8ನೇ ತರಗತಿ ತಲಕಾಡಿನ ವೈಭವ ಕನ್ನಡ ನೋಟ್ಸ್ | 8th Standard Talakadina Vaibhava Kannada Notes

8ನೇ ತರಗತಿ ತಲಕಾಡಿನ ವೈಭವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Class Kannada 3rd Lesson Talakadina Vaibhava Kannada Notes Question Answer Guide Pdf Download

ತರಗತಿ : 8ನೇ ತರಗತಿ

ಪಾಠದ ಹೆಸರು : ತಲಕಾಡಿನ ವೈಭವ

ಕೃತಿಕಾರರ ಹೆಸರು : ಹೀರೇಮಲ್ಲೂರು ಈಶ್ವರನ್

Table of Contents

ಕೃತಿಕಾರರ ಪರಿಚಯ :

ಹೀರೇಮಲ್ಲೂರು ಈಶ್ವರನ್

* ಹಿರೇಮಲ್ಲೂರು ಈಶ್ವರನ್ ಅವರ ಜನನ : ೧೧.೦೧.೧೯೨೨ ಊರು : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು , * ಇವರ ಪ್ರಮುಖ ಕೃತಿಗಳೆಂದರೆ : ಕವಿ ಕಂಡ ನಾಡು ( ಪ್ರವಾಸ ಕಥನ ) , ವಿಷನಿಮಿಷಗಳು , ಭಾರತದ ಹಳ್ಳಿಗಳು , ವಲಸೆ ಹೋದ ಕನ್ನಡಿಗನ ಕತೆ , ಪಾಲಾಹಲ , ರಾಜಾರಾಣಿ ದೇಖೋ , ಶಿವನ ಬುಟ್ಟಿ , ತಾಯಿನೋಟ ಮೊದಲಾದವು . * ಪ್ರಶಸ್ತಿ ಪುರಸ್ಕಾರಗಳು : ಶ್ರೀಯುತರ ಹರಿಹರನ ಕೃತಿಗಳು ಒಂದು ಸಂಖ್ಯಾನಿರ್ಣಯ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರಕಿದೆ . ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಪ್ರವಾಸ ಕಥನ ದಿಂದ ಈ ಗದ್ಯಭಾಗವನ್ನು ಆರಿಸಿಕೊಳ್ಳಲಾಗಿದೆ .

Vaibhava Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ವಿಷ್ಣುವರ್ಧನ ವೀರನಾರಾಯಣ ದೇಗುಲವನ್ನು ಕಟ್ಟಿಸಲು ಕಾರಣವೇನು ?

ಉತ್ತರ : ವಿಷ್ಣುವರ್ಧನನು ವಿಕ್ರಮ ಚೋಳನ ಸೇನಾನಿ , ಆದಿಯಮನನ್ನು ಸೋಲಿಸಿ ಗೆಲುವಿನ ಸ್ಮಾರಕವಾಗಿ ತಲಕಾಡಿನ ನೆಲದ ಮೇಲೆ ವಿಜಯನಾರಾಯಣನ ಗುಡಿಕಟ್ಟಿದನು .

2. ರಾಷ್ಟ್ರದ ಚಾರಿತ್ರ್ಯದ ಹೆಗ್ಗುರುತು ಯಾವುದು ?

ಉತ್ತರ : ನಮ್ಮ ದೇವಾಲಯಗಳೇ ನಮ್ಮ ರಾಷ್ಟ್ರದ ಚಾರಿತ್ರದ ಹೆಗ್ಗುರುತುಗಳು , ರಾಷ್ಟ್ರದ ಚಾಲ

3 , ‘ ರಾಯ ‘ , ‘ ಅಣ್ಣ ‘ ಎಂದು ಯಾರನ್ನು ಕರೆಯುತ್ತಿದ್ದರು ?

ಉತ್ತರ : ಚಾವುಂಡರಾಯನನ್ನು ‘ ರಾಯ ‘ , ‘ ಅಣ್ಣ ‘ ಎಂದು ಕರೆಯುತ್ತಿದ್ದರು .

4. ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣೆ ಏನು ?

ಉತ್ತರ : ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣೆ ‘ ಚಾವುಂಡರಾಯ ಪುರಾಣ ‘ ಎಂಬ ಹೆಸರಿನ ಅರವತ್ತಮೂರು ಸುಣ್ಯಪುರುಷರ ಚರಿತ್ರೆ

5. ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ ?

ಉತ್ತರ : ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಶಿವನಸಮುದ್ರದಲ್ಲಿ ,

6. ಗಂಗರ ಮೊದಲ ರಾಜಧಾನಿ ಯಾವುದು ?

ಉತ್ತರ : ಗಂಗರ ಮೊದಲ ರಾಜಧಾನಿ ಕೋಲಾರ ,

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ಚೋಳರ ಸಾಧನೆಯೇನು ?

ಉತ್ತರ : ಚೋಳರು ಗುಡಿಗೋಪುರಗಳನ್ನು ಕಟ್ಟಿಸಿದರು . ರಾಜೇಶ್ವರ , ವೈಕುಂಠನಾರಾಯಣ , ಮರಳೇಶ್ವರ , ಪಾತಾಳೇಶ್ವರ , ವೈದ್ಯೆಶ್ವರ ಗುಡಿಗಳನ್ನು ಕಟ್ಟಿಸಿದರು .

2. ಚಾವುಂಡರಾಯ ಯಾರು ? ಆತನ ವಿಶೇಷತೆಯೇನು ?

ಉತ್ತರ : ಚಾವುಂಡರಾಯನು ಮಾರಸಿಂಹ , ರಾಚಮಲ್ಲ , ರಸಗಂಗರ ಮಂತ್ರಿ , ಅವನನ್ನು ಜನ ಹೆಸರು ಹಿಡಿದು ಕರೆಯುತ್ತಿರಲಿಲ್ಲ , ‘ ರಾಯ ‘ , ‘ ಅಣ್ಣ ‘ ಎಂದು ಸಂಬೋಧಿಸುತ್ತಿದ್ದರು . ಅವನಿಗೆ ಕನ್ನಡದ ಏಳ್ಗೆಯ ಹಂಬಲವೇ ಹಂಬಲ , ಸ್ವತಃ ಕವಿಯಾಗಿದ್ದ ಅವನು ರಚಿಸಿದ ‘ ಚಾವುಂಡರಾಯ ಪುರಾಣ ‘ ಎಂಬ ಹೆಸರಿನ ಅರವತ್ತಮೂರು ಪುಣ್ಯಪುರುಷರ ಚರಿತೆಯು ಅವನು ಕನ್ನಡಕ್ಕೆ ಕೊಟ್ಟ ಕಾಣಿಕೆಯಾಗಿದೆ .

3. ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಮಾಡಿದ ವ್ಯವಸ್ಥೆಗಳಾವುವು ?

ಉತ್ತರ : ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಲೇಖಕರು ಮತ್ತು ಅವರ ಸ್ನೇಹಿತರನ್ನು ವಿಶ್ವಾಸದಿಂದ ಸ್ವಾಗತಿಸಿದರು . ನಿಲನೆಯನ್ನು ಕೂಡಲೆ ಖಾಲಿ ಮಾಡಿಸಿದರು . ಹಾಸಿಗೆ ಹಾಸಿಕೊಟ್ಟರು . ಊಟ ಉಪಚಾರದ ಬಗೆಗೆ ಕೇಳಿದರು . ಕೊನೆಗೆ ಹೋಗುವಾಗ ‘ ಗುಡ್‌ನಾಯಿಟ್ ಅಂದರು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯಗಳಲ್ಲಿ ಉತ್ತರಿಸಿ .

1. ಸಳನ ವಂಶಕ್ಕೆ ‘ ಹೊಯ್ಸಳ ‘ ಹೆಸರು ಬರಲು ಕಾರಣವೇನು ?

ಉತ್ತರ : ಹೊಯ್ಸಳ ವಂಶದ ಮೂಲಪುರುಷನ ಹೆಸರು ಸಳ , ಮೂಡಿಗೆರೆ ತಾಲೂಕಿನಲ್ಲಿರುವ ಸೊಸೆವೂರು ಇವನ ಜನಸ್ಥಳ , ಆಗಿನ ಸೊಸೆವೂರಿಗೆ ಈಗ ‘ ಅಂಗಡಿ ‘ ಎಂದು ಕರೆಯುತ್ತಾರೆ . ಒಂದು ದಿನ ವಾಸಂತಿಕಾ ದೇವಾಲಯದ ಪೂಜೆಗೆಂದು ಹೋದ ಸಳನು ಸುದತ್ತ ಗುರುವಿನ ಬಳಿ ಉಪದೇಶ ಕೇಳುತ್ತಾ ಕುಳಿತಿದ್ದಾಗ ಹುಲಿಯೊಂದು ಅವನೆಡೆಗೆ ಜಿಗಿದು ಬಂದಿತು . ಆಗ ಸುದತ್ತ ಮುನಿ ತನ್ನ ಕೈಯೊಳಗಿನ ಬೆತ್ತವನ್ನು ಸಳನೆಡೆಗೆ ಚಾಚಿ “ ಹೊಯ್ಸಳ ” ಎಂದು ಆದೇಶವಿತ್ತನೆಂದೂ ಸಳ ಕೂಡಲೆ ಹುಲಿಯನ್ನು ಎದುರಿಸಿ ಅದರ ಗಂಟಲಲ್ಲಿ ಖಡ್ಗವನ್ನು ತುರುಕಿ ಹುಲಿಯನ್ನು ಹೊಯ್ದನೆಂದೂ ದಂತಕಥೆ ಇದೆ . ಅದರಂತೆ ಅಂದಿನಿಂದ ಸಳನ ಮನೆತನಕ್ಕೆ ‘ ಹೊಯ್ಸಳ ‘ ಎಂಬ ಹೆಸರು ಬಂದಿತು .

2. ವೈದ್ಧೇಶ್ವರ ದೇವಾಲಯದ ನಿರ್ಮಾಣದ ಕಾಲನಿರ್ಣಯಕ್ಕೆ ಸಹಕಾರಿಯಾಗುವ ಅಂಶಗಳಾವುವು ? ವಿವರಿಸಿ .

ಉತ್ತರ : ವೈದ್ಯಶ್ವರ ದೇವಾಲಯದ ರಚನೆಯ ಕಾಲ ನಿಶ್ಚಿತವಾಗಿ ತಿಳಿದು ಬಾರದಿದ್ದರೂ ಈಗ ಸಿಕ್ಕಿರುವ ಆಧಾರಗಳ ಅನ್ವಯ ಇದರ ಕಾಲವನ್ನು ಹದಿಮೂರನೆಯ ಶತಮಾನದ ಪೂರ್ವಕ್ಕೆ ನಿರ್ಧರಿಸಲಾಗಿದೆ . ದೇವಾಲಯದ ಹೊರವಲಯದಲ್ಲಿ ಇರುವ ಕಲಶಗಳೂ ಗರ್ಭಗುಡಿಯ ಗೋಪುರವೂ ಶಿಲ್ಪದ ನಿರ್ಮಾಣದಲ್ಲಿ ತೋರಿರುವ ಕೆಲವು ವಿಶಿಷ್ಟ ರೂಪಗಳೂ ಕಟ್ಟಡಕ್ಕೆ ಉಪಯೋಗಿಸಿರುವ ಸಾಮಗಿಯೂ ಈ ಕಾಲವನ್ನು ನಿರ್ಣಯಿಸುವುವು .

3. ಗಂಗದ ಇತಿಹಾಸದ ವಿಶೇಷತೆಯೇನು ?

ಉತ್ತರ : ಗಂಗರ ರಾಜ್ಯ ಗಂಗವಾಡಿ ಎಂದು ಹೆಸರಾಗಿದೆ . ಅವರ ಮೊದಲ ರಾಜಧಾನಿ ಕೋಲಾರ , ಸುಮಾರು ಕ್ರಿ.ಶ. ೫೦೦ ರ ಹೊತ್ತಿಗೆ ಕೋಲಾರದಿಂದ ಹರಿವರ್ಮ ರಾಜಧಾನಿಯನ್ನು ತಲಕಾಡಿಗೆ ತಂದನು , ಅಲ್ಲಿಂದ ಮುಂದಕ್ಕೆ ಐದು ಶತಮಾನಗಳವರೆಗೆ ಅಂದರೆ ಹತ್ತನೆಯ ಶತಮಾನದವರೆಗೂ ಗಂಗರು ಆಳ್ವಿಕೆ ನಡೆಸಿದರು . ಮಾರಸಿಂಹ , ರಾಚಮಲ್ಲ , ರಕ್ಕಸಗಂಗರ ತಲಕಾಡು ಮುಖ್ಯಭೂಮಿ . ಚಾವುಂಡರಾಯನು ಮಾರಸಿಂಹ , ರಾಚಮಲ್ಲ , ರಸಗಂಗರ ಮಂತ್ರಿಯಾಗಿದ್ದನು . ಅವನನ್ನು ಜನ ಹೆಸರು ಹಿಡಿದು ಕರೆಯುತ್ತಿರಲಿಲ್ಲ . ‘ ರಾಯ ‘ , ‘ ಅಣ್ಣ ‘ ಎಂದು ಸಂಬೋಧಿಸುತ್ತಿದ್ದರು . ಸ್ವತಃ ಕವಿಯಾಗಿದ್ದ ಅವನು ‘ ಚಾವುಂಡರಾಯ ಪುರಾಣ ‘ ಕೃತಿ ರಚಿಸಿದ್ದಾನೆ . ಹಾಗೆಯೇ ಮಹಾಕವಿ ರನ್ನನು ಚಾವುಂಡರಾಯ ಮತ್ತು ಅತ್ತಿಮಬ್ಬೆಯ ಆಶ್ರಯ ಪಡೆದಿದ್ದನು .

4 , ಲೇಖಕರು ‘ ಯುರೇಕಾ ‘ ಎಂದು ಕೂಗಿದ ಸಂದರ್ಭವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಲೇಖಕರು ವಾಹನ ಚಾಲಕನೊಡನೆ ಆರ್ಕಶ್ವರ ದೇವಾಲಯವನ್ನು ಹುಡುಕುತ್ತಾ ಹೊರಟರು . ಆಗ ರಾತ್ರಿ ಒಂದು ಗಂಟೆ . ಎಡಬಲಕ್ಕೆ ಭತ್ತದ ಗದ್ದೆಗಳು , ನರಿಗಳು ಕೂಗುತ್ತಲಿದ್ದವು . ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮೊದೆಯಲ್ಲಿ ಏನೋ ಬೆಳ್ಳಬೆಳ್ಳಗೆ , ಮಸುಕುಮಸುಕಾಗಿ ಕಂಡಿತು . ಅವರ ಎದೆ ಜೋರಿನಿಂದ ಹಾರತೊಡಗಿತು . ಹತ್ತಿರ ಸಮೀಪಿಸಿದರು . ಅವರು ದೇವಾಲಯವನ್ನು ಕಂಡು ಹಿಡಿದ ಸಂತೋಷದಲ್ಲಿ ಆವೇಶದಿಂದ ” ಯುರೇಕಾ ಯುರೇಕಾ ” ಎಂದು ಅವರ ಸ್ನೇಹಿತರಿಗೆ ಕೇಳುವಂತೆ ಕಿರುಚುತ್ತಾ “ ಬರೋ ಗುಡಿ ಸಿಕ್ಕಿತು . ಬರೋ ದೇವಾಲಯ ದೊರೆಯಿತು ” ಎಂದು ಕೂಗಿದರು . ಅವರೆಲ್ಲಾ ಬಂದು ಇವರೊಡನೆ ಆರ್ಕೇಶ್ವರ ದೇವರ ಗುಡಿಯನ್ನು ನೋಡಿದರು .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಮೋಟರು ಓಡಲೊಲ್ಲದು , ಸಾರಥಿ ನಿಲ್ಲಿಸಲಾರನು “

ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಕೃತಿಯಿಂದ ತೆಗೆದುಕೊಳ್ಳಲಾದ “ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಆರ್ಕೇಶ್ವರನ ದರ್ಶನವೊಂದು ಮುಗಿದರೆ ತಲಕಾಡಿನ ಪಂಚಲಿಂಗಗಳ ದರ್ಶನ ಪೂರಿಯಾಗುವುದೆಂದು ಕೊರಕಲು ದಾರಿಯಲ್ಲಿ ಹೋಗುತ್ತಿದ್ದಾಗ ಮೋಟಾರು ಓಡಲೊಲ್ಲದು , ಸಾರಥಿ ನಿಲ್ಲಿಸಲಾರ . ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ . ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ ಕೊನೆಯವರೆಗೂ ಅತೃಪ್ತಿ ಉಳಿಯುತ್ತದೆ . ಎಂದು ಲೇಖಕರ ಅಭಿಪ್ರಾಯವಾಗಿತ್ತು .

ಸ್ವಾರಸ್ಯ : ಏನೇ ಆದರೂ ಸಂಕಲ್ಪದಂತೆ ಪ್ರವಾಸ ಪೂರ್ಣಗೊಳಿಸಬೇಕೆಂಬ ಲೇಖಕರ ಹಂಬಲ ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .

2. “ ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ “

ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ “ ಕವಿಕಂಡ ನಾಡು ಕೃತಿಯಿಂದ ತೆಗೆದುಕೊಳ್ಳಲಾದ ‘ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಶಿವನಸಮುದ್ರದ ನಿಲನೆಯಲ್ಲಿ ತಂಗಿದ್ದಾಗ ಅಂದಿನ ಪ್ರವಾಸದ ವಿವರವನ್ನು ಬರೆಯಲು ಪ್ರಾರಂಭಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಆಗ ಮಧ್ಯರಾತ್ರಿ ೧೨ ಗಂಟೆ ೧೫ ನಿಮಿಷವಾಗಿತ್ತು . ಆಗ ಎಲ್ಲರೂ ಮಲಗಿ ನಿದ್ರಿಸುತ್ತಿದ್ದ ಸಮಯ . ಅಂತಹ ಸಂದರ್ಭದಲ್ಲಿ ಲೇಖಕರು ಮಾತ್ರ ಬರೆಯುವುದರಲ್ಲಿ ತೊಡಗಿದ್ದರು .

ಸ್ವಾರಸ್ಯ : ಇಲ್ಲಿ ಲೇಖಕರು ಸಾಹಿತ್ಯ ಬರೆಯುವುದರಲ್ಲಿ ಹೊಂದಿದ್ದ ಆಸಕ್ತಿ ಮತ್ತು ಶ್ರಮ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

3. “ ಅದು ಕಲಾ ವಿಹರಿಸುವ ನಂದನವನ ”

ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಗಂಗರ ಇತಿಹಾಸದ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ರನ್ನನು ತಲಕಾಡಿನ ಮಣ್ಣನ್ನು ನಂಬಿ ಮುದೊವೊಳಲಿನಿಂದ ಓಡಿ ಬಂದನು . ಆತನಿಗೆ ಇಲ್ಲಿ ರಾಯ ಮತ್ತು ಅತ್ತಿಮಬ್ಬೆಯ ಆಶ್ರಯ , ಅಜಿತಸೇನ ಗುರುಗಳ ಶಿಷ್ಯವೃಂದವಿತ್ತು , ತಲಕಾಡು ಅದು ಕಲಾ ವಿಹರಿಸುವ ನಂದನವನವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ .

ಸ್ವಾರಸ್ಯ : ತಲಕಾಡು ಕಲೆ , ಸಾಹಿತ್ಯ , ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದು ಕಲಾಲಕ್ಷ್ಮಿ ವಿಹಾರಮಾಡುತ್ತಾಳೆ ಎಂಬುದು ಸ್ವಾರಸ್ಯವಾಗಿದೆ .

4. ಬರೋ ಗುಡಿ ಸಿಕ್ಕಿತು ಬರೋ ದೇವಾಲಯ ದೊರಕಿತು ”

ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ ಕೊನೆಯವರೆಗೂ ಅತೃಪ್ತಿ ಉಳಿಯುತ್ತದೆ . ಎಂಬ ಕೊರಗಿನಲ್ಲಿ ಲೇಖಕರು ಹುಡುಕುತ್ತಾ ಹೋದಂತೆ ಅವರಿಗೆ ಗುಡಿ ಸಿಕ್ಕಿಬಿಟ್ಟಿತು . ಆಗ ಅವರು ತಮ್ಮ ಸ್ನೇಹಿತರನ್ನು ಕೂಗಿ ಕರೆಯುವ ಸಂದರ್ಭದಲ್ಲಿ ಹೀಗೆ ಹೇಳಿದರು .

ಸ್ವಾರಸ್ಯ : ಆರ್ಕೇಶ್ವರ ದೇವಾಲಯ ಸಿಕ್ಕಿದಾಗ ಲೇಖಕರಿಗಾದ ಸಂತೋಷ , ಆವೇಶಗಳು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

ಉ ] ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ,

1. ಸಾಹಿತ್ಯಾವಲೋಕನ,     ಭಕ್ತಿಭಂಡಾರಿಬಸವಣ್ಣ,     ಹಿರೇಮಲ್ಲೂರು,   ವಚನಧರ್ಮಸಾರ.
ಉತ್ತರ :   ಭಕ್ತಿಭಂಡಾರಿ ಬಸವಣ್ಣ,

4. ಮಾರಸಿಂಹ,  ಚಾವುಂಡರಾಯ,  ರಾಚಮಲ್ಲ, ರಕ್ಕಸಗಂಗ.
ಉತ್ತರ :    ಚಾವುಂಡರಾಯ,

3. ರಾಜೇಶ್ವರ,   ಮರಳೇಶ್ವರ,   ಮಹಾಲಿಂಗೇಶ್ವರ,   ಪಾತಾಳೇಶ್ವರ.
ಉತ್ತರ  :   ಮಹಾಲಿಂಗೇಶ್ವರ,

4.ಮುಚ್ಚಿಟ್ಟು, ಹಾಡುತ್ತಿರುವ, ಉದ್ಯಮವನ್ನು, ಬಾನಿನೆಡೆ.
ಉತ್ತರ :    ಉದ್ಯಮವನ್ನು,

Talakadina Vaibhava Kannada Notes Question Answer Guide Pdf

ಇತರೆ ಪಾಠಗಳು :

ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್

ಮಗ್ಗದ ಸಾಹೇಬ ಕನ್ನಡ ನೋಟ್ಸ್

Leave your vote

26 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.