8ನೇ ತರಗತಿ ವಚನಾಮೃತ ಕನ್ನಡ ನೋಟ್ಸ್ | 8th Standard Vachanamrutha Kannada Notes 

8ನೇ ತರಗತಿ ವಚನಾಮೃತ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Class Vachanamrutha Kannada Notes, Vachanamrutha 8th Kannada Poem Questions and Answers Pdf Download

ತರಗತಿ : 8ನೇ ತರಗತಿ

ಪದ್ಯದ ಹೆಸರು : ವಚನಾಮೃತ

ಕೃತಿಕಾರರ ಪರಿಚಯ :

ಆಯ್ದಕ್ಕಿ ಮಾರಯ್ಯ : ಈತನ ಕಾಲ ಕ್ರಿ.ಶ.ಸು ೧೧೬೦ , ಸ್ಥಳ : ರಾಯಚೂರು ಜಿಲ್ಲೆಯ ಅಮರೇಶ್ವರ , ಇವನು ಆಯ್ದಕ್ಕಿ ಲಕ್ಕಮ್ಮನ ಪತಿ , ಈತ ಆಯ್ದಕ್ಕಿ ಮಾರಯ್ಯ ಎಂದೇ ಪ್ರಸಿದ್ಧ , ಈವರೆಗೆ ಈತನ ಸುಮಾರು ೩೨ ವಚನಗಳು ದೊರೆತಿವೆ . ಈತನ ಅಂಕಿತ ‘ ಅಮರೇಶ್ವರಲಿಂಗ , ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದುತಂದು ದಾಸೋಹ ಮಾಡುವುದೇ ಅವರ ಕಾಯಕವಾಗಿತ್ತು .

ಅಮುಗೆರಾಯಮ್ಮ : ಈಕೆಯ ಕಾಲ ಕ್ರಿ.ಶ. ಸುಮಾರು ೧೧೬೦ , ಸ್ಥಳ : ಹನ್ನೆರಡನೆಯ ಶತಮಾನದ ವಚನಕಾರ್ತಿಯರಲ್ಲಿ ಒಬ್ಬಳು . ಈಕೆ ಸೊನ್ನಲಿಗೆಯವಳು . ( ಈಗಿನ ಸೊಲ್ಲಾಪುರ ) , ಈಕೆಯ ಪತಿ ಅಮುಗೆ ದೇವಯ್ಯ , ನೇಯ್ಕೆ ಇವರ ಕಾಯಕ , ಈಕೆಯ ಅಂಕಿತನಾಮ ‘ ಅಮುಗೇಶ್ವರ ‘ .

ಶಿವಶರಣೆ ಲಿಂಗಮ್ಮ : ಈಕೆಯ ಕಾಲ ಕ್ರಿ.ಶ. ಸುಮಾರು ೧೧೬೦ , ಹನ್ನೆರಡನೆಯ ಶತಮಾನದ ವಚನಕಾರ್ತಿ ಯರಲ್ಲಿ ಒಬ್ಬಳು , ಕ್ಷೌರಿಕ ವೃತ್ತಿಯ ಹಡಪದ ಅಪ್ಪಣ್ಣನವರ ಧರ್ಮಪತ್ನಿ , ಈಕೆಯ ಅಂಕಿತನಾಮ ‘ ಅಪ್ಪಣ್ಣಪ್ರಿಯ ಚನ್ನಬಸವಣ್ಣ ‘ ಎಂಬುದು . [ ಇಲ್ಲಿರುವ ವಚನಗಳನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

Vachanamrutha Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಆಯ್ದಕ್ಕಿ ಮಾರಯ್ಯನ ಪ್ರಕಾರ ಕೈಲಾಸ ಯಾವುದು ?

ಉತ್ತರ : ಆಯ್ದಕ್ಕಿ ಮಾರಯ್ಯನ ಪ್ರಕಾರ ಕಾಯಕವೇ ಕೈಲಾಸ

2. ಕಾಗೆಯು ಏನಾಗಲು ಸಾಧ್ಯವಿಲ್ಲ ?

ಉತ್ತರ : ಕಾಗೆಯು ಕೋಗಿಲೆಯಾಗಲು ಸಾಧ್ಯವಿಲ್ಲ .

3. ಶರಣರು ಕೆಡಿಸುವ ನಿದ್ದೆಯನ್ನು ಹೇಗೆ ಗೆದ್ದಿದ್ದಾರೆ ?

ಉತ್ತರ : ಶರಣರು ಕೆಡಿಸುವ ನಿದ್ದೆಯನ್ನು ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ಗೆದ್ದಿದ್ದಾರೆ .

4. ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ಹೇಗೆ ಬುದ್ಧಿಯನ್ನು ಹೇಳಬೇಕಿದೆ ?

ಉತ್ತರ : ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಹೇಳಬೇಕಿದೆ .

5. ಕಾಯಕದಲ್ಲಿ ನಿರತನಾದವನು ಯಾವುದನ್ನು ಮರೆಯಬೇಕು ?

ಉತ್ತರ : ಕಾಯಕದಲ್ಲಿ ನಿರತನಾದವನು ಗುರು ದರ್ಶನ , ಲಿಂಗಪೂಜೆಯನ್ನಾದರೂ ಮರೆಯಬೇಕು .

6. ಯಾರ ಮುಖವನ್ನು ನೋಡಲಾಗದು ?

ಉತ್ತರ : ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವ ದಡ್ಡರ ಮುಖವನ್ನು ನೋಡಲಾಗದು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,

1. ಅರಿವು , ಆಚಾರ , ಸಮ್ಯಜ್ಞಾನದ ಬಗ್ಗೆ ಅಮುಗೆರಾಯಮ್ಮನ ಅನಿಸಿಕೆ ಏನು ?

ಉತ್ತರ : ಕಾಗೆಯ ಮರಿ ಎಂದಿಗೂ ಕೋಗಿಲೆ ಆಗಲು ಸಾಧ್ಯವಿಲ್ಲ . ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ . ಕಾಡುನಾಯಿ ( ಸೀಳು ( ನಾಯಿ ) ಸಿಂಹದ ಮರಿಯಾಗಲು ಸಾಧ್ಯವಿಲ್ಲ . ಅರಿವು , ಸದಾಚಾರ ಹಾಗು ಒಳ್ಳೆಯ ವಿವೇಕ ಇಲ್ಲದೆ ಕೇವಲ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವರು ದಡ್ಡರು . ಅಂತಹವರ ಮುಖ ನೋಡಲು ಅಸಹ್ಯವೆನಿಸುತ್ತದೆ ಎಂದು ಅಮುಗೆ ರಾಯಮ್ಮ ಜ್ಞಾನವಿಲ್ಲದ ಆಜ್ಞಾನಿಗಳ ಡಾಂಭಿಕ ಆಚರಣೆಗೆ ಮರುಳಾಗಬಾರದು ಎಂದು ಸಂದೇಶ ನೀಡಿದ್ದಾರೆ .

2. ಬುದ್ಧಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ ?

ಉತ್ತರ : ತಮ್ಮ ಮನವನ್ನು ಗೆದ್ದೆವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ಶಿವಶರಣೆ ಲಿಂಗಮ್ಮ ತಿಳಿಸುತ್ತಾ ಕೆಲವು ಬುದ್ಧಿ ಹೀನರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ , ಮನವನ್ನು ಶುದ್ಧಮಾಡಿಕೊಳ್ಳದೆ : ನಿದ್ದೆಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ .

3. ಶ್ರೀಗುರುವು ಶಿಷ್ಯರಿಗೆ ಬುದ್ಧಿ ಕಲಿಸುವುದು ಕಾಲಕಟ್ಟಳೆಗೆ ಹೇಗೆ ಒಳಪಟ್ಟಿದೆ ? ವಿವರಿಸಿ

ಉತ್ತರ : ಕೃತಯುಗದಲ್ಲಿ ಗುರುವು ಶಿಷ್ಯನಿಗೆ ಬಡಿದು ಬುದ್ದಿಯನ್ನು ಕಲಿಸಿದರೆ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ತ್ರೇತಾಯುಗದಲ್ಲಿ ಬೈದು ಬುದ್ಧಿಯನ್ನು ಕಲಿಸಿದರೆ ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ದ್ವಾಪರ ಯುಗದಲ್ಲಿ ಗದರಿಸಿ , ಬುದ್ಧಿಯನ್ನು ಕಲಿಸಿದರೆ ಆಗ ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ಆದರೆ ಈ ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಕಲಿಸಿದರೆ ಮಾತ್ರ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾನೆ .

4. ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ಹೇಗೆ ನಿರೂಪಿಸಿದ್ದಾನೆ ?

ಉತ್ತರ : ಕಾಯಕ ನಿಷ್ಟೆ ಹೇಗಿರಬೇಕೆಂದರೆ ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನ ಅಥವಾ ಲಿಂಗಪೂಜೆಯನ್ನಾದರೂ ಮರೆಯಬೇಕು . ಜಂಗಮ ಮುಂದೆ ನಿಂತಿದ್ದರೂ ಮೊದಲು ಕಾಯಕ ಮಾಡುವುದಕ್ಕೆ ಗಮನ ನೀಡಬೇಕು . ಏಕೆಂದರೆ ಕಾಯಕವು ಗುರು , ಲಿಂಗ , ಜಂಗಮಗಳನ್ನು ಮೀರಿದ್ದು , ‘ ಕಾಯಕವೇ ಕೈಲಾಸ ‘ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ರ ನೀಡಬೇಕೆಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾನೆ .

5. ಶಿವಶರಣರು ಜಗವನ್ನೇ ಗೆದ್ದಿಹ ವಿಚಾರದಲ್ಲಿ ಲಿಂಗಮ್ಮನ ಅನಿಸಿಕೆಯೇನು ?

ಉತ್ತರ : ಕಾಮ – ಕ್ರೋಧ – ಲೋಭ – ಮೋಹ – ಮದ – ಮತ್ಸರಗಳನ್ನು ಜಯಿಸಿ ; ಆಸೆ , ರೋಷ , ಜಗದ ಮೋಹವನ್ನು ಬಿಟ್ಟು ಕಾಯಕವನ್ನೆ ಪ್ರಸಾದವೆಂದು ತಿಳಿದು ; ನಿದ್ದೆಯನ್ನೆ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ; ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು , ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರು ಅಭಿಪ್ರಾಯಪಟ್ಟಿದ್ದಾರೆ .

ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ವಚನಾಮೃತದಲ್ಲಿ ವ್ಯಕ್ತವಾಗಿರುವ ‘ ಕಾಯಕ ತತ್ವದ ಮಹತ್ವವನ್ನು ವಿವರಿಸಿ ,

ಉತ್ತರ : ಕಾಯಕ ನಿಷ್ಟೆ ಹೇಗಿರಬೇಕೆಂದರೆ ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನವನ್ನಾದರೂ ಲಿಂಗಪೂಜೆಯನ್ನಾದರೂ ಮರೆಯಬೇಕು . ವಚನಕಾರರು ಜಂಗಮರಿಗೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದ್ದು ಅಂತಹ ಜಂಗಮರು ಮುಂದೆ ನಿಂತಿದ್ದರೂ ಮೊದಲು ಕಾಯಕ ಮಾಡುವುದಕ್ಕೆ ಗಮನ ನೀಡಬೇಕು . ಏಕೆಂದರೆ ಕಾಯಕವು ಗುರು , ಲಿಂಗ , ಜಂಗಮಗಳನ್ನು ಮೀರಿದ್ದು , ‘ ಕಾಯಕವೇ ಕೈಲಾಸ ‘ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ರ ನೀಡಬೇಕೆಂದು ಆಯ್ದಕ್ಕಿ ಮಾರಯ್ಯ ಹೇಳಿದ್ದಾರೆ . ಕೆಲವರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ , ಮನವನ್ನು ಶುದ್ಧಮಾಡಿಕೊಳ್ಳದೆ : ನಿದ್ದಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ . ಆದರೆ ನಿಜವಾಗಿ ಕಾಯಕವನ್ನೆ ಪ್ರಸಾದವೆಂದು ತಿಳಿದು , ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು ಎಂದು ಶಿವಶರಣೆ ಲಿಂಗಮ್ಮ ಅಭಿಪ್ರಾಯಪಟ್ಟಿದ್ದಾರೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಕಾಯಕವನೆ ಪ್ರಸಾದ ಕಾಯಕ ಮಾಡಿ ಸಲಹಿದರು ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಲಾದ ಶಿವಶರಣೆ ಲಿಂಗಮ್ಮ ಅವರ ವಚನದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : – ತಮ್ಮ ಮನವನ್ನು ಗೆದ್ದೆವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ತಿಳಿಸುವ ಸಂದರ್ಭದಲ್ಲಿ ಶಿವಶರಣೆ ಲಿಂಗಮ್ಮ ಅವರು ಈ ಮಾತನ್ನು ಹೇಳಿದ್ದಾರೆ . ಕೆಲವರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ , ಮನವನ್ನು ಶುದ್ಧಮಾಡಿಕೊಳ್ಳದೆ : ನಿದ್ದಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ . ಆದರೆ ನಿಜವಾಗಿ ಕಾಯಕವನ್ನೆ ಪ್ರಸಾದವೆಂದು ತಿಳಿದು ; ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು ಎಂದು ಶಿವಶರಣೆ ಲಿಂಗಮ್ಮ ಅಭಿಪ್ರಾಯಪಟ್ಟಿದ್ದಾರೆ .

ಸ್ವಾರಸ್ಯ : ದೈಹಿಕ ದಂಡನೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳುವುದರ ಬದಲು ಯಾವುದಾದರೊಂದು ಕಾಯಕ ಮಾಡಿದರೆ ಕೆಲಸದ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

2 , “ ನಾಮವನೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು “

ಉತ್ತರ : ಆಯ್ಕೆ : – ಈ ವಾಕ್ಯವನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಲಾದ ಅಮುಗೆ ರಾಯಮ್ಮ ಅವರ ವಚನದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : – ಡಾಂಭಿಕ ಆಚರಣೆ ಮತ್ತು ಹುಟ್ಟುಗುಣವನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸುವ ಸಂದರ್ಭದಲ್ಲಿ ಅಮುಗೆ ರಾಯಮ್ಮ ಈ ಮಾತನ್ನು ಹೇಳಿದ್ದಾರೆ . ಕಾಗೆಯ ಮರಿ ಕೋಗಿಲೆ ಆಗಲು , ಆಡಿನ ಮರಿ ಆನೆಯಾಗಲು , ಕಾಡುನಾಯಿ ( ಸೀಳು ನಾಯಿ ) ಸಿಂಹದ ಮರಿಯಾಗಲು ಸಾಧ್ಯವಿಲ್ಲ . ಅರಿವು , ಸದಾಚಾರ ಹಾಗು ಒಳ್ಳೆಯ ವಿವೇಕ ಇಲ್ಲದೆ ಕೇವಲ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವರು ದಡ್ಡರು . ಅಂತಹವರ ಮುಖ ನೋಡಲು ಸಾಧ್ಯವಾಗದು ಎಂದು ರಾಯಮ್ಮ ಹೇಳಿದ್ದಾರೆ .

ಸ್ವಾರಸ್ಯ : ಹುಟ್ಟುಗುಣ ಸುಟ್ಟರೂ ಹೋಗದು ಎಂಬುದನ್ನು ಇಲ್ಲಿ ಸ್ವಾರಸ್ಯಕರವಾಗಿ ಹೇಳಲಾಗಿದೆ .

1. “ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆ ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಆರಿಸಲಾದ ಅಲ್ಲಮಪ್ರಭುವಿನ ವಚನದಿಂದ ತೆಗೆದುಕೊಳ್ಳಲಾಗಿದೆ . ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಸಂದರ್ಭ : – ವಿವಿಧ ಯುಗಗಳ ಕಾಲಘಟ್ಟಗಳಲ್ಲಿ ಗುರುಗಳು ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಅಲ್ಲಮಪ್ರಭು ಈ ಮಾತನ್ನು ಹೇಳಿದ್ದಾರೆ . ಕೃತಯುಗದಲ್ಲಿ ಗುರುವು ಶಿಷ್ಯನಿಗೆ ಬಡಿದು , ತ್ರೇತಾಯುಗದಲ್ಲಿ ಬೈದು , ದ್ವಾಪರ ಯುಗದಲ್ಲಿ ಗದರಿಸಿ , ಬುದ್ಧಿಯನ್ನು ಕಲಿಸಿದರೆ ಆಗ ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ಆದರೆ ಈ ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಕಲಿಸಿದರೆ ಮಾತ್ರ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾನೆ ಎಂದು ಅಲ್ಲಮಪ್ರಭು ಅಭಿಪ್ರಾಯ ಪಟ್ಟಿದ್ದಾರೆ .

ಸ್ವಾರಸ್ಯ : ಕಾಲದಿಂದ ಕಾಲಕ್ಕೆ ಗುರುವಿನ ಬಗ್ಗೆ ಶಿಷ್ಯರಿಗಿರುವ ಗೌರವಭಾವನೆ ಕ್ಷೀಣಿಸುತ್ತಿರುವುದು ಮತ್ತು ಶಿಷ್ಯರಲ್ಲಿ ನೈತಿಕ ಮಟ್ಟ ಕುಸಿದಿರುವುದನ್ನು ಸ್ವಾರಸಪೂರ್ಣವಾಗಿ ವರ್ಣಿಸಲಾಗಿದೆ .

2. “ ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು ”

ಉತ್ತರ : ` ಆಯ್ಕೆ : – ಈ ವಾಕ್ಯವನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಲಾದ ಆಯ್ದಕ್ಕಿ ಮಾರಯ್ಯ ಅವರ ವಚನದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : – ಕಾಯಕದ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಆಯ್ದಕ್ಕಿ ಮಾರಯ್ಯ ಈ ಮಾತನ್ನು ಹೇಳಿದ್ದಾರೆ . ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನ ಅಥವಾ ಲಿಂಗಪೂಜೆಯನ್ನಾದರೂ ಮರೆಯಬೇಕು . ಜಂಗಮ ಮುಂದೆ ನಿಂತಿದ್ದರೂ ಮೊದಲು ಕಾಯಕಕ್ಕೆ ಮಹತ್ವ ನೀಡಬೇಕು . ‘ ಕಾಯಕವೇ ಕೈಲಾಸ ‘ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ರ ನೀಡಬೇಕೆಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾನೆ .

ಸ್ವಾರಸ್ಯ : ಕಾಯಕ ಎಂದರೆ ಕೆಲಸ ಇಲ್ಲಿ ಕೆಲಸವೇ ದೇವರು ಎಂದು ಪ್ರತಿಪಾದಿಸಿರುವುದು ಸ್ವಾರಸ್ಯಪೂರ್ಣವಾಗಿದೆ

8th Class Vachanamrutha Kannada Notes, Vachanamrutha 8th Kannada Poem Questions and Answers Pdf

ಇತರೆ ಪದ್ಯಗಳು :

ಭರವಸೆ ಕನ್ನಡ ನೋಟ್ಸ್

ಗೆಳೆತನ ಪದ್ಯ ಕನ್ನಡ ನೋಟ್ಸ್

Leave your vote

77 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.