8ನೇ ತರಗತಿ ಭರವಸೆ ಕನ್ನಡ ನೋಟ್ಸ್ |  8th Standard Bharavase Kannada Notes

8ನೇ ತರಗತಿ ಭರವಸೆ ಪದ್ಯದ ಪ್ರಶ್ನೆ ಉತ್ತರ ನೋಟ್ಸ್, 8th Class Bharavase Kannada Notes Question answer Pdf Download, Bharavase Padya Notes

ತರಗತಿ : 8ನೇ ತರಗತಿ

ಪದ್ಯದ ಹೆಸರು : ಭರವಸೆ

ಕೃತಿಕಾರರ ಹೆಸರು : ಬಿ . ಟಿ . ಲಲಿತಾನಾಯಕ್

ಕೃತಿಕಾರರ ಪರಿಚಯ :

ಬಿ . ಟಿ . ಲಲಿತಾನಾಯಕ್

ಶ್ರೀಮತಿ ಬಿ . ಟಿ . ಲಲಿತಾನಾಯಕ್ ಅವರು ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ ೦೪.೦೪.೧೯೪೫ ರಲ್ಲಿ ಜನಿಸಿದರು . ಇವರ ಪ್ರಮುಖ ಕೃತಿಗಳೆಂದರೆ : ಚಂದ್ರ ಪರಾಭವ , ಭಟ್ಟನ ಕನಸು , ನೆಲೆಬೆಲೆ , ನಂ ರೂಫಿ , ಗತಿ , ಹಬ್ಬ ಮತ್ತು ಬಲಿ , ಇದೇ ಕೂಗು ಮತ್ತೆ ಮತ್ತೆ , ದೇವದುರ್ಗ ತಾಲೂಕು ದರ್ಶನ , ಒಡಲ ಬೇಗೆ -ಮೊದಲಾದವು . ಅಲ್ಲದೆ ಇವರು ಮಕ್ಕಳ ಕತೆ , ರೇಡಿಯೋ ನಾಟಕಗಳನ್ನೂ ರಚಿಸಿರುವರು . ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯೆಯಾಗಿಯೂ ಕರ್ನಾಟಕ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿಯೂ ಕಾರ ನಿರ್ವಹಿಸಿರುವರು . [ ಭರವಸೆ ಕವನವನ್ನು ಬಿ , ಟಿ . ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟೆಯಲಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ . ]

8th Class Bharavase Kannada Notes Question answer Pdf

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಕನ್ನಡ ಸಾರಸ್ವತ ಲೋಕಕ್ಕೆ ಬಿ.ಟಿ , ಲಲಿತಾನಾಯಕ್ ಅವರ ಕೊಡುಗೆ ಏನು ?

ಉತ್ತರ : ಬಂಡಾಯ ಹಾಗೂ ಸ್ತ್ರೀಸಂವೇದನೆಯ ಬರೆಹಗಳ ಮೂಲಕ ಖ್ಯಾತರಾದ ಬಿ.ಟಿ.
ಲಲಿತಾನಾಯಕ್ ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ

2. ಕೋಗಿಲೆ ಕುಕಿಲರಾಗವನ್ನು ಯಾವಾಗ ಬೆರೆಸಿತು ?

ಉತ್ತರ : ಮಲ್ಲಿಗೆ ಮೊಗ್ಗು ಅರಳಿ ವಸಂತನ ಆಗಮನ ಸಾರಿದಾಗ ಕೋಗಿಲೆ ಕುಕಿಲರಾಗವನ್ನು ಬೆರೆಸಿತು .

3. ಮನುಷ್ಯ ಸ್ವಭಾವದ ಬಗ್ಗೆ ಕವಯಿತ್ರಿಯ ಅಭಿಪ್ರಾಯವೇನು ?

ಉತ್ತರ : ಮನುಷ್ಯ ಸ್ವಾರ್ಥದಲ್ಲಿ ಮುಳುಗಿದ್ದಾನೆ ಎಂಬುದು ಕವಯಿತ್ರಿಯವರ ಅಭಿಪ್ರಾಯವಾಗಿದೆ .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1, ಕೋಗಿಲೆಯ ಆಶಾವಾದವೇನು ?

ಉತ್ತರ : “ ಮಾನವನ್ನು ಸ್ವಾರ್ಥಯಾಗಿ ಪ್ರಕೃತಿಯನ್ನು ನಾಶಪಡಿಸುತ್ತಿದ್ದಾನೆಂದು ಸೊರಗಬೇಕಾಗಿಲ್ಲ . ವಸಂತ ಋತುವಿನಲ್ಲಿ ಮಾವಿನ ಮರದ ಹಸಿರು , ಮಲ್ಲಿಗೆ ಹೂವಿನ ಸುವಾಸನೆ , ದುಂಬಿಗಳ ಝೇಂಕಾರ ಇವೆಲ್ಲಾ ಕವಿಯ ಕಲ್ಪನೆಯಲ್ಲಿ ಮೂಡಿಬರುವ ಗಾನ ಲಹರಿಯಂತೆ . ಅದಕ್ಕೆ ವಿನಾಶವಿಲ್ಲ . ಈ ಭೂಮಿಯು ಬರಡಲ್ಲ . ಈಗಲೂ ಅಲ್ಲಲ್ಲಿ ಅಮರ ಪ್ರೇಮದ ಒರತೆ ಹರಿಯುತ್ತಿರುವುದುಂಟು ” ಎಂಬುದು ಕೋಗಿಲೆಯ ಆಶಯವಾಗಿದೆ .

2 . ಮಲ್ಲಿಗೆ ಕೋಗಿಲೆಯನ್ನು ಕರೆದು ಏನು ಹೇಳಿತು ?

ಉತ್ತರ : ಮಲ್ಲಿಗೆ ಕೋಗಿಲೆಯನ್ನು ಕರೆದು “ ಪ್ರಿಯ ಗೆಳತಿ ಹಾಡೊಂದನ್ನು ಹಾಡು , ಬಾನಸಂಚಾರಿಣಿಯೇ , ಅನುಭವದ ಹೊನ್ನಿನ ಗಣಿಯೇ , ಲೋಕವಾರ್ತೆ ಏನೆಂಬುದನ್ನು ತಿಳಿಸು ‘ ಎಂದು ಹೇಳಿತು .

3. ಮಲ್ಲಿಗೆಯ ಕೋರಿಕೆಗೆ ಕೋಗಿಲೆ ಪ್ರಕೃತಿಯ ಬಗ್ಗೆ ಏನೆಂದು ಉತ್ತರ ನೀಡಿತು ?

ಉತ್ತರ : ಮಲ್ಲಿಗೆಯ ಕೋರಿಕೆಗೆ ಕೋಗಿಲೆಯು “ ಮಾನವನು ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯ ಸಿರಿ ಮುಡಿಯಾದ ಕಾಡಿಗೆ ಕೊಡಲಿ ಹಾಕಿದ್ದಾನೆ . ಮಣ್ಣಿನ ಸೊಗಡನ್ನು ಮರೆತು ಗೋಡೆಯ ಮೇಲೆ ಕೃತಕವಾಗಿ ಗಿಡ ಬಳ್ಳಿಯ ಚಿತ್ರಬಿಡಿಸುತ್ತಿದ್ದಾನೆ ” ಎಂದು ಪ್ರಕೃತಿಯ ಬಗ್ಗೆ ಹೇಳಿತು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ಕೋಗಿಲೆ ತಿಳಿಸಿದ ಲೋಕವಾರ್ತೆ ಏನು ?

ವಿವರಿಸಿ ಉತ್ತರ : ಇಡೀ ಜಗತ್ತು ಕೃತಕತೆಯ ಬಲೆಯಲ್ಲಿ ಸಿಕ್ಕಿಕೊಂಡಿದೆ . ಇಲ್ಲಿ ನೈಜತೆಗೆ ಬೆಲೆ ಇಲ್ಲದಂತಾಗಿದೆ . ಮಾನವನು ತಾನೊಬ್ಬ ಬದುಕಿದರೆ ಸಾಕು , ಬೇರೆ ಏನಾದರೂ ತೊಮದರೆಯಿಲ್ಲ ಎಂಬ ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯ ಸಿರಿ ಮುಡಿಯಾದ ಕಾಡನ್ನು ನಾಶಪಡಿಸುತ್ತಿದ್ದಾನೆ . ಪ್ರಕೃತಿಯ ನಿಜವಾದ ಮಣ್ಣಿನ ಸೊಗಡನ್ನು ಮಾನವನು ಮರೆತಿದ್ದಾನೆ . ಎಲ್ಲವನ್ನು ನಾಶಮಾಡಿ ಗೋಡೆಯ ಮೇಲೆ ಕೃತಕವಾಗಿ ಗಿಡ – ಬಳ್ಳಿಯ ಚಿತ್ರಬಿಡಿಸುತ್ತಿದ್ದಾನೆ .

2. ಮಲ್ಲಿಗೆ ಮತ್ತು ಕೋಗಿಲೆಯ ಸಂಭಾಷಣೆಯನ್ನು ಬರೆಯಿರಿ

ಉತ್ತರ : ಮಲ್ಲಿಗೆ : “ ಪ್ರಿಯ ಗೆಳತಿ ಹಾಡೊಂದನ್ನು ಹಾಡು , ಬಾನಸಂಚಾರಿಣಿಯೇ , ಅನುಭವದ ಹೊನ್ನಿನ ಗಣಿಯೇ , ಲೋಕವಾರ್ತೆ ಏನೆಂಬುದನ್ನು ತಿಳಿಸು ಕೋಗಿಲೆ : ಚೆಲುವೆ , ನಾನು ಏನೆಂದು ಹಾಡಲಿ , ನಿನಗೆ ಏನನ್ನು ಹೇಳಲಿ , ನಾನು ಬಣ್ಣ ಬೆಡಗಿನ ಮೋಸದ ಮಾತನಾಡುವುದನ್ನು ತಿಳಿದಿಲ್ಲ . ಇಡೀ ಜಗತ್ತು ಕೃತಕತೆಯ ಬಲೆಯಲ್ಲಿ ಸಿಕ್ಕಿಕೊಂಡಿದೆ . ಇಲ್ಲಿ ನೈಜತೆಗೆ ಬೆಲೆ ಇಲ್ಲದಂತಾಗಿದೆ . ಮಾನವನು ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯ ಸಿರಿ ಮುಡಿಯಾದ ಕಾಡಿಗೆ ಕೊಡಲಿ ಹಾಕಿದ್ದಾನೆ . ಮಣ್ಣಿನ ಸೊಗಡನ್ನು ಮರೆತು ಗೋಡೆಯ ಮೇಲೆ ಕೃತಕವಾಗಿ ಗಿಡ – ಬಳ್ಳಿಯ ಚಿತ್ರಬಿಡಿಸುತ್ತಿದ್ದಾನೆ . ಹಾಗೆಂದು ನೀನು ಸೊರಗಬೇಕಾಗಿಲ್ಲ . ವಸಂತ ಋತುವಿನಲ್ಲಿ ಮಾವಿನ ಮರದ ಹಸಿರು , ಮಲ್ಲಿಗೆ ಹೂವಿನ ಸುವಾಸನೆ , ದುಂಬಿಗಳ ಝೇಂಕಾರ ಇವೆಲ್ಲಾ ಕವಿಯ ಕಲ್ಪನೆಯಲ್ಲಿ ಮೂಡಿಬರುವ ಗಾನ ಲಹರಿಯಂತೆ . ಅದಕ್ಕೆ ವಿನಾಶವಿಲ್ಲ . ಈ ಭೂಮಿಯು ಬರಡಲ್ಲ . ಈಗಲೂ ಅಲ್ಲಲ್ಲಿ ಅಮರ ಪ್ರೇಮದ ಒರತೆ ಹರಿಯುತ್ತಿರುವುದುಂಟು

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಅಮರ ಪ್ರೇಮದ ಒರತೆ ಹರಿಯುವುದು ಉಂಟು ಅಲ್ಲಲ್ಲಿ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಿ . ಟಿ . ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟಿಯಲಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾದ ‘ ಭರವಸೆ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಾನವನು ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯನ್ನು ನಾಶಪಡಿಸುತ್ತಿದ್ದಾನೆ ಎಂದು ಪ್ರಸ್ತುತ ಸ್ಥಿತಿಯನ್ನು ಹೇಳಿದ ಕೋಗಿಲೆಯು ತಾನೇ ಆಶಾವಾದದ ಮಾತನ್ನಾಡುತ್ತಾ ‘ ಈ ಭೂಮಿಯು ಬರಡಲ್ಲ . ಈಗಲೂ ಅಲ್ಲಲ್ಲಿ ಅಮರ ಪ್ರೇಮದ ಒರತೆ ಹರಿಯುತ್ತಿರುವುದುಂಟು ‘ ಎಂದು ಈ ಸಂದರ್ಭದಲ್ಲಿ ಹೇಳುತ್ತದೆ .

ಸ್ವಾರಸ್ಯ : ಜಗತ್ತು ಎಷ್ಟೇ ಬದಲಾದರೂ ಆಶಾವಾದದಿಂದ ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2. “ ಬೆರೆಸಿತದರೊಳಗೊಂದು ಕುಕಿಲರಾಗ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಿ . ಟಿ . ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟಿಯಲಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾದ ‘ ಭರವಸೆ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಲ್ಲಿಗೆಯ ಮೊಗ್ಗು ಅರಳಿ , ಸುತ್ತಲೂ ಪರಿಮಳ ಬೀರಿ , ವಸಂತ ಋತುವಿನ ಆಗಮನವನ್ನು ಸಾರಿದಾಗ , ಮಾವಿನ ಮರದಲ್ಲಿ ಕುಳಿತಿದ್ದ ಕೋಗಿಲೆಯು ತನ್ನ ಕುಕಿಲರಾಗವನ್ನು ಬೆರೆಸಿತು ಎಂದು ವಣಿಸುವ ಸಂದರ್ಭದಲ್ಲಿ ಕವಯಿತ್ರಿ ಹೀಗೆ ಹೇಳಿದ್ದಾರೆ .

ಸ್ವಾರಸ್ಯ : ವಸಂತ ಋತುವಿನ ಆಗಮನದ ವರ್ಣನೆ ಕೋಗಿಲೆಯ ಗಾನದೊಂದಿಗೆ ಆಯಿತೆಂದು ವರ್ಣಿಸಿರುವುದು ಸ್ವಾರಸ್ಯವಾಗಿದೆ .

3. “ ನೈಜತೆಗೆ ಇಲ್ಲ ಬೆಲೆಯು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಿ . ಟಿ . ಸಂಕಲನದಿಂದ ಆರಿಸಿಕೊಳ್ಳಲಾದ ‘ ಭರವಸೆ ‘ ಎಂಬ ಪದ್ಯಭಾಗದಿಂದ ದಿ ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟಿಯಲಿ ‘ ಎಂಬ ಕವನ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಲ್ಲಿಗೆಯು “ ಹಾಡೊಂದನ್ನು ಹೇಳು , ಲೋಕವಾರ್ತೆ ಏನೆಂಬುದನ್ನು ತಿಳಿಸು ಎಂದು ಕೋಗಿಲೆಯನ್ನು ಕೇಳಿದಾಗ ಅದು “ ನಾನು ಏನೆಂದು ಹಾಡಲಿ , ನಿನಗೆ ಏನನ್ನು ಹೇಳಲಿ , ಇಡೀ ಜಗತ್ತು ಕೃತಕತೆಯ ಬಲೆಯಲ್ಲಿ ಸಿಕ್ಕಿಕೊಂಡಿದೆ . ಇಲ್ಲಿ ನೈಜತೆಗೆ ಬೆಲೆ ಇಲ್ಲದಂತಾಗಿದೆ ” ಎಂದು ಹೇಳುವ ಸಂದರ್ಭವಾಗಿದೆ .

ಸ್ವಾರಸ್ಯ : ಪ್ರಸ್ತುತ ಮಾನವನು ಸಂಪೂರ್ಣವಾಗಿ ಎಲ್ಲಾರೀತಿಯಲ್ಲೂ ಕೃತಕತೆಯಿಂದ ಬದುಕುತ್ತಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

8th Class Bharavase Kannada Notes Question answer Pdf

ಇತರೆ ಪದ್ಯಗಳು :

ಗೆಳೆತನ ಪದ್ಯ ಕನ್ನಡ ನೋಟ್ಸ್

ಕನ್ನಡಿಗರ ತಾಯಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.