10ನೇ ತರಗತಿ ಕನ್ನಡ ವ್ಯಾಘ್ರಗೀತೆ ನೋಟ್ಸ್‌ | 10th Standard Kannada Vyagra geethe Notes

10ನೇ ತರಗತಿ ಕನ್ನಡ ವ್ಯಾಘ್ರಗೀತೆ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು,10th Vyagra Geethe Kannada Lesson Notes Question Answer Pdf Download 2022

ತರಗತಿ : 10ನೇ ತರಗತಿ

ಪಾಠದ ಹೆಸರು : ವ್ಯಾಘ್ರಗೀತೆ

ಕೃತಿಕಾರರ ಹೆಸರು : ಎ . ಎನ್ . ಮೂರ್ತಿರಾವ್

Table of Contents

ಲೇಖಕರ ಪರಿಚಯ :

ಎ . ಎನ್ . ಮೂರ್ತಿರಾವ್ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್‌ ಅವರು ಕ್ರಿ . ಶ . ೧೯೦೦ ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು ಇವರು ಸಮಗ್ರ ಲಲಿತ ಪ್ರಬಂಧಗಳು , ದೇವರು , ಹಗಲುಗನಸು , ಅಲೆಯುವಮನ , ಚಂಡಮಾರುತ , ಮಿನುಗು – ಮಿಂಚು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಶ್ರೀಯುತರು ದೇವರು ಎಂಬ ಕೃತಿಗೆ ಪಂಪ ಪ್ರಶಸ್ತಿ , ಚಿತ್ರಗಳು – ಪತ್ರಗಳು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ಗಳನ್ನು ಪಡೆದಿದ್ದಾರೆ .

Vyagra Geethe Kannada Notes Question Answer

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ?

ಶಾನುಭೋಗರ ಬ್ರಹ್ಮಾಸ್ತ್ರ ಖಿರ್ದಿ ಪುಸ್ತಕ

2. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?

ಹಸಿದು ಮಲಗಿದ್ದ ಹುಲಿಯು ವಿಧಿ ಅಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು .

3. ಭಗವದ್ಗೀತೆಯನ್ನು ರಚಿಸಿದವರು ಯಾರು ?

ಉ : ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು

4. ಹುಲಿಗೆ ಪರಮಾನಂದವಾಗಲು ಕಾರಣವೇನು ?

ಉ : ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು .

5. ತಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?

ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು .

ಆ ] ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ

1. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು ?

ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ . ಏಕೆಂದರೆ ಶತ್ರುಗಳಾದರೂ ಸರಿಯೆ , ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ . ಆದ್ದರಿಂದ ಹುಲಿಯು ಶಾನುಭೋಗರ ಬೆನ್ನ ಹಿಂದಿನಿಂದ ಹಾರಿ ಕೊಲ್ಲಲಿಲ್ಲ .

2. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು ?

ಶಾನುಭೋಗರು ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು , ಅದು ಕಾಡುದಾರಿಯಾಗಿತ್ತು , ಆದಿನ ಬೆಳುದಿಂಗಳಿನ ರಾತ್ರಿ ಆದರೂ ಶಾನುಭೋಗರ ಮನಸ್ಸಿನಲ್ಲಿ ಭಯ ಆವರಿಸಿತ್ತು . ಹೊಟ್ಟೆಯೂ ಹಸಿಯುತ್ತಿತ್ತು . “ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹದು ” ಎಂದು ಶಾನುಭೋಗರು ಯೋಚಿಸಿದರು .

3. ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ ,

ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ರೈತರ ಗಾಡಿಯ ಎತ್ತುಗಳು ಮುಂದೆ ಹೋಗದೆ ನಿಂತವು ಹುಲಿಯ ಗರ್ಜನೆ ಕೇಳಿಸಿತು . ಎತ್ತುಗಳ ಗಂಟೆಯ ಸದ್ದನ್ನು ಕೇಳಿದ ಹುಲಿಯು ಕೆಲವು ನಿಮಿಷ ತಡೆದು ರೈತರ ಮಾತು ಕೇಳಿಬಂದ ಮೇಲೆ ನಿರಾಶೆಯಿಂದ ಪಲಾಯನಮಾಡಿತು . ಅನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ , ಸಾಧ್ಯವಾದಷ್ಟು ಗಲಭೆ ಮಾಡುತ್ತಾ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದೆ ಬಂದರು . ಮೂರ್ಛಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು , ಮುಖದ ಮೇಲೆ ನೀರೆರಚಿ ಎಚ್ಚರಿಸಿದರು .

ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ ? ಹುಲಿಯ ಧರ್ಮವೇ ? ಸಮರ್ಥನೆಯೊಂದಿಗೆ ವಿವರಿಸಿ ,

ಹುಲಿಗಳು ಹಿಂದಿನಿಂದ ಮೇಲೆ ಬೀಳುವುದಿಲ್ಲ ಎಂದು ಅರಿತಿದ್ದ ಶಾನುಭೋಗರು ಉಪಾಯವಾಗಿ ಹಲಿಗೆ ಬೆನ್ನು ತಿರುಗಿಸಿ ನಡೆದು ನಡೆದು ದಣಿದರು , ಆ ವಿಪತ್ತಿನ ಸನ್ನಿವೇಶದಲ್ಲಿ ಅವರಿಗೆ ನೆನಪಾಗಿದ್ದು ಅವರ ಬಳಿಯಿದ್ದ ಖಿರ್ದಿ ಪುಸ್ತಕ . ಅದು ಸಧ್ಯಕ್ಕೆ ಅವರ ಬಳಿಯಿದ್ದ ಬ್ರಹ್ಮಾಸ್ತ್ರ . ಆದ್ದರಿಂದ ಹುಲಿಯ ಮುಖಕ್ಕೆ ಬಡಿದಾಗ ಏನಾಯಿತೆಂದು ಅರಿಯಲು ಆರ ನಿಮಿಷ ಹಿಡಿಯಿತು . ಅದನ್ನೇ ಉಪಯೋಗಿಸಿಕೊಂಡು ಓಡಿದ ಅವರು ಕಲ್ಲು ಎಡವಿ ಬಿದ್ದು ಮೂರ್ಛ ಹೋದಾಗ ಅಷ್ಟರಲ್ಲಿ ಅಲ್ಲಿಗೆ ಬರುತ್ತಿದ್ದ ರೈತರ ಶಬ್ದ ಕೇಳಿ ಹುಲಿ ಪಲಾಯನ ಮಾಡಿತು . ಅವರಿಗೆ ಆ ಅರೆನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ಪಾಣವನ್ನು ಕಾಪಾಡಿದ ಖಿರ್ದಿ ಪುಸ್ತಕದ ಮೇಲೆ ಅವರಿಗೆ ಕೃತಜ್ಞತಾ ಭಾವವಿದೆ . ಖರ್ದಿ ಪುಸ್ತಕವೇ ತಮ್ಮ ಜೀವ ಉಳಿಸಿತು ಎಂಬುದು ಅವರ ನಂಬಿಕೆ , ಆದರೆ ನಿಜವಾಗಿ ನೋಡಿದರೆ ಶಾನುಭೋಗರು . ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ , ಹಲಿಯ ಧರ್ಮಶ್ರದ್ಧೆಯಿಂದ , ಏಕೆಂದರೆ ಭರತಖಂಡದ ಮಲಿಗಳು ಹಿಂದಿನಿಂದ ದಾಳಿಮಾಡಿ ಕೊಲ್ಲದಿರುವ ಧರ್ಮಶ್ರದ್ಧೆಯ ಗುಣ , ಮನಸ್ಸು ಮಾಡಿದ್ದರೆ ಹುಲಿ ಯಾವಾಗಲೋ ಶಾನುಭೋಗರನ್ನು ಕೊಲ್ಲಬಹುದಿತ್ತು . ಆದರೆ ಹುಲಿಯ ಶ್ರದ್ಧೆಯೇ ಶಾನುಭೋಗರು ಹಲಿಯಿಂದ ಪಾರಾಗಲು ಕಾರಣವಾಯಿತು ಎಂದು ಹೇಳಬಹುದು ,

2. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ .

“ ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾರಿಸವನ್ನು ತಿನ್ನ ಬಹುದಾದರೆ ಆಹಾರಕ್ಕಾಗಿ ಹುಲಿಯು ಪ್ರಾಣಿಗಳನ್ನು ಕೊಂದು ತಿನ್ನುವುದರಲ್ಲಿ ತಪ್ಪಿಲ್ಲ . ಆದರೆ ಹಾಗೆ ಕೊಲ್ಲುವಾಗ ಯಾವುದಾರೂ ಒಂದು ಧರ್ಮವನ್ನು ಅನುಸರಿಸಿ ಕೊಲ್ಲುವುದೋ ಅಥವಾ ಧರ್ಮಾಧರ್ಮಗಳ ಲೆಕ್ಕ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಮುಖ್ಯ ಪ್ರಶ್ನೆ , ಇತರ ದೇಶಗಳಲ್ಲಿ ಇರುವ ಹುಲಿಗಳ ವಿಷಯ ಹೇಗೋ ಗೊತ್ತಿಲ್ಲ . ಆದರೆ ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ , ಭಗವದ್ಗೀತೆಯಂಥ ಗ್ರಂಥ ಉದ್ಭವಿಸಿತೋ , ಅಂತಹ ಭರತ ಭೂಮಿಯಲ್ಲಿ ಹುಲಿಗಳು ಅಧರ್ಮಕ್ಕೆ ಅವಕಾಶ ಮಾಡಿಕೊಡುವುದಿಲ್ಲ . ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ ಏಕೆಂದರೆ ಶತ್ರುಗಳಾದರೂ ಸರಿಯೆ , ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ . ಭಗವದ್ಗೀತೆಯ ‘ ಸ್ವಧರ್ಮೇ ನಿಧನಂ ಶ್ರೇಯಃ ‘ ಎಂಬ ಮಾತಿನಂತೆ ಹುಲಿಗಳು ಧರ್ಮಪರತೆಯಿಂದ ಬೇಟೆಯಾಡುತ್ತವೆ ” ಎಂದು ಮೂರ್ತಿರಾಯರು ಅಭಿಪ್ರಾಯಪಡುತ್ತಾರೆ .

ಈ ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ

1. “ ದೇವರೆ , ಮರ ಹತ್ತುವಷ್ಟು ಅವಕಾಶ ಕರುಣಿಸು “

ಆಯ್ಕೆ – : – ಈ ವಾಕ್ಯವನ್ನು ಶ್ರೀ ವಿ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ದಾರಿಯಲ್ಲಿ ಹುಲಿಯ ಆಕ್ರಮಣದಿಂದ ತಪ್ಪಿಸಿಕೊಳ್ಳಲು , ಶಾನುಭೋಗರು ಖಿರ್ದಿ ಪುಸ್ತಕವನ್ನು ಹುಲಿಯ ಮುಖದ ಮೇಲೆ ಎಸೆದು , ಮರದ ಕಡೆಗೆ ಓಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – ‘ ಸಂಕಟ ಬಂದಾಗ ವೆಂಕಟರಮಣ ‘ ಎಂಬಂತೆ ಶಾನುಭೋಗರು ಹುಲಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡು ಎಂದು ದೇವರನ್ನು ಪ್ರಾರ್ಥಿಸುವುದು ಬಹು ಸ್ವಾರಸ್ಯಪೂರ್ಣವಾಗಿದೆ ,

2. “ ಮಲಿ ಈಗ ಎಷ್ಟು ಹಸಿದಿರಬೇಕು “

ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ದಾರಿಯಲ್ಲಿ ಹುಲಿಯ ಆಕ್ರಮಣದಿಂದ ತಪ್ಪಿಸಿಕೊಂಡ ಶಾನುಭೋಗರು ಜೀವ ಸಹಿತ ಮನೆಗೆ ಬಂದು ರಸದೂಟವನ್ನು ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ ,

ಸ್ವಾರಸ್ಯ : – ನಾನು ಹಲಿಯಿಂದ ತಪ್ಪಿಸಿಕೊಂಡು ಬಂದು ರಸದೂಟವನ್ನು ಮಾಡುತ್ತಿದ್ದೇನೆ ಆದರೆ ನನ್ನನ್ನು ಕೊಲ್ಲಲು ಬಂದ ಹುಲಿಯು ಕೊಲ್ಲಲಾಗದೆ ಹಸಿವಿನಿಂದ ಬಳಲುತ್ತಿರಬಹುದು ಎಂದು ಶಾನುಭೋಗರು ಹೇಳುವುದು ಸ್ವಾರಸ್ಯಪೂರ್ಣವಾಗಿದೆ ,

3 , “ ಖಂಡವಿದೆಕೋ , ಮಾಂಸವಿದೆಕೋ , ಗುಂಡಿಗೆಯ ಬಿಸಿರಕ್ತವಿದೆಕೋ ”

ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ಕಾಲುದಾರಿಯಲ್ಲಿ ಶಾನುಭೋಗರ ಬೆನ್ನ ಹಿಂದೆ ಬಂದ ಹಲಿಯು ‘ ವೈರಿಯಾದರೂ ಸರಿಯೇ ಹಿಂದಿನಿಂದ ಹಾರಿ ಕೊಲ್ಲಬಾರದು ‘ ಎಂಬ ತನ್ನ ಧರ್ಮವನ್ನು ನೆನೆದು , ಗೊಂದಲದಲ್ಲಿ ಇದ್ದ ಸಂದರ್ಭದಲ್ಲಿ ಪುಣ್ಯಕೋಟಿಯ ಈ ಮಾತನ್ನು ಲೇಖಕರು ನೆನಪಿಸಿಕೊಳ್ಳುತ್ತಾರೆ .

ಸ್ವಾರಸ್ಯ : – ತನ್ನನ್ನು ತಿನ್ನಲು ಆಹ್ವಾನ ಕೊಟ್ಟಾಗಲೂ ಹುಲಿರಾಯ ಸತ್ಯವತೆಯಾದ ಪುಣ್ಯಕೋಟಿಯನ್ನು ತಿನ್ನದೆ ಪ್ರಾಣಬಿಟ್ಟು , ತನ್ನ ಆದರ್ಶವನ್ನು ಹಾಗೂ ಧರ್ಮಶ್ರದ್ಧೆಯನ್ನು ಮೆರೆಯಿತು ಎಂಬುದನ್ನು ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಲಾಗಿದೆ

4. ” ಸ್ವಧರ್ಮೇ ನಿಧನಂ ಶ್ರೇಯ “

ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ಕಾಲುದಾರಿಯಲ್ಲಿ ಶಾನುಭೋಗರ ಬೆನ್ನ ಹಿಂದೆ ಬಂದ ಯಲಿಯು ‘ ವೈರಿಯಾದರೂ ಸರಿಯೇ ಹಿಂದಿನಿಂದ ಹಾರಿ ಕೊಲ್ಲಬಾರದು ‘ ಎಂಬ ತನ್ನ ಧರ್ಮವನ್ನು ನೆನೆದು , ಗೊಂದಲದಲ್ಲಿ ಇದ್ದ ಸಂದರ್ಭದಲ್ಲಿ ಹುಲಿಗೆ ಭಗವದ್ಗೀತೆಯ ಈ ಮಾತು ನೆನಪಿಗೆ ಬಂದಿತು .

ಸ್ವಾರಸ್ಯ : – ಸದ್ವಂಶದಲ್ಲಿ ಜನಿಸಿದ ಹುಲಿಯು ಶಾನುಭೋಗರ ಬೆನ್ನ ಹಿಂದಿನಿಂದ ಆಕ್ರಮಣ ಮಾಡದೆ ಭಗವದ್ಗೀತೆಯ ಈ ಮಾತನ್ನು ನೆನೆಯುವುದು ಸ್ವಾರಸ್ಯಪೂರ್ಣವಾಗಿದೆ .

5. “ ನಾನು ಮುಖ ಮೇಲಾಗಿ ಬಿದ್ದಿದ್ದನೇ ? ”

ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಶಾನುಭೋಗರು ಹುಲಿಯ ಆಕ್ರಮಣದಿಂದ ಹೆದರಿ , ಮರ ಹತ್ತಲು ಓಡುವಾಗ ಕಲ್ಲನ್ನು ಎಡವಿ ಬಿದ್ದು , ಪ್ರಜ್ಞೆ ತಪ್ಪಿದಾಗ , ಅದೇ ದಾರಿಯಲ್ಲಿ ಹೋಗುತ್ತಿದ್ದ ರೈತರು ಅವರ ಮುಖದ ಮೇಲೆ ನೀರೆರೆಚಿ ಎಚ್ಚರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – “ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಹುಲಿಯು ಏಕೆ ಎಳೆದುಕೊಂಡು ಹೋಗಲಿಲ್ಲ ? ” ಎಂಬ ಸಮಸ್ಯೆಗೆ ಶಾನುಭೋಗರು ಈ ಪ್ರಶ್ನೆಯ ಮೂಲಕ ಉತ್ತರ ಕಂಡುಕೊಳ್ಳುವುದು ಇಲ್ಲಿಯ ಸ್ವಾರಸ್ಯವಾಗಿದೆ .

ಉ) ಬಿಟ್ಟಿರುವ ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿರಿ ,

೧ ) ಮಂತಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು .

೨ ) ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಾಸ್ತ್ರ

೩ ) ನೆಲದಿಂದ ಮೇಲೆದ್ದುಕೊಂಡಿದ್ದ ಕಲನ್ನು ಎಡವಿ ಶಾನುಭೋಗರು ಬಿದ್ದರು .

೪ ) ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು .

೫ ) ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ ,

ಭಾಗ ಬಿ

ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಬರೆಯಿರಿ :

೧. ನಾಮಪದದ ಮೂಲ ರೂಪಕ್ಕೆ :

ಎ ) ಧಾತು ಬಿ ) ಭಾವನಾಮ ಸಿ ) ನಾಮಪ್ರಕೃತಿ ಡಿ) ಸರ್ವನಾಮ

೨. ‘ ವ್ಯಾಪಾರಿ ‘ – ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ :

ಎ ) ರೂಢನಾಮ ಬಿ ) ಅಂಕಿತನಾಮ ಸಿ ) ಭಾವನಾಮ ಡಿ) ಅನ್ವರ್ಥನಾಮ

೩) ʼಹಿರಿಯʼದರ ಭಾವನಾಮ:

ಎ)ದೊಡ್ಡದು ಬಿ) ಕಿರಿದು ಸಿ) ಇಂಪು ಡಿ) ಹಿರಿಮೆ

೪ , ಆತನ ಓಟ ಚೆನ್ನಾಗಿತ್ತು ಈ ವಾಕ್ಯದಲ್ಲಿ ಗೆರೆ ಎಳೆದಿರುವ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ :

ಎ ) ಕೃದಂತಭಾವನಾಮ ಬಿ ) ತದ್ಧಿತಾಂತಭಾವನಾಮ ಸಿ ) ಕೃದಂತವ್ಯಯ ಡಿ ) ಕೃದಂತನಾಮ

೫ , ‘ ತಾನು – ತಾವು ‘ – ಪದಗಳು ಈ ಸರ್ವನಾಮಕ್ಕೆ ಉದಾಹರಣೆಯಾಗಿವೆ :

ಎ ) ಪ್ರಶ್ನಾರ್ಥಕ ಬಿ ) ಆತ್ಮಾರ್ಥಕ ಸಿ ) ಪುರುಷಾರ್ಥಕ ಡಿ ) ನಾಮಾತ್ಮಕ

೬ , ‘ ಮೂಡಣ ‘ – ಈ ನಾಮಪದಕ್ಕೆ ಉದಾಹರಣೆಯಾಗಿದೆ :

ಎ ) ದಿಗ್ವಾಚಕ ಬಿ ) ಗುಣವಾಚಕ ಸಿ ) ಪರಿಮಾಣವಾಚಕ ಡಿ ) ಸಂಖ್ಯಾವಾಚಕ

೭ ವಸ್ತು , ವ್ಯಕ್ತಿ , ಪ್ರಾಣಿ , ಪಕ್ಷಿ ಮುಂತಾದವುಗಳನ್ನು ಗುರುತಿಸಲು ಇಟ್ಟ ಹೆಸರು ಈ ನಾಮಪದವಾಗಿದೆ :

ಎ ) ರೂಢನಾಮ ಬಿ ) ಅಂಕಿತನಾಮ ಸಿ ) ಅನ್ವರ್ಥನಾಮ ಡಿ ) ಭಾವನಾಮ

೮ , ನಾನು , ನಾವು – ಪದಗಳು ಈ ಪುರುಷಾರ್ಥಕ ಸರ್ವನಾಮಗಳು –

ಎ ) ಉತ್ತಮಪುರುಷ ಬಿ ) ಪ್ರಥಮಪುರುಷ ಸಿ) ಮಧ್ಯಮಪುರುಷ ಡಿ) ಅಧಮಪುರುಷ

೯. ‘ ಮಾಡಲಿಕ್ಕೆ ‘ – ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :

ಎ ) ಕೃದಂತನಾಮ ಬಿ ) ಕೃದಂತ ಭಾವನಾಮ ಸಿ ) ಕೃದಂತಾವ್ಯಯ ಡಿ) ತದ್ದಿತಾಂತವ್ಯಯ

೧೦. ‘ ಬರೆಯದ ‘ – ಪದವು ಈ ಕೃದಂತಕ್ಕೆ ಉದಾಹರಣೆ :

ಎ ) ವರ್ತಮಾನ ಕೃದಂತ ಬಿ ) ಭೂತಕಾಲಕೃದಂತ ಸಿ ) ನಿಷೇಧಕೃದಂತ ಡಿ) ಕೃದಂತಭಾವನಾಮ

1 ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೇಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ :

೧. ದೃಷ್ಟಿ : ದಿಟ್ಟಿ : : ಧರ್ಮ: ದಮ್ಮ

೨. ಪುಸ್ತಕ : ಹೊತ್ತಿಗೆ : : ಪ್ರಾಣ : ಹರಣ

೩. ಸ್ಪರ್ಶೇಂದ್ರಯ : ಚರ್ಮ : : ಘ್ರಾಣೇಂದ್ರಿಯ: ಮೂಗು

೪. ಗಂಧ : ಸುವಾಸನೆ : : ಲಾಂಛನ : ಗುರುತು

೫. ಹನ್ನೆರಡು : ಸಂಖ್ಯಾವಾಚಕ : : ಹನ್ನೆರಡನೆಯ : ಸಂಖ್ಯಾವಾಚಕ

೬ , ನೋಡುವುದರ ಭಾವ : ನೋಟ : : ನೆನೆಯುವುದರ ಭಾವ : ನೆನಪು

೭. ಓಡಿದ : ಭೂತಕಾಲಕೃದಂತ : : ಓಡಿದ : ವರ್ತಮಾನಕೃದಂತ

೮. ಮನುಷ್ಯ : ರೂಢನಾಮ : : ವಿಜ್ಞಾನಿ : ಅನ್ವರ್ಥನಾಮ

೯. ತಮ್ಮ : ಆತ್ಮಾರ್ಥಕ ಸರ್ವನಾಮ : : ಯಾರು : ಪ್ರಶ್ನಾರ್ಥಕ ಸರ್ವನಾಮ

೧೦. ರಾಜಭಕ್ತಿ : ತತ್ಪುರುಷಸಮಾಸ : : ಇಮ್ಮಡಿ : ದ್ವಿಗುಸಮಾಸ

೧೧. ಬ್ರಹ್ಮಾಸ್ತ್ರ : ಸವರ್ಣದೀರ್ಘಸಂಧಿ : : ಪಂಚೇಂದ್ರಿಯ : ಗುಣಸಂಧಿ

೧೨. ಮಾಂಸವನ್ನು : ದ್ವಿತೀಯವಿಭಕ್ತಿ : : ಹುಲಿಯಲ್ಲಿ : ಸಪ್ತಮಿವಿಭಕ್ತಿ

೧೩. ನಾಮಪ್ರಕೃತಿ : ನಾಮಪದ : : ಧಾತು : ಕ್ರಿಯಾಪದ

10th Vyagra Geethe Kannada Lesson Notes Question Answer Pdf Download

ಇತರ ಪಾಠಗಳು:

ಎದೆಗೆ ಬಿದ್ದಅಕ್ಷರ ನೋಟ್ಸ್‌

ಭಾಗ್ಯಶಿಲ್ಪಿಗಳು ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.