8ನೇ ತರಗತಿ ಸೋಮೇಶ್ವರ ಶತಕ ಕನ್ನಡ ನೋಟ್ಸ್ | 8th Standard Someshwara Shataka Kannada Notes

8ನೇ ತರಗತಿ ಸೋಮೇಶ್ವರ ಶತಕ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ, 8th Standard Someshwara Shataka Kannada Notes Question Answer Pdf Download

ತರಗತಿ : 8ನೇ ತರಗತಿ

ಪದ್ಯದ ಹೆಸರು : ಸೋಮೇಶ್ವರ ಶತಕ

ಕೃತಿಕಾರರ ಹೆಸರು : ಪುಲಿಗೆರೆ ಸೋಮನಾಥ

ಕೃತಿಕಾರರ ಪರಿಚಯ :

ಪುಲಿಗೆರೆ ಸೋಮನಾಥ

* ಪುಲಿಗೆರೆ ಸೋಮನಾಥನು ಕ್ರಿ.ಶ.ಸುಮಾರು ೧೨೯೯ ರಲ್ಲಿ ಜೀವಿಸಿದ್ದ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮುಲಿಗೆರೆಯವನು

* ಈತನು ಪುಲಿಗೆರೆ ಸೋಮನಾಥನೆಂದೇ ಪ್ರಸಿದ್ಧಿಯಾಗಿದ್ದಾನೆ .

* ಕನ್ನಡ ಹಾಗು ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚನ್ನಸೋಮೇಶ್ವರಾ ,

* ಈತನು ಕನ್ನಡದಲ್ಲಿ ‘ ರತ್ನಕರಂಡಕ ‘ ಕಾವ್ಯವನ್ನು ಚಂಪೂ ಶೈಲಿಯಲ್ಲಿಯೂ ‘ ಸೋಮೇಶ್ವರ ಶತಕ ‘ ವನ್ನು ವೃತ್ತ ಛಂದಸ್ಸಿನಲ್ಲಿಯೂ ರಚಿಸಿದ್ದಾನೆ . [ ಇಲ್ಲಿರುವ ಚೌಪದಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಿಸಿರುವ ಸೋಮೇಶ್ವರ ಶತಕ ಕೃತಿಯಿಂದ ಆಯ್ಕೆಮಾಡಿ ಕೊಳ್ಳಲಾಗಿದೆ . ]

Someshwara Shataka Kannada Notes Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ರಾಜನಾದವನ ಕರ್ತವ್ಯವೇನು ?

ಉತ್ತರ : ಪ್ರಜೆಗಳನ್ನು ಪಾಲಿಸುವುದು ರಾಜನಾದವನ ಕರ್ತವ್ಯವಾಗಿದೆ .

2. ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಏನಾಗುತ್ತದೆ ?

ಉತ್ತರ : ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಹೆಮ್ಮರವಾಗುತ್ತದೆ .

3. ನಿಜವಾದ ಬಂಧು ಯಾರು ?

ಉತ್ತರ : ಯಾರು ನಮ್ಮ ಹಿತವನ್ನು ಬಯಸುವನೋ ಅವನೇ ನಿಜವಾದ ಬಂಧು .

4. ಧಾರ್ಮಿಕನೆಂದು ಯಾರನ್ನು ಕರೆಯಲಾಗಿದೆ ?

ಉತ್ತರ : ತಂದೆ – ತಾಯಿಯನ್ನು ಸಲಹಲು ಬಲ್ಲವನನ್ನು ಧಾರ್ಮಿಕ ಎಂದು ಕರೆಯಲಾಗಿದೆ .

5. ಮುಲಿಗೆರೆ ಸೋಮನಾಥನ ಅಂಕಿತನಾಮವೇನು ?

ಉತ್ತರ : ಮಲಿಗೆರೆ ಸೋಮನಾಥನ ಅಂಕಿತನಾಮ ‘ ಹರಹರಾ ಶ್ರೀ ಚೆನ್ನಸೋಮೇಶ್ವರಾ

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ಭಟ ಮತ್ತು ದ್ವಿಜರ ಲಕ್ಷಣಗಳೇನು ?

ಉತ್ತರ : ಧೈರ್ಯವಂತನೇ ನಿಜವಾದ ಭಟ , ಒಳ್ಳೆಯ ಆಚಾರವನ್ನು ಹೊಂದಿರುವವನೇ ದ್ವಿಜ ( ಬ್ರಾಹ್ಮಣ ) ಎಂದು ಸೋಮನಾಥ ಹೇಳಿದ್ದಾನೆ .

2. ಸುವ್ರತಿ ಹಾಗೂ ಸುತನ ಬಗೆಗೆ ಕವಿ ಏನು ಹೇಳಿದ್ದಾನೆ ?

ಉತ್ತರ : ವೇದಗಳನ್ನು ಬಿಡದೆ ಪಠಿಸುತ್ತಾ ಪಾಲನೆ ಮಾಡುವವನೇ ಸುವತಿ , ಒಳ್ಳೆಯ ಮಗನೇ ಸದ್ಧತಿಯನ್ನು ತಂದುಕೊಡುತ್ತಾನೆ . ಎಂದು ಸೋಮನಾಥ ಹೇಳಿದ್ದಾನೆ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ ,

1. ಬಡವ ಬಲ್ಲಿದನಾಗುವನು ಎಂಬುದಕ್ಕೆ ಕವಿ ನೀಡಿರುವ ನಿದರ್ಶನಗಳಾವುವು ?

ಉತ್ತರ : ಚಂದ್ರನು ಒಂದೇ ಸಮನಾಗಿರುವುದಿಲ್ಲ . ಕಳೆಗುಂದುತ್ತಾನೆ . ಮತ್ತೆ ಹೆಚ್ಚಾಗುವುದಿಲ್ಲವೇ ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು , ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ ? ಮಿಡಿ ಹಣ್ಣಾಗುವುದಿಲ್ಲವೇ ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನ್ನು ಸಿರಿವಂತನಾಗುವುದಿಲ್ಲವೇ ? ಎಂಬ ನಿದರ್ಶನಗಳನ್ನು ಕವಿ ನೀಡಿದ್ದಾನೆ .

2. ಶ್ರೇಷ್ಠ ಮಂತ್ರಿಯಲ್ಲಿರಬೇಕಾದ ಲಕ್ಷಣಗಳೇನು ?

ಉತ್ತರ : ಅತಿ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ , ಸತ್ಯಾತ್ಮನೂ ರೂಢಿಯಲ್ಲಿರುವ ಹಲವು ಲಿಪಿ ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ವ್ರತವನ್ನು ಪಾಲಿಸುವವನೂ ಧರ್ಮಪರನೂ ವಿಚಾರವಂತನೂ ಸಾಮ , ದಾನ , ಭೇದ , ದಂಡ ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ಎಂದು ಸೋಮನಾಥ ಹೇಳಿದ್ದಾನೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ,

1. “ ಅತಿ ಗಂಭೀರನುದಾರ ಧೀರನು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಪುಲಿಗೆರೆ ಸೋಮನಾಥನು ಬರೆದಿರುವ ‘ ಸೋಮೇಶ್ವರ ಶತಕ ‘ ಕೃತಿಯಿಂದ ಆರಿಸಲಾಗಿದೆ ‘ ಸೋಮೇಶ್ವರ ಶತಕ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಕವಿಯು ಸೋಮನಾಥನು ಒಳ್ಳೆಯ ಮಂತ್ರಿಯಲ್ಲಿರ ಬೇಕಾದ ಗುಣಗಳನ್ನು ತಿಳಿಸುವ ಸಂದರ್ಭದಲ್ಲಿ ಆ ಗಂಭೀರನೂ ಉದಾರನೂ ಧೀರನೂ ಹಲವು ಲಿಪಿ – ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ಧರ್ಮಪರನ ವಿಚಾರವಂತನೂ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ‘ ಎಂದು ಹೇಳಿದ್ದಾನೆ .

ಸ್ವಾರಸ್ಯ : ಮಂತ್ರಿಯಾದವನಿಗಿರಬೇಕಾದ ಗುಣಗಳಲ್ಲಿ ಗಂಭೀರತೆ , ಉದಾರತೆ ಮತ್ತು ಧೀರತನ ಅತ್ಯವಶ್ಯಕ ಎಂಬುದನ್ನು ಕವಿ ಇ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .

2. “ ಉಡುರಾಜ ಕಳೆಗುಂದಿ ಪರ್ಚದಿಹನೆ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಪುಲಿಗೆರೆ ಸೋಮನಾಥನು ಬರೆದಿರುವ ‘ ಸೋಮೇಶ್ವರ ಶತಕ ‘ ಕೃತಿಯಿಂದ ಆರಿಸಲಾಗಿದೆ ‘ ಸೋಮೇಶ್ವರ ಶತಕ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಜೀವನದಲ್ಲಿ ಆಶಾವಾದಿಯಾಗಿರಬೇಕು . ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂಬ ಪ್ರತಿಪಾದಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಚಂದ್ರನು ಒಂದೇ ಸಮನಾಗಿರುವುದಿಲ್ಲ . ಕಳೆಗುಂದುತ್ತಾನೆ ಮ ಹೆಚ್ಚಾಗುವುದಿಲ್ಲವೇ ? ಅಲದ ಮರದ ಕೆಲವು ಬೀಜಗಳಾದರೂ ಸಿಡಿದು , ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ ? ಈ ಲೋಕದ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ ? ಮಿಡಿ ಹಣ್ಣಾಗುವುದಿಲ್ಲವೇ ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವ ಸಿರಿವಂತನಾಗುವುದಿಲ್ಲವೇ ? ಎಂದು ಕವಿ ಹೇಳಿದ್ದಾನೆ .

ಸ್ವಾರಸ್ಯ : ಪ್ರಕೃತಿಯ ಸ್ವಾಭಾವಿಕ ಕ್ರಿಯೆಗಳನ್ನು ಆಧರಿಸಿ ಬಡವನೂ ಒಂದಲ್ಲಾ ಒಂದು ದಿನ ಸಿರಿವಂತನಾಗುವನು ಎಂದು ಕವಿ ಆಶಾವಾದ ಮೂಡಿಸುವ ಮಾತನ್ನಾಡಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .

3. ‘ ಸದ್ಧರ್ಮದಾ ಸತಿಯೇ ಸರ್ವಕೆ ಸಾಧನಂ “

ಉತ್ತರ : ಆಯ್ಕೆ : ಈ ವಾಕ್ಯವನ್ನು ಪುಲಿಗೆರೆ ಸೋಮನಾಥನು ಬರೆದಿರುವ ‘ ಸೋಮೇಶ್ವರ ಶತಕ ‘ ಕೃತಿಯಿಂದ ಆರಿಸಲಾಗಿರುವ ‘ ಸೋಮೇಶ್ವರ ಶತಕ ” ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಕವಿಯು ಉತ್ತಮ ಬಂಧು , ತಂದೆ , ಹೆಂಡತಿ , ಮಗ , ಗುರು , ಸುವತಿ ಮುಂತಾದವರ ಬಗ್ಗೆ ತಿಳಿಸುವ ಸಂದರ್ಭದಲ್ಲಿ ‘ ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ ‘ ಎಂದು ಹೇಳಿದ್ದಾನೆ .

ಸ್ವಾರಸ್ಯ : ಹೆಂಡತಿ ಧರ್ಮಮಾರ್ಗದಿಂದ ನಡೆದು ಗಂಡನ ಶ್ರೇಯಸ್ಸಿಗೆ ಕಾರಣಳಾಗುತ್ತಾಳೆ , ಎಂದು ಹೇಳುವ ಮೂಲಕ ಜೀವನದಲ್ಲಿ ಆಕೆಯ ಮಹತ್ವವನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ತಿಳಿಸಲಾಗಿದೆ .

ಉ. ಮೊದಲೆರಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

1. ಮಿಡಿ : ಪಣ್ಣಾಗದೇ : : ಎಳಗರು : ___________

2. ನೃಗ್ರೋಧ : ಆಲದ ಮರ : : ಉಡುರಾಜ : ___________

3. ಭಕ್ತಿಯುಳ್ಳ : ಆಗಮಸಂದಿ : : ಕಳೆಗುಂದು : ___________

4. ಧರ್ಮ : ಅಧರ್ಮ : : ಬಡವ : ___________

5. ಕಾರ್ಯ : ಕಜ್ಜ : : ಭಕ್ತಿ : ___________

ಸರಿ ಉತ್ತರಗಳು.

1. ಎತ್ತಾಗದೆ

2.. ಚಂದ್ರ

3. ಆದೇಶ ಸಂಧಿ

4. ಬಲ್ಲಿದ

5. ಬಕುತಿ

8th Standard Someshwara Shataka Kannada Notes Question Answer Pdf

ಇತರೆ ಪದ್ಯಗಳು :

8ನೇ ತರಗತಿ ಭರವಸೆ ಕನ್ನಡ ನೋಟ್ಸ್

8ನೇ ತರಗತಿ ವಚನಾಮೃತ ಕನ್ನಡ ನೋಟ್ಸ್ 

Leave your vote

28 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.