8ನೇ ತರಗತಿ ಸಾರ್ಥಕ ಬದುಕಿನ ಸಾಧಕ ಕನ್ನಡ ನೋಟ್ಸ್ | 8th Standard Sarthaka​ Badukina​ Sadhaka Kannada Notes

8ನೇ ತರಗತಿ ಸಾರ್ಥಕ ಬದುಕಿನ ಸಾಧಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8 Class Sarthaka​ Badukina​ Sadhaka Kannada Notes Question Answer Kseeb Solutions Guide Pdf Download, Sarthaka Badukina Sadhaka Notes

ತರಗತಿ : 8ನೇ ತರಗತಿ

ಪಾಠದ ಹೆಸರು : ಸಾರ್ಥಕ ಬದುಕಿನ ಸಾಧಕ

ಕೃತಿಕಾರರ ಹೆಸರು : ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ

ಕೃತಿಕಾರರ ಪರಿಚಯ :

ಎನ್ . ಎಸ್ . ಲಕ್ಷ್ಮೀನಾರಾಯಣಭಟ್ಟ

* ಡಾ . ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಅವರು ದಿನಾಂಕ : ೨೯.೧೦.೧೯೩೬ ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು . ತಂದೆ ಶಿವರಾಮ ಭಟ್ಟ , ತಾಯಿ ಮೂಕಾಂಬಿಕೆ .

* ಇವರ ಕವನ ಸಂಕಲನಗಳು : ವೃತ್ತ , ಚಿತ್ರಕೂಟ , ಸುಳಿ , ಇವರ ಪ್ರಸಿದ್ಧ ಧ್ವನಿ ಸುರುಳಿಗಳು : ದೀಪಿಕಾ , ಭಾವಸಂಗಮ , ಬಂದೇಬರತಾವ ಕಾಲ , ಬಾರೋ ವಸಂತ , ಅಭಿನಂದನ , ಭಾವೋತ್ಸವ , ಪ್ರೇಮಧಾರೆ , ಮಕ್ಕಳ ಧ್ವನಿ ಸುರುಳಿಗಳು : ನಂದನ , ಕಿನ್ನರಿ , ನವಿಲುಗರಿ , ಕಿಶೋರಿ ಮುಂತಾದವು .

* ಹತ್ತಾರು ಸಾಹಿತ್ಯ ಸಾಧಕರ ಜೀವನ ಘಟನೆಗಳ ಬಗೆಗೆ ಬೆಳಕು ಚೆಲ್ಲುವ ಸಾಹಿತ್ಯ ರತ್ನ ಸಂಪುಟ ಕೃತಿಯನ್ನು ರಚಿಸಿದ್ದಾರೆ .

* ಪ್ರಶಸ್ತಿ – ಪುರಸ್ಕಾರಗಳು : ೨೦೦೦ ದಲ್ಲಿ ಹೊಸನ್ನಿನಲ್ಲಿ ನಡೆದ ಪಥಮ ಅಮೆರಿಕಾ ವಿಶ್ವ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಶಿವರಾಮ ಕಾರಂತ ಪ್ರಶಸ್ತಿ , ರಾಜ್ಯೋತ್ಸದ ಪ್ರಶಸ್ತಿ , ಮಾಸ್ತಿ ಪ್ರಶಸ್ತಿ , ಆಳ್ವಾಸ್ ನುಡಿಸಿರಿ ಪ್ರಶಸ್ತಿ , ಆರ್ಯಭಟ ಪ್ರಶಸ್ತಿ ಡಾ . ಎನ್ . ಎಸ್ . ಲಕ್ಷ್ಮೀನಾರಾಯಣ ಭಟ್ಟ ಅವರ ಸಾಹಿತ್ಯ ರತ್ನ ಸಂಪುಟ ಕೃತಿಯಿಂದ ಪ್ರಸ್ತುತ ಗದ್ಯ ಭಾಗವನ್ನು ಆರಿಸಿಕೊಳ್ಳಲಾಗಿದೆ

Sarthaka​ Badukina​ Sadhaka Kannada Notes Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು ?

ಉತ್ತರ : ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ದಿವಾನ ಹುದ್ದೆಯನ್ನು ಅಲಂಕರಿಸಿದ್ದರು .

2. ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು ?

ಉತ್ತರ : ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಅಜ್ಜಿ ಸಾಕಮ್ಮ ಮತ್ತು ಸೋದರ ಮಾವ ತಿಮ್ಮಪ್ಪ .

3. ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ ಯಾವುದು ?

ಉತ್ತರ : ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ : ಗೋಖಲೆ ಸಾರ್ವಜನಿಕ ಸಂಸ್ಥೆ

4. ಡಿವಿಜಿ ಅವರ ಹುಟ್ಟೂರು ಯಾವುದು ?

ಉತ್ತರ : ಡಿವಿಜಿ ಅವರ ಹುಟ್ಟೂರು ಕೋಲಾರ ಜಿಲ್ಲೆಗೆ ಸೇರಿದ ಮುಳಬಾಗಿಲು ,

5. ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು ?

ಉತ್ತರ : ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ರಸೂಲ್ ಖಾನ್ ,

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ,

1. ಡಿವಿಜಿ ಅವರ ಶ್ರೀಮತಿ ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಏಕೆ ಹೋಗಿರಲಿಲ್ಲ ?

ಉತ್ತರ : ಡಿವಿಜಿ ಅವರ ಶ್ರೀಮತಿಯವರ ಹತ್ತಿರ ಇದ್ದದ್ದು ಒಂದೇ ಒಂದು ಸೀರೆ , ಆದೂ ಒಂದೆರಡು ಕಡೆ ಹರಿದಿತ್ತು . ಅವರು ಆ ಬಟ್ಟೆಯಲ್ಲಿ ಹೊರಗೆ ಕಾಣಿಸಿಕೊಂಡರೆ ಜನ ಡಿವಿಜಿಯವರನ್ನು ಕುರಿತು ಆಡಿಕೊಳ್ಳುತ್ತಾರೆ . ಬಂಧುಗಳ ಮನೆಗೆ ಹೋಗಿ ಬರುವುದು ಹೇಗೆ ತಮಗೆ ಕರ್ತವ್ಯವೋ ಹಾಗೇ ಡಿವಿಜಿ ಅವರ ಮರ್ಯಾದೆಗೆ ಊನಬಾರದಂತೆ ನಡೆದುಕೊಳ್ಳುವುದೂ ತಮ್ಮ ಕರ್ತವ್ಯ ” ಎಂದು ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಹೋಗಲಿಲ್ಲ .

2. ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದರ್ಶಿಗೆ ಏನು ಹೇಳಿದರು ?

ಉತ್ತರ : ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದರ್ಶಿಗೆ “ ಈ ಮನುಷ್ಯನ ರೀತಿಯೇ ಬೇರೆ . ಇವರಿಗೆ ನಾವು ಹಣ ಕೊಡಲು ಬರುವುದಿಲ್ಲ . ಅದನ್ನು ಹಿಂದಕ್ಕೆ ತೆಗೆದುಕೊಂಡು ಬಿಡಿ ” ಎಂದು ಹೇಳಿದರು .

3. ರಸೂಲ್ ಖಾನ್ ಅವರು ಡಿವಿಜಿ ಅವರ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಹಾಯವೇನು ?

ಉತ್ತರ : ಗುಂಡಪ್ಪನ ಓದು ಇಲ್ಲಿಗೆ ಸಾಕು ಎಂದು ಅವರ ತಂದೆ , ಆಜ್ಞೆ ತೀರ್ಮಾನಿಸಿದರು . ಆದರೆ ರಸೂಲ್ ಖಾನ್ ” ಗುಂಡಣ್ಣ ತುಂಬ ಚುರುಕಾದ ಹುಡುಗ , ಅವನು ಮುಂದೆ ಓದಲೇಬೇಕು ” ಅಂತ ಹಟ ಹಿಡಿದನು . ಅಲ್ಲದೆ ತನ್ನ ಬಂಡಿಯಲ್ಲಿ ಕೂರಿಸಿಕೊಂಡು ಹೋಗಿ ಗುಂಡಪ್ಪನವರಿಗೆ ರೈಲ್ವೆ ಟಿಕೆಟ್ ಕೊಡಿಸಿ : ಖರ್ಚಿಗೆ ಹಣನೀಡಿ : ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಲು ಸಹಾಯ ಮಾಡಿದನು .

4. ಎಲ್ಲರೊಂದಿಗೆ ಹೇಗೆ ಬಾಳಬೇಕೆಂದು ಡಿವಿಜಿ ಹೇಳಿದ್ದಾರೆ ?

ಉತ್ತರ : ಡಿವಿಜಿ ಅವರು ‘ ಬೆಟ್ಟದಡಿಯಲ್ಲಿ ಹುಲ್ಲಾಗಬೇಕು . ಮನೆಗೆ ಮಲ್ಲಿಗೆಯಾಗಬೇಕು , ವಿಧಿ ಹಲವಾರು ಕಷ್ಟಗಳ ಮಳೆಯನ್ನು ನಮ್ಮ ಮೇಲೆ ಸುರಿಯುತ್ತದೆ . ಆಗ ನಾವು ಕಲ್ಲಾಗಿ ಅವನ್ನೆಲ್ಲಾ ಸಹಿಸಬೇಕು , ಹಾಗೆಯೇ ದೀನ – ದುರ್ಬಲರಿಗೆ ಬೆಲ್ಲದಂತೆ ಸಕ್ಕರೆಯಂತೆ ಸಿಹಿಯಾಗಿ , ಹಿತವಾಗಿ , ಎಲ್ಲರೊಳಗೆ ಒಂದಾಗಿರಬೇಕು ‘ ಎಂದು ಹೇಳಿದ್ದಾರೆ .

5. ಡಿವಿಜಿ ಅವರು ಏಕೆ ಸಂಭಾವನೆಯನ್ನು ಪಡೆಯಲಿಲ್ಲ ?

ಉತ್ತರ : “ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ . ಅದಕ್ಕೆ ಖರ್ಚಾದರೆ ಪತ್ರಿಕೆಯವರು ಕೊಡಬೇಕು . ಸರ್ಕಾರವಲ್ಲ . ಆದ್ದರಿಂದ ತಮಗೆ ಈ ಹಣ ಖಂಡಿತ ಬೇಡವೇ ಬೇಡ ” ಎಂದು ಡಿವಿಜಿಯವರು ಸಂಭಾವನೆ ಪಡೆಯಲಿಲ್ಲ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿಉತ್ತರಿಸಿ .

1. ಡಿವಿಜಿ ಅವರಿಗೂ ಅವರ ಶ್ರೀಮತಿ ಅವರಿಗೂ ನಡೆದ ಸಂಭಾಷಣೆಯನ್ನು ಬರೆಯಿರಿ .

ಉತ್ತರ : ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನಡೆಯಿತು . ಆರತಿ ಅಕ್ಷತೆಯ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದಾರೆ . ಆಗ ಡಿವಿಜಿ ಅವರು ಕೇಳಿದರು .. ಡಿವಿಜಿ : “ ನೀನು ಉತ್ಸವಕ್ಕೆ ಹೋಗುವುದಿಲ್ಲವೇ ? ” ಶ್ರೀಮತಿ : ‘ ಇಲ್ಲ ‘ ‘ ಯಾಕೆ ‘ ? ‘ ಮಕ್ಕಳನ್ನು ಕಳಿಸಿದ್ದೇನಲ್ಲ ‘ ಡಿವಿಜಿ : “ ಅದು ಸರಿ ನೀನೂ ಹೋಗಬೇಕಷ್ಟೆ , ಅವರು ನಮಗೆ ಬಹಳ ಬೇಕಾದವರು . ನೀನು ಹೋಗದಿದ್ದರೆ ಬೇಸರಪಡುವುದಿಲ್ಲವೇ ? ” ಶ್ರೀಮತಿ : ” ಮನೆಯಲ್ಲಿ ಯಾರಾದರೂ ಇರಬೇಕಲ್ಲ ” ಡಿವಿಜಿ : “ ನಾನು ಇರುತ್ತೇನೆ . ನೀನು ಹೋಗಿ ಬಾ . ” ಶ್ರೀಮತಿ : “ ನಾನು ಹೇಳಬಾರದೆಂದಿದ್ದೆ . ನೀವು ಪಟ್ಟುಹಿಡಿದು ನನ್ನ ಬಾಯಿ ಬಿಡಿಸುತ್ತಿದ್ದೀರಿ . ನನ್ನ ಹತ್ತಿರ ಇರುವುದು ಇದೊಂದೇ ಸೀರೆ . ಇದೂ ಒಂದೆರಡು ಕಡೆ ಹರಿದಿದೆ . ನಾನು ಈ ಬಟ್ಟೆಯಲ್ಲಿ ಹೊರಗೆ ಕಾಣಿಸಿಕೊಂಡರೆ ಜನ ನಿಮ್ಮನ್ನು ಕುರಿತು ಆಡಿಕೊಳ್ಳುವುದಿಲ್ಲವೇ ? ಬಂಧುಗಳ ಮನೆಗೆ ಹೋಗಿಬರುವುದು ಹೇಗೆ ನನಗೆ ಕರ್ತವ್ಯವೋ ಹಾಗೇ ನಿಮ್ಮ ಮರ್ಯಾದೆಗೆ ಊನಬಾರದಂತೆ ನಡೆದುಕೊಳ್ಳುವುದೂ ನನಗೆ ಕರ್ತವ್ಯವೇ ಅಲ್ಲವೇ ? ” ಎಂದು ಹೇಳಿದರು .

2. ಡಿವಿಜಿ ಅವರ ವ್ಯಕ್ತಿತ್ವವನ್ನು ಸಂಗ್ರಹಿಸಿ ಬರೆಯಿರಿ .

ಉತ್ತರ : ಡಿವಿಜಿ ಅವರೇನು ದೊಡ್ಡದೊಡ್ಡ ಡಿಗ್ರಿ ಪಡೆದವರಲ್ಲ , ಎಸ್.ಎಸ್.ಎಲ್.ಸಿ , ಕೂಡ ದಾಟದ ಓದು , ಭಾರಿ ಶ್ರೀಮಂತರೋ ಎಂದರೆ ದಿನದಿನದ ಅಗತ್ಯ ಪೂರೈಸಿದ್ದೇ ಹೆಚ್ಚು ಎನ್ನುವಂಥ ಕೆಲಸ , ಸರ್ಕಾರಿ ಉದ್ಯೋಗವಲ್ಲವಾಗಿ ದೊಡ್ಡ ಅಧಿಕಾರದ ಮಾತಂತೂ ಇಲ್ಲವೇ ಇಲ್ಲ . ಆದರೆ ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದ ಮಿರ್ಜಾ ಸಾಹೇಬರೂ ಅವರ ಸ್ನೇಹ ತಪ್ಪಿತನಿಸಿ ಕಳವಳಗೊಂಡಿದ್ದರು . ಎಷ್ಟೇ ಬಡತನದಲ್ಲಿದ್ದರೂ ಅವರು ಎಂದಿಗೂ ಹಣಕ್ಕಾಗಿ ಆಸೆಪಡಲಿಲ್ಲ . ಇಂಥಾ ಸತ್ವಶಾಲಿ ವ್ಯಕ್ತಿತ್ವ ಡಿವಿಜಿಗೆ ಬಂದದ್ದು ಕೇವಲ ಅವರ ಶೀಲ , ವಿವೇಕ , ನಿಸ್ಪೃಹತೆ , ಸ್ವಯಂ ಆರ್ಜಿತ ಪಾಂಡಿತ್ಯ , ಸಾರ್ವಜನಿಕ ಹಿತಾಸಕ್ತಿಗಳ ಬಲದಿಂದ , ಮಿರ್ಜಾರ ಕಾಲಕ್ಕೆ ಡಿವಿಜಿ ದೊಡ್ಡ ಮೇಧಾವಿಯೆಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು . ಡಿವಿಜಿ ಅವರದ್ದು ಹೋಲಿಕೆ ಇಲ್ಲದ ಅಪೂರ್ವ ವ್ಯಕ್ತಿತ್ವ , ಹೆಸರಾಂತ ಪತ್ರಕರ್ತರಾಗಿದ್ದರು . ಹಿರಿಯ ವೇದಾಂತಿಯಾಗಿದ್ದರು . ರಾಜ್ಯಶಾಸ್ತ್ರದಲ್ಲಿ ಆಳವಾದ ತಿಳಿವಳಿಕೆಯುಳ್ಳವರಾಗಿದ್ದರು . ಅವರನ್ನು ‘ ಮಹಾಧೀಮಂತ ‘ ಎಂಬ ಮಾತಿನಿಂದ ವರ್ಣಿಸಿದರೆ ಸರಿಯಾಗುತ್ತದೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. ” ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಡಿವಿಜಿ ಅವರ ‘ ಮಂಕುತಿಮ್ಮನ ಕಗ್ಗ ಕೃತಿಯಿಂದ ಆರಿಸಲಾಗಿರುವ ಕವನದ ಸಾಲುಗಳನ್ನು ಉದಾಹರಿಸಲಾಗಿದ್ದು ‘ ಮಾನವನ್ನು ಎಲ್ಲರೊಳಗೆ ಒಂದಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ದೀನ – ದುರ್ಬಲ ವರ್ಗದವರ ಕಷ್ಟ – ನೋವುಗಳಿಗೆ ಬೆಲ್ಲ – ಸಕ್ಕರೆಯಂತೆ ಸಿಹಿಯಾಗಿ ಸ್ಪಂದಿಸಬೇಕೆಂಬುದು ಇಲ್ಲಿನ ಸ್ವಾರಸ್ಯವಾಗಿದೆ .

2. “ ನೀನು ಉತ್ಸವಕ್ಕೆ ಹೋಗುವುದಿಲ್ಲವೇ ? “

ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀ ನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನಡೆಯಿತು . ಆರತಿ ಆಕ್ಷತೆಯ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದಾರೆ . ಆ ಸಂದರ್ಭದಲ್ಲಿ ಡಿವಿಜಿ ಅವರು ಶ್ರೀಮತಿಯವರನ್ನು ಹೀಗೆ ಪ್ರಶ್ನಿಸುತ್ತಾರೆ .

ಸ್ವಾರಸ್ಯ : ಡಿವಿಜಿಯವರು ನಿಜ ಸಂಗತಿ ತಿಳಿಯದೆ ; ತಮ್ಮ ಹೆಂಡತಿ ಬಂಧುಗಳ ಮನೆಗೆ ಹೋಗುವುದಿಲ್ಲವೇ ಎಂದು ಪ್ರಶ್ನಿಸುವುದು ಇಲ್ಲಿನ ಸ್ವಾರಸ್ಯವಾಗಿದೆ .

3. ” ನನ್ನ ಹತ್ತಿರ ಇರುವುದು ಇದೊಂದೇ ಸೀರೆ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಡಿವಿಜಿ ಅವರ ಹೆಂಡತಿಯವರು ತಾವು ಬಂಧುಗಳ ಮನೆಯ ಉತ್ಸವಕ್ಕೆ ಹೋಗದಿರುವುದಕ್ಕೆ ಕಾರಣಗಳನ್ನು ಕೋಡುತ್ತಾ ಹೋದಾಗ ಡಿವಿಜಿ ಅವರು ಪಟ್ಟುಬಿಡದೆ ಸವಾಲು ಕೊಡುತ್ತಾ “ ನಾನು ಮನೆಯಲ್ಲಿರುತ್ತೇನೆ . ನೀನು ಹೋಗಿಬಾ ” ಎಂದು ಹೇಳಿದ ಸಂದರ್ಭದಲ್ಲಿ ಅವರ ಶ್ರೀಮತಿಯವರು “ ನನ್ನ ಹತ್ತಿರ ಇರುವುದು ಇದೊಂದೇ ಸೀರೆ ” ಎಂದು ನಿಜಸಂಗತಿ ಒಪ್ಪಿಕೊಳ್ಳುತ್ತಾರೆ .

ಸ್ವಾರಸ್ಯ : ಹಣಕ್ಕೆ ಆಸೆ ಪಡದೆ ಬಡತನದಲ್ಲೇ ಸರಳ ಜೀವನ ನಡೆಸಿದ ಡಿವಿಜಿಯವರ ಗೌರವ ಕಾಯಬೇಕೆಂದು ಬಯಸಿದ ಅವರ ಶ್ರೀಮತಿಯವರ ಸದ್ಗುಣ ಈ ಸಂದರ್ಭದಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

4. “ ಏನು ಬಂದಿರಿ ಗುಂಡಪ್ಪ ? ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ದಸರಾ ಉತ್ಸವ ಕುರಿತು ವರದಿ ಮಾಡಿದ್ದಕ್ಕಾಗಿ ಗುಂಡಪ್ಪನವರಿಗೆ ಸರ್ಕಾರದಿಂದ ಸಂಭಾವನೆ ಬಂದಾಗ ಅದನ್ನು ಇಷ್ಟಪಡದೆ ಡಿವಿದೆ ಅವರು ಹಣವನ್ನು ಹಿಂದಿರುಗಿಸಲು ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿಗೆ ಹೋದ ಸಂದರ್ಭದಲ್ಲಿ ಸರ್.ಎಂ.ವಿ ಅವರು ಡಿವಿಜಿಯವರನ್ನು ಆತ್ಮೀಯತೆಯಿಂದ ಹೀಗೆ ಪ್ರಶ್ನಿಸುತ್ತಾರೆ .

ಸ್ವಾರಸ್ಯ : ಮೈಸೂರು ಸರ್ಕಾರದ ದಿವಾನ ಹುದ್ದೆಯಲ್ಲಿದ್ದ ಸರ್.ಎಂ.ವಿಶ್ವೇಶ್ವರಯ್ಯನವರಂತಹವರೂ ಡಿವಿಜಿ ಅವರ ಮೇಲೆ ಹೊಂದಿದ್ದ ವಿಶ್ವಾಸ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ .

೪. “ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ “

ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಡಿವಿಜಿ ಅವರ ‘ ಮಂಕುತಿಮ್ಮನ ಕಗ್ಗ ‘ ಕೃತಿಯಿಂದ ಆರಿಸಲಾಗಿರುವ ಕವನದ ಸಾಲುಗಳನ್ನು ಉದಾಹರಿಸಿದ್ದು ‘ ಭುಮಿಯಲ್ಲಿ ಬೀಜ ಮೊಳಕೆ ಒಡೆದು ಬೆಳೆದು ಫಲಬಿಟ್ಟರೂ ಇಡೀ ಭೂಮಿಗೆ ಬೆಳಕನ್ನ ಕೊಡುವ ಸೂರ್ಯಚಂದ್ರರು ತಾವು ಬೆಳಕು ನೀಡಿದರೂ ಗರ್ವ ಪಡುವುದಿಲ್ಲ . ಆದ್ದರಿಂದ ಗರ್ವ ಪಡುವ ಮಾನವನನ್ನು ಕವಿ ನಿನ್ನ ತುಟಿಗಳನ್ನು ಹೊಲಿದಿಕೋ ‘ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ .

ಸ್ವಾರಸ್ಯ : ಸ್ವಲ್ಪ ಮಾಡಿದರೂ ಏನೋ ದೊಡ್ಡದ್ದನ್ನು ಮಾಡಿದೆನೆಂದು ಗರ್ವ ಪಡುವ ಮಾನವನನ್ನು ನಿನ್ನ ಬಾಯಿಮುಚ್ಚು ಎಂದು ಪರೋಕ್ಷವಾಗಿ , ಸ್ವಾರಸ್ಯವಾಗಿ ಹೇಳಲಾಗಿದೆ .

ಉ ] ಬಿಟ್ಟ ಸ್ಥಳ ತುಂಬಿ ,

೧. ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ಮಿರ್ಜಾ ಇಸ್ಮಾಯಿಲ್

೨. ಮಿರ್ಜಾ ಅವರ ಕಾಲಕ್ಕೆ ಡಿವಿಜೆ ದೊಡ್ಡ ಮೇಧಾವಿ ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು .

೩. ಮುಳಬಾಗಿಲು ಕೋಲಾರ ಜಿಲ್ಲೆಗೆ ಸೇರಿದೆ .

೪. ಡಿವಿಜಿ ಅವರು ಮುಳಬಾಗಿಲಿನ ಆಂಗ್ಲೋ ವರ್ನಾಕ್ಯುಲರ್ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಪೂರ್ತಿಗೊಳಿಸಿದರು .

೫.ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದು ಕರೆಸಿಕೊಂಡರು .

8 Class Sarthaka​ Badukina​ Sadhaka Kannada Notes Question Answer Pdf

ಇತರೆ ಪಾಠಗಳು :

ಮಗ್ಗದ ಸಾಹೇಬ ಕನ್ನಡ ನೋಟ್ಸ್

ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್

Leave your vote

30 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.