಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಸ್ವತಃ ರಾಜನೇ ಸುಕುಮಾರಸ್ವಾಮಿಯ ವೈಭವವನ್ನು ಮೆಚ್ಚಿ , ಈತನ ವೈಭವದ ಮುಂದೆ ತನ್ನ ವೈಭವ ಏನೇನೂ ಅಲ್ಲ . ಎಂದು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರಿಟ್ಟದ್ದು ಸ್ವಾರಸ್ಯಮೂರ್ಣವಾಗಿ ಮೂಡಿಬಂದಿದೆ .

3.“ ರಿಸಿಯರ ರೂಪಂ ಕಾಣುಮಂದೀತನುಂ ತಪಂಬಡುಗುಮ್ ”

ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸುಕುಮಾರಸ್ವಾಮಿಯ ಭವಿಷ್ಯವನ್ನು ಯಶೋಭದ್ರೆಗೆ ಹೇಳುವ ಸಂದರ್ಭದಲ್ಲಿ ಜೋಯಿಸರು ಈ ಮಾತನ್ನು ಹೇಳುತ್ತಾರೆ . ಒಂದು ದಿನ ಅರಮನೆಗೆ ಬಂದ ಒಬ್ಬ ಜೋಯಿಸನು ” ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು ” ಎಂದು ಭವಿಷ್ಯನುಡಿದುದನ್ನು ಕೇಳಿದ ಯಶೋಭದ್ರೆ ತನ್ನ ಮನೆಗೆ ಋಷಿಗಳು ಪ್ರವೇಶಿಸದಂತೆ ಕಾವಲಿಟ್ಟಳು .

ಸ್ವಾರಸ್ಯ : ಇಲ್ಲಿ ವಿಧಿಯನ್ನು ಯಾರಿಂದಲು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಸತ್ಯವಾದರೂ ಸುಕುಮಾರಸ್ವಾಮಿ : ವೈರಾಗ್ಯ ಹೊಂದುವುದನ್ನು ತಡೆಯಲು ಯಶೋಭದ್ರೆ ಮಾಡುವ ಪ್ರಯತ್ನ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

4 ,“ಅರ್ಧಾಹಾರಮಂ ನುಂಗುಗುದರ್ಧಾಹಾರಮನುಗುಟ್ಟುಮದಂ ನೋಡಿ ”

ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಊಟಮಾಡುತ್ತಿದ್ದ ಸಂದರ್ಭದಲ್ಲಿ ಈ ಮಾತನ್ನು ಕವಿ ಹೇಳಿದ್ದಾರೆ . ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು . ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಅದನ್ನು ಅರಸನು ನೋಡಿ ಇದು ಒಂದು ಬಗೆಯ ರೋಗ , ಊಟದ ಮೇಲೆ ರುಚಿಯಿಲ್ಲದುದು ” ಎಂದು ಭಾವಿಸಿಕೊಂಡನು .

ಸ್ವಾರಸ್ಯ : ಇಲ್ಲಿ ಸುಕುಮಾರಸ್ವಾಮಿಯ ವೈಭವದ ಉತ್ತುಂಗ ಸ್ಥಿತಿ ಮತ್ತು ಆತನ ಸುಕೋಮಲತೆ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

ಭಾಷಾ ಚಟುವಟಿಕೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ನಾಮಪದ ಎಂದರೇನು ? ಉದಾಹರಿಸಿರಿ .

ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದವೇ ನಾಮಪದ . ಉದಾ : ‘ ಭೀಮ ‘ ಎನ್ನುವುದು ನಾಮ ಪ್ರಕೃತಿ , ಅನ್ನು ಎನ್ನುವುದು ವಿಭಕ್ತಿ ಪ್ರತ್ಯಯ ‘ ಭೀಮನನ್ನು ‘ ಎನ್ನುವುದು ನಾಮಪದ . [ ಭೀಮ + ಅನ್ನು = ಭೀಮನನ್ನು

2. ನಾಮವಾಚಕಗಳ ವಿಧಗಳನ್ನು ಪಟ್ಟಿಮಾಡಿರಿ .

ನಾಮವಾಚಕಗಳನ್ನು ವಸ್ತುವಾಚಕ , ಗುಣವಾಚಕ , ಸಂಖ್ಯಾವಾಚಕ , ಸಂಖ್ಯೆಯವಾಚಕ , ಭಾವನಾಮ , ಪರಿಮಾಣವಾಚಕ , ದಿಗ್ವಾಚಕ , ಸರ್ವನಾಮ ಎಂಬ ಗುಂಪುಗಳಾಗಿ ವಿಂಗಡಿಸಬಹುದು .

3. ಕೃದಂತ ಎಂದರೇನು ? ಉದಾಹರಣೆಗಳನ್ನು ಬರೆಯಿರಿ .

ಧಾತುಗಳಿಗೆ ಕೃತ ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ , ಇದಕ್ಕೆ ಕೃನ್ನಾಮಗಳೆಂಬ ಹೆಸರೂ ಇದೆ , ಕೃದಂತಗಳಲ್ಲಿ ಕೃದಂತನಾಮ , ಕೃದಂತಭಾವನಾಮ , ಕೃದಂತಾವ್ಯಯಗಳೆಂದು ಮೂರು ವಿಧಗಳಿವೆ . ಉದಾ : ಕೃದಂತನಾದುಕ್ಕೆ ಮಾಡಿದ , ಮಾಡುವ , ಮಾಡದ , ಕೃದಂತ ಭಾವನಾಮಕ್ಕೆ ಮಾಟ , ತಿನ್ನುವಿಕೆ , ನಡೆತ , ಓಟ ಕೃದಂತಾವ್ಯಯ : ಮಾಡಿ , ತಿಂದು , ನಡೆಯುತ್ತ , ಓಡಿ

ಆ ) ಕೊಟ್ಟಿರುವ ಪದಗಳನ್ನು ಕೃದಂತನಾಮ , ಕೃದಂತಭಾವನಾಮ , ಕೃದಂತಾವ್ಯಯಗಳಾಗಿ ವಿಂಗಡಿಸಿ ಬರೆಯಿರಿ .

ಮಾಟ, ಓಡಿದ, ತಿಂದು, ನೋಡಿ, ಆಟ, ನೋಡಿದ.

ಕೃದಂತ ನಾಮ: ಓಡಿದ, ನೋಡಿದ

ಕೃದಂತ ಭಾವನಾಮ: ಮಾಟ , ಆಟ

ಕೃದಂತಾವ್ಯಯ: ನೋಡಿ, ತಿಂದು

ಇ ) ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆಯಿರಿ ,

1. ವರ್ತಮಾನ ಕೃದಂತನಾಮಕ್ಕೆ ಈ ಪದವು ಉದಾಹರಣೆಯಾಗಿದೆ.

ಅ) ಬರೆಯುವ ಆ) ಬರೆದ ಇ) ಬರೆಯದ ಈ) ಬರೆಹ

ಉತ್ತರ: ಅ) ಬರೆಯುವ

2.‘ನೋಟ’ ಎಂಬುದು ಈ ವ್ಯಾಕರಣಾಂಶವಾಗಿದೆ.

ಅ) ಕೃದಂತನಾಮ ಆ) ಕೃದಂತಭಾವನಾಮ ಇ) ಕೃದಂತಾವ್ಯಯ ಈ)ತದ್ಧಿತಾಂತ

ಉತ್ತರ: ಆ) ಕೃದಂತಭಾವನಾಮ

3. ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ.

ಅ) ತೊಡುಗೆ ಆ) ತಿನ್ನುವಿಕೆ ಇ) ನಡೆಯುವ  ಈ) ಮಾಡಲಿಕ್ಕೆ

ಉತ್ತರ: ಈ) ಮಾಡಲಿಕ್ಕೆ

4. ‘ಲೋಕದೊಳ್’ ಎಂಬುದು ಈ ವಿಭಕ್ತಿಯಲ್ಲಿದೆ .

ಅ) ಪ್ರಥಮ  ಆ) ತೃತೀಯಾ ಇ) ಪಂಚಮೀ ಈ) ಸಪ್ತಮೀ

ಉತ್ತರ: ಈ) ಸಪ್ತಮೀ

ಈ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ .

1. ನದಿ, ಪರ್ವತ : ರೂಢನಾಮ : : ವ್ಯಾಪಾರಿ, ವಿಜ್ಞಾನಿ : ಅನ್ವರ್ಥನಾಮ

2. ನಾನು, ನೀನು : ಪುರುಷಾರ್ಥಕ ಸರ್ವನಾಮ : : ಯಾರು? ಏನು? : ಪ್ರಶ್ನಾರ್ಥಕ ಸರ್ವನಾಮ

3. ಅಷ್ಟು : ಪರಿಮಾಣ ವಾಚಕ : : ಹನ್ನೆರಡು  : ಸಂಖ್ಯಾವಾಚಕ

4. : ಪಟ್ಟಣ : : ಕಸವರ : ಚಿನ್ನ

Sukumara Swamy Kathe Notes in Kannada Question Answer Pdf Download 2022

ಇತರ ಪಾಠಗಳು:

ವೃಕ್ಷಸಾಕ್ಷಿ ಕನ್ನಡ ನೋಟ್ಸ್

ವ್ಯಾಘ್ರಗೀತೆ ನೋಟ್ಸ್‌ 

Leave your vote

51 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.